ETV Bharat / bharat

ದುಬೆ ಎನ್​ಕೌಂಟರ್​: ವಿಚಾರಣಾ ಆಯೋಗ ಬದಲಿಸುವಂತೆ ಸುಪ್ರೀಂ ಮೆಟ್ಟಿಲೇರಿದ ವಕೀಲ

author img

By

Published : Jul 24, 2020, 1:17 PM IST

Updated : Jul 24, 2020, 11:22 PM IST

ಉತ್ತರ ಪ್ರದೇಶದ ಕುಖ್ಯಾತ ರೌಡಿ ವಿಕಾಸ್​ ದುಬೆ ಎನ್​ಕೌಂಟರ್​ಗೆ ಸಂಬಂಧಿಸಿದಂತೆ ವಿಚಾರಣಾ ಆಯೋಗವನ್ನು ಸ್ಥಾಪಿಸಿದ್ದು, ಈ ಆಯೋಗದಲ್ಲಿರುವ ಉತ್ತರ ಪ್ರದೇಶದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಕೆ ಎಲ್ ಗುಪ್ತಾ ಅವರನ್ನು ಬದಲಿಸುವಂತೆ ವಕೀಲರೊಬ್ಬರು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

Vikas Dubey encounter
ದುಬೆ ಎನ್​ಕೌಂಟರ್​

ನವದೆಹಲಿ: ಕುಖ್ಯಾತ ರೌಡಿ ವಿಕಾಸ್​ ದುಬೆ ಎನ್​​ಕೌಂಟರ್​ಗೆ ಸಂಬಂಧಿಸಿದಂತೆ ವಿಚಾರಣಾ ಆಯೋಗವನ್ನು ಪುನಾರಚನೆ ಮಾಡುವಂತೆ ಹಾಗೂ ಆಯೋಗದಲ್ಲಿರುವ ಮಾಜಿ ಡಿಜಿಪಿ ಕೆಎಲ್ ಗುಪ್ತಾ ಅವರನ್ನು ಬದಲಿಸುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ಬಂಧಿಸಲು ತೆರಳಿದ್ದ ಪೊಲೀಸರನ್ನು ದುಬೆ ಹಾಗೂ ಆತನ ಸಹಚರರು ಹತ್ಯೆ ಮಾಡಿದ್ದು, ತದನಂತರ ಜುಲೈ 10ರಂದು ವಿಕಾಸ್​ ದುಬೆ ಪೊಲೀಸ್​​ ಎನ್​ಕೌಂಟರ್​ಗೆ ಬಲಿಯಾಗಿದ್ದ. ಈ ಸಂಬಂಧ ದುಬೆ ಎನ್​​ಕೌಂಟರ್​​ ತನಿಖೆಗೆ ನ್ಯಾಯಾಂಗ ಆಯೋಗದ ಮುಖ್ಯಸ್ಥರಾಗಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಎಸ್.ಚೌಹಾಣ್, ಇತರ ಇಬ್ಬರು ಸದಸ್ಯರಾಗಿ ಹೈಕೋರ್ಟ್​​ನ ನಿವೃತ್ತ ನ್ಯಾಯಮೂರ್ತಿ ಶಶಿ ಕಾಂತ್ ಅಗರ್ವಾಲ್ ಮತ್ತು ಉತ್ತರ ಪ್ರದೇಶದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಕೆ ಎಲ್ ಗುಪ್ತಾ ಅವರನ್ನು ನೇಮಿಸಲಾಗಿದೆ.

ಈ ಕುರಿತು ವಕೀಲ ಅನೂಪ್ ಪ್ರಕಾಶ್ ಅವಸ್ಥಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದು, ಪಕ್ಷಾತೀತ ತನಿಖೆಗಾಗಿ ಗುಪ್ತಾ ಅವರನ್ನು ಬದಲಿಸುವಂತೆ ಕೋರಿದ್ದಾರೆ. ಗುಪ್ತಾ ಅವರು ಮಾಧ್ಯಮಗಳಲ್ಲಿ ನೀಡಿದ ಹೇಳಿಕೆಗಳನ್ನು ಉಲ್ಲೇಖಿಸಿದ ಅವಸ್ಥಿ, ತನಿಖೆಯ ಮುಕ್ತಾಯಕ್ಕೆ ಮುಂಚೆಯೇ, ದುಬೆ ಎನ್‌ಕೌಂಟರ್‌ ಉದ್ದೇಶ ಪೂರ್ವಕವಾಗಿ ಮಾಡಲಾಗಿಲ್ಲ, ಅದು ಆಕಸ್ಮಿಕವಾಗಿ ಸಂಭವಿಸಿರುವುದು ಎಂದು ಗುಪ್ತಾ ಹೇಳಿದ್ದಾರೆ. ಈ ಹೇಳಿಕೆ ಅನುಮಾನಾಸ್ಪದವಾಗಿದ್ದು, ನಿಷ್ಪಕ್ಷಪಾತ ತನಿಖೆಗಾಗಿ ಗುಪ್ತಾ ಅವರನ್ನು ಬದಲಿಸಬೇಕು ಎಂದು ಅವಸ್ಥಿ ತಮ್ಮ ಅರ್ಜಿಯಲ್ಲಿ ತಿಳಿಸಿದ್ಧಾರೆ.

ಸುಪ್ರೀಂಕೋರ್ಟ್​ ರಚಿಸಿರುವ ಆಯೋಗದಲ್ಲಿ ಗುಪ್ತಾ ಬದಲಿಗೆ ಐಸಿ ದಿವೇದಿ, ಜಾವೇದ್​​ ಅಹ್ಮದ್, ಪ್ರಕಾಶ್ ಸಿಂಗ್ ಅಥವಾ ಇನ್ನಾವುದೇ ಮಾಜಿ ಡಿಜಿಪಿಗಳನ್ನು ಸೇರಿಸಬಹುದು ಎಂದು ಅರ್ಜಿಯಲ್ಲಿ ಸೂಚಿಸಿದ್ದಾರೆ.

ನವದೆಹಲಿ: ಕುಖ್ಯಾತ ರೌಡಿ ವಿಕಾಸ್​ ದುಬೆ ಎನ್​​ಕೌಂಟರ್​ಗೆ ಸಂಬಂಧಿಸಿದಂತೆ ವಿಚಾರಣಾ ಆಯೋಗವನ್ನು ಪುನಾರಚನೆ ಮಾಡುವಂತೆ ಹಾಗೂ ಆಯೋಗದಲ್ಲಿರುವ ಮಾಜಿ ಡಿಜಿಪಿ ಕೆಎಲ್ ಗುಪ್ತಾ ಅವರನ್ನು ಬದಲಿಸುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ಬಂಧಿಸಲು ತೆರಳಿದ್ದ ಪೊಲೀಸರನ್ನು ದುಬೆ ಹಾಗೂ ಆತನ ಸಹಚರರು ಹತ್ಯೆ ಮಾಡಿದ್ದು, ತದನಂತರ ಜುಲೈ 10ರಂದು ವಿಕಾಸ್​ ದುಬೆ ಪೊಲೀಸ್​​ ಎನ್​ಕೌಂಟರ್​ಗೆ ಬಲಿಯಾಗಿದ್ದ. ಈ ಸಂಬಂಧ ದುಬೆ ಎನ್​​ಕೌಂಟರ್​​ ತನಿಖೆಗೆ ನ್ಯಾಯಾಂಗ ಆಯೋಗದ ಮುಖ್ಯಸ್ಥರಾಗಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಎಸ್.ಚೌಹಾಣ್, ಇತರ ಇಬ್ಬರು ಸದಸ್ಯರಾಗಿ ಹೈಕೋರ್ಟ್​​ನ ನಿವೃತ್ತ ನ್ಯಾಯಮೂರ್ತಿ ಶಶಿ ಕಾಂತ್ ಅಗರ್ವಾಲ್ ಮತ್ತು ಉತ್ತರ ಪ್ರದೇಶದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಕೆ ಎಲ್ ಗುಪ್ತಾ ಅವರನ್ನು ನೇಮಿಸಲಾಗಿದೆ.

ಈ ಕುರಿತು ವಕೀಲ ಅನೂಪ್ ಪ್ರಕಾಶ್ ಅವಸ್ಥಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದು, ಪಕ್ಷಾತೀತ ತನಿಖೆಗಾಗಿ ಗುಪ್ತಾ ಅವರನ್ನು ಬದಲಿಸುವಂತೆ ಕೋರಿದ್ದಾರೆ. ಗುಪ್ತಾ ಅವರು ಮಾಧ್ಯಮಗಳಲ್ಲಿ ನೀಡಿದ ಹೇಳಿಕೆಗಳನ್ನು ಉಲ್ಲೇಖಿಸಿದ ಅವಸ್ಥಿ, ತನಿಖೆಯ ಮುಕ್ತಾಯಕ್ಕೆ ಮುಂಚೆಯೇ, ದುಬೆ ಎನ್‌ಕೌಂಟರ್‌ ಉದ್ದೇಶ ಪೂರ್ವಕವಾಗಿ ಮಾಡಲಾಗಿಲ್ಲ, ಅದು ಆಕಸ್ಮಿಕವಾಗಿ ಸಂಭವಿಸಿರುವುದು ಎಂದು ಗುಪ್ತಾ ಹೇಳಿದ್ದಾರೆ. ಈ ಹೇಳಿಕೆ ಅನುಮಾನಾಸ್ಪದವಾಗಿದ್ದು, ನಿಷ್ಪಕ್ಷಪಾತ ತನಿಖೆಗಾಗಿ ಗುಪ್ತಾ ಅವರನ್ನು ಬದಲಿಸಬೇಕು ಎಂದು ಅವಸ್ಥಿ ತಮ್ಮ ಅರ್ಜಿಯಲ್ಲಿ ತಿಳಿಸಿದ್ಧಾರೆ.

ಸುಪ್ರೀಂಕೋರ್ಟ್​ ರಚಿಸಿರುವ ಆಯೋಗದಲ್ಲಿ ಗುಪ್ತಾ ಬದಲಿಗೆ ಐಸಿ ದಿವೇದಿ, ಜಾವೇದ್​​ ಅಹ್ಮದ್, ಪ್ರಕಾಶ್ ಸಿಂಗ್ ಅಥವಾ ಇನ್ನಾವುದೇ ಮಾಜಿ ಡಿಜಿಪಿಗಳನ್ನು ಸೇರಿಸಬಹುದು ಎಂದು ಅರ್ಜಿಯಲ್ಲಿ ಸೂಚಿಸಿದ್ದಾರೆ.

Last Updated : Jul 24, 2020, 11:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.