ETV Bharat / bharat

ಪಟ್ಟು ಬಿಡದ ಅನ್ನದಾತರು: ಪಂಜಾಬ್ ರೈತರ ಮನವೊಲಿಸುವಲ್ಲಿ ಬಿಜೆಪಿ ವಿಫಲ?

author img

By

Published : Dec 2, 2020, 8:05 AM IST

ಕೃಷಿ ಮಸೂದೆ ವಿರುದ್ಧದ ರೈತರ ಹೋರಾಟ 7ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಮಂಗಳವಾರ ರೈತ ನಾಯಕರ ಜೊತೆಗಿನ ಸಭೆ ವಿಫಲವಾಗಿದೆ. ರೈತರು ಎಂಎಸ್​​​ಪಿ ಕುರಿತಂತೆ ಸರ್ಕಾರ ಸ್ಪಷ್ಟ ನಿಲುವು ತಾಳಬೇಕು ಎಂದು ಪಟ್ಟು ಹಿಡಿದಿದ್ದಾರೆ. ಅಲ್ಲದೆ ರೈತ ವಿರೋಧಿ ಮಸೂದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿವೆ. ಈ ಕುರಿತಂತೆ ನಾಳೆ ಇನ್ನೊಂದು ಸುತ್ತಿನ ಸಭೆ ನಡೆಯಲಿದೆ.

BJP leaders show lack of political intellect to impress Punjab farmers
ಪಂಜಾಬ್ ರೈತರ ಮನವೊಲಿಸುಯಲ್ಲಿ ಬಿಜೆಪಿ ವಿಫಲ..ನಾಳೆ ಮತ್ತೊಂದು ಸಭೆ

ನವದೆಹಲಿ: ಕೃಷಿ ಮಸೂದೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ ಮುಂದುವರಿದಿದ್ದು, ರೈತರೊಂದಿಗಿನ ಸರ್ಕಾರದ ಮಾತುಕತೆ ಫಲ ನೀಡಿಲ್ಲ. ಕೇಂದ್ರ ಕೃಷಿ ಸಚಿವರೊಂದಿಗಿನ ಮಾತುಕತೆ ಬಳಿಕವೂ ರೈತ ಸಂಘಟನೆಗಳು ತಮ್ಮ ಪಟ್ಟು ಸಡಿಲಿಸುತ್ತಿಲ್ಲ.

ರೈತರು ಎಂಎಸ್​​​​ಪಿ (ಕನಿಷ್ಠ ಬೆಂಬಲ ಬೆಲೆ) ಕುರಿತು ಸರ್ಕಾರ ಸ್ಪಷ್ಟ ನಿಲುವು ತೋರುವವೆರಗೂ ಪ್ರತಿಭಟನೆ ನಡೆಸಲಾಗುವುದು ಎಂದಿದ್ದು, ಮೊದಲ ಮಾತುಕತೆಯಲ್ಲಿಯೂ ಇದೇ ವಿಷಯ ಚರ್ಚೆಯಾಗಿದೆ.

ಮೊದಲ ಭೇಟಿಯಲ್ಲಿ ರೈತರು ಪ್ರತಿಭಟನೆ ಕೊನೆಗಾಣಿಸಲ್ಲ ಎಂಬುದು ಸರ್ಕಾರಕ್ಕೂ ಮನದಟ್ಟಾಗಿತ್ತು. ಹೀಗಾಗಿ ಆ ಭೇಟಿ ಸಹ ಹೆಚ್ಚು ಪ್ರಾಮುಖ್ಯತೆ ಗಳಿಸದೇ ಕೇವಲ ಅನೌಪಚಾರಿಕ ಎನಿಸಿಕೊಂಡಿತು. ಈ ಸಭೆಯಲ್ಲಿ ಪ್ರಮುಖವಾಗಿ ರೈತರು ಕೇಂದ್ರದ ಕೃಷಿ ಮಸೂದೆಗಳ ಹಿಂಪಡೆಯುವಂತೆ ಆಗ್ರಹಿಸಲಾಯಿತು. ನೂತನ ಕಾಯ್ದೆಯಲ್ಲಿ ಎಂಎಸ್​​​​ಪಿಯನ್ನು ಹಂತ ಹಂತವಾಗಿ ರೈತರಿಂದ ದೂರ ಮಾಡುವ ಹುನ್ನಾರವಿದೆ. ಹೀಗಾಗಿ ಎಂಎಸ್​ಪಿ ಕುರಿತು ಸರ್ಕಾರ ಸ್ಪಷ್ಟ ನಿಲುವು ತಾಳಬೇಕಿದೆ ಎಂಬುದು ಸಭೆಯ ನಿರ್ಣಾಯಕವಾಗಿತ್ತು.

ಅಲ್ಲದೆ ರೈತರ ಪ್ರತಿಭಟನೆ ದೆಹಲಿಯಲ್ಲಿ ತೀವ್ರ ಸ್ವರೂಪ ಪಡೆದಿದ್ದು, ಬುಕಾರಿ ಪಾರ್ಕ್​​ನಲ್ಲಿ ಪ್ರತಿಭಟನೆಗೆ ಅವಕಾಶ ನೀಡುವುದು ಎಂದರೆ ರೈತರನ್ನು ಜೈಲಿಗೆ ಕಳುಹಿಸುವುದು ಎಂದು ಕೇಂದ್ರದ ವಿರುದ್ಧ ರೈತ ನಾಯಕರು ಆರೋಪಿಸಿದ್ದಾರೆ.

ಈ ಕುರಿತಂತೆ ಈಟಿವಿ ಭಾರತದೊಂದಿಗೆ ಮಾತನಾಡಿದ ಬಿಜೆಪಿ ಹಿರಿಯ ನಾಯಕರೊಬ್ಬರು. ‘ಈ ಕೃಷಿ ಮಸೂದೆಗಳಿಂದ ಪಂಜಾಬ್​ ರೈತರಿಗೆ ಮಾತ್ರ ಸಮಸ್ಯೆಗಳಾಗಿವೆ. ದೇಶದ ಬೇರಾವ ಪ್ರದೇಶದಲ್ಲೂ ಮಸೂದೆ ವಿರುದ್ಧ ಪ್ರತಿಭಟನೆ, ವಿರೋಧವಿಲ್ಲ. ರೈತ ಚಳವಳಿಯ ಸೋಗಿನಲ್ಲಿ ಪಂಜಾಬ್​​ನಲ್ಲಿ ಮತ್ತೆ ಅಸ್ಥಿರತೆ ಉಂಟುಮಾಡುವುದೇ ಇದರ ಉದ್ದೇಶ, ಇದಷ್ಟೇ ಈ ಪ್ರತಿಭಟನೆಯ ವಾಸ್ತವ’ ಎಂದು ಆರೋಪಿಸಿದ್ದಾರೆ.

‘ಪ್ರತಿಭಟನೆಯಲ್ಲಿ ಪ್ರಧಾನಿ ವಿರುದ್ಧ ಆಕ್ಷೇಪಾರ್ಹ ಬರಹ, ಪೋಸ್ಟರ್ ಪ್ರದರ್ಶಿಸುವುದು, ಪ್ರತ್ಯೇಕ ಖಲಿಸ್ತಾನ್ ಘೋಷಣೆ ಕೂಗುವುದು. ಇದು ನಿಜವಾದ ರೈತಪ್ರತಿಭಟನೆಯ ಸ್ವರೂಪವಲ್ಲ’ ಎಂದಿದ್ದಾರೆ.

‘ಈಗ ಬಿಜೆಪಿ ಮಸೂದೆಯನ್ನು ಬೇರೆ ದೇಶದ ರೈತರ ಮುಂದಿಡಲು ಸಿದ್ಧತೆ ನಡೆಸಿದೆ. ತಜ್ಞರ ಮೂಲಕ ಇದಕ್ಕಾಗಿ ಕಾರ್ಯಕ್ರಮ ರೂಪಿಸಿದೆ. ಆ ರೈತರಿಂದ ಯಾವ ಉತ್ತರ ಸಿಗಲಿಗೆ ಅದರ ಅರ್ಹತೆಯ ಆಧಾರದ ಮೇಲೆ ದೇಶದ ರೈತರ ಮುಂದಿಡಲು ನಿರ್ಧರಿಸಿದ್ದೇವೆ’ ಎಂದಿದ್ದಾರೆ.

ಮಂಗಳವಾರ ನಡೆದಿರುವ ರೈತರೊಂದಿಗಿನ ಸಭೆಯಲ್ಲಿ ಕೇಂದ್ರ ಸಚಿವರು ಕೃಷಿ ಕಾನೂನುಗಳಲ್ಲಿನ ಭಿನ್ನಾಭಿಪ್ರಾಯಗಳನ್ನು ವಿಂಗಡಿಸಿ ಚರ್ಚಿಸಲು ಸಮಿತಿಯೊಂದನ್ನು ರಚಿಸುವ ಪ್ರಸ್ತಾಪವನ್ನು ಮುಂದಿಟ್ಟರು. ಆದರೆ ರೈತರು ಇದಕ್ಕೆ ಒಪ್ಪಿಗೆ ಸೂಚಿಸಿಲ್ಲ. ನಾಳೆ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ.

ಇದನ್ನೂ ಓದಿ: ಡಿ. 3ರಂದು ರೈತರೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ: ಕೇಂದ್ರ ಕೃಷಿ ಸಚಿವ

ನವದೆಹಲಿ: ಕೃಷಿ ಮಸೂದೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ ಮುಂದುವರಿದಿದ್ದು, ರೈತರೊಂದಿಗಿನ ಸರ್ಕಾರದ ಮಾತುಕತೆ ಫಲ ನೀಡಿಲ್ಲ. ಕೇಂದ್ರ ಕೃಷಿ ಸಚಿವರೊಂದಿಗಿನ ಮಾತುಕತೆ ಬಳಿಕವೂ ರೈತ ಸಂಘಟನೆಗಳು ತಮ್ಮ ಪಟ್ಟು ಸಡಿಲಿಸುತ್ತಿಲ್ಲ.

ರೈತರು ಎಂಎಸ್​​​​ಪಿ (ಕನಿಷ್ಠ ಬೆಂಬಲ ಬೆಲೆ) ಕುರಿತು ಸರ್ಕಾರ ಸ್ಪಷ್ಟ ನಿಲುವು ತೋರುವವೆರಗೂ ಪ್ರತಿಭಟನೆ ನಡೆಸಲಾಗುವುದು ಎಂದಿದ್ದು, ಮೊದಲ ಮಾತುಕತೆಯಲ್ಲಿಯೂ ಇದೇ ವಿಷಯ ಚರ್ಚೆಯಾಗಿದೆ.

ಮೊದಲ ಭೇಟಿಯಲ್ಲಿ ರೈತರು ಪ್ರತಿಭಟನೆ ಕೊನೆಗಾಣಿಸಲ್ಲ ಎಂಬುದು ಸರ್ಕಾರಕ್ಕೂ ಮನದಟ್ಟಾಗಿತ್ತು. ಹೀಗಾಗಿ ಆ ಭೇಟಿ ಸಹ ಹೆಚ್ಚು ಪ್ರಾಮುಖ್ಯತೆ ಗಳಿಸದೇ ಕೇವಲ ಅನೌಪಚಾರಿಕ ಎನಿಸಿಕೊಂಡಿತು. ಈ ಸಭೆಯಲ್ಲಿ ಪ್ರಮುಖವಾಗಿ ರೈತರು ಕೇಂದ್ರದ ಕೃಷಿ ಮಸೂದೆಗಳ ಹಿಂಪಡೆಯುವಂತೆ ಆಗ್ರಹಿಸಲಾಯಿತು. ನೂತನ ಕಾಯ್ದೆಯಲ್ಲಿ ಎಂಎಸ್​​​​ಪಿಯನ್ನು ಹಂತ ಹಂತವಾಗಿ ರೈತರಿಂದ ದೂರ ಮಾಡುವ ಹುನ್ನಾರವಿದೆ. ಹೀಗಾಗಿ ಎಂಎಸ್​ಪಿ ಕುರಿತು ಸರ್ಕಾರ ಸ್ಪಷ್ಟ ನಿಲುವು ತಾಳಬೇಕಿದೆ ಎಂಬುದು ಸಭೆಯ ನಿರ್ಣಾಯಕವಾಗಿತ್ತು.

ಅಲ್ಲದೆ ರೈತರ ಪ್ರತಿಭಟನೆ ದೆಹಲಿಯಲ್ಲಿ ತೀವ್ರ ಸ್ವರೂಪ ಪಡೆದಿದ್ದು, ಬುಕಾರಿ ಪಾರ್ಕ್​​ನಲ್ಲಿ ಪ್ರತಿಭಟನೆಗೆ ಅವಕಾಶ ನೀಡುವುದು ಎಂದರೆ ರೈತರನ್ನು ಜೈಲಿಗೆ ಕಳುಹಿಸುವುದು ಎಂದು ಕೇಂದ್ರದ ವಿರುದ್ಧ ರೈತ ನಾಯಕರು ಆರೋಪಿಸಿದ್ದಾರೆ.

ಈ ಕುರಿತಂತೆ ಈಟಿವಿ ಭಾರತದೊಂದಿಗೆ ಮಾತನಾಡಿದ ಬಿಜೆಪಿ ಹಿರಿಯ ನಾಯಕರೊಬ್ಬರು. ‘ಈ ಕೃಷಿ ಮಸೂದೆಗಳಿಂದ ಪಂಜಾಬ್​ ರೈತರಿಗೆ ಮಾತ್ರ ಸಮಸ್ಯೆಗಳಾಗಿವೆ. ದೇಶದ ಬೇರಾವ ಪ್ರದೇಶದಲ್ಲೂ ಮಸೂದೆ ವಿರುದ್ಧ ಪ್ರತಿಭಟನೆ, ವಿರೋಧವಿಲ್ಲ. ರೈತ ಚಳವಳಿಯ ಸೋಗಿನಲ್ಲಿ ಪಂಜಾಬ್​​ನಲ್ಲಿ ಮತ್ತೆ ಅಸ್ಥಿರತೆ ಉಂಟುಮಾಡುವುದೇ ಇದರ ಉದ್ದೇಶ, ಇದಷ್ಟೇ ಈ ಪ್ರತಿಭಟನೆಯ ವಾಸ್ತವ’ ಎಂದು ಆರೋಪಿಸಿದ್ದಾರೆ.

‘ಪ್ರತಿಭಟನೆಯಲ್ಲಿ ಪ್ರಧಾನಿ ವಿರುದ್ಧ ಆಕ್ಷೇಪಾರ್ಹ ಬರಹ, ಪೋಸ್ಟರ್ ಪ್ರದರ್ಶಿಸುವುದು, ಪ್ರತ್ಯೇಕ ಖಲಿಸ್ತಾನ್ ಘೋಷಣೆ ಕೂಗುವುದು. ಇದು ನಿಜವಾದ ರೈತಪ್ರತಿಭಟನೆಯ ಸ್ವರೂಪವಲ್ಲ’ ಎಂದಿದ್ದಾರೆ.

‘ಈಗ ಬಿಜೆಪಿ ಮಸೂದೆಯನ್ನು ಬೇರೆ ದೇಶದ ರೈತರ ಮುಂದಿಡಲು ಸಿದ್ಧತೆ ನಡೆಸಿದೆ. ತಜ್ಞರ ಮೂಲಕ ಇದಕ್ಕಾಗಿ ಕಾರ್ಯಕ್ರಮ ರೂಪಿಸಿದೆ. ಆ ರೈತರಿಂದ ಯಾವ ಉತ್ತರ ಸಿಗಲಿಗೆ ಅದರ ಅರ್ಹತೆಯ ಆಧಾರದ ಮೇಲೆ ದೇಶದ ರೈತರ ಮುಂದಿಡಲು ನಿರ್ಧರಿಸಿದ್ದೇವೆ’ ಎಂದಿದ್ದಾರೆ.

ಮಂಗಳವಾರ ನಡೆದಿರುವ ರೈತರೊಂದಿಗಿನ ಸಭೆಯಲ್ಲಿ ಕೇಂದ್ರ ಸಚಿವರು ಕೃಷಿ ಕಾನೂನುಗಳಲ್ಲಿನ ಭಿನ್ನಾಭಿಪ್ರಾಯಗಳನ್ನು ವಿಂಗಡಿಸಿ ಚರ್ಚಿಸಲು ಸಮಿತಿಯೊಂದನ್ನು ರಚಿಸುವ ಪ್ರಸ್ತಾಪವನ್ನು ಮುಂದಿಟ್ಟರು. ಆದರೆ ರೈತರು ಇದಕ್ಕೆ ಒಪ್ಪಿಗೆ ಸೂಚಿಸಿಲ್ಲ. ನಾಳೆ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ.

ಇದನ್ನೂ ಓದಿ: ಡಿ. 3ರಂದು ರೈತರೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ: ಕೇಂದ್ರ ಕೃಷಿ ಸಚಿವ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.