ETV Bharat / bharat

ತೀವ್ರಗೊಳ್ಳಲಿದೆ ರೈತರ ಆಂದೋಲನ.. ರೈಲು ಹಳಿ ತಡೆದು ಪ್ರತಿಭಟಿಸಲು ನಿರ್ಧಾರ - ರೈಲು ಹಳಿ ತಡೆದು ಪ್ರತಿಭಟಿಸಲು ರೈತರ ನಿರ್ಧಾರ

ಪ್ರಧಾನಿ ಮೋದಿ ನಮ್ಮ ಮಾತನ್ನು ಕೇಳದಿದ್ದರೆ ಮತ್ತು ಕಾನೂನುಗಳನ್ನು ರದ್ದುಗೊಳಿಸದಿದ್ರೆ, ನಾವು ರೈಲ್ವೆ ಹಳಿಗಳನ್ನು ನಿರ್ಬಂಧಿಸುತ್ತೇವೆ ಎಂದು ಡಿಸೆಂಬರ್ 10ರವರೆಗೆ ಡೆಡ್​​ಲೈನ್​ ನೀಡಿದ್ದೆವು. ಭಾರತದ ಎಲ್ಲಾ ಜನರು ರೈಲ್ವೆ ಹಳಿಗಳನ್ನು ಬಂದ್ ಮಾಡುವ ಬಗ್ಗೆ ಇಂದಿನ ಸಭೆಯಲ್ಲಿ ನಿರ್ಧರಿಸಲಾಯಿತು..

farmers protest latest news
ರೈಲು ಹಳಿ ತಡೆದು ಪ್ರತಿಭಟಿಸಲು ನಿರ್ಧಾರ
author img

By

Published : Dec 10, 2020, 8:14 PM IST

ನವದೆಹಲಿ : ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಲು ತಮ್ಮ ಆಂದೋಲನವನ್ನು ತೀವ್ರಗೊಳಿಸುವುದಾಗಿ ರೈತ ಮುಖಂಡರು ತಿಳಿಸಿದ್ದು, ರೈಲ್ವೆ ಹಳಿಗಳನ್ನು ತಡೆದು ಪ್ರತಿಭಟನೆ ನಡೆಸುತ್ತೇವೆ ಎಂದು ಗುಡುಗಿದ್ದಾರೆ.

ಸಿಂಘು ಗಡಿಯಲ್ಲಿ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ರೈತ ಮುಖಂಡರು, ಕೃಷಿಯು ರಾಜ್ಯ ವಿಷಯವಾಗಿದೆ ಮತ್ತು ಅಂತಹ ವಿಷಯಕ್ಕೆ ಕಾನೂನುಗಳನ್ನು ಮಾಡಲು ಕೇಂದ್ರಕ್ಕೆ ಯಾವುದೇ ಹಕ್ಕಿಲ್ಲ ಎಂದು ಹೇಳಿದ್ದಾರೆ.

  • We'd given an ultimatum till Dec 10 that if PM doesn't listen to us & doesn't repeal laws, we'll block railway tracks. It was decided in today's meeting that all the people of India will take to the tracks. Sanyukt Kisan Manch will fix a date & announce: Farmer leader Boota Singh pic.twitter.com/xvuf9KEfjz

    — ANI (@ANI) December 10, 2020 " class="align-text-top noRightClick twitterSection" data=" ">

"ಪ್ರಧಾನಿ ಮೋದಿ ನಮ್ಮ ಮಾತನ್ನು ಕೇಳದಿದ್ದರೆ ಮತ್ತು ಕಾನೂನುಗಳನ್ನು ರದ್ದುಗೊಳಿಸದಿದ್ರೆ, ನಾವು ರೈಲ್ವೆ ಹಳಿಗಳನ್ನು ನಿರ್ಬಂಧಿಸುತ್ತೇವೆ ಎಂದು ಡಿಸೆಂಬರ್ 10ರವರೆಗೆ ಡೆಡ್​​ಲೈನ್​ ನೀಡಿದ್ದೆವು. ಭಾರತದ ಎಲ್ಲಾ ಜನರು ರೈಲ್ವೆ ಹಳಿಗಳನ್ನು ಬಂದ್ ಮಾಡುವ ಬಗ್ಗೆ ಇಂದಿನ ಸಭೆಯಲ್ಲಿ ನಿರ್ಧರಿಸಲಾಯಿತು. ಕಿಸಾನ್ ಮಂಚ್ ದಿನಾಂಕವನ್ನು ನಿಗದಿಪಡಿಸಿ ಘೋಷಿಸಲಿದೆ" ಎಂದು ಪಂಜಾಬ್‌ನ ರೈತ ಮುಖಂಡ ಬೂಟಾ ಸಿಂಗ್ ಹೇಳಿದ್ದಾರೆ.

ಕೃಷಿ ಕಾನೂನುಗಳಿಗೆ ತಿದ್ದುಪಡಿ ಮಾಡುವ ಕೇಂದ್ರದ ಪ್ರಸ್ತಾಪಗಳನ್ನು ರೈತ ಸಂಘಗಳು ಬುಧವಾರ ತಿರಸ್ಕರಿಸಿದ್ದವು ಮತ್ತು ಅವುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದವು. ಇಂದು ಪತ್ರಿಕಾಗೊಷ್ಠಿ ಉದ್ದೇಶಿಸಿ ಮಾತನಾಡಿದ್ದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಯಾವುದೇ ಕಾನೂನು ಸಂಪೂರ್ಣವಾಗಿ ದೋಷಯುಕ್ತವಾಗಿರಲು ಸಾಧ್ಯವಿಲ್ಲ. ರೈತರ ಮೇಲೆ ಪ್ರತಿಕೂಲ ಪರಿಣಾಮ ಬೀರುವ ನಿಬಂಧನೆಗಳ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ಧ ಎಂದು ಸ್ಪಷ್ಟಪಡಿಸಿದ್ದರು.

ನವದೆಹಲಿ : ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಲು ತಮ್ಮ ಆಂದೋಲನವನ್ನು ತೀವ್ರಗೊಳಿಸುವುದಾಗಿ ರೈತ ಮುಖಂಡರು ತಿಳಿಸಿದ್ದು, ರೈಲ್ವೆ ಹಳಿಗಳನ್ನು ತಡೆದು ಪ್ರತಿಭಟನೆ ನಡೆಸುತ್ತೇವೆ ಎಂದು ಗುಡುಗಿದ್ದಾರೆ.

ಸಿಂಘು ಗಡಿಯಲ್ಲಿ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ರೈತ ಮುಖಂಡರು, ಕೃಷಿಯು ರಾಜ್ಯ ವಿಷಯವಾಗಿದೆ ಮತ್ತು ಅಂತಹ ವಿಷಯಕ್ಕೆ ಕಾನೂನುಗಳನ್ನು ಮಾಡಲು ಕೇಂದ್ರಕ್ಕೆ ಯಾವುದೇ ಹಕ್ಕಿಲ್ಲ ಎಂದು ಹೇಳಿದ್ದಾರೆ.

  • We'd given an ultimatum till Dec 10 that if PM doesn't listen to us & doesn't repeal laws, we'll block railway tracks. It was decided in today's meeting that all the people of India will take to the tracks. Sanyukt Kisan Manch will fix a date & announce: Farmer leader Boota Singh pic.twitter.com/xvuf9KEfjz

    — ANI (@ANI) December 10, 2020 " class="align-text-top noRightClick twitterSection" data=" ">

"ಪ್ರಧಾನಿ ಮೋದಿ ನಮ್ಮ ಮಾತನ್ನು ಕೇಳದಿದ್ದರೆ ಮತ್ತು ಕಾನೂನುಗಳನ್ನು ರದ್ದುಗೊಳಿಸದಿದ್ರೆ, ನಾವು ರೈಲ್ವೆ ಹಳಿಗಳನ್ನು ನಿರ್ಬಂಧಿಸುತ್ತೇವೆ ಎಂದು ಡಿಸೆಂಬರ್ 10ರವರೆಗೆ ಡೆಡ್​​ಲೈನ್​ ನೀಡಿದ್ದೆವು. ಭಾರತದ ಎಲ್ಲಾ ಜನರು ರೈಲ್ವೆ ಹಳಿಗಳನ್ನು ಬಂದ್ ಮಾಡುವ ಬಗ್ಗೆ ಇಂದಿನ ಸಭೆಯಲ್ಲಿ ನಿರ್ಧರಿಸಲಾಯಿತು. ಕಿಸಾನ್ ಮಂಚ್ ದಿನಾಂಕವನ್ನು ನಿಗದಿಪಡಿಸಿ ಘೋಷಿಸಲಿದೆ" ಎಂದು ಪಂಜಾಬ್‌ನ ರೈತ ಮುಖಂಡ ಬೂಟಾ ಸಿಂಗ್ ಹೇಳಿದ್ದಾರೆ.

ಕೃಷಿ ಕಾನೂನುಗಳಿಗೆ ತಿದ್ದುಪಡಿ ಮಾಡುವ ಕೇಂದ್ರದ ಪ್ರಸ್ತಾಪಗಳನ್ನು ರೈತ ಸಂಘಗಳು ಬುಧವಾರ ತಿರಸ್ಕರಿಸಿದ್ದವು ಮತ್ತು ಅವುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದವು. ಇಂದು ಪತ್ರಿಕಾಗೊಷ್ಠಿ ಉದ್ದೇಶಿಸಿ ಮಾತನಾಡಿದ್ದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಯಾವುದೇ ಕಾನೂನು ಸಂಪೂರ್ಣವಾಗಿ ದೋಷಯುಕ್ತವಾಗಿರಲು ಸಾಧ್ಯವಿಲ್ಲ. ರೈತರ ಮೇಲೆ ಪ್ರತಿಕೂಲ ಪರಿಣಾಮ ಬೀರುವ ನಿಬಂಧನೆಗಳ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ಧ ಎಂದು ಸ್ಪಷ್ಟಪಡಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.