ETV Bharat / bharat

ತೆಲಂಗಾಣ ಸಿಎಂ ಕೆಸಿಆರ್ ನಾಳೆ ರಾಂಚಿಗೆ: ಗಲ್ವಾನ್​ ವ್ಯಾಲಿ ಮೃತ ಯೋಧರ ಕುಟುಂಬಕ್ಕೆ ಪರಿಹಾರ

author img

By

Published : Mar 3, 2022, 10:31 PM IST

ಗಲ್ವಾನ್ ವ್ಯಾಲಿಯಲ್ಲಿ ಮೃತರಾಗಿರುವ ಯೋಧರ ಕುಟುಂಬವನ್ನು ಭೇಟಿ ಮಾಡಲಿರುವ ಮುಖ್ಯಮಂತ್ರಿ ಕೆಸಿಆರ್​ ಪರಿಹಾರದ ಚೆಕ್​ ವಿತರಣೆ ಮಾಡಲಿದ್ದಾರೆ.

Telangana Chief Minister KCR
Telangana Chief Minister KCR

ಹೈದರಾಬಾದ್​(ತೆಲಂಗಾಣ): ಜಾರ್ಖಂಡ್​ನ ರಾಂಚಿಗೆ ನಾಳೆ ಪ್ರಯಾಣ ಬೆಳೆಸಲಿರುವ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್, ಗಲ್ವಾನ್ ವ್ಯಾಲಿ ಸಂಘರ್ಷದಲ್ಲಿ​​ ಮೃತ ಯೋಧರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲಿದ್ದಾರೆ. 2020ರ ಜೂನ್​ 15ರಂದು ಚೀನಾ ಸೈನಿಕರೊಂದಿಗೆ ನಡೆದ ಘರ್ಷಣೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಎಲ್ಲರಿಗೂ ತೆಲಂಗಾಣ ಸರ್ಕಾರ ಆರ್ಥಿಕ ನೆರವು ಘೋಷಣೆ ಮಾಡಿತ್ತು.

ಪ್ರತಿ ಕುಟುಂಬಕ್ಕೂ 10 ಲಕ್ಷ ರೂ ಪರಿಹಾರ: 2020ರ ಜೂನ್​ 19ರಂದು ಪ್ರಧಾನಿ ನರೇಂದ್ರ ಮೋದಿ ಜೊತೆ ನಡೆದ ಸರ್ವಪಕ್ಷ ಸಭೆಯಲ್ಲಿ ಕೆಸಿಆರ್​ ಪರಿಹಾರ ಘೋಷಣೆ ಮಾಡಿದ್ದರು. ಸೂರಿಪೇಟ್​ನ ಜಿಲ್ಲೆಯ ಕರ್ನಲ್ ಸಂತೋಷ್​ ಬಾಬು ಅವರಿಗೆ 5 ಕೋಟಿ ರೂ. ಅವರ ಪತ್ನಿಗೆ ಸರ್ಕಾರಿ ನೌಕರಿ ಸೇರಿದಂತೆ ಉಳಿದ ಸೈನಿಕರ ಕುಟುಂಬಗಳಿಗೆ 10 ಲಕ್ಷ ರೂ. ಘೋಷಣೆ ಮಾಡಿದ್ದರು. ರಾಜ್ಯ ಸರ್ಕಾರ ಈಗಾಗಲೇ ಹಣ ಮಂಜೂರು ಮಾಡಿದ್ದು, ಅವರ ಕುಟುಂಬದ ಸದಸ್ಯರನ್ನು ನೇರವಾಗಿ ಭೇಟಿ ಮಾಡಿ ಪರಿಹಾರ ಚೆಕ್​ ವಿತರಣೆ ಮಾಡಲಿದ್ದಾರೆ.

ಇದನ್ನೂ ಓದಿ: ಬಡ ರೈತರಿಗೆ ಭರ್ಜರಿ ಗನ್​, ಇದರ ಶಬ್ದಕ್ಕೆ ಆನೆಗಳೇ ಪೇರಿಕೀಳುತ್ತವೆ: ನೀವೂ ತಯಾರಿಸಿಕೊಳ್ಳಿ

ಮೃತ ಯೋಧರ ಕುಟುಂಬಸ್ಥರ ಭೇಟಿ: ಪರಿಹಾರ ಚೆಕ್ ನೀಡಲು ತೆರಳುತ್ತಿರುವ ಮುಖ್ಯಮಂತ್ರಿ ಕೆಸಿಆರ್​ ಮೃತ ಯೋಧರ ಎಲ್ಲ ಕುಟುಂಬದ ಸದಸ್ಯನ್ನ ಭೇಟಿ ಮಾಡಲಿದ್ದು, ಅವರೊಂದಿಗೆ ಕೆಲಹೊತ್ತು ಸಮಾಲೋಚನೆ ನಡೆಸಲಿದ್ದಾರೆ.

ಹೈದರಾಬಾದ್​(ತೆಲಂಗಾಣ): ಜಾರ್ಖಂಡ್​ನ ರಾಂಚಿಗೆ ನಾಳೆ ಪ್ರಯಾಣ ಬೆಳೆಸಲಿರುವ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್, ಗಲ್ವಾನ್ ವ್ಯಾಲಿ ಸಂಘರ್ಷದಲ್ಲಿ​​ ಮೃತ ಯೋಧರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲಿದ್ದಾರೆ. 2020ರ ಜೂನ್​ 15ರಂದು ಚೀನಾ ಸೈನಿಕರೊಂದಿಗೆ ನಡೆದ ಘರ್ಷಣೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಎಲ್ಲರಿಗೂ ತೆಲಂಗಾಣ ಸರ್ಕಾರ ಆರ್ಥಿಕ ನೆರವು ಘೋಷಣೆ ಮಾಡಿತ್ತು.

ಪ್ರತಿ ಕುಟುಂಬಕ್ಕೂ 10 ಲಕ್ಷ ರೂ ಪರಿಹಾರ: 2020ರ ಜೂನ್​ 19ರಂದು ಪ್ರಧಾನಿ ನರೇಂದ್ರ ಮೋದಿ ಜೊತೆ ನಡೆದ ಸರ್ವಪಕ್ಷ ಸಭೆಯಲ್ಲಿ ಕೆಸಿಆರ್​ ಪರಿಹಾರ ಘೋಷಣೆ ಮಾಡಿದ್ದರು. ಸೂರಿಪೇಟ್​ನ ಜಿಲ್ಲೆಯ ಕರ್ನಲ್ ಸಂತೋಷ್​ ಬಾಬು ಅವರಿಗೆ 5 ಕೋಟಿ ರೂ. ಅವರ ಪತ್ನಿಗೆ ಸರ್ಕಾರಿ ನೌಕರಿ ಸೇರಿದಂತೆ ಉಳಿದ ಸೈನಿಕರ ಕುಟುಂಬಗಳಿಗೆ 10 ಲಕ್ಷ ರೂ. ಘೋಷಣೆ ಮಾಡಿದ್ದರು. ರಾಜ್ಯ ಸರ್ಕಾರ ಈಗಾಗಲೇ ಹಣ ಮಂಜೂರು ಮಾಡಿದ್ದು, ಅವರ ಕುಟುಂಬದ ಸದಸ್ಯರನ್ನು ನೇರವಾಗಿ ಭೇಟಿ ಮಾಡಿ ಪರಿಹಾರ ಚೆಕ್​ ವಿತರಣೆ ಮಾಡಲಿದ್ದಾರೆ.

ಇದನ್ನೂ ಓದಿ: ಬಡ ರೈತರಿಗೆ ಭರ್ಜರಿ ಗನ್​, ಇದರ ಶಬ್ದಕ್ಕೆ ಆನೆಗಳೇ ಪೇರಿಕೀಳುತ್ತವೆ: ನೀವೂ ತಯಾರಿಸಿಕೊಳ್ಳಿ

ಮೃತ ಯೋಧರ ಕುಟುಂಬಸ್ಥರ ಭೇಟಿ: ಪರಿಹಾರ ಚೆಕ್ ನೀಡಲು ತೆರಳುತ್ತಿರುವ ಮುಖ್ಯಮಂತ್ರಿ ಕೆಸಿಆರ್​ ಮೃತ ಯೋಧರ ಎಲ್ಲ ಕುಟುಂಬದ ಸದಸ್ಯನ್ನ ಭೇಟಿ ಮಾಡಲಿದ್ದು, ಅವರೊಂದಿಗೆ ಕೆಲಹೊತ್ತು ಸಮಾಲೋಚನೆ ನಡೆಸಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.