ETV Bharat / bharat

ಒಂದು ಪ್ರೇಮ ವಿವಾಹ, ಐದು ಕೊಲೆ: ಬೆಚ್ಚಿಬೀಳಿಸುವಂತಿದೆ ಕ್ರೌರ್ಯ!

author img

By

Published : Sep 27, 2020, 7:11 AM IST

2019 ರಲ್ಲಿ ನಡೆದಿದ್ದ ಪ್ರೇಮ ವಿವಾಹ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಕೊಲೆ ಹಿನ್ನೆಲೆ ನಿನ್ನೆ ಇಬ್ಬರು ಮಹಿಳೆಯರನ್ನು ದಾರುಣವಾಗಿ ಹತ್ಯೆ ಮಾಡಲಾಗಿದೆ. ತಮಿಳುನಾಡಿದ ತಿರುನೆಲ್ವೇಲಿಯಲ್ಲಿ ಈ ಪ್ರಕರಣ ನಡೆದಿದೆ.

Two women brutally murder in Thirunelveli as act of revenge
ಇಬ್ಬರು ಮಹಿಳೆಯರನ್ನು ಕ್ರೂರವಾಗಿ ಕೊಂದ ದುಷ್ಕರ್ಮಿಗಳು

ಚೆನ್ನೈ: ಪ್ರೇಮ ವಿವಾಹ ವಿಚಾರದ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರನ್ನು ಬರ್ಬರವಾಗಿ ಕೊಲೆ ಮಾಡಿರುವ ಪ್ರಕರಣ ತಮಿಳುನಾಡಿನ ತಿರುನೆಲ್ವೇಲಿಯಲ್ಲಿ ನಡೆದಿದೆ.

ಮೊದಲು ಇಬ್ಬರು ಮಹಿಳೆಯರ ಮೇಲೆ ಕಚ್ಚಾ ಬಾಂಬ್‌ನಿಂದ ದಾಳಿ ಮಾಡಿದ ನಂತರ ಶಿರಚ್ಛೇದ ಮಾಡಿ ಕ್ರೌರ್ಯ ಮೆರೆದಿದ್ದಾರೆ. ಶಣ್ಮುಗಥೈ ಮತ್ತು ಆಕೆಯ ಸಂಬಂಧಿ ಶಾಂತಿ ಕೊಲೆಗೀಡಾದವರು. ನಂಬಿರಾಜನ್ ಎಂಬುವರು ಪ್ರೇಮ ವಿವಾಹವಾಗಿದ್ದಕ್ಕೆ ಈತನ ಮಾವನ ಮನೆಯವರು ನಂಬಿರಾಜನ್​ನ್ನು 2019 ರಲ್ಲಿ ಹತ್ಯೆ ಮಾಡಿದ್ದರು. ಇದಕ್ಕೆ ಸೇಡು ಎಂಬಂತೆ ನಂಬಿರಾಜನ್ ಅವರ ರಕ್ತಸಂಬಂಧಿ ಈ ವರ್ಷದ ಮಾರ್ಚ್​ ತಿಂಗಳಲ್ಲಿ ನಂಬಿರಾಜನ್​ ಮಾವನ ಕುಟುಂಬದ ಸದಸ್ಯರನ್ನು ಕೊಲೆ ಮಾಡಿದ್ದ.

ಈ ಎಲ್ಲಾ ಘಟನೆ ಹಿನ್ನೆಲೆ ನಿನ್ನೆ ಈ ದುರಂತ ನಡೆದಿದೆ. ಇದರಲ್ಲಿ ನಂಬಿರಾಜನ್ ಅವರ ತಾಯಿ ಷಣ್ಮುಗಥೈ ಮತ್ತು ಅವರ ಸಂಬಂಧಿ ಶಾಂತಿ ಬಲಿಯಾಗಿದ್ದಾರೆ. ಪ್ರೇಮ ವಿವಾಹಕ್ಕೆ ಸಂಬಂಧಿಸಿದಂತೆ ಈವರೆಗೆ ಐದು ಜನರ ಕೊಲೆಯಾದಂತಾಗಿದೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಬಂಧಿಸಲು ಪೊಲೀಸರು ವಿಶೇಷ ತಂಡಗಳನ್ನು ರಚಿಸಿದ್ದಾರೆ.

ಚೆನ್ನೈ: ಪ್ರೇಮ ವಿವಾಹ ವಿಚಾರದ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರನ್ನು ಬರ್ಬರವಾಗಿ ಕೊಲೆ ಮಾಡಿರುವ ಪ್ರಕರಣ ತಮಿಳುನಾಡಿನ ತಿರುನೆಲ್ವೇಲಿಯಲ್ಲಿ ನಡೆದಿದೆ.

ಮೊದಲು ಇಬ್ಬರು ಮಹಿಳೆಯರ ಮೇಲೆ ಕಚ್ಚಾ ಬಾಂಬ್‌ನಿಂದ ದಾಳಿ ಮಾಡಿದ ನಂತರ ಶಿರಚ್ಛೇದ ಮಾಡಿ ಕ್ರೌರ್ಯ ಮೆರೆದಿದ್ದಾರೆ. ಶಣ್ಮುಗಥೈ ಮತ್ತು ಆಕೆಯ ಸಂಬಂಧಿ ಶಾಂತಿ ಕೊಲೆಗೀಡಾದವರು. ನಂಬಿರಾಜನ್ ಎಂಬುವರು ಪ್ರೇಮ ವಿವಾಹವಾಗಿದ್ದಕ್ಕೆ ಈತನ ಮಾವನ ಮನೆಯವರು ನಂಬಿರಾಜನ್​ನ್ನು 2019 ರಲ್ಲಿ ಹತ್ಯೆ ಮಾಡಿದ್ದರು. ಇದಕ್ಕೆ ಸೇಡು ಎಂಬಂತೆ ನಂಬಿರಾಜನ್ ಅವರ ರಕ್ತಸಂಬಂಧಿ ಈ ವರ್ಷದ ಮಾರ್ಚ್​ ತಿಂಗಳಲ್ಲಿ ನಂಬಿರಾಜನ್​ ಮಾವನ ಕುಟುಂಬದ ಸದಸ್ಯರನ್ನು ಕೊಲೆ ಮಾಡಿದ್ದ.

ಈ ಎಲ್ಲಾ ಘಟನೆ ಹಿನ್ನೆಲೆ ನಿನ್ನೆ ಈ ದುರಂತ ನಡೆದಿದೆ. ಇದರಲ್ಲಿ ನಂಬಿರಾಜನ್ ಅವರ ತಾಯಿ ಷಣ್ಮುಗಥೈ ಮತ್ತು ಅವರ ಸಂಬಂಧಿ ಶಾಂತಿ ಬಲಿಯಾಗಿದ್ದಾರೆ. ಪ್ರೇಮ ವಿವಾಹಕ್ಕೆ ಸಂಬಂಧಿಸಿದಂತೆ ಈವರೆಗೆ ಐದು ಜನರ ಕೊಲೆಯಾದಂತಾಗಿದೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಬಂಧಿಸಲು ಪೊಲೀಸರು ವಿಶೇಷ ತಂಡಗಳನ್ನು ರಚಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.