ಮೀರತ್ (ಉತ್ತರ ಪ್ರದೇಶ ): ಕೊರೊನಾದಿಂದ ಪಾರಾಗಲು ಜನತೆ ಲಸಿಕೆ ಹಾಕಿಸಿಕೊಳ್ಳಲು ಮುಗಿಬೀಳುತ್ತಿದ್ದರೆ ಇತ್ತ ಮೀರತ್ನ ಬಿಜೆಪಿ ಮುಖಂಡರೊಬ್ಬರು ಕೈಯಲ್ಲಿ ಶಂಖ, ಜಾಗಟೆ ಹಿಡಿದು ಸಗಣಿ ಧೂಪ ಹಾಕಿ ಸುದ್ದಿಯಾಗಿದ್ದಾರೆ.
ಕೊರೊನಾ ವೈರಸ್ ನಾಶವಾಗಲೆಂದು ಬಿಜೆಪಿ ಮುಖಂಡ ಗೋಪಾಲ್ ಶರ್ಮಾ ತಳ್ಳುವ ಗಾಡಿಯಲ್ಲಿ ಧೂಪವನ್ನಿಟ್ಟು, ಶಂಖ ಊದಿಕೊಂಡು ಕೊಳಗೇರಿಯಲ್ಲಿ ಹನುಮಾನ ಚಾಲೀಸಾ ಪಠಿಸಿದ್ದಾರೆ.
ಈ ರೀತಿ ಧೂಪ, ಶಂಖದ ಮೂಲಕ ವಾತಾವರಣದಲ್ಲಿ ಧನಾತ್ಮಕ ಸ್ಥಿತಿ ನಿರ್ಮಾಣವಾಗಲಿದೆಯಂತೆ. ಅಲ್ಲದೆ ಆಮ್ಲಜನಕ ಪ್ರಮಾಣವೂ ಏರಿಕೆಯಾಗಲಿದೆಯಂತೆ.
ಈ ರೀತಿ ಹೇಳಿಕೊಂಡು ಮುಖಂಡರು ಹಾಗೂ ಇವರ ಜೊತೆ ಐದಾರು ಜನ ಸಹ ಹೆಜ್ಜೆ ಹಾಕಿದ್ದಾರೆ. ಇವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಅಲ್ಲದೆ ಈ ಧೂಪಕ್ಕೆ ಗೋವಿನ ಸಗಣಿ ಹಾಗೂ ತುಪ್ಪವನ್ನು ಸಹ ಬೆರೆಸಿದ್ದು, ಬೆಂಕಿಗಾಗಿ ಮಾವಿನ ಮರದ ಕಟ್ಟಿಗೆ ಬಳಸಿದ್ದೇವೆ, ಇದರಿಂದ ಕೊರೊನಾ ವೈರಸ್ ಹರಡುವುದನ್ನು ತಡೆಯುತ್ತೇವೆ ಎಂದಿದ್ದಾರೆ. ಸದ್ಯ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಸಿಎಂ ನಿಯಮ ಬ್ರೇಕ್ ಮಾಡಿದ್ದಾರೆ: ನಾವು ಲಾಕ್ಡೌನ್ ರೂಲ್ಸ್ ಪಾಲಿಸಲ್ಲ ಎಂದ ಜನ