ETV Bharat / bharat

ಜಮೀನಿನಲ್ಲಿ ಭತ್ತ ನಾಟಿ ಮಾಡುವ ಜಿಲ್ಲಾಧಿಕಾರಿ ದಂಪತಿ.. ಅವರು ಎಲ್ಲಿಯವರು ಗೊತ್ತಾ?

ಜಿಲ್ಲೆಯ ಬಾಸ್​ ಜಿಲ್ಲಾಧಿಕಾರಿ ಸಾಮಾನ್ಯ ಜನರಿಗೆ ಮಾತನಾಡಲೂ ಸಿಗುವುದಿಲ್ಲ. ಅಂಥಹದ್ದರಲ್ಲಿ ರೈತರ ಜಮೀನಿಗೆ ಬಂದು ಭತ್ತ ನಾಟಿ ಮಾಡುತ್ತಾರೆ. ಚಾನ್ಸೇ ಇಲ್ಲ. ಆದರೆ, ಆಂಧ್ರಪ್ರದೇಶದ ಈ ಇಬ್ಬರು ಡಿಸಿಗಳು ಮಾತ್ರ ಫುಲ್​ ಡಿಫರೆಂಟ್​. ಅವರಿಬ್ಬರ ನಡೆ ನಮ್ಮ ಊಹೆಗೂ ಮೀರಿದ್ದಾಗಿದೆ.

author img

By

Published : Sep 26, 2022, 7:47 PM IST

Updated : Sep 26, 2022, 9:18 PM IST

collector-couple-working-on-the-farm
ಜಮೀನಿನಲ್ಲಿ ಭತ್ತ ನಾಟಿ ಮಾಡುವ ಜಿಲ್ಲಾಧಿಕಾರಿ ದಂಪತಿ

ಹೈದರಾಬಾದ್​: ಜಿಲ್ಲಾಧಿಕಾರಿ ಒಂದು ಜಿಲ್ಲೆಯ ಬಾಸ್​. ಐಎಎಸ್​ ಕೇಡರ್​ನ ಅಧಿಕಾರಿಗೆ ಬಿಡುವಿಲ್ಲದ ಕೆಲಸ, ಒತ್ತಡ ಸಹಜವೇ. ತಮ್ಮ ಒತ್ತಡವನ್ನು ನೀಗಿಸಿಕೊಳ್ಳಲು ಸಿನಿಮಾ, ಸುತ್ತಾಟ, ಟ್ರಿಪ್​ ಹೋಗ್ತಾರೆ. ಆದರೆ, ಆಂಧ್ರಪದೇಶದ ಈ ಜಿಲ್ಲಾಧಿಕಾರಿಗಳು ಮಾತ್ರ ಡಿಫರೆಂಟ್​. ಹೇಗಂತೀರಾ?. ಇವರು ಬಿಡುವು ಸಿಕ್ಕರೆ ರೈತರ ಜಮೀನುಗಳಿಗೆ ಹೋಗಿ ಕೆಲಸ ಮಾಡ್ತಾರೆ.

ಜಮೀನಿನಲ್ಲಿ ಭತ್ತ ನಾಟಿ ಮಾಡುವ ಜಿಲ್ಲಾಧಿಕಾರಿ ದಂಪತಿ

ಆಂಧ್ರಪ್ರದೇಶದ ಪ್ರಕಾಶಂ ಮತ್ತು ಬಾಪಟ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಾದ ದಿನೇಶ್ ಕುಮಾರ್ ಮತ್ತು ವಿಜಯ ಕೃಷ್ಣನ್ ದಂಪತಿಗಳಾಗಿದ್ದಾರೆ. ಇವರು ರೈತಪರ ಕಾರ್ಯಗಳಿಗೆ ಹೆಚ್ಚಿನ ಮನ್ನಣೆ ಪಡೆದಿದ್ದಾರೆ. ಅನ್ನದಾತನ ಕಷ್ಟಗಳನ್ನು ಕಣ್ಣಾರೆ ಕಾಣಲು ಅವರೇ ಜಮೀನುಗಳಿಗೆ ತೆರಳಿ ಕುಯ್ಲು, ನಾಟಿ ಕೆಲಸಗಳನ್ನು ಮಾಡುತ್ತಾರೆ.

ಈ ಅಧಿಕಾರಿ ದಂಪತಿಗೆ ಪ್ರಕೃತಿ, ಕೃಷಿ ಎಂದರೆ ಪ್ರಾಣವಂತೆ. ಹಾಗಾಗಿ ಅವರು ವಾರಾಂತ್ಯದ ಬಿಡುವು ಸಿಕ್ಕಾಗಲೆಲ್ಲ ಜಮೀನುಗಳಿಗೆ ಭೇಟಿ ನೀಡಿ ರೈತರೊಂದಿಗೆ ಬೆರೆತು ಬೆಳೆ ನಾಟಿ ಮಾಡುತ್ತಾರೆ. ಅಷ್ಟೇ ಅಲ್ಲ, ರೈತರು ತಂದ ಊಟವನ್ನು ಅವರೊಂದಿಗೆ ಕುಳಿತು ಸವೆಯುತ್ತಾರೆ. ಎಲ್ಲ ಅಧಿಕಾರಿಗಳಿಗಿಂತ ಭಿನ್ನವಾಗಿರುವ ಇವರ ನಡೆ ಎರಡೂ ಜಿಲ್ಲೆಗಳಲ್ಲಿ ಭಾರೀ ಮೆಚ್ಚುಗೆ ಪಡೆದಿದೆ.

ಓದಿ: ರಿಲಯನ್ಸ್​ ಅನಿಲ್​ ಅಂಬಾನಿಗೆ ರಿಲೀಫ್​.. ನ.17ರವರೆಗೆ ಕ್ರಮ ಕೈಗೊಳ್ಳದಂತೆ ಐಟಿ ಇಲಾಖೆಗೆ ಬಾಂಬೆ ಹೈಕೋರ್ಟ್​ ನಿರ್ದೇಶನ

ಹೈದರಾಬಾದ್​: ಜಿಲ್ಲಾಧಿಕಾರಿ ಒಂದು ಜಿಲ್ಲೆಯ ಬಾಸ್​. ಐಎಎಸ್​ ಕೇಡರ್​ನ ಅಧಿಕಾರಿಗೆ ಬಿಡುವಿಲ್ಲದ ಕೆಲಸ, ಒತ್ತಡ ಸಹಜವೇ. ತಮ್ಮ ಒತ್ತಡವನ್ನು ನೀಗಿಸಿಕೊಳ್ಳಲು ಸಿನಿಮಾ, ಸುತ್ತಾಟ, ಟ್ರಿಪ್​ ಹೋಗ್ತಾರೆ. ಆದರೆ, ಆಂಧ್ರಪದೇಶದ ಈ ಜಿಲ್ಲಾಧಿಕಾರಿಗಳು ಮಾತ್ರ ಡಿಫರೆಂಟ್​. ಹೇಗಂತೀರಾ?. ಇವರು ಬಿಡುವು ಸಿಕ್ಕರೆ ರೈತರ ಜಮೀನುಗಳಿಗೆ ಹೋಗಿ ಕೆಲಸ ಮಾಡ್ತಾರೆ.

ಜಮೀನಿನಲ್ಲಿ ಭತ್ತ ನಾಟಿ ಮಾಡುವ ಜಿಲ್ಲಾಧಿಕಾರಿ ದಂಪತಿ

ಆಂಧ್ರಪ್ರದೇಶದ ಪ್ರಕಾಶಂ ಮತ್ತು ಬಾಪಟ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಾದ ದಿನೇಶ್ ಕುಮಾರ್ ಮತ್ತು ವಿಜಯ ಕೃಷ್ಣನ್ ದಂಪತಿಗಳಾಗಿದ್ದಾರೆ. ಇವರು ರೈತಪರ ಕಾರ್ಯಗಳಿಗೆ ಹೆಚ್ಚಿನ ಮನ್ನಣೆ ಪಡೆದಿದ್ದಾರೆ. ಅನ್ನದಾತನ ಕಷ್ಟಗಳನ್ನು ಕಣ್ಣಾರೆ ಕಾಣಲು ಅವರೇ ಜಮೀನುಗಳಿಗೆ ತೆರಳಿ ಕುಯ್ಲು, ನಾಟಿ ಕೆಲಸಗಳನ್ನು ಮಾಡುತ್ತಾರೆ.

ಈ ಅಧಿಕಾರಿ ದಂಪತಿಗೆ ಪ್ರಕೃತಿ, ಕೃಷಿ ಎಂದರೆ ಪ್ರಾಣವಂತೆ. ಹಾಗಾಗಿ ಅವರು ವಾರಾಂತ್ಯದ ಬಿಡುವು ಸಿಕ್ಕಾಗಲೆಲ್ಲ ಜಮೀನುಗಳಿಗೆ ಭೇಟಿ ನೀಡಿ ರೈತರೊಂದಿಗೆ ಬೆರೆತು ಬೆಳೆ ನಾಟಿ ಮಾಡುತ್ತಾರೆ. ಅಷ್ಟೇ ಅಲ್ಲ, ರೈತರು ತಂದ ಊಟವನ್ನು ಅವರೊಂದಿಗೆ ಕುಳಿತು ಸವೆಯುತ್ತಾರೆ. ಎಲ್ಲ ಅಧಿಕಾರಿಗಳಿಗಿಂತ ಭಿನ್ನವಾಗಿರುವ ಇವರ ನಡೆ ಎರಡೂ ಜಿಲ್ಲೆಗಳಲ್ಲಿ ಭಾರೀ ಮೆಚ್ಚುಗೆ ಪಡೆದಿದೆ.

ಓದಿ: ರಿಲಯನ್ಸ್​ ಅನಿಲ್​ ಅಂಬಾನಿಗೆ ರಿಲೀಫ್​.. ನ.17ರವರೆಗೆ ಕ್ರಮ ಕೈಗೊಳ್ಳದಂತೆ ಐಟಿ ಇಲಾಖೆಗೆ ಬಾಂಬೆ ಹೈಕೋರ್ಟ್​ ನಿರ್ದೇಶನ

Last Updated : Sep 26, 2022, 9:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.