ETV Bharat / bharat

ಅದಾನಿ ಗ್ರೂಪ್​ ವಿರುದ್ಧ ಆರೋಪ ಕುರಿತು ಚರ್ಚೆಗೆ ವಿರೋಧ ಪಕ್ಷಗಳ ಒತ್ತಾಯ: ಸಂಸತ್ತಿನ ಉಭಯ ಸದನ ಮುಂದೂಡಿಕೆ

author img

By

Published : Feb 3, 2023, 1:55 PM IST

ನಿನ್ನೆಯೂ ಕಲಾಪ ಪ್ರಾರಂಭವಾದ ಕೆಲವೇ ಹೊತ್ತಲ್ಲಿ ವಿರೋಧ ಪಕ್ಷಗಳು ಅದಾನಿ ಗ್ರೂಪ್​ ವಿರುದ್ಧದ ಆರೋಪಗಳ ಕುರಿತು ಚರ್ಚೆಗೆ ಒತ್ತಾಯಿಸಿ ಗದ್ದಲ ಎಬ್ಬಿಸಿದ್ದವು. ನಿನ್ನೆಯೂ ಕಲಾಪ ಮುಂದೂಡಲಾಗಿತ್ತು.

Adjournment of both Houses of Parliament
ಸಂಸತ್ತಿನ ಉಭಯ ಸದನಗಳು ಮುಂದೂಡಿಕೆ

ನವದೆಹಲಿ: ಅದಾನಿ ಗ್ರೂಪ್​ ವಿರುದ್ಧ ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್‌ ಮಾಡಿರುವ ವಂಚನೆಯ ವಹಿವಾಟಿನ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳು ಗದ್ದಲ ಉಂಟುಮಾಡಿದ ಕಾರಣ, ಇಂದು ಕಲಾಪ ಪ್ರಾರಂಭವಾದ ಕೂಡಲೇ ಸಂಸತ್ತಿನ ಉಭಯ ಸದನಗಳನ್ನೂ ಮುಂದೂಡಲಾಗಿದೆ. ರಾಜ್ಯಸಭೆಯನ್ನು ಮಧ್ಯಾಹ್ನ 2.30ಕ್ಕೆ ಮುಂದೂಡಿದರೆ, ಲೋಕಸಭೆಯ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.

ಇಂದು ಬೆಳಗ್ಗೆ ಸಂಸತ್ತಿನ ಮೇಲ್ಮನೆ ಸಭೆ ಸೇರಿ ಕಲಾಪ ಪ್ರಾರಂಭವಾದ ಕೆಲವೇ ನಿಮಿಷಗಳಲ್ಲಿ, ಉಪರಾಷ್ಟ್ರಪತಿ ಜಗದೀಪ್ ಧಂಖರ್ ಅವರು US ಶಾರ್ಟ್ ಸೆಲ್ಲರ್ ಹಿಂಡೆನ್‌ಬರ್ಗ್ ರಿಸರ್ಚ್ ಅದಾನಿ ಗ್ರೂಪ್​ ವಿರುದ್ಧ ಮಾಡಿರುವ ಆರೋಪದ ಕುರಿತು ಚರ್ಚಿಸುವಂತೆ ಒತ್ತಾಯಿಸಿ ವಿವಿಧ ವಿರೋಧ ಪಕ್ಷಗಳ ಸಂಸದರು ನೀಡಿದ 15 ಮುಂದೂಡಿಕೆ ನೋಟಿಸ್​ಗಳನ್ನು ತಿರಸ್ಕರಿಸಿದರು.

ಸದನದಲ್ಲಿ ಮುಖ್ಯ ಆದೇಶ ಮತ್ತು ಪಟ್ಟಿಯಲ್ಲಿರುವ ವಿಷಯಗಳನ್ನು ಕೈಗೆತ್ತಿಕೊಳ್ಳಲು ಅವಕಾಶ ನೀಡುವಂತೆ ವಿರೋಧ ಪಕ್ಷದ ಸಂಸದರನ್ನು ಉಪರಾಷ್ಟ್ರಪತಿ ಒತ್ತಾಯಿಸಿದ ನಂತರವೂ ವಿರೋಧ ಪಕ್ಷದ ಸಂಸದರು ತಮ್ಮ ನಿಲುವಿನಿಂದ ಹಿಂದೆ ಸರಿಯಲು ನಿರಾಕರಿಸಿದರು. ಮಾತ್ರವಲ್ಲದೇ ತಮ್ಮ ಪ್ರತಿಭಟನೆ ಹಾಗೆಯೇ ಮುಂದುವರೆಸಿದ್ದಾರೆ. ಸಂಸತ್ತು ಪ್ರಜಾಪ್ರಭುತ್ವದ ಮೂಲತತ್ತ್ವ ಮತ್ತು ಉತ್ತರ ನಕ್ಷತ್ರ ಎಂದು ಪ್ರತಿಭಟನಾನಿರತ ಸಂಸದರಿಗೆ ಒತ್ತಿ ಹೇಳಿದ ಉಪರಾಷ್ಟ್ರಪತಿ, ಇದು ಆಲೋಚನೆ ಮತ್ತು ಚರ್ಚೆಯ ಸ್ಥಳವಾಗಿರುವುದು ಹೌದು ಎನ್ನುವುದು ಆದರೆ, ಗೊಂದಲ ಸೃಷ್ಟಿಸುವ ಸ್ಥಳವಲ್ಲ ಎಂದು ಹೇಳಿದರು.

ಮಧ್ಯಾಹ್ನಕ್ಕೆ ಕಲಾಪ ಮುಂದೂಡಿಕೆ: "ನಾನು ವಿವಿಧ ಸದಸ್ಯರಿಂದ ನಿಯಮ 267ರ ಅಡಿ 15 ನೋಟಿಸ್‌ಗಳನ್ನು ಸ್ವೀಕರಿಸಿದ್ದೇನೆ. ಎಲ್ಲ ನೋಟಿಸ್‌ಗಳನ್ನು ನಾನು ಈಗಾಗಲೇ ಪರಿಶೀಲಿಸಿದ್ದು, ಇವುಗಳು ಯಾವುವು ಕೂಡ ನಿಯಮ 267 ರ ಅವಶ್ಯಕತೆಗಳನ್ನು ಪೂರೈಸದ ಕಾರಣ ಅವುಗಳನ್ನು ಒಪ್ಪಿಕೊಳ್ಳಲು ನನಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಎಲ್ಲ ಮುಂದೂಡಿಕೆ ನೋಟಿಸ್​ಗಳನ್ನು ತಿರಸ್ಕರಿಸಿದ್ದೇನೆ" ಎಂದು ಹೇಳಿದ ಉಪರಾಷ್ಟ್ರಪತಿ ರಾಜ್ಯಸಭೆ ಕಲಾಪವನ್ನು ಮಧ್ಯಾಹ್ನ 2.30ಕ್ಕೆ ಮುಂದೂಡಿದರು.

ಜಂಟಿ ಸದನ ಸಮಿತಿ ತನಿಖೆಗೆ ಒತ್ತಾಯ: ಲೋಕಸಭೆಗೆ ಸಂಬಂಧಿಸಿದಂತೆ, ಅದಾನಿ ಗ್ರೂಪ್ ಕಂಪನಿಯ ಷೇರುಗಳಲ್ಲಿನ ವಂಚನೆ, ಆಪಾದನೆ ಬಗ್ಗೆ ಜಂಟಿ ಸಂಸದೀಯ ಸಮಿತಿ ತನಿಖೆಗೆ ಪ್ರತಿಪಕ್ಷಗಳ ಸಂಸದರು ಪಟ್ಟು ಹಿಡಿದು ಗಲಾಟೆ ಎಬ್ಬಿಸಿದ ಕಾರಣ ಸಂಸತ್ತಿನ ಕೆಳಮನೆ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. ಸದನ ಸೇರಿದ ಕೆಲವೇ ನಿಮಿಷಗಳಲ್ಲಿ, ವಿರೋಧ ಪಕ್ಷದ ಸಂಸದರು ಅದಾನಿ ಗ್ರೂಪ್ ಸ್ಕ್ರಿಪ್‌ಗಳ ಟ್ಯಾಂಕಿಂಗ್ ಬಗ್ಗೆ ತನಿಖೆ ನಡೆಸುವಂತೆ ಮತ್ತು ಅದಾನಿ ಗ್ರೂಪ್‌ನ ವ್ಯವಹಾರಗಳ ಬಗ್ಗೆ ತನಿಖೆಗೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದ್ದಾರೆ.

ಸದನದಲ್ಲಿ ಸುವ್ಯವಸ್ಥೆ ಕಾಪಾಡುವಂತೆ ಪ್ರತಿಭಟನಾನಿರತ ಸಂಸದರನ್ನು ಒತ್ತಾಯಿಸಿದ ಸ್ಪೀಕರ್ ಓಂ ಬಿರ್ಲಾ ಅವರು, ಈ ವಿಷಯಗಳನ್ನು ಪ್ರಶ್ನೋತ್ತರ ವೇಳೆಯಲ್ಲಿ ಕೇಳಬೇಕು ಎಂದು ತಿಳಿಸಿದರು. ಬಜೆಟ್ ಅಧಿವೇಶನದ ಆರಂಭದಲ್ಲಿ ಸದನದಲ್ಲಿ ರಾಷ್ಟ್ರಪತಿಯವರ ಭಾಷಣಕ್ಕೆ ಧನ್ಯವಾದಗಳ ನಿರ್ಣಯವನ್ನು ಕೈಗೆತ್ತಿಕೊಳ್ಳಲಿದೆ. ಇದು ದೇಶದ ಮೊದಲ ಬುಡಕಟ್ಟು ಮಹಿಳಾ ರಾಷ್ಟ್ರಪತಿ ಸದನದ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾಡಿದ ಮೊದಲ ಭಾಷಣವಾಗಿರುವುದರಿಂದ, ಎಲ್ಲಾ ಸದಸ್ಯರು ಇದರಲ್ಲಿ ಭಾಗವಹಿಸಬೇಕು ಎಂದು ಅವರು ಹೇಳಿದರು.

ಪ್ರತಿಪಕ್ಷಗಳು ಸೂಕ್ತ ನೋಟಿಸ್​ ನೀಡಿದರೆ ಸದನದಲ್ಲಿ ತಮ್ಮ ಸಮಸ್ಯೆಗಳನ್ನು ಪ್ರಸ್ತಾಪಿಸಲು ಸಾಕಷ್ಟು ಸಮಯ ನೀಡಲು ಸಿದ್ಧ ಎಂದು ಸ್ಪೀಕರ್ ಹೇಳಿದರು. ಆದರೆ, ಪ್ರತಿಪಕ್ಷಗಳ ಸದಸ್ಯರು ಧರಣಿ ಮುಂದುವರಿಸಿದ ಕಾರಣ ಲೋಕಸಭೆಯನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.

ಇದನ್ನೂ ಓದಿ: ಅದಾನಿ ಕಂಪನಿ ವಿಚಾರ: ಇಂದೂ ಸಂಸತ್​ನಲ್ಲಿ ಸದ್ದು ಮಾಡುವ ಸಾಧ್ಯತೆ

ನವದೆಹಲಿ: ಅದಾನಿ ಗ್ರೂಪ್​ ವಿರುದ್ಧ ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್‌ ಮಾಡಿರುವ ವಂಚನೆಯ ವಹಿವಾಟಿನ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳು ಗದ್ದಲ ಉಂಟುಮಾಡಿದ ಕಾರಣ, ಇಂದು ಕಲಾಪ ಪ್ರಾರಂಭವಾದ ಕೂಡಲೇ ಸಂಸತ್ತಿನ ಉಭಯ ಸದನಗಳನ್ನೂ ಮುಂದೂಡಲಾಗಿದೆ. ರಾಜ್ಯಸಭೆಯನ್ನು ಮಧ್ಯಾಹ್ನ 2.30ಕ್ಕೆ ಮುಂದೂಡಿದರೆ, ಲೋಕಸಭೆಯ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.

ಇಂದು ಬೆಳಗ್ಗೆ ಸಂಸತ್ತಿನ ಮೇಲ್ಮನೆ ಸಭೆ ಸೇರಿ ಕಲಾಪ ಪ್ರಾರಂಭವಾದ ಕೆಲವೇ ನಿಮಿಷಗಳಲ್ಲಿ, ಉಪರಾಷ್ಟ್ರಪತಿ ಜಗದೀಪ್ ಧಂಖರ್ ಅವರು US ಶಾರ್ಟ್ ಸೆಲ್ಲರ್ ಹಿಂಡೆನ್‌ಬರ್ಗ್ ರಿಸರ್ಚ್ ಅದಾನಿ ಗ್ರೂಪ್​ ವಿರುದ್ಧ ಮಾಡಿರುವ ಆರೋಪದ ಕುರಿತು ಚರ್ಚಿಸುವಂತೆ ಒತ್ತಾಯಿಸಿ ವಿವಿಧ ವಿರೋಧ ಪಕ್ಷಗಳ ಸಂಸದರು ನೀಡಿದ 15 ಮುಂದೂಡಿಕೆ ನೋಟಿಸ್​ಗಳನ್ನು ತಿರಸ್ಕರಿಸಿದರು.

ಸದನದಲ್ಲಿ ಮುಖ್ಯ ಆದೇಶ ಮತ್ತು ಪಟ್ಟಿಯಲ್ಲಿರುವ ವಿಷಯಗಳನ್ನು ಕೈಗೆತ್ತಿಕೊಳ್ಳಲು ಅವಕಾಶ ನೀಡುವಂತೆ ವಿರೋಧ ಪಕ್ಷದ ಸಂಸದರನ್ನು ಉಪರಾಷ್ಟ್ರಪತಿ ಒತ್ತಾಯಿಸಿದ ನಂತರವೂ ವಿರೋಧ ಪಕ್ಷದ ಸಂಸದರು ತಮ್ಮ ನಿಲುವಿನಿಂದ ಹಿಂದೆ ಸರಿಯಲು ನಿರಾಕರಿಸಿದರು. ಮಾತ್ರವಲ್ಲದೇ ತಮ್ಮ ಪ್ರತಿಭಟನೆ ಹಾಗೆಯೇ ಮುಂದುವರೆಸಿದ್ದಾರೆ. ಸಂಸತ್ತು ಪ್ರಜಾಪ್ರಭುತ್ವದ ಮೂಲತತ್ತ್ವ ಮತ್ತು ಉತ್ತರ ನಕ್ಷತ್ರ ಎಂದು ಪ್ರತಿಭಟನಾನಿರತ ಸಂಸದರಿಗೆ ಒತ್ತಿ ಹೇಳಿದ ಉಪರಾಷ್ಟ್ರಪತಿ, ಇದು ಆಲೋಚನೆ ಮತ್ತು ಚರ್ಚೆಯ ಸ್ಥಳವಾಗಿರುವುದು ಹೌದು ಎನ್ನುವುದು ಆದರೆ, ಗೊಂದಲ ಸೃಷ್ಟಿಸುವ ಸ್ಥಳವಲ್ಲ ಎಂದು ಹೇಳಿದರು.

ಮಧ್ಯಾಹ್ನಕ್ಕೆ ಕಲಾಪ ಮುಂದೂಡಿಕೆ: "ನಾನು ವಿವಿಧ ಸದಸ್ಯರಿಂದ ನಿಯಮ 267ರ ಅಡಿ 15 ನೋಟಿಸ್‌ಗಳನ್ನು ಸ್ವೀಕರಿಸಿದ್ದೇನೆ. ಎಲ್ಲ ನೋಟಿಸ್‌ಗಳನ್ನು ನಾನು ಈಗಾಗಲೇ ಪರಿಶೀಲಿಸಿದ್ದು, ಇವುಗಳು ಯಾವುವು ಕೂಡ ನಿಯಮ 267 ರ ಅವಶ್ಯಕತೆಗಳನ್ನು ಪೂರೈಸದ ಕಾರಣ ಅವುಗಳನ್ನು ಒಪ್ಪಿಕೊಳ್ಳಲು ನನಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಎಲ್ಲ ಮುಂದೂಡಿಕೆ ನೋಟಿಸ್​ಗಳನ್ನು ತಿರಸ್ಕರಿಸಿದ್ದೇನೆ" ಎಂದು ಹೇಳಿದ ಉಪರಾಷ್ಟ್ರಪತಿ ರಾಜ್ಯಸಭೆ ಕಲಾಪವನ್ನು ಮಧ್ಯಾಹ್ನ 2.30ಕ್ಕೆ ಮುಂದೂಡಿದರು.

ಜಂಟಿ ಸದನ ಸಮಿತಿ ತನಿಖೆಗೆ ಒತ್ತಾಯ: ಲೋಕಸಭೆಗೆ ಸಂಬಂಧಿಸಿದಂತೆ, ಅದಾನಿ ಗ್ರೂಪ್ ಕಂಪನಿಯ ಷೇರುಗಳಲ್ಲಿನ ವಂಚನೆ, ಆಪಾದನೆ ಬಗ್ಗೆ ಜಂಟಿ ಸಂಸದೀಯ ಸಮಿತಿ ತನಿಖೆಗೆ ಪ್ರತಿಪಕ್ಷಗಳ ಸಂಸದರು ಪಟ್ಟು ಹಿಡಿದು ಗಲಾಟೆ ಎಬ್ಬಿಸಿದ ಕಾರಣ ಸಂಸತ್ತಿನ ಕೆಳಮನೆ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. ಸದನ ಸೇರಿದ ಕೆಲವೇ ನಿಮಿಷಗಳಲ್ಲಿ, ವಿರೋಧ ಪಕ್ಷದ ಸಂಸದರು ಅದಾನಿ ಗ್ರೂಪ್ ಸ್ಕ್ರಿಪ್‌ಗಳ ಟ್ಯಾಂಕಿಂಗ್ ಬಗ್ಗೆ ತನಿಖೆ ನಡೆಸುವಂತೆ ಮತ್ತು ಅದಾನಿ ಗ್ರೂಪ್‌ನ ವ್ಯವಹಾರಗಳ ಬಗ್ಗೆ ತನಿಖೆಗೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದ್ದಾರೆ.

ಸದನದಲ್ಲಿ ಸುವ್ಯವಸ್ಥೆ ಕಾಪಾಡುವಂತೆ ಪ್ರತಿಭಟನಾನಿರತ ಸಂಸದರನ್ನು ಒತ್ತಾಯಿಸಿದ ಸ್ಪೀಕರ್ ಓಂ ಬಿರ್ಲಾ ಅವರು, ಈ ವಿಷಯಗಳನ್ನು ಪ್ರಶ್ನೋತ್ತರ ವೇಳೆಯಲ್ಲಿ ಕೇಳಬೇಕು ಎಂದು ತಿಳಿಸಿದರು. ಬಜೆಟ್ ಅಧಿವೇಶನದ ಆರಂಭದಲ್ಲಿ ಸದನದಲ್ಲಿ ರಾಷ್ಟ್ರಪತಿಯವರ ಭಾಷಣಕ್ಕೆ ಧನ್ಯವಾದಗಳ ನಿರ್ಣಯವನ್ನು ಕೈಗೆತ್ತಿಕೊಳ್ಳಲಿದೆ. ಇದು ದೇಶದ ಮೊದಲ ಬುಡಕಟ್ಟು ಮಹಿಳಾ ರಾಷ್ಟ್ರಪತಿ ಸದನದ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾಡಿದ ಮೊದಲ ಭಾಷಣವಾಗಿರುವುದರಿಂದ, ಎಲ್ಲಾ ಸದಸ್ಯರು ಇದರಲ್ಲಿ ಭಾಗವಹಿಸಬೇಕು ಎಂದು ಅವರು ಹೇಳಿದರು.

ಪ್ರತಿಪಕ್ಷಗಳು ಸೂಕ್ತ ನೋಟಿಸ್​ ನೀಡಿದರೆ ಸದನದಲ್ಲಿ ತಮ್ಮ ಸಮಸ್ಯೆಗಳನ್ನು ಪ್ರಸ್ತಾಪಿಸಲು ಸಾಕಷ್ಟು ಸಮಯ ನೀಡಲು ಸಿದ್ಧ ಎಂದು ಸ್ಪೀಕರ್ ಹೇಳಿದರು. ಆದರೆ, ಪ್ರತಿಪಕ್ಷಗಳ ಸದಸ್ಯರು ಧರಣಿ ಮುಂದುವರಿಸಿದ ಕಾರಣ ಲೋಕಸಭೆಯನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.

ಇದನ್ನೂ ಓದಿ: ಅದಾನಿ ಕಂಪನಿ ವಿಚಾರ: ಇಂದೂ ಸಂಸತ್​ನಲ್ಲಿ ಸದ್ದು ಮಾಡುವ ಸಾಧ್ಯತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.