ETV Bharat / bharat

ಟಿಎಂಸಿ ಬಿಟ್ಟು ಬಿಜೆಪಿ ಸೇರಿದ ರಾಜೀವ್​ ಬ್ಯಾನರ್ಜಿಗೆ Z+ ಭದ್ರತೆ!

author img

By

Published : Feb 1, 2021, 7:33 PM IST

ತೃಣಮೂಲ ಕಾಂಗ್ರೆಸ್ ಬಿಟ್ಟು ಭಾರತೀಯ ಜನತಾ ಪಾರ್ಟಿ ಸೇರಿಕೊಂಡಿರುವ ಪಶ್ಚಿಮ ಬಂಗಾಳದ ಕೆಲ ನಾಯಕರಿಗೆ ಇದೀಗ ಭಾರೀ ಭದ್ರತೆ ಒದಗಿಸಲಾಗಿದೆ.

Rajib Banerjee
Rajib Banerjee

ಕೋಲ್ಕತ್ತಾ: ಕಳೆದ ಕೆಲ ದಿನಗಳ ಹಿಂದೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಚಿವ ಸಂಪುಟಕ್ಕೆ ವಿದಾಯ ಹೇಳಿ ತೃಣಮೂಲ ಕಾಂಗ್ರೆಸ್​ನ ಹಿರಿಯ ಮುಖಂಡ ಬಿಜೆಪಿ ಸೇರಿಕೊಂಡಿದ್ದರು. ಅವರಿಗೆ ಇದೀಗ Z+ ಭದ್ರತೆ ನೀಡಲಾಗಿದೆ.

ಜನವರಿ 30ರಂದು ಪಶ್ಚಿಮ ಬಂಗಾಳದಿಂದ ನವದೆಹಲಿಗೆ ಆಗಮಿಸಿದ್ದ ರಾಜೀವ್​ ಬ್ಯಾನರ್ಜಿ, ಶಾಸಕರಾದ ಬೈಶಾಲಿ ದಾಲ್ಮಿಯಾ, ಪ್ರಬಿರ್‌ ಘೋಶಾಲ್‌, ಹೌರಾ ಮೇಯರ್‌ ರತಿನ್‌ ಚಕ್ರವರ್ತಿ, ಮಾಜಿ ಶಾಸಕ ರಣಘಟ್‌ ಪಾರ್ಥಸಾರಥಿ ಚಟರ್ಜಿ ಕಮಲ ಮುಡಿದಿದ್ದರು.

ಓದಿ: ಮಮತಾಗೆ ಬಿಗ್​ ಶಾಕ್​: ಬಿಜೆಪಿ ಸೇರಿದ ಐವರು ಟಿಎಂಸಿ ನಾಯಕರು!

ಅದರಲ್ಲಿ ರಾಜೀವ್ ಬ್ಯಾನರ್ಜಿಗೆ Z+ ಭದ್ರತೆ ನೀಡಲಾಗಿದ್ದು, ಉಳಿದ ನಾಯಕರಿಗೆ Y+ ಭದ್ರತೆ ನೀಡಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಬರುವ ಏಪ್ರಿಲ್​ - ಮೇ ತಿಂಗಳಲ್ಲಿ 294 ಕ್ಷೇತ್ರಗಳಿಗೆ ವಿಧಾನಸಭೆ ಚುನಾವಣೆ ನಡೆಯಲಿದೆ. ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಜೋರಾಗುತ್ತಿದ್ದು, ಅನೇಕರು ಟಿಎಂಸಿ ತೊರೆದು ಬಿಜೆಪಿ ಸೇರಿಕೊಳ್ಳುತ್ತಿದ್ದಾರೆ.

ಕೋಲ್ಕತ್ತಾ: ಕಳೆದ ಕೆಲ ದಿನಗಳ ಹಿಂದೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಚಿವ ಸಂಪುಟಕ್ಕೆ ವಿದಾಯ ಹೇಳಿ ತೃಣಮೂಲ ಕಾಂಗ್ರೆಸ್​ನ ಹಿರಿಯ ಮುಖಂಡ ಬಿಜೆಪಿ ಸೇರಿಕೊಂಡಿದ್ದರು. ಅವರಿಗೆ ಇದೀಗ Z+ ಭದ್ರತೆ ನೀಡಲಾಗಿದೆ.

ಜನವರಿ 30ರಂದು ಪಶ್ಚಿಮ ಬಂಗಾಳದಿಂದ ನವದೆಹಲಿಗೆ ಆಗಮಿಸಿದ್ದ ರಾಜೀವ್​ ಬ್ಯಾನರ್ಜಿ, ಶಾಸಕರಾದ ಬೈಶಾಲಿ ದಾಲ್ಮಿಯಾ, ಪ್ರಬಿರ್‌ ಘೋಶಾಲ್‌, ಹೌರಾ ಮೇಯರ್‌ ರತಿನ್‌ ಚಕ್ರವರ್ತಿ, ಮಾಜಿ ಶಾಸಕ ರಣಘಟ್‌ ಪಾರ್ಥಸಾರಥಿ ಚಟರ್ಜಿ ಕಮಲ ಮುಡಿದಿದ್ದರು.

ಓದಿ: ಮಮತಾಗೆ ಬಿಗ್​ ಶಾಕ್​: ಬಿಜೆಪಿ ಸೇರಿದ ಐವರು ಟಿಎಂಸಿ ನಾಯಕರು!

ಅದರಲ್ಲಿ ರಾಜೀವ್ ಬ್ಯಾನರ್ಜಿಗೆ Z+ ಭದ್ರತೆ ನೀಡಲಾಗಿದ್ದು, ಉಳಿದ ನಾಯಕರಿಗೆ Y+ ಭದ್ರತೆ ನೀಡಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಬರುವ ಏಪ್ರಿಲ್​ - ಮೇ ತಿಂಗಳಲ್ಲಿ 294 ಕ್ಷೇತ್ರಗಳಿಗೆ ವಿಧಾನಸಭೆ ಚುನಾವಣೆ ನಡೆಯಲಿದೆ. ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಜೋರಾಗುತ್ತಿದ್ದು, ಅನೇಕರು ಟಿಎಂಸಿ ತೊರೆದು ಬಿಜೆಪಿ ಸೇರಿಕೊಳ್ಳುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.