ETV Bharat / bharat

ಗಡಿಯಲ್ಲಿದೆ ನಮ್ಮ ಸೈನ್ಯ, ಒಂದೇ ಧ್ವನಿಯಲ್ಲಿ ಸಂಸತ್​ ನೀಡಲಿದೆ ಒಗ್ಗಟ್ಟಿನ ಸಂದೇಶ: ಪ್ರಧಾನಿ

author img

By

Published : Sep 14, 2020, 10:07 AM IST

Updated : Sep 14, 2020, 10:18 AM IST

ಒಂದು ಕಡೆ ಕೊರೊನಾ ಕಾಟ ಇನ್ನೊಂದು ಕಡೆ ಕೆಲಸದ ಜವಾಬ್ದಾರಿ. ಸಂಸದರು ಕೆಲಸದ ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Whole country stands with our soldiers: Prime Minister Narendra Modi
ಪ್ರಧಾನಿ ಸಂದೇಶ

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಿದೆ. ಅಧಿವೇಶನ ಆರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಸಂಸತ್​ ಆವರಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದರು. ದೇಶ ಕಾಯುತ್ತಿರುವ ನಮ್ಮ ಯೋಧರ ಜತೆ ಇಡಿ ದೇಶವೇ ನಿಂತಿದೆ ಎಂಬುದನ್ನು ಸಂಸತ್ತು ಒಗ್ಗಟ್ಟಾಗಿ ಸಂದೇಶವನ್ನು ಕಳುಹಿಸಲಿದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.

ಸಂಸತ್​ ಕಲಾಪ ಆರಂಭಕ್ಕೂ ಮುನ್ನ ಪ್ರಧಾನಿ ಮಾತು

ಒಂದು ಕಡೆ ಕೊರೊನಾ ಕಾಟ ಇನ್ನೊಂದು ಕಡೆ ಕೆಲಸದ ಜವಾಬ್ದಾರಿ. ಸಂಸದರು ಕೆಲಸದ ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಪ್ರಧಾನಿ ಹೇಳಿದರು. ಸಂಸದರ ಈ ನಡೆಗೆ ನಾನು ಅಭಿನಂದನೆ ಮತ್ತು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಈ ಬಾರಿ ಲೋಕಸಭಾ ಕಲಾಪ ಮತ್ತು ರಾಜ್ಯಸಭಾ ಕಲಾಪ ಬೇರೆ ಬೇರೆ ಸಮಯದಲ್ಲಿ ನಡೆಯಲಿದೆ. ಶನಿವಾರ ಮತ್ತು ಭಾನುವಾರವೂ ಕಲಾಪ ನಡೆಯಲಿದೆ ಎಂದು ಪ್ರಧಾನಿ ಹೇಳಿದರು.

ಇಡೀ ವಿಶ್ವವನ್ನೇ ವ್ಯಾಪಿಸಿರುವ ಕೋವಿಡ್​19 ಸೋಂಕಿನ ಬಗ್ಗೆಯೂ ಮೋದಿ ಮಾತನಾಡಿದರು. ವಿಶ್ವದ ಯಾವ ಮೂಲೆಯಲ್ಲಾದರೂ ಸರಿ, ಕೊರೊನಾವೆ ಲಸಿಕೆ ಕಂಡುಹಿಡಿಯಲೇಬೇಕು. ನಮ್ಮ ವಿಜ್ಞಾನಿಗಳ ಜತೆ ನಾವೂ ಸೇರಿಕೊಂಡು, ಈ ಸಮಸ್ಯೆಯಿಂದ ಪ್ರತಿಯೊಬ್ಬರನ್ನೂ ಹೊರಬರುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತೇವೆ ಎಂದು ಪಿಎಂ ಆತ್ಮ ವಿಶ್ವಾಸ ವ್ಯಕ್ತಪಡಿಸಿದರು.

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಿದೆ. ಅಧಿವೇಶನ ಆರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಸಂಸತ್​ ಆವರಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದರು. ದೇಶ ಕಾಯುತ್ತಿರುವ ನಮ್ಮ ಯೋಧರ ಜತೆ ಇಡಿ ದೇಶವೇ ನಿಂತಿದೆ ಎಂಬುದನ್ನು ಸಂಸತ್ತು ಒಗ್ಗಟ್ಟಾಗಿ ಸಂದೇಶವನ್ನು ಕಳುಹಿಸಲಿದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.

ಸಂಸತ್​ ಕಲಾಪ ಆರಂಭಕ್ಕೂ ಮುನ್ನ ಪ್ರಧಾನಿ ಮಾತು

ಒಂದು ಕಡೆ ಕೊರೊನಾ ಕಾಟ ಇನ್ನೊಂದು ಕಡೆ ಕೆಲಸದ ಜವಾಬ್ದಾರಿ. ಸಂಸದರು ಕೆಲಸದ ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಪ್ರಧಾನಿ ಹೇಳಿದರು. ಸಂಸದರ ಈ ನಡೆಗೆ ನಾನು ಅಭಿನಂದನೆ ಮತ್ತು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಈ ಬಾರಿ ಲೋಕಸಭಾ ಕಲಾಪ ಮತ್ತು ರಾಜ್ಯಸಭಾ ಕಲಾಪ ಬೇರೆ ಬೇರೆ ಸಮಯದಲ್ಲಿ ನಡೆಯಲಿದೆ. ಶನಿವಾರ ಮತ್ತು ಭಾನುವಾರವೂ ಕಲಾಪ ನಡೆಯಲಿದೆ ಎಂದು ಪ್ರಧಾನಿ ಹೇಳಿದರು.

ಇಡೀ ವಿಶ್ವವನ್ನೇ ವ್ಯಾಪಿಸಿರುವ ಕೋವಿಡ್​19 ಸೋಂಕಿನ ಬಗ್ಗೆಯೂ ಮೋದಿ ಮಾತನಾಡಿದರು. ವಿಶ್ವದ ಯಾವ ಮೂಲೆಯಲ್ಲಾದರೂ ಸರಿ, ಕೊರೊನಾವೆ ಲಸಿಕೆ ಕಂಡುಹಿಡಿಯಲೇಬೇಕು. ನಮ್ಮ ವಿಜ್ಞಾನಿಗಳ ಜತೆ ನಾವೂ ಸೇರಿಕೊಂಡು, ಈ ಸಮಸ್ಯೆಯಿಂದ ಪ್ರತಿಯೊಬ್ಬರನ್ನೂ ಹೊರಬರುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತೇವೆ ಎಂದು ಪಿಎಂ ಆತ್ಮ ವಿಶ್ವಾಸ ವ್ಯಕ್ತಪಡಿಸಿದರು.

Last Updated : Sep 14, 2020, 10:18 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.