ETV Bharat / bharat

ಮುಂದುವರಿದ ಮಿಂಚಿನ ರಾಕ್ಷಸಿ ಕೃತ್ಯ:  ಸಿಡಿಲು ಬಡಿದು ಮೂವರ ಸಾವು

author img

By

Published : Jun 29, 2020, 9:15 AM IST

ಜಾರ್ಖಂಡ್​ನ ಗಿರಿದಿಹ್ ಜಿಲ್ಲೆಯ ಬಾಗೋದರ್ ಮತ್ತು ಸಾರಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಿಡಿಲು ಬಡಿದು ಮೂವರು ಮೃತಪಟ್ಟ ಘಟನೆ ನಡೆದಿದೆ.

three died due to thundering in giridih
ಜಾರ್ಖಂಡ್​ನ ಗಿರಿದಿಹ್ ಜಿಲ್ಲೆಯಲ್ಲಿ ಸಿಡಿಲು ಬಡಿದು ಮೂವರು ಸಾವು

ಗಿರಿದಿಹ್ (ಜಾರ್ಖಂಡ್​) : ಜಿಲ್ಲೆಯಲ್ಲಿ ಸಿಡಿಲು ಬಡಿದು ಮೂವರು ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.

ಮೃತರನ್ನು ಬಾಗೋದರ್​ ಪೊಲೀಸ್​ ಠಾಣೆ ವ್ಯಾಪ್ತಿಯ ಗಾಂಧಿದಾಂಡ್‌ನ ರೈತ ತಿಲಕ್ ಶಾ ಮತ್ತು ಬುಖಾರಿದಿಹ್​ನ 16 ವರ್ಷದ ಬಾಲಕ ಕುಂಜಲಾಲ್ ಕುಮಾರ್​ ಹಾಗೂ ಸಾರಿಯಾ ಪೊಲೀಸ್​ ಠಾಣೆ ವ್ಯಾಪ್ತಿಯ ರತ್ನದಿಹ್ ಗ್ರಾಮದ ನಿವಾಸಿ 50 ವರ್ಷದ ಕಿಶೋರ್ ಕುಶ್ವಾಹ ಎಂದು ಗುರುತಿಸಲಾಗಿದೆ.

ಇತ್ತೀಚೆಗಷ್ಟೇ ಬಿಹಾರದಲ್ಲಿ ಒಂದೇ ದಿನ 83 ಮಂದಿ ಸಿಡಿಲು - ಗುಡುಗಿಗೆ ಬಲಿಯಾಗಿದ್ದರು. ಇನ್ನು ಉತ್ತರಪ್ರದೇಶದಲ್ಲೂ ಕೇವಲ 24 ಗಂಟೆಯಲ್ಲಿ 24 ಮಂದಿ ಮೃತಪಟ್ಟಿದ್ದರು.

ಕಳೆದ ವರ್ಷ ಬಾಂಗ್ಲಾದೇಶದಲ್ಲಿ ನೂರಾರು ಜನ ಸಿಡಿಲು ಗುಡುಗಿಗೆ ಬಲಿಯಾಗಿದ್ದರು. ವರ್ಷದಿಂದ ವರ್ಷಕ್ಕೆ ಈ ಸಿಡಿಲಿಗೆ ಬಲಿಯಾಗುವವರ ಸಂಖ್ಯೆ ಹೆಚ್ಚಳವಾಗುತ್ತಲೇ ಸಾಗಿದೆ.

ಗಿರಿದಿಹ್ (ಜಾರ್ಖಂಡ್​) : ಜಿಲ್ಲೆಯಲ್ಲಿ ಸಿಡಿಲು ಬಡಿದು ಮೂವರು ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.

ಮೃತರನ್ನು ಬಾಗೋದರ್​ ಪೊಲೀಸ್​ ಠಾಣೆ ವ್ಯಾಪ್ತಿಯ ಗಾಂಧಿದಾಂಡ್‌ನ ರೈತ ತಿಲಕ್ ಶಾ ಮತ್ತು ಬುಖಾರಿದಿಹ್​ನ 16 ವರ್ಷದ ಬಾಲಕ ಕುಂಜಲಾಲ್ ಕುಮಾರ್​ ಹಾಗೂ ಸಾರಿಯಾ ಪೊಲೀಸ್​ ಠಾಣೆ ವ್ಯಾಪ್ತಿಯ ರತ್ನದಿಹ್ ಗ್ರಾಮದ ನಿವಾಸಿ 50 ವರ್ಷದ ಕಿಶೋರ್ ಕುಶ್ವಾಹ ಎಂದು ಗುರುತಿಸಲಾಗಿದೆ.

ಇತ್ತೀಚೆಗಷ್ಟೇ ಬಿಹಾರದಲ್ಲಿ ಒಂದೇ ದಿನ 83 ಮಂದಿ ಸಿಡಿಲು - ಗುಡುಗಿಗೆ ಬಲಿಯಾಗಿದ್ದರು. ಇನ್ನು ಉತ್ತರಪ್ರದೇಶದಲ್ಲೂ ಕೇವಲ 24 ಗಂಟೆಯಲ್ಲಿ 24 ಮಂದಿ ಮೃತಪಟ್ಟಿದ್ದರು.

ಕಳೆದ ವರ್ಷ ಬಾಂಗ್ಲಾದೇಶದಲ್ಲಿ ನೂರಾರು ಜನ ಸಿಡಿಲು ಗುಡುಗಿಗೆ ಬಲಿಯಾಗಿದ್ದರು. ವರ್ಷದಿಂದ ವರ್ಷಕ್ಕೆ ಈ ಸಿಡಿಲಿಗೆ ಬಲಿಯಾಗುವವರ ಸಂಖ್ಯೆ ಹೆಚ್ಚಳವಾಗುತ್ತಲೇ ಸಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.