ETV Bharat / bharat

ಗಡಿಯಲ್ಲಿ ತಂತಿ ಬೇಲಿ ಅಳವಡಿಸಲು ಯತ್ನ: ನೇಪಾಳಿ ಪ್ರಜೆಗಳನ್ನು ತಡೆದ ಎಸ್​ಎಸ್​​ಬಿ..!

author img

By

Published : Jul 23, 2020, 10:41 AM IST

ನೇಪಾಳ ಹಾಗೂ ಭಾರತದ ಸಂಬಂಧ ದಿನದಿಂದ ದಿನೇ ದಿನೆ ಹದಗೆಡುತ್ತಲೇ ಸಾಗುತ್ತಿದೆ. ಗಡಿಯಲ್ಲಿ ನೇಪಾಳದ ಪ್ರಜೆಗಳು ಕಿರಿಕಿರಿ ಮಾಡುತ್ತಿದ್ದು, ಭಾರತಕ್ಕೆ ತಲೆನೋವಾಗಿದೆ.

Indo-Nepal border
ಭಾರತ, ನೇಪಾಳ ಗಡಿ

ಖತಿಮಾ (ಉತ್ತರಾಖಂಡ): ನೇಪಾಳದ ಕೆಲವು ಪ್ರಜೆಗಳು ಇಂಡೋ - ನೇಪಾಳದ ಗಡಿಯಲ್ಲಿರುವ ಚಂಪಾವತ್​ ಜಿಲ್ಲೆಯ ತನಜ್​ಪುರ ಬಳಿಯ ಪ್ರದೇಶವನ್ನು ಆಕ್ರಮಿಸಿಕೊಳ್ಳುವುದಕ್ಕೆ ಯತ್ನಿಸಿದಾಗ ಸಶಸ್ತ್ರ ಸೀಮಾ ಬಲ (ಎಸ್​ಎಸ್​​ಬಿ)ಯ ಯೋಧರು ಅದನ್ನು ತಡೆದಿದ್ದಾರೆ.

ಮೂಲಗಳ ಪ್ರಕಾರ ಕೆಲವರು ಪಿಲ್ಲರ್ ನಂಬರ್ 811ರ ಬಳಿ ಮದ್ಯಪಾನ ಮಾಡಿದ ಕೆಲವು ನೇಪಾಳಿ ಪ್ರಜೆಗಳು ಬಫರ್ ಝೋನ್​ನಲ್ಲಿ ತಂತಿಬೇಲಿಯನ್ನು ಅಳವಡಿಸಲು ಮುಂದಾಗಿದ್ದರು. ಈ ವೇಳೆ, ಸ್ಥಳಕ್ಕೆ ಧಾವಿಸಿದ ಎಸ್​ಎಸ್​ಬಿ ಯೋಧರು ಹಾಗೂ ಸ್ಥಳೀಯ ಪೊಲೀಸರು ಅವರನ್ನು ತಡೆದಿದ್ದಾರೆ.

ಇದು ನೇಪಾಳ ಹಾಗೂ ಭಾರತದ ಗಡಿಯಲ್ಲಿ ಆಗಾಗ ಸಂಭವಿಸುವ ವಿದ್ಯಮಾನವಾಗಿದ್ದು, ಎಸ್​​ಎಸ್​ಬಿ ಹಾಗೂ ಎಪಿಎಫ್ ( ಸಶಸ್ತ್ರ ಪೊಲೀಸ್ ಪಡೆ) ಅವರನ್ನು ತಡೆಯುವ ಕೆಲಸ ಮಾಡುತ್ತಲೇ ಬಂದಿವೆ. ಘಟನೆ ನಂತರ ಎಸ್​​ಎಸ್​ಬಿ ಹಾಗೂ ಎಪಿಎಫ್ ಈ ಕುರಿತಂತೆ ಸಭೆ ನಡೆಸಿದೆ. ಮುಂದಿನ ಕ್ರಮಗಳ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಗಿದೆ.

ಪಿಲ್ಲರ್ ನಂಬರ್ 811 ಪ್ರದೇಶ ಭಾರತ ಮತ್ತು ನೇಪಾಳದ ನಡುವಿನ ವಿವಾದಗ್ರಸ್ಥ ಪ್ರದೇಶವಾಗಿದ್ದು, ಈ ಪ್ರದೇಶದಲ್ಲಿ ಯಾರೂ ಬರಬಾರದೆಂದು( ನೋ ಮ್ಯಾನ್ಸ್​ ಲ್ಯಾಂಡ್ ) ಎರಡೂ ರಾಷ್ಟ್ರಗಳ ನಡುವೆ ಒಪ್ಪಂದವಾಗಿದೆ. ಈ ಒಪ್ಪಂದದಂತೆ ಯಾವ ರಾಷ್ಟ್ರವೂ ಕೂಡಾ ಆ ಪ್ರದೇಶದಲ್ಲಿ ಯಾವುದೇ ಚಟುವಟಿಕೆ ಕೈಗೊಳ್ಳುವಂತಿಲ್ಲ. ಈಗ ನೇಪಾಳದ ಪ್ರಜೆಗಳು ಈ ಸ್ಥಳದಲ್ಲಿ ದಾಂಧಲೆಗೆ ಯತ್ನಿಸಿದ್ದು, ಅಪಾಯಕಾರಿಯಾಗಿ ಗೋಚರಿಸುತ್ತಿದೆ.

ನೇಪಾಳಿಗಳ ಈ ವರ್ತನೆಗೆ ಕಾರಣವೇನಿರಬಹುದು..?

ಕೆಲವು ದಿನಗಳ ಹಿಂದೆ ನೇಪಾಳದ ಎಫ್​ಎಂ ರೇಡಿಯೋಗಳಲ್ಲಿ ಭಾರತ ವಿರೋಧಿ ಹಾಡುಗಳನ್ನು ಪ್ರಸಾರ ಮಾಡಲಾಗುತ್ತಿತ್ತು. ಇದರ ಜೊತೆಗೆ ಭಾರತ ಹಾಗೂ ನೇಪಾಳದ ನಡುವಿನ ವಿವಾದಗ್ರಸ್ಥ ಪ್ರದೇಶಗಳಾದ ಕಾಲಾಪಾನಿ, ಲಿಪುಲೇಕ್​, ಲಿಂಪಿಯಾದುರ ಪ್ರದೇಶಗಳು ತಮ್ಮವೇ ಎಂಬಂತೆ ಜನರನ್ನು ನಂಬಿಸಲು ಅಲ್ಲಿನ ಹವಾಮಾನ ವರದಿಯನ್ನೂ ಕೂಡಾ ಪ್ರಸಾರ ಮಾಡಲಾಗುತ್ತಿತ್ತು.

ಕಳೆದ ಎರಡು ದಿನಗಳ ಹಿಂದೆ ನೇಪಾಳ ಸಶಸ್ತ್ರ ಪೊಲೀಸ್ ಪಡೆ (ಎನ್​ಎಪಿಎಫ್​) ಬಿಹಾರದ ಕೃಷ್ಣಗಂಜ್​ ಜಿಲ್ಲೆಯಲ್ಲಿ ಫೈರಿಂಗ್ ನಡೆಸಿ, ಓರ್ವ ಭಾರತೀಯ ಪ್ರಜೆಯನ್ನು ಗಾಯಗೊಳಿಸಿತ್ತು. ಈ ವೇಳೆ, ಎರಡು ರಾಷ್ಟ್ರಗಳ ನಡುವೆ ವೈಮನಸ್ಯ ಮತ್ತಷ್ಟು ಹೆಚ್ಚಾಗಿ ಈ ರೀತಿಯ ಘಟನೆಗಳಿಗೆ ಇಂಬು ಕೊಟ್ಟಿರಬಹುದೆಂದು ಹೇಳಲಾಗುತ್ತಿದೆ.

ಖತಿಮಾ (ಉತ್ತರಾಖಂಡ): ನೇಪಾಳದ ಕೆಲವು ಪ್ರಜೆಗಳು ಇಂಡೋ - ನೇಪಾಳದ ಗಡಿಯಲ್ಲಿರುವ ಚಂಪಾವತ್​ ಜಿಲ್ಲೆಯ ತನಜ್​ಪುರ ಬಳಿಯ ಪ್ರದೇಶವನ್ನು ಆಕ್ರಮಿಸಿಕೊಳ್ಳುವುದಕ್ಕೆ ಯತ್ನಿಸಿದಾಗ ಸಶಸ್ತ್ರ ಸೀಮಾ ಬಲ (ಎಸ್​ಎಸ್​​ಬಿ)ಯ ಯೋಧರು ಅದನ್ನು ತಡೆದಿದ್ದಾರೆ.

ಮೂಲಗಳ ಪ್ರಕಾರ ಕೆಲವರು ಪಿಲ್ಲರ್ ನಂಬರ್ 811ರ ಬಳಿ ಮದ್ಯಪಾನ ಮಾಡಿದ ಕೆಲವು ನೇಪಾಳಿ ಪ್ರಜೆಗಳು ಬಫರ್ ಝೋನ್​ನಲ್ಲಿ ತಂತಿಬೇಲಿಯನ್ನು ಅಳವಡಿಸಲು ಮುಂದಾಗಿದ್ದರು. ಈ ವೇಳೆ, ಸ್ಥಳಕ್ಕೆ ಧಾವಿಸಿದ ಎಸ್​ಎಸ್​ಬಿ ಯೋಧರು ಹಾಗೂ ಸ್ಥಳೀಯ ಪೊಲೀಸರು ಅವರನ್ನು ತಡೆದಿದ್ದಾರೆ.

ಇದು ನೇಪಾಳ ಹಾಗೂ ಭಾರತದ ಗಡಿಯಲ್ಲಿ ಆಗಾಗ ಸಂಭವಿಸುವ ವಿದ್ಯಮಾನವಾಗಿದ್ದು, ಎಸ್​​ಎಸ್​ಬಿ ಹಾಗೂ ಎಪಿಎಫ್ ( ಸಶಸ್ತ್ರ ಪೊಲೀಸ್ ಪಡೆ) ಅವರನ್ನು ತಡೆಯುವ ಕೆಲಸ ಮಾಡುತ್ತಲೇ ಬಂದಿವೆ. ಘಟನೆ ನಂತರ ಎಸ್​​ಎಸ್​ಬಿ ಹಾಗೂ ಎಪಿಎಫ್ ಈ ಕುರಿತಂತೆ ಸಭೆ ನಡೆಸಿದೆ. ಮುಂದಿನ ಕ್ರಮಗಳ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಗಿದೆ.

ಪಿಲ್ಲರ್ ನಂಬರ್ 811 ಪ್ರದೇಶ ಭಾರತ ಮತ್ತು ನೇಪಾಳದ ನಡುವಿನ ವಿವಾದಗ್ರಸ್ಥ ಪ್ರದೇಶವಾಗಿದ್ದು, ಈ ಪ್ರದೇಶದಲ್ಲಿ ಯಾರೂ ಬರಬಾರದೆಂದು( ನೋ ಮ್ಯಾನ್ಸ್​ ಲ್ಯಾಂಡ್ ) ಎರಡೂ ರಾಷ್ಟ್ರಗಳ ನಡುವೆ ಒಪ್ಪಂದವಾಗಿದೆ. ಈ ಒಪ್ಪಂದದಂತೆ ಯಾವ ರಾಷ್ಟ್ರವೂ ಕೂಡಾ ಆ ಪ್ರದೇಶದಲ್ಲಿ ಯಾವುದೇ ಚಟುವಟಿಕೆ ಕೈಗೊಳ್ಳುವಂತಿಲ್ಲ. ಈಗ ನೇಪಾಳದ ಪ್ರಜೆಗಳು ಈ ಸ್ಥಳದಲ್ಲಿ ದಾಂಧಲೆಗೆ ಯತ್ನಿಸಿದ್ದು, ಅಪಾಯಕಾರಿಯಾಗಿ ಗೋಚರಿಸುತ್ತಿದೆ.

ನೇಪಾಳಿಗಳ ಈ ವರ್ತನೆಗೆ ಕಾರಣವೇನಿರಬಹುದು..?

ಕೆಲವು ದಿನಗಳ ಹಿಂದೆ ನೇಪಾಳದ ಎಫ್​ಎಂ ರೇಡಿಯೋಗಳಲ್ಲಿ ಭಾರತ ವಿರೋಧಿ ಹಾಡುಗಳನ್ನು ಪ್ರಸಾರ ಮಾಡಲಾಗುತ್ತಿತ್ತು. ಇದರ ಜೊತೆಗೆ ಭಾರತ ಹಾಗೂ ನೇಪಾಳದ ನಡುವಿನ ವಿವಾದಗ್ರಸ್ಥ ಪ್ರದೇಶಗಳಾದ ಕಾಲಾಪಾನಿ, ಲಿಪುಲೇಕ್​, ಲಿಂಪಿಯಾದುರ ಪ್ರದೇಶಗಳು ತಮ್ಮವೇ ಎಂಬಂತೆ ಜನರನ್ನು ನಂಬಿಸಲು ಅಲ್ಲಿನ ಹವಾಮಾನ ವರದಿಯನ್ನೂ ಕೂಡಾ ಪ್ರಸಾರ ಮಾಡಲಾಗುತ್ತಿತ್ತು.

ಕಳೆದ ಎರಡು ದಿನಗಳ ಹಿಂದೆ ನೇಪಾಳ ಸಶಸ್ತ್ರ ಪೊಲೀಸ್ ಪಡೆ (ಎನ್​ಎಪಿಎಫ್​) ಬಿಹಾರದ ಕೃಷ್ಣಗಂಜ್​ ಜಿಲ್ಲೆಯಲ್ಲಿ ಫೈರಿಂಗ್ ನಡೆಸಿ, ಓರ್ವ ಭಾರತೀಯ ಪ್ರಜೆಯನ್ನು ಗಾಯಗೊಳಿಸಿತ್ತು. ಈ ವೇಳೆ, ಎರಡು ರಾಷ್ಟ್ರಗಳ ನಡುವೆ ವೈಮನಸ್ಯ ಮತ್ತಷ್ಟು ಹೆಚ್ಚಾಗಿ ಈ ರೀತಿಯ ಘಟನೆಗಳಿಗೆ ಇಂಬು ಕೊಟ್ಟಿರಬಹುದೆಂದು ಹೇಳಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.