ETV Bharat / bharat

ಪ.ಬಂಗಾಳ ಮಹಾನಿರ್ದೇಶಕರಿಗೆ ಪತ್ರ ಬರೆದು ಹಿಂಸಾಚಾರದ ವರದಿ ಕೋರಿದ ಸಿಬಿಐ

author img

By

Published : Aug 20, 2021, 9:29 PM IST

ದೆಹಲಿ ಮತ್ತು ಡೆಹ್ರಾಡೂನ್​​ನ ಸಿಬಿಐ ಅಧಿಕಾರಿಗಳನ್ನು ತಂಡದಲ್ಲಿ ನೇಮಿಸಲಾಗಿದೆ. ಪ್ರಸ್ತುತ ಭಾರತದ ವಿವಿಧ ನಗರಗಳಲ್ಲಿ ಹರಡಿರುವ ನಾಲ್ಕು ತಂಡಗಳ ಎಲ್ಲ ಅಧಿಕಾರಿಗಳನ್ನು ಮುಂದಿನ ಒಂದೆರಡು ದಿನಗಳಲ್ಲಿ ಕೋಲ್ಕತಾಗೆ ಕರೆಸಿಕೊಳ್ಳಲಾಗುವುದು..

ಸಿಬಿಐ
ಸಿಬಿಐ

ಕೋಲ್ಕತಾ (ಪಶ್ಚಿಮಬಂಗಾಳ): ಸಿಬಿಐ ನಿರ್ದೇಶನಾಲಯವು ಪಶ್ಚಿಮ ಬಂಗಾಳ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದೆ. ಚುನಾವಣೋತ್ತರ ಹಿಂಸಾಚಾರದ ವೇಳೆ ವರದಿಯಾದ ಕೊಲೆ, ಅತ್ಯಾಚಾರಗಳು ಮತ್ತು ಕೊಲೆ ಯತ್ನಗಳ ವಿವರಗಳನ್ನು ನೀಡುವಂತೆ ಕೋರಿದೆ. ಈ ಕುರಿತ ಮಾಹಿತಿ ಬಂದ ಕೂಡಲೇ ಸಿಬಿಐ ತನಿಖೆ ಆರಂಭಿಸಲಿದೆ.

ಕೋಲ್ಕತಾ ಹೈಕೋರ್ಟ್​​​​ ನಿನ್ನೆಯಷ್ಟೇ ಚುನಾವಣೋತ್ತರ ಹಿಂಸಾಚಾರದ ಸಮಯದಲ್ಲಿ ನಡೆದ ಅಪರಾಧಗಳ ಕುರಿತು ತನಿಖೆ ನಡೆಸುವಂತೆ ಸಿಬಿಐಗೆ ಆದೇಶಿಸಿತ್ತು. ಪ್ರಕರಣದ ತನಿಖೆಗಾಗಿ ಸಿಬಿಐ, 25 ಜನರ ನಾಲ್ಕು ತಂಡಗಳನ್ನು ರಚಿಸಿದೆ.

ಪ್ರತಿ ತಂಡವು ಆರು ಐಪಿಎಸ್​ ಅಧಿಕಾರಿಗಳನ್ನೊಳಗೊಂಡಿದ್ದು, ಸಿಬಿಐ ಜಂಟಿ ನಿರ್ದೇಶಕ ಶ್ರೇಣಿಯ ಅಧಿಕಾರಿಗಳು ಈ ತಂಡದ ನೇತೃತ್ವವಹಿಸಿಕೊಳ್ಳುತ್ತಾರೆ. ಪ್ರತಿ ತಂಡವು ಉಪ ನಿರೀಕ್ಷಕರ ಸಾಮಾನ್ಯ ಶ್ರೇಣಿಯ ಇಬ್ಬರು ಅಧಿಕಾರಿಗಳನ್ನು ಮತ್ತು ಮೇಲ್ವಿಚಾರಕರ ಶ್ರೇಣಿಯಲ್ಲಿ ಮೂವರು ಅಧಿಕಾರಿಗಳನ್ನು ಹೊಂದಿರುತ್ತದೆ. ಸಿಬಿಐನ ಜಂಟಿ ನಿರ್ದೇಶಕ ಪಂಕಜ್ ಶ್ರೀವಾಸ್ತವ, ಎಲ್ಲಾ ನಾಲ್ಕು ತಂಡಗಳೊಂದಿಗೆ ಸಮನ್ವಯದ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಚುನಾವಣೋತ್ತರ ಹಿಂಸಾಚಾರ..ಸಿಬಿಐ ತನಿಖೆಗೆ ಆದೇಶಿಸಿದ ಕೋಲ್ಕತ್ತಾ ಹೈಕೋರ್ಟ್

ದೆಹಲಿ ಮತ್ತು ಡೆಹ್ರಾಡೂನ್​​ನ ಸಿಬಿಐ ಅಧಿಕಾರಿಗಳನ್ನು ತಂಡದಲ್ಲಿ ನೇಮಿಸಲಾಗಿದೆ. ಪ್ರಸ್ತುತ ಭಾರತದ ವಿವಿಧ ನಗರಗಳಲ್ಲಿ ಹರಡಿರುವ ನಾಲ್ಕು ತಂಡಗಳ ಎಲ್ಲ ಅಧಿಕಾರಿಗಳನ್ನು ಮುಂದಿನ ಒಂದೆರಡು ದಿನಗಳಲ್ಲಿ ಕೋಲ್ಕತಾಗೆ ಕರೆಸಿಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

ಕೋಲ್ಕತಾ (ಪಶ್ಚಿಮಬಂಗಾಳ): ಸಿಬಿಐ ನಿರ್ದೇಶನಾಲಯವು ಪಶ್ಚಿಮ ಬಂಗಾಳ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದೆ. ಚುನಾವಣೋತ್ತರ ಹಿಂಸಾಚಾರದ ವೇಳೆ ವರದಿಯಾದ ಕೊಲೆ, ಅತ್ಯಾಚಾರಗಳು ಮತ್ತು ಕೊಲೆ ಯತ್ನಗಳ ವಿವರಗಳನ್ನು ನೀಡುವಂತೆ ಕೋರಿದೆ. ಈ ಕುರಿತ ಮಾಹಿತಿ ಬಂದ ಕೂಡಲೇ ಸಿಬಿಐ ತನಿಖೆ ಆರಂಭಿಸಲಿದೆ.

ಕೋಲ್ಕತಾ ಹೈಕೋರ್ಟ್​​​​ ನಿನ್ನೆಯಷ್ಟೇ ಚುನಾವಣೋತ್ತರ ಹಿಂಸಾಚಾರದ ಸಮಯದಲ್ಲಿ ನಡೆದ ಅಪರಾಧಗಳ ಕುರಿತು ತನಿಖೆ ನಡೆಸುವಂತೆ ಸಿಬಿಐಗೆ ಆದೇಶಿಸಿತ್ತು. ಪ್ರಕರಣದ ತನಿಖೆಗಾಗಿ ಸಿಬಿಐ, 25 ಜನರ ನಾಲ್ಕು ತಂಡಗಳನ್ನು ರಚಿಸಿದೆ.

ಪ್ರತಿ ತಂಡವು ಆರು ಐಪಿಎಸ್​ ಅಧಿಕಾರಿಗಳನ್ನೊಳಗೊಂಡಿದ್ದು, ಸಿಬಿಐ ಜಂಟಿ ನಿರ್ದೇಶಕ ಶ್ರೇಣಿಯ ಅಧಿಕಾರಿಗಳು ಈ ತಂಡದ ನೇತೃತ್ವವಹಿಸಿಕೊಳ್ಳುತ್ತಾರೆ. ಪ್ರತಿ ತಂಡವು ಉಪ ನಿರೀಕ್ಷಕರ ಸಾಮಾನ್ಯ ಶ್ರೇಣಿಯ ಇಬ್ಬರು ಅಧಿಕಾರಿಗಳನ್ನು ಮತ್ತು ಮೇಲ್ವಿಚಾರಕರ ಶ್ರೇಣಿಯಲ್ಲಿ ಮೂವರು ಅಧಿಕಾರಿಗಳನ್ನು ಹೊಂದಿರುತ್ತದೆ. ಸಿಬಿಐನ ಜಂಟಿ ನಿರ್ದೇಶಕ ಪಂಕಜ್ ಶ್ರೀವಾಸ್ತವ, ಎಲ್ಲಾ ನಾಲ್ಕು ತಂಡಗಳೊಂದಿಗೆ ಸಮನ್ವಯದ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಚುನಾವಣೋತ್ತರ ಹಿಂಸಾಚಾರ..ಸಿಬಿಐ ತನಿಖೆಗೆ ಆದೇಶಿಸಿದ ಕೋಲ್ಕತ್ತಾ ಹೈಕೋರ್ಟ್

ದೆಹಲಿ ಮತ್ತು ಡೆಹ್ರಾಡೂನ್​​ನ ಸಿಬಿಐ ಅಧಿಕಾರಿಗಳನ್ನು ತಂಡದಲ್ಲಿ ನೇಮಿಸಲಾಗಿದೆ. ಪ್ರಸ್ತುತ ಭಾರತದ ವಿವಿಧ ನಗರಗಳಲ್ಲಿ ಹರಡಿರುವ ನಾಲ್ಕು ತಂಡಗಳ ಎಲ್ಲ ಅಧಿಕಾರಿಗಳನ್ನು ಮುಂದಿನ ಒಂದೆರಡು ದಿನಗಳಲ್ಲಿ ಕೋಲ್ಕತಾಗೆ ಕರೆಸಿಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.