ETV Bharat / bharat

ಫೈರಿಂಗ್​ ಮಾಡಲು ಇದೇನು ಉತ್ತರ ಪ್ರದೇಶವಲ್ಲ: ದಿಲೀಪ್ ಘೋಷ್​ಗೆ ದೀದಿ ತಿರುಗೇಟು

author img

By

Published : Jan 13, 2020, 10:14 PM IST

ಸಿಎಎ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸುತ್ತೇವೆ ಎಂಬ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಹೇಳಿಕೆ ವಿರುದ್ಧ ಸಿಎಂ ಮಮತಾ ಬ್ಯಾನರ್ಜಿ ಗುಡುಗಿದ್ದು, ಫೈರಿಂಗ್​ ಮಾಡಲು ಇದೇನು ಉತ್ತರ ಪ್ರದೇಶವಲ್ಲ, ಇಲ್ಲಿ ಇದೆಲ್ಲಾ ನಡೆಯುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

CM Mamata Banarjee fires on Dilip Ghosh
ದಿಲೀಪ್ ಘೋಷ್​ಗೆ ದೀದಿ ತಿರುಗೇಟು

ಕೋಲ್ಕತ್ತಾ: ಶೂಟೌಟ್​ ಮಾಡಲು ಇದು ಉತ್ತರ ಪ್ರದೇಶವಲ್ಲ. ಪ್ರತಿಭಟನಾಕಾರರನ್ನು ಸಾಯಿಸಿ ಎಂದು ಹೇಳಲು ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ವಿರುದ್ಧ ಸಿಎಂ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸಿ ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ ಮಾಡಿದವರ ವಿರುದ್ಧ ಪಶ್ಚಿಮ ಬಂಗಾಳ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಏಕೆಂದರೆ ಅವರೆಲ್ಲಾ ಮಮತಾ ಬ್ಯಾನರ್ಜಿ ಮತದಾರರು. ಉತ್ತರ ಪ್ರದೇಶ, ಅಸ್ಸೋ ಹಾಗೂ ಕರ್ನಾಟಕದ ನಮ್ಮ ಬಿಜೆಪಿ ಸರ್ಕಾರ ಇಂತಹ ಪ್ರತಿಭಟನಾಕಾರರನ್ನು ನಾಯಿಯಂತೆ ಶೂಟ್​ ಮಾಡಿ ಸಾಯಿಸಿದೆ. ಹೀಗೆ ಪ್ರತಿಭಟನೆ ನಡೆಸಿದರೆ ಇಲ್ಲಿ ಕೂಡ ನಾವು ನಿಮ್ಮ ಮೇಲೆ ಗುಂಡು ಹಾರಿಸುತ್ತೇವೆ ಎಂದು ದಿಲೀಪ್ ಘೋಷ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.

  • Dilip Ghosh,West Bengal BJP President: You will come here, eat our food, stay here and damage public properties. Is it your zamindari? We will bash you with lathis, shoot you, and put you in jail. (12.1.2020) https://t.co/LcFZTrpYPj

    — ANI (@ANI) January 13, 2020 " class="align-text-top noRightClick twitterSection" data=" ">

ಇದಕ್ಕೆ ತಿರುಗೇಟು ನೀಡಿರುವ ಮಮತಾ ಬ್ಯಾನರ್ಜಿ, ರಾಜ್ಯದ ಸಿಎಎ ವಿರೋಧಿ ಪ್ರತಿಭಟನಾಕಾರರ ಮೇಲೆ ಫೈರಿಂಗ್​ ಆಗಬೇಕೆಂದು ಬಯಸಲು ನಾಚಿಕೆಯಾಗುವುದಿಲ್ಲ. ಇದೇನು ಉತ್ತರ ಪ್ರದೇಶವಲ್ಲ, ಇಲ್ಲಿ ಇದೆಲ್ಲಾ ನಡೆಯುವುದಿಲ್ಲ. ನಾಳೆ ರಾಜ್ಯದಲ್ಲಿ ಏನಾದರೂ ಅಹಿತಕರ ಘಟನೆ ನಡೆದರೆ ಅದಕ್ಕೇ ನೀವೂ ಜವಾಬ್ದಾರರಾಗಿರುತ್ತೀರಿ ಎಂದು ಹೇಳಿದ್ದಾರೆ.

ಕೋಲ್ಕತ್ತಾ: ಶೂಟೌಟ್​ ಮಾಡಲು ಇದು ಉತ್ತರ ಪ್ರದೇಶವಲ್ಲ. ಪ್ರತಿಭಟನಾಕಾರರನ್ನು ಸಾಯಿಸಿ ಎಂದು ಹೇಳಲು ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ವಿರುದ್ಧ ಸಿಎಂ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸಿ ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ ಮಾಡಿದವರ ವಿರುದ್ಧ ಪಶ್ಚಿಮ ಬಂಗಾಳ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಏಕೆಂದರೆ ಅವರೆಲ್ಲಾ ಮಮತಾ ಬ್ಯಾನರ್ಜಿ ಮತದಾರರು. ಉತ್ತರ ಪ್ರದೇಶ, ಅಸ್ಸೋ ಹಾಗೂ ಕರ್ನಾಟಕದ ನಮ್ಮ ಬಿಜೆಪಿ ಸರ್ಕಾರ ಇಂತಹ ಪ್ರತಿಭಟನಾಕಾರರನ್ನು ನಾಯಿಯಂತೆ ಶೂಟ್​ ಮಾಡಿ ಸಾಯಿಸಿದೆ. ಹೀಗೆ ಪ್ರತಿಭಟನೆ ನಡೆಸಿದರೆ ಇಲ್ಲಿ ಕೂಡ ನಾವು ನಿಮ್ಮ ಮೇಲೆ ಗುಂಡು ಹಾರಿಸುತ್ತೇವೆ ಎಂದು ದಿಲೀಪ್ ಘೋಷ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.

  • Dilip Ghosh,West Bengal BJP President: You will come here, eat our food, stay here and damage public properties. Is it your zamindari? We will bash you with lathis, shoot you, and put you in jail. (12.1.2020) https://t.co/LcFZTrpYPj

    — ANI (@ANI) January 13, 2020 " class="align-text-top noRightClick twitterSection" data=" ">

ಇದಕ್ಕೆ ತಿರುಗೇಟು ನೀಡಿರುವ ಮಮತಾ ಬ್ಯಾನರ್ಜಿ, ರಾಜ್ಯದ ಸಿಎಎ ವಿರೋಧಿ ಪ್ರತಿಭಟನಾಕಾರರ ಮೇಲೆ ಫೈರಿಂಗ್​ ಆಗಬೇಕೆಂದು ಬಯಸಲು ನಾಚಿಕೆಯಾಗುವುದಿಲ್ಲ. ಇದೇನು ಉತ್ತರ ಪ್ರದೇಶವಲ್ಲ, ಇಲ್ಲಿ ಇದೆಲ್ಲಾ ನಡೆಯುವುದಿಲ್ಲ. ನಾಳೆ ರಾಜ್ಯದಲ್ಲಿ ಏನಾದರೂ ಅಹಿತಕರ ಘಟನೆ ನಡೆದರೆ ಅದಕ್ಕೇ ನೀವೂ ಜವಾಬ್ದಾರರಾಗಿರುತ್ತೀರಿ ಎಂದು ಹೇಳಿದ್ದಾರೆ.

Intro:Body:

national


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.