ETV Bharat / bharat

ಛತ್ತೀಸ್​ಗಢದಲ್ಲಿ ಶ್ರದ್ಧಾ ಮಾದರಿ ಕೊಲೆ: ಪ್ರಿಯತಮೆ ಕೊಂದು ಸುಟ್ಟು ಹಾಕಿದ ಪ್ರಿಯಕರ

author img

By

Published : Dec 1, 2022, 7:19 PM IST

ಛತ್ತೀಸ್​ಗಢದಲ್ಲಿ ದೆಹಲಿಯ ಶ್ರದ್ಧಾ ವಾಕರ್​ ಕೊಲೆ ಮಾದರಿಯ ಪ್ರಕರಣ ಬೆಳಕಿಗೆ ಬಂದಿದೆ. ಪ್ರೇಮಿಯೇ ತನ್ನ ಪ್ರಿಯತಮೆಯನ್ನು ಕೊಂದು ಮೃತದೇಹವನ್ನು ಅರಣ್ಯಪ್ರದೇಶದಲ್ಲಿ ಸುಟ್ಟು ಹಾಕಿದ ಘಟನೆ ನಡೆದಿದೆ.

chhattisgarh-girl-was-killed
ಪ್ರಿಯತಮೆಯ ಕೊಂದು ಸುಟ್ಟು ಹಾಕಿದ ಪ್ರಿಯಕರ

ರಾಯ್‌ಪುರ(ಛತ್ತೀಸ್​​ಗಢ): ದೇಶವನ್ನೇ ಬೆಚ್ಚಿ ಬೀಳಿಸಿರುವ ದೆಹಲಿಯ ಶ್ರದ್ಧಾ ವಾಕರ್​ ಕೊಲೆ ಕೇಸ್​ ತನಿಖೆ ಚಾಲ್ತಿಯಲ್ಲಿರುವಾಗಲೇ ಮತ್ತೊಂದು ಅಂಥದ್ದೇ ಘಟನೆ ಛತ್ತೀಸ್​​ಗಢದಲ್ಲಿ ಬೆಳಕಿಗೆ ಬಂದಿದೆ. ಪ್ರೀತಿಯ ಹೆಸರಲ್ಲಿ ಯುವತಿಯನ್ನು ಬಳಸಿಕೊಂಡು ಅರಣ್ಯ ಪ್ರದೇಶದಲ್ಲಿ ಕೊಲೆ ಮಾಡಿ ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿದೆ.

ಛತ್ತೀಸ್​ಗಢದ ರಾಯಪುರ ಜಿಲ್ಲೆಯ ಕೊರ್ಬಾದ ತನು ಕುರ್ರೆ(26) ಕೊಲೆಯಾದ ಯುವತಿ. ಒಡಿಶಾದ ಬಲಂಗಿರ್​ ಮೂಲದ ಉದ್ಯಮಿ ಸಚಿನ್​ ಅಗರ್ವಾಲ್ ಕೊಲೆ ಮಾಡಿದ​ ಆರೋಪಿ. ಪ್ರೀತಿಯ ನಾಟಕವಾಡಿ ಹತ್ಯೆ ಮಾಡಿದ ಪ್ರೇಮಿ ವಿರುದ್ಧ ಯುವತಿಯ ಪೋಷಕರು ದೂರು ನೀಡಿದ್ದು, ತಲೆಮರೆಸಿಕೊಂಡ ದುರುಳನ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

ಪ್ರಕರಣವೇನು?: ವಿದ್ಯಾವಂತೆಯಾದ ತನು ರಾಯಪುರದಲ್ಲಿ ಆ್ಯಕ್ಸಿಸ್​ ಬ್ಯಾಂಕ್​ನಲ್ಲಿ ಉದ್ಯೋಗಿಯಾಗಿ ಸೇರಿಕೊಂಡಿದ್ದರು. ಬಳಿಕ ಉದ್ಯಮಿಯಾದ ಸಚಿನ್​ ಅಗರ್ವಾಲ್​ ಪರಿಚಯವಾಗಿದೆ. ಇದು ಪ್ರೀತಿಗೂ ತಿರುಗಿದೆ. 3 ವರ್ಷಗಳಿಂದ ಇವರ ಮಧ್ಯೆ ಆತ್ಮೀಯತೆ ಬೆಳೆದಿತ್ತು. ಈ ವಿಷಯ ಯುವತಿಯ ಕುಟುಂಬಸ್ಥರಿಗೂ ತಿಳಿದಿತ್ತು. ತಾವಿಬ್ಬರೂ ಪ್ರೀತಿಸುತ್ತಿದ್ದಾಗಿ ಯುವತಿ ಮನೆಯಲ್ಲಿ ತಿಳಿಸಿದ್ದರು. ಇದಾದ ಬಳಿಕ ಮನೆಗೆ ಬರಲು ಕುಟುಂಬಸ್ಥರು ಆಕೆಯನ್ನು ಒತ್ತಾಯಿಸಿದ್ದರು.

ನವೆಂಬರ್​ 21 ರಿಂದ ತನು ನಾಪತ್ತೆ: ಕೆಲ ದಿನಗಳ ಹಿಂದೆ ಯುವತಿ ಕುಟುಂಬಸ್ಥರೊಂದಿಗೆ ಸಂಪರ್ಕ ಕಳೆದುಕೊಂಡಿದ್ದರು. ಫೋನ್​ ಕರೆ, ಮೆಸೇಜ್​ ಎಲ್ಲವನ್ನು ನಿಲ್ಲಿಸಿದ್ದರು. ಇದರಿಂದ ಅನುಮಾನಪಟ್ಟ ಕುಟುಂಬಸ್ಥರು ಆಕೆಯ ಸಂಪರ್ಕಕ್ಕೆ ಪ್ರಯತ್ನಿಸಿದ್ದಾರೆ.

ಬ್ಯಾಂಕ್​ನಿಂದಲೂ ಯಾವುದೇ ಮಾಹಿತಿ ಸಿಗದ ಕಾರಣ ಯುವತಿ ತನು ನವೆಂಬರ್​ 21 ರಿಂದ ನಾಪತ್ತೆಯಾಗಿದ್ದಾಳೆ ಎಂದು ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಬಾಯ್​ಫ್ರೆಂಡ್​ ಸಚಿನ್​ ಬಗ್ಗೆ ವಿಚಾರಿಸಿದ್ದಾರೆ. ಆತ ತಲೆಮರೆಸಿಕೊಂಡಿದ್ದು ಗೊತ್ತಾಗಿದೆ.

ಅರಣ್ಯಪ್ರದೇಶದಲ್ಲಿ ಯುವತಿಯ ದೇಹ ಪತ್ತೆ: ಇನ್ನು ಪೊಲೀಸರು ಹುಡುಕಾಟ ನಡೆಸುತ್ತಿದ್ದಾಗ ಒಡಿಶಾದ ಬಲಂಗೀರ್ ಜಿಲ್ಲೆಯ ತುರಿಕೇಲಾ ಪ್ರದೇಶದ ಅರಣ್ಯದಲ್ಲಿ ಅಪರಿಚಿತ ಯುವತಿಯ ಅರೆಬೆಂದ ಮೃತ ದೇಹ ಪತ್ತೆಯಾಗಿತ್ತು. ಒಡಿಶಾ ಪೊಲೀಸರು ಛತ್ತೀಸ್‌ಗಢ ಸೇರಿದಂತೆ ನೆರೆಯ ರಾಜ್ಯಗಳ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಛತ್ತಿಸ್​ಗಢ ಪೊಲೀಸರು ದೂರು ನೀಡಿದ್ದ ಪೋಷಕರನ್ನು ಕರೆದೊಯ್ದಾಗ ಇದು ತನುವಿನ ದೇಹ ಎಂದು ಗುರುತು ಹಿಡಿದಿದ್ದಾರೆ.

ಕೊಲೆ ಮಾಡಿ ಸುಟ್ಟು ಹಾಕಲು ಯತ್ನ: ಯುವತಿ ಬ್ಯಾಂಕ್​ ಕೆಲಸ ಮುಗಿಸಿಕೊಂಡು ಪ್ರೇಮಿ ಸಚಿನ್​ ಜೊತೆ ಕೊನೆಯದಾಗಿ ಹೋಗಿದ್ದು ತನಿಖೆಯಲ್ಲಿ ತಿಳಿದು ಬಂದಿದೆ. ಅಲ್ಲದೇ, ಆಕೆಯನ್ನು ಒಡಿಶಾದ ಬಲಂಗೀರ್‌ಗೆ ಕರೆದೊಯ್ದ ಗುಂಡು ಹಾರಿಸಿ ಕೊಂದು ನಂತರ ಘಟನೆಯನ್ನು ಮುಚ್ಚಿಹಾಕಲು ಪೆಟ್ರೋಲ್ ಸುರಿದು ಸುಟ್ಟುಹಾಕಲಾಗಿದೆ.

ಯುವತಿಯ ಮೊಬೈಲ್​ನಿಂದ ಬರುತ್ತಿತ್ತು ಮೆಸೇಜ್​: ಯುವತಿಯ ಕೊಲೆ ಬಳಿಕವೂ ಆರೋಪಿ ಆಕೆಯ ಮೊಬೈಲ್​ ಬಳಸಿ ಪೋಷಕರೊಂದಿಗೆ ಸಂದೇಶ ರವಾನಿಸುತ್ತಿದ್ದ ಎಂಬ ಅನುಮಾನ ವ್ಯಕ್ತವಾಗಿದೆ. ಯುವತಿಯ ಮೊಬೈಲ್​ನಿಂದ ಕುಟುಬಸ್ಥರಿಗೆ ವಾಟ್ಸ್​ಆ್ಯಪ್​ ​ ಮೂಲಕ ತಾನು ಸುರಕ್ಷಿತವಾಗಿದ್ದೇನೆ ಎಂದು ಸಂದೇಶ ರವಾನಿಸುತ್ತಿದ್ದ.

ಅಲ್ಲದೇ, ಶೀಘ್ರವೇ ತಾವಿಬ್ಬರೂ ಮದುವೆ ಆಗುವುದಾಗಿಯೂ ಮೆಸೇಜ್​ ಬಂದಿತ್ತು ಎಂದು ಕುಟುಂಬಸ್ಥರು ಹೇಳುತ್ತಾರೆ. ಕೆಲ ದಿನಗಳ ಬಳಿಕ ಇದೂ ಕೂಡ ನಿಂತು ಹೋದಾಗ ಪೋಷಕರಿಗೆ ಅನುಮಾನ ಬಂದಿತ್ತು.

ತನಿಖೆಯನ್ನು ಚುರುಕಿಗೊಳಿಸಿರುವ ರಾಯ್‌ಪುರ ಪೊಲೀಸರು ಒಡಿಶಾ ಪೊಲೀಸರೊಂದಿಗೆ ಜೊತೆಗೂಡಿ ಆರೋಪಿ ಸಚಿನ್ ಅಗರ್ವಾಲ್‌ಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. ಆರೋಪಿ ಬಂಧನದ ನಂತರವೇ ಇಡೀ ಪ್ರಕರಣ ಬಯಲಾಗಲಿದೆ.

ಓದಿ: 10 ದಿನದ ಹಿಂದೆ ಪತ್ನಿಯನ್ನು ಕೊಲೆಗೈದು ಎಸ್ಕೇಪ್ ಆಗಿದ್ದ ಆರೋಪಿ ಪತಿ ಅಂದರ್

ರಾಯ್‌ಪುರ(ಛತ್ತೀಸ್​​ಗಢ): ದೇಶವನ್ನೇ ಬೆಚ್ಚಿ ಬೀಳಿಸಿರುವ ದೆಹಲಿಯ ಶ್ರದ್ಧಾ ವಾಕರ್​ ಕೊಲೆ ಕೇಸ್​ ತನಿಖೆ ಚಾಲ್ತಿಯಲ್ಲಿರುವಾಗಲೇ ಮತ್ತೊಂದು ಅಂಥದ್ದೇ ಘಟನೆ ಛತ್ತೀಸ್​​ಗಢದಲ್ಲಿ ಬೆಳಕಿಗೆ ಬಂದಿದೆ. ಪ್ರೀತಿಯ ಹೆಸರಲ್ಲಿ ಯುವತಿಯನ್ನು ಬಳಸಿಕೊಂಡು ಅರಣ್ಯ ಪ್ರದೇಶದಲ್ಲಿ ಕೊಲೆ ಮಾಡಿ ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿದೆ.

ಛತ್ತೀಸ್​ಗಢದ ರಾಯಪುರ ಜಿಲ್ಲೆಯ ಕೊರ್ಬಾದ ತನು ಕುರ್ರೆ(26) ಕೊಲೆಯಾದ ಯುವತಿ. ಒಡಿಶಾದ ಬಲಂಗಿರ್​ ಮೂಲದ ಉದ್ಯಮಿ ಸಚಿನ್​ ಅಗರ್ವಾಲ್ ಕೊಲೆ ಮಾಡಿದ​ ಆರೋಪಿ. ಪ್ರೀತಿಯ ನಾಟಕವಾಡಿ ಹತ್ಯೆ ಮಾಡಿದ ಪ್ರೇಮಿ ವಿರುದ್ಧ ಯುವತಿಯ ಪೋಷಕರು ದೂರು ನೀಡಿದ್ದು, ತಲೆಮರೆಸಿಕೊಂಡ ದುರುಳನ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

ಪ್ರಕರಣವೇನು?: ವಿದ್ಯಾವಂತೆಯಾದ ತನು ರಾಯಪುರದಲ್ಲಿ ಆ್ಯಕ್ಸಿಸ್​ ಬ್ಯಾಂಕ್​ನಲ್ಲಿ ಉದ್ಯೋಗಿಯಾಗಿ ಸೇರಿಕೊಂಡಿದ್ದರು. ಬಳಿಕ ಉದ್ಯಮಿಯಾದ ಸಚಿನ್​ ಅಗರ್ವಾಲ್​ ಪರಿಚಯವಾಗಿದೆ. ಇದು ಪ್ರೀತಿಗೂ ತಿರುಗಿದೆ. 3 ವರ್ಷಗಳಿಂದ ಇವರ ಮಧ್ಯೆ ಆತ್ಮೀಯತೆ ಬೆಳೆದಿತ್ತು. ಈ ವಿಷಯ ಯುವತಿಯ ಕುಟುಂಬಸ್ಥರಿಗೂ ತಿಳಿದಿತ್ತು. ತಾವಿಬ್ಬರೂ ಪ್ರೀತಿಸುತ್ತಿದ್ದಾಗಿ ಯುವತಿ ಮನೆಯಲ್ಲಿ ತಿಳಿಸಿದ್ದರು. ಇದಾದ ಬಳಿಕ ಮನೆಗೆ ಬರಲು ಕುಟುಂಬಸ್ಥರು ಆಕೆಯನ್ನು ಒತ್ತಾಯಿಸಿದ್ದರು.

ನವೆಂಬರ್​ 21 ರಿಂದ ತನು ನಾಪತ್ತೆ: ಕೆಲ ದಿನಗಳ ಹಿಂದೆ ಯುವತಿ ಕುಟುಂಬಸ್ಥರೊಂದಿಗೆ ಸಂಪರ್ಕ ಕಳೆದುಕೊಂಡಿದ್ದರು. ಫೋನ್​ ಕರೆ, ಮೆಸೇಜ್​ ಎಲ್ಲವನ್ನು ನಿಲ್ಲಿಸಿದ್ದರು. ಇದರಿಂದ ಅನುಮಾನಪಟ್ಟ ಕುಟುಂಬಸ್ಥರು ಆಕೆಯ ಸಂಪರ್ಕಕ್ಕೆ ಪ್ರಯತ್ನಿಸಿದ್ದಾರೆ.

ಬ್ಯಾಂಕ್​ನಿಂದಲೂ ಯಾವುದೇ ಮಾಹಿತಿ ಸಿಗದ ಕಾರಣ ಯುವತಿ ತನು ನವೆಂಬರ್​ 21 ರಿಂದ ನಾಪತ್ತೆಯಾಗಿದ್ದಾಳೆ ಎಂದು ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಬಾಯ್​ಫ್ರೆಂಡ್​ ಸಚಿನ್​ ಬಗ್ಗೆ ವಿಚಾರಿಸಿದ್ದಾರೆ. ಆತ ತಲೆಮರೆಸಿಕೊಂಡಿದ್ದು ಗೊತ್ತಾಗಿದೆ.

ಅರಣ್ಯಪ್ರದೇಶದಲ್ಲಿ ಯುವತಿಯ ದೇಹ ಪತ್ತೆ: ಇನ್ನು ಪೊಲೀಸರು ಹುಡುಕಾಟ ನಡೆಸುತ್ತಿದ್ದಾಗ ಒಡಿಶಾದ ಬಲಂಗೀರ್ ಜಿಲ್ಲೆಯ ತುರಿಕೇಲಾ ಪ್ರದೇಶದ ಅರಣ್ಯದಲ್ಲಿ ಅಪರಿಚಿತ ಯುವತಿಯ ಅರೆಬೆಂದ ಮೃತ ದೇಹ ಪತ್ತೆಯಾಗಿತ್ತು. ಒಡಿಶಾ ಪೊಲೀಸರು ಛತ್ತೀಸ್‌ಗಢ ಸೇರಿದಂತೆ ನೆರೆಯ ರಾಜ್ಯಗಳ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಛತ್ತಿಸ್​ಗಢ ಪೊಲೀಸರು ದೂರು ನೀಡಿದ್ದ ಪೋಷಕರನ್ನು ಕರೆದೊಯ್ದಾಗ ಇದು ತನುವಿನ ದೇಹ ಎಂದು ಗುರುತು ಹಿಡಿದಿದ್ದಾರೆ.

ಕೊಲೆ ಮಾಡಿ ಸುಟ್ಟು ಹಾಕಲು ಯತ್ನ: ಯುವತಿ ಬ್ಯಾಂಕ್​ ಕೆಲಸ ಮುಗಿಸಿಕೊಂಡು ಪ್ರೇಮಿ ಸಚಿನ್​ ಜೊತೆ ಕೊನೆಯದಾಗಿ ಹೋಗಿದ್ದು ತನಿಖೆಯಲ್ಲಿ ತಿಳಿದು ಬಂದಿದೆ. ಅಲ್ಲದೇ, ಆಕೆಯನ್ನು ಒಡಿಶಾದ ಬಲಂಗೀರ್‌ಗೆ ಕರೆದೊಯ್ದ ಗುಂಡು ಹಾರಿಸಿ ಕೊಂದು ನಂತರ ಘಟನೆಯನ್ನು ಮುಚ್ಚಿಹಾಕಲು ಪೆಟ್ರೋಲ್ ಸುರಿದು ಸುಟ್ಟುಹಾಕಲಾಗಿದೆ.

ಯುವತಿಯ ಮೊಬೈಲ್​ನಿಂದ ಬರುತ್ತಿತ್ತು ಮೆಸೇಜ್​: ಯುವತಿಯ ಕೊಲೆ ಬಳಿಕವೂ ಆರೋಪಿ ಆಕೆಯ ಮೊಬೈಲ್​ ಬಳಸಿ ಪೋಷಕರೊಂದಿಗೆ ಸಂದೇಶ ರವಾನಿಸುತ್ತಿದ್ದ ಎಂಬ ಅನುಮಾನ ವ್ಯಕ್ತವಾಗಿದೆ. ಯುವತಿಯ ಮೊಬೈಲ್​ನಿಂದ ಕುಟುಬಸ್ಥರಿಗೆ ವಾಟ್ಸ್​ಆ್ಯಪ್​ ​ ಮೂಲಕ ತಾನು ಸುರಕ್ಷಿತವಾಗಿದ್ದೇನೆ ಎಂದು ಸಂದೇಶ ರವಾನಿಸುತ್ತಿದ್ದ.

ಅಲ್ಲದೇ, ಶೀಘ್ರವೇ ತಾವಿಬ್ಬರೂ ಮದುವೆ ಆಗುವುದಾಗಿಯೂ ಮೆಸೇಜ್​ ಬಂದಿತ್ತು ಎಂದು ಕುಟುಂಬಸ್ಥರು ಹೇಳುತ್ತಾರೆ. ಕೆಲ ದಿನಗಳ ಬಳಿಕ ಇದೂ ಕೂಡ ನಿಂತು ಹೋದಾಗ ಪೋಷಕರಿಗೆ ಅನುಮಾನ ಬಂದಿತ್ತು.

ತನಿಖೆಯನ್ನು ಚುರುಕಿಗೊಳಿಸಿರುವ ರಾಯ್‌ಪುರ ಪೊಲೀಸರು ಒಡಿಶಾ ಪೊಲೀಸರೊಂದಿಗೆ ಜೊತೆಗೂಡಿ ಆರೋಪಿ ಸಚಿನ್ ಅಗರ್ವಾಲ್‌ಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. ಆರೋಪಿ ಬಂಧನದ ನಂತರವೇ ಇಡೀ ಪ್ರಕರಣ ಬಯಲಾಗಲಿದೆ.

ಓದಿ: 10 ದಿನದ ಹಿಂದೆ ಪತ್ನಿಯನ್ನು ಕೊಲೆಗೈದು ಎಸ್ಕೇಪ್ ಆಗಿದ್ದ ಆರೋಪಿ ಪತಿ ಅಂದರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.