ETV Bharat / bharat

ರಾಜ್ಯಸಭೆಯಲ್ಲಿ ನೆರೆ ವಿಷಯ ಪ್ರಸ್ತಾಪಿಸಿದ ಬಿ.ಕೆ. ಹರಿಪ್ರಸಾದ್​, ಮೋದಿ ಕುರಿತು ಟೀಕೆಗೆ ಸಭಾಪತಿ ಆಕ್ಷೇಪ

author img

By

Published : Nov 27, 2019, 3:26 PM IST

ಚಳಿಗಾಲದ ಅಧಿವೇಶನದಲ್ಲಿ ಕರ್ನಾಟಕದಲ್ಲಿ ಉಂಟಾದ ಪ್ರವಾಹದ ಪರಿಸ್ಥಿತಿಯನ್ನು ಕಾಂಗ್ರೆಸ್​ನ​ ನಾಯಕರಾದ ಬಿ.ಕೆ. ಹರಿಪ್ರಸಾದ್ ಪ್ರಸ್ತಾಪಿಸಿದ್ದಾರೆ. ಬಳಿಕ ಮಾತನಾಡಿದ ಜಿ. ಸಿ. ಚಂದ್ರಶೇಖರ್​​ ಇದೇ ವಿಷಯವನ್ನು ಪ್ರಸ್ತಾಪಿದ್ರು, ಅದು ಕೂಡ ಕನ್ನಡದಲ್ಲಿ.

B.K. Hariprasad
ಕರ್ನಾಟಕದ ಪ್ರವಾಹ ಪರಿಸ್ಥಿತಿ ಬಗ್ಗೆ ಮಾತನಾಡಿದ ಬಿ.ಕೆ. ಹರಿಪ್ರಸಾದ್

ನವದೆಹಲಿ: ಇಂದಿನ ಚಳಿಗಾಲದ ಅಧಿವೇಶನದಲ್ಲಿ ಕರ್ನಾಟಕದಲ್ಲಿ ಉಂಟಾದ ಪ್ರವಾಹದ ಬಗ್ಗೆ ಕಾಂಗ್ರೆಸ್​ನ​ ನಾಯಕರಾದ ಬಿ.ಕೆ. ಹರಿಪ್ರಸಾದ್ ಮತ್ತು ಜಿ. ಸಿ. ಚಂದ್ರಶೇಖರ್​​ ಸದನದಲ್ಲಿ ಪ್ರಸ್ತಾಪಿಸಿದ್ರು.

ಸದನದಲ್ಲಿ ಮೊದಲಿಗೆ ಮಾತನಾಡಿದ ಕಾಂಗ್ರೆಸ್​ ನಾಯಕ ಬಿ.ಕೆ. ಹರಿಪ್ರಸಾದ್​ ಅವರು, ಉತ್ತರ ಕರ್ನಾಟಕ ಭಾಗದಲ್ಲಿ ಈ ಬಾರಿ ತುಂಬಾ ಮಳೆಯಾದ ಪರಿಣಾಮ ಭಾರೀ ನಷ್ಟವಾಗಿದೆ. ಅಲ್ಲದೇ ಹಲವರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಈ ವರ್ಷದ ಆಗಸ್ಟ್​ ತಿಂಗಳಿನಲ್ಲಿ ರಾಜ್ಯದಲ್ಲಿ 224 ಮಿಮೀ ಮಳೆಯಾಗಿದೆ. ಇದು ದಾಖಲೆಯ ಮಳೆಯಾಗಿದ್ದು, ಕಳೆದ ಹಲವು ವರ್ಷಗಳ ಹಿಂದೆಯಿಂದ ಇಷ್ಟು ಮಳೆಯಾಗಿರಲಿಲ್ಲ. ಉ. ಕರ್ನಾಟಕ ಜಿಲ್ಲೆಗಳಲ್ಲಿ ತುಂಬಾ ಮಳೆಯಾಗಿದ್ದರಿಂದ ತುಂಬಾ ಜನ ನೆಲೆಯನ್ನು ಕಳೆದುಕೊಂಡಿದ್ದಾರೆ. ಅಲ್ಲದೇ ನಮ್ಮ ರಾಜ್ಯಕ್ಕೆ ನೀಡಿರುವ ಪರಿಹಾರ ಧನವೂ ಕಡಿಮೆ ಎಂದರು.

ಕರ್ನಾಟಕದ ಪ್ರವಾಹ ಪರಿಸ್ಥಿತಿ ಬಗ್ಗೆ ಮಾತನಾಡಿದ ಬಿ.ಕೆ. ಹರಿಪ್ರಸಾದ್

ಇನ್ನು ನಮ್ಮ ದೇಶದ ಪ್ರಧಾನಿ ಮೋದಿ ಅವರು ಬೇರೆಲ್ಲಾ ವಿಷಯಕ್ಕೆ ಟ್ವೀಟ್​ ಮಾಡುತ್ತಾರೆ. ಆದ್ರೆ ನಮ್ಮ ಕರ್ನಾಟಕ ಪ್ರವಾಹ ಕುರಿತು ಅವರು ಯಾವುದೇ ಟ್ವೀಟ್​ ಮಾಡಿಲ್ಲ ಎಂದರು. ಬಳಿಕ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಭಾಪತಿ, ಇಲ್ಲಿ ರಾಜಕೀಯ ಚರ್ಚೆಗಳು ಬೇಡ. ನಿಮ್ಮ ಸಮಸ್ಯೆಗಳನ್ನು ಮಾತ್ರ ಹೇಳಿ ಎಂದು ತಾಕೀತು ಮಾಡಿದ್ರು.

ನಂತರ ಮಾತನಾಡಿದ ಕಾಂಗ್ರೆಸ್​ ನಾಯಕ ಜಿ. ಸಿ. ಚಂದ್ರಶೇಖರ್​​ ಕೂಡ ಕರ್ನಾಟಕದ ಪ್ರವಾಹ ಪರಿಸ್ಥಿತಿ ಕುರಿತು ಮಾತನಾಡಿದ್ರು. ಅದರಲ್ಲೂ ಅವರಿಗೆ ಕನ್ನಡದಲ್ಲಿ ಮಾತನಾಡಲು ಅವಕಾಶ ಮಾಡಿಕೊಡಲಾಗಿತ್ತು.

ನವದೆಹಲಿ: ಇಂದಿನ ಚಳಿಗಾಲದ ಅಧಿವೇಶನದಲ್ಲಿ ಕರ್ನಾಟಕದಲ್ಲಿ ಉಂಟಾದ ಪ್ರವಾಹದ ಬಗ್ಗೆ ಕಾಂಗ್ರೆಸ್​ನ​ ನಾಯಕರಾದ ಬಿ.ಕೆ. ಹರಿಪ್ರಸಾದ್ ಮತ್ತು ಜಿ. ಸಿ. ಚಂದ್ರಶೇಖರ್​​ ಸದನದಲ್ಲಿ ಪ್ರಸ್ತಾಪಿಸಿದ್ರು.

ಸದನದಲ್ಲಿ ಮೊದಲಿಗೆ ಮಾತನಾಡಿದ ಕಾಂಗ್ರೆಸ್​ ನಾಯಕ ಬಿ.ಕೆ. ಹರಿಪ್ರಸಾದ್​ ಅವರು, ಉತ್ತರ ಕರ್ನಾಟಕ ಭಾಗದಲ್ಲಿ ಈ ಬಾರಿ ತುಂಬಾ ಮಳೆಯಾದ ಪರಿಣಾಮ ಭಾರೀ ನಷ್ಟವಾಗಿದೆ. ಅಲ್ಲದೇ ಹಲವರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಈ ವರ್ಷದ ಆಗಸ್ಟ್​ ತಿಂಗಳಿನಲ್ಲಿ ರಾಜ್ಯದಲ್ಲಿ 224 ಮಿಮೀ ಮಳೆಯಾಗಿದೆ. ಇದು ದಾಖಲೆಯ ಮಳೆಯಾಗಿದ್ದು, ಕಳೆದ ಹಲವು ವರ್ಷಗಳ ಹಿಂದೆಯಿಂದ ಇಷ್ಟು ಮಳೆಯಾಗಿರಲಿಲ್ಲ. ಉ. ಕರ್ನಾಟಕ ಜಿಲ್ಲೆಗಳಲ್ಲಿ ತುಂಬಾ ಮಳೆಯಾಗಿದ್ದರಿಂದ ತುಂಬಾ ಜನ ನೆಲೆಯನ್ನು ಕಳೆದುಕೊಂಡಿದ್ದಾರೆ. ಅಲ್ಲದೇ ನಮ್ಮ ರಾಜ್ಯಕ್ಕೆ ನೀಡಿರುವ ಪರಿಹಾರ ಧನವೂ ಕಡಿಮೆ ಎಂದರು.

ಕರ್ನಾಟಕದ ಪ್ರವಾಹ ಪರಿಸ್ಥಿತಿ ಬಗ್ಗೆ ಮಾತನಾಡಿದ ಬಿ.ಕೆ. ಹರಿಪ್ರಸಾದ್

ಇನ್ನು ನಮ್ಮ ದೇಶದ ಪ್ರಧಾನಿ ಮೋದಿ ಅವರು ಬೇರೆಲ್ಲಾ ವಿಷಯಕ್ಕೆ ಟ್ವೀಟ್​ ಮಾಡುತ್ತಾರೆ. ಆದ್ರೆ ನಮ್ಮ ಕರ್ನಾಟಕ ಪ್ರವಾಹ ಕುರಿತು ಅವರು ಯಾವುದೇ ಟ್ವೀಟ್​ ಮಾಡಿಲ್ಲ ಎಂದರು. ಬಳಿಕ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಭಾಪತಿ, ಇಲ್ಲಿ ರಾಜಕೀಯ ಚರ್ಚೆಗಳು ಬೇಡ. ನಿಮ್ಮ ಸಮಸ್ಯೆಗಳನ್ನು ಮಾತ್ರ ಹೇಳಿ ಎಂದು ತಾಕೀತು ಮಾಡಿದ್ರು.

ನಂತರ ಮಾತನಾಡಿದ ಕಾಂಗ್ರೆಸ್​ ನಾಯಕ ಜಿ. ಸಿ. ಚಂದ್ರಶೇಖರ್​​ ಕೂಡ ಕರ್ನಾಟಕದ ಪ್ರವಾಹ ಪರಿಸ್ಥಿತಿ ಕುರಿತು ಮಾತನಾಡಿದ್ರು. ಅದರಲ್ಲೂ ಅವರಿಗೆ ಕನ್ನಡದಲ್ಲಿ ಮಾತನಾಡಲು ಅವಕಾಶ ಮಾಡಿಕೊಡಲಾಗಿತ್ತು.

Intro:Body:



ಹಾಂಕಾಂಗ್​ ಚುನಾವಣೆಯಲ್ಲಿ ಪ್ರಜಾಪ್ರಭುತ್ವವಾದಿ ಅಭ್ಯರ್ಥಿಗಳಿಗೆ ಮುನ್ನಡೆ 

ಹಾಂಕಾಂಗ್​:  ಹಾಂಕಾಂಗ್​​ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಜಾಪ್ರಭುತ್ವವಾದಿ ಅಭ್ಯರ್ಥಿಗಳಿಗೆ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಸಿಕ್ಕಿದೆ.  ಈ ನಡುವೆ ಬೀಜಿಂಗ್​ ಪರ ರಾಜಕೀಯ ಪಕ್ಷಕ್ಕೆ ಚುನಾವಣೆಯಲ್ಲಿ ಭಾರಿ ಹಿನ್ನಡೆಯಾಗಿದೆ.  

ಬೀಜಿಂಗ್​ ಪರ ರಾಜಕೀಯ ಪಕ್ಷ ಸ್ಪರ್ಧಿಸಿದ 182 ಸ್ಥಾಣಗಳ ಪೈಕಿ 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಸೋಲು ಅನುಭವಿಸಿದೆ.  ಇನ್ನು 452 ಸ್ಥಾನಗಳ ಪೈಕಿ ಪ್ರಜಾಪ್ರಭುತ್ವವಾದಿ ಪಕ್ಷದ ಅಭ್ಯರ್ಥಿಗಳು 159 ಸ್ಥಾನಗಳಲ್ಲಿ  ಗೆಲುವು ಸಾಧಿಸಿದ್ದಾರೆ.  



41 ಲಕ್ಷ ನೋಂದಾಯಿತ ಮತದಾರರಲ್ಲಿ ಶೇ 71 ರಷ್ಟು ವೋಟರ್ಸ್​ ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ಅಲ್ಲಿನ ಚುನಾವಣಾ ಆಯೋಗ ಹೇಳಿದೆ.  ಚೀನಾ ಆಡಳಿತದ ಹಸ್ತಕ್ಷೇಪ ವಿರೋಧಿಸಿ ಹಾಂಕಾಂಗ್​ನಲ್ಲಿ ಭಾರಿ ಪ್ರತಿಭಟನೆಗಳನು ನಡೆದಿದ್ದವು. 

 


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.