ETV Bharat / bharat

ಗೋಮೂತ್ರ ಖರೀದಿಗೆ ಮುಂದಾದ ಛತ್ತೀಸ್​​​ಗಢ ಸರ್ಕಾರ.. ಪ್ರತಿ ಲೀಟರ್​ಗೆ 4 ರೂ. ನಿಗದಿ - ಗೋಮೂತ್ರ ಖರೀದಿ

ಗೋಧನ್ ನ್ಯಾಯ ಯೋಜನೆ ಅಡಿ ಛತ್ತೀಸ್​ಗಢ ಸರ್ಕಾರ ಗೋಮೂತ್ರ ಖರೀದಿ ಮಾಡಲು ನಿರ್ಧರಿಸಿದೆ. ಪ್ರತಿ ಲೀಟರ್​​ಗೆ 4 ರೂಪಾಯಿ ನಿಗದಿ ಮಾಡಲಾಗಿದೆ.

Chhattisgarh government buy cow urine
Chhattisgarh government buy cow urine
author img

By

Published : Jul 19, 2022, 4:58 PM IST

ರಾಯ್ಪುರ್​​(ಛತ್ತೀಸ್​​ಗಢ): ಮುಖ್ಯಮಂತ್ರಿ ಭೂಪೇಶ್ ಬಾಘೆಲ್ ನೇತೃತ್ವದ ಛತ್ತೀಸ್​​ಗಢ ಸರ್ಕಾರ ಗೋಮೂತ್ರ ಖರೀದಿ ಮಾಡುವ ಮಹತ್ವದ ನಿರ್ಧಾರ ಕೈಗೊಂಡಿದೆ. ಜುಲೈ 28ರಿಂದ ಈ ಯೋಜನೆ ಆರಂಭಗೊಳ್ಳಲಿದ್ದು, ಪ್ರತಿ ಲೀಟರ್​​ಗೆ 4 ರೂಪಾಯಿ ನೀಡಲು ನಿರ್ಧರಿಸಿದೆ. ಛತ್ತೀಸ್​​ಗಢದಲ್ಲಿ ಆರಂಭಗೊಳ್ಳಲಿರುವ 'ಹರೇಲಿ ಉತ್ಸವ'ದ ನಿಮಿತ್ತ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಆರಂಭದಲ್ಲಿ ಪ್ರತಿ ಜಿಲ್ಲೆಯ ಎರಡು ಆಯ್ದ ಸ್ವಯಂ ಪೋಷಕ ಗೋದಾನ್​​ಗಳಲ್ಲಿ ಗೋಮೂತ್ರ ಖರೀದಿ ಮಾಡಲು ನಿರ್ಧರಿಸಲಾಗಿದೆ. ಇದಕ್ಕೋಸ್ಕರ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುವಂತೆ ಗೋದಾನ್ ನ್ಯಾಯ ಮಿಷನ್​​ ವ್ಯವಸ್ಥಾಪಕ ನಿರ್ದೇಶಕ ಡಾ. ಅಯ್ಯಾಜ್​ ತಾಂಬೋಳಿ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದಾರೆ.

ಖರೀದಿ ಮಾಡುವ ಗೋಮೂತ್ರದಿಂದ ಬೆಳೆಗಳ ಕೀಟ ನಿಯಂತ್ರಣ ಹಾಗೂ ನೈಸರ್ಗಿಕ ದ್ರವ ಗೊಬ್ಬರ ತಯಾರಿಸಲು ನಿರ್ಧಾರ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಗೋಮೂತ್ರ ಖರೀದಿಯಿಂದ ರಾಜ್ಯದಲ್ಲಿ ಹಸು ಸಾಕಾಣಿಕೆಗೆ ಹೆಚ್ಚಿನ ಆದ್ಯತೆ ನೀಡುವುದರ ಜೊತೆಗೆ ಮಹಿಳಾ ಸ್ವ-ಸಹಾಯ ಗುಂಪು ಸ್ವಾವಲಂಬನೆ ಮಾಡುವುದು ಮುಖ್ಯ ಉದ್ದೇಶವಾಗಿದೆ.

ಕಳೆದ ಏಪ್ರಿಲ್ ತಿಂಗಳಲ್ಲಿ ಗೋಮುತ್ರ ಖರೀದಿ ಮಾಡುವುದರ ಬಗ್ಗೆ ಸಿಎಂ ಭೂಪೇಶ್ ಘೋಷಣೆ ಮಾಡಿದ್ದರು. ಅದರಂತೆ ಇದೀಗ ಜುಲೈ 28ರಿಂದ ಈ ಯೋಜನೆ ಆರಂಭಗೊಳ್ಳಲಿದೆ. ರಾಜ್ಯದಲ್ಲಿ 2020ರ ಜುಲೈ ತಿಂಗಳಿಂದ ಸೆಗಣಿ ಖರೀದಿ ಮಾಡಲಾಗ್ತಿದ್ದು, ಪ್ರತಿ ಕೆಜಿಗೆ 2 ರೂಪಾಯಿ ನಿಗದಿ ಮಾಡಲಾಗಿದೆ. ಇಲ್ಲಿಯವರೆಗೆ ಸುಮಾರು 150ಕೋಟಿಗೂ ಅಧಿಕ ಮೊತ್ತದ ಸೆಗಣಿ ಖರೀದಿ ಮಾಡಲಾಗಿದೆ. ಅದರಿಂದ ಎರೆಹುಳು ಗೊಬ್ಬರ, ಸೂಪರ್ ಕಾಂಪೋಸ್ಟ್, ಸೂಪರ್ ಪ್ಲಸ್ ಗೊಬ್ಬರ ತಯಾರಿಸಲಾಗಿದೆ.

ಇದನ್ನೂ ಓದಿರಿ: 'ಗೋಮೂತ್ರ ಕುಡಿದು ಸಿದ್ಧರಾಗಿರಿ' ಎಂದಿದ್ದ TMC ಸಂಸದೆ ಲೋಕಸಭೆಯಲ್ಲಿ ಮಾತನಾಡಿದ್ದೇನು!?

ರಾಯ್ಪುರ್​​(ಛತ್ತೀಸ್​​ಗಢ): ಮುಖ್ಯಮಂತ್ರಿ ಭೂಪೇಶ್ ಬಾಘೆಲ್ ನೇತೃತ್ವದ ಛತ್ತೀಸ್​​ಗಢ ಸರ್ಕಾರ ಗೋಮೂತ್ರ ಖರೀದಿ ಮಾಡುವ ಮಹತ್ವದ ನಿರ್ಧಾರ ಕೈಗೊಂಡಿದೆ. ಜುಲೈ 28ರಿಂದ ಈ ಯೋಜನೆ ಆರಂಭಗೊಳ್ಳಲಿದ್ದು, ಪ್ರತಿ ಲೀಟರ್​​ಗೆ 4 ರೂಪಾಯಿ ನೀಡಲು ನಿರ್ಧರಿಸಿದೆ. ಛತ್ತೀಸ್​​ಗಢದಲ್ಲಿ ಆರಂಭಗೊಳ್ಳಲಿರುವ 'ಹರೇಲಿ ಉತ್ಸವ'ದ ನಿಮಿತ್ತ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಆರಂಭದಲ್ಲಿ ಪ್ರತಿ ಜಿಲ್ಲೆಯ ಎರಡು ಆಯ್ದ ಸ್ವಯಂ ಪೋಷಕ ಗೋದಾನ್​​ಗಳಲ್ಲಿ ಗೋಮೂತ್ರ ಖರೀದಿ ಮಾಡಲು ನಿರ್ಧರಿಸಲಾಗಿದೆ. ಇದಕ್ಕೋಸ್ಕರ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುವಂತೆ ಗೋದಾನ್ ನ್ಯಾಯ ಮಿಷನ್​​ ವ್ಯವಸ್ಥಾಪಕ ನಿರ್ದೇಶಕ ಡಾ. ಅಯ್ಯಾಜ್​ ತಾಂಬೋಳಿ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದಾರೆ.

ಖರೀದಿ ಮಾಡುವ ಗೋಮೂತ್ರದಿಂದ ಬೆಳೆಗಳ ಕೀಟ ನಿಯಂತ್ರಣ ಹಾಗೂ ನೈಸರ್ಗಿಕ ದ್ರವ ಗೊಬ್ಬರ ತಯಾರಿಸಲು ನಿರ್ಧಾರ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಗೋಮೂತ್ರ ಖರೀದಿಯಿಂದ ರಾಜ್ಯದಲ್ಲಿ ಹಸು ಸಾಕಾಣಿಕೆಗೆ ಹೆಚ್ಚಿನ ಆದ್ಯತೆ ನೀಡುವುದರ ಜೊತೆಗೆ ಮಹಿಳಾ ಸ್ವ-ಸಹಾಯ ಗುಂಪು ಸ್ವಾವಲಂಬನೆ ಮಾಡುವುದು ಮುಖ್ಯ ಉದ್ದೇಶವಾಗಿದೆ.

ಕಳೆದ ಏಪ್ರಿಲ್ ತಿಂಗಳಲ್ಲಿ ಗೋಮುತ್ರ ಖರೀದಿ ಮಾಡುವುದರ ಬಗ್ಗೆ ಸಿಎಂ ಭೂಪೇಶ್ ಘೋಷಣೆ ಮಾಡಿದ್ದರು. ಅದರಂತೆ ಇದೀಗ ಜುಲೈ 28ರಿಂದ ಈ ಯೋಜನೆ ಆರಂಭಗೊಳ್ಳಲಿದೆ. ರಾಜ್ಯದಲ್ಲಿ 2020ರ ಜುಲೈ ತಿಂಗಳಿಂದ ಸೆಗಣಿ ಖರೀದಿ ಮಾಡಲಾಗ್ತಿದ್ದು, ಪ್ರತಿ ಕೆಜಿಗೆ 2 ರೂಪಾಯಿ ನಿಗದಿ ಮಾಡಲಾಗಿದೆ. ಇಲ್ಲಿಯವರೆಗೆ ಸುಮಾರು 150ಕೋಟಿಗೂ ಅಧಿಕ ಮೊತ್ತದ ಸೆಗಣಿ ಖರೀದಿ ಮಾಡಲಾಗಿದೆ. ಅದರಿಂದ ಎರೆಹುಳು ಗೊಬ್ಬರ, ಸೂಪರ್ ಕಾಂಪೋಸ್ಟ್, ಸೂಪರ್ ಪ್ಲಸ್ ಗೊಬ್ಬರ ತಯಾರಿಸಲಾಗಿದೆ.

ಇದನ್ನೂ ಓದಿರಿ: 'ಗೋಮೂತ್ರ ಕುಡಿದು ಸಿದ್ಧರಾಗಿರಿ' ಎಂದಿದ್ದ TMC ಸಂಸದೆ ಲೋಕಸಭೆಯಲ್ಲಿ ಮಾತನಾಡಿದ್ದೇನು!?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.