ಆಂಧ್ರಪ್ರದೇಶ: ತಮ್ಮ ಅಜ್ಜಿ ಮಾಡಿದ ಆಹಾರ ಸೇವಿಸಿ ಇಬ್ಬರು ಮಕ್ಕಳು ಸಾವಿಗೀಡಾದ ಮನಕಲಕುವ ಘಟನೆ ಚಿತ್ತೂರು ಜಿಲ್ಲೆಯ ಎಲ್ ಎಲ್ ಪುರಂನಲ್ಲಿ ಸಂಭವಿಸಿದೆ.
ರೋಹಿತ್ (11), ಜೀವನ್ (8). ಸಾವಿಗೀಡಾದ ಮಕ್ಕಳು. ಈ ಮಕ್ಕಳನ್ನು ಅಜ್ಜಿ ಪ್ರೀತಿಯಿಂದ ಸಾಕಿ ಸಲಹುತ್ತಿದ್ದಳು. ಆದರೆ, ಇದೇ ಅಜ್ಜಿ ಮಾಡಿದ ಆಹಾರ ಸೇವಿಸಿದ ಎರಡೂ ಮಕ್ಕಳು ಅಸುನೀಗಿದೆ. ಅಡುಗೆ ಮಾಡುವ ವೇಳೆ ಗರಂ ಮಸಾಲ ಎಂದು ತಿಳಿದ ಅಜ್ಜಿ ಕೀಟನಾಶಕವನ್ನು ಹಾಕಿದ ಪರಿಣಾಮ ಈ ಮನಕಲಕುವ ಘಟನೆ ನಡೆದಿದೆ.
ಇನ್ನು ಈ ಆಹಾರವನ್ನು ಸೇವಿಸಿದ ತಕ್ಷಣ ಮಕ್ಕಳು ಅಸುನೀಗಿದರೆ, ಈ ಅಜ್ಜಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.