ETV Bharat / bharat

ಕಾರ್ಗಿಲ್​ ಕದನ : ಪಾಕ್​ನ ಕುತಂತ್ರ ಬಯಲಿಗೆಳೆದ ಆ ಒಂದು ದೂರವಾಣಿ ಸಂಭಾಷಣೆ..!

author img

By

Published : Jul 25, 2020, 7:01 PM IST

ಸಂಭಾಷಣೆಯ ಪ್ರತಿಲೇಖನವನ್ನು ಪಾಕಿಸ್ತಾನದ ಉದ್ದೇಶಗಳ ಬಗ್ಗೆ ಜಗತ್ತಿಗೆ ತಿಳಿಸಲು 1999ರ ಜೂನ್ 11 ರಂದು ಭಾರತ ಸರ್ಕಾರ ಬಿಡುಗಡೆ ಮಾಡಿತ್ತು. ಇವುಗಳನ್ನು ಬಹಿರಂಗಪಡಿಸುವ ಸುಮಾರು ಒಂದು ವಾರದ ಮೊದಲು, ಟೇಪ್‌ಗಳ ಪ್ರತಿಗಳನ್ನು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್‌ಗೆ ರಾಜತಾಂತ್ರಿಕ ಬ್ಯಾಕ್ ಚಾನೆಲ್ ಮೂಲಕ ಹಸ್ತಾಂತರಿಸಲಾಗಿದೆ ಎಂದು ವರದಿಯಾಗಿತ್ತು.

ಕಾರ್ಗಿಲ್​ ಕದನ Kargil war
ಕಾರ್ಗಿಲ್​ ಕದನ

ಹೈದರಾಬಾದ್ : ಉಭಯ ದೇಶಗಳ ನಡುವೆ ಶಾಂತಿ ಸಂದೇಶ ಸಾರಲು ಭಾರತದ ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ 1999ರ ಫೆಬ್ರವರಿಯಲ್ಲಿ ಪಾಕಿಸ್ತಾನದ ಲಾಹೋರ್‌ಗೆ ಬಸ್​ನಲ್ಲಿ ತೆರಳಿದ್ದರು. ಆದರೆ ಅದೇ ವೇಳೆ ಪಾಕಿಸ್ತಾನ ಸೇನೆ ಕಾರ್ಗಿಲ್‌ನಲ್ಲಿ ನುಸುಳುವ ಯೋಜನೆಯನ್ನು ಸಿದ್ಧಪಡಿಸಿಟ್ಟುಕೊಂಡಿತ್ತು. ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಪರ್ವೇಜ್ ಮುಷರಫ್ ಮತ್ತು ಲೆಫ್ಟಿನೆಂಟ್ ಜನರಲ್ ಮೊಹಮ್ಮದ್ ಅಜೀಜ್ ಖಾನ್ ನಡುವಿನ ಒಂದು ದೂರವಾಣಿ ಸಂಭಾಷಣೆಯು, ಪಾಕಿಸ್ತಾನದ ಕುತಂತ್ರ ಮತ್ತು ಸುಳ್ಳು ಹೇಳಿಕೆಗಳನ್ನು ಬಹಿರಂಗ ಪಡಿಸಿತು. ಇದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್​ನ ಕರಾಳ ಮುಖ ಬಯಲಾಯಿತು.

ದೂರವಾಣಿಯ ಸಂಭಾಷಣೆ ಬಿಚ್ಚಿಟ್ಟ ಸತ್ಯ :

ಚೀನಾ ಪ್ರವಾಸದಲ್ಲಿದ್ದ ಆಗಿನ ಪಾಕ್ ಸೇನಾ ಮುಖ್ಯಸ್ಥ ಜನರಲ್ ಪರ್ವೇಜ್ ಮುಷರಫ್ ಮತ್ತು ರಾವಲ್ಪಿಂಡಿಯಲ್ಲಿದ್ದ ಲೆಫ್ಟಿನೆಂಟ್ ಜನರಲ್ ಮೊಹಮ್ಮದ್ ಅಜೀಜ್ ಖಾನ್ ಮೊದಲ ಸಂಭಾಷಣೆ 26 ಮೇ 1999 ರಂದು ನಡೆದಿದೆ. ಇವರಿಬ್ಬರ ನಡುವಿನ ಎರಡನೇ ಸಂಭಾಷಣೆ 29 ಮೇ 1999 ರಂದು ನಡೆದಿದೆ.

ಸಂಭಾಷಣೆಯ ಪ್ರತಿಲೇಖನವನ್ನು ಪಾಕಿಸ್ತಾನದ ಉದ್ದೇಶಗಳ ಬಗ್ಗೆ ಜಗತ್ತಿಗೆ ತಿಳಿಸಲು ಜೂನ್ 11 ರಂದು ಭಾರತ ಸರ್ಕಾರ ಬಿಡುಗಡೆ ಮಾಡಿತು. ಇವುಗಳನ್ನು ಬಹಿರಂಗಪಡಿಸುವ ಸುಮಾರು ಒಂದು ವಾರದ ಮೊದಲು, ಟೇಪ್‌ಗಳ ಪ್ರತಿಗಳನ್ನು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್‌ಗೆ ರಾಜತಾಂತ್ರಿಕ ಬ್ಯಾಕ್ ಚಾನೆಲ್ ಮೂಲಕ ಹಸ್ತಾಂತರಿಸಲಾಗಿದೆ ಎಂದು ವರದಿಯಾಗಿದೆ.

ಕಾರ್ಗಿಲ್ ವಲಯದಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿ, ಪಾಕ್ ವಿದೇಶಾಂಗ ಸಚಿವ ಸರ್ತಾಜ್ ಅಜೀಜ್ ಭಾರತ ಭೇಟಿ, ಮುಷರಫ್ ಅವರ ಅವಲೋಕನಗಳು ಮತ್ತು ನಿರ್ದೇಶನಗಳು, ಹಿರಿಯ ಮಿಲಿಟರಿ ಕಮಾಂಡರ್​ಗಳು ಮತ್ತು ಮುಜಾಹಿದ್ದೀನ್ ಪಾತ್ರದ ಬಗ್ಗೆ ಸಂಭಾಷಣೆ ನಡೆಸಿರುವುದು ಎಂದು ಟೇಪ್‌ಗಳ ಮೂಲಕ ಬಹಿರಂಗವಾಗಿದೆ.

ಇವರಿಬ್ಬರ ನಡುವಿನ ಸಂಭಾಷಣೆಯ ಟೇಪ್​ಗಳು, ಪಾಕಿಸ್ತಾನ ಸೈನ್ಯದ ಕಾರ್ಯತಂತ್ರ, ಕಾರ್ಗಿಲ್ ಹಿಮಪರ್ವತಗಳನ್ನ ಆಕ್ರಮಿಸುವ ಕಾರ್ಯದಲ್ಲಿರುವ ಶತ್ರು ಬೆಟಾಲಿಯನ್​ಗಳ ಸಂಚಾರ ಮತ್ತು ಯುದ್ಧ ಸನ್ನದ್ಧತೆಯ ಬಗ್ಗೆ ಮಹತ್ವದ ಒಳನೋಟವನ್ನು ಒದಗಿಸಿದವು.

ಬಂಡುಕೋರರು ಮತ್ತು ತನ್ನ ಯೋಧರನ್ನು ಕಾರ್ಗಿಲ್‌ನ ಲೈನ್‌ ಆಫ್‌ ಕಂಟ್ರೋಲ್​ನಲ್ಲಿ ಒಳನುಗ್ಗಿಸಿದ ಪಾಕ್​ ಸೇನೆ ಮೊದಲಿಗೆ ಇದು ಬಂಡುಕೋರರ ಕೃತ್ಯ ಎಂದು ಹೇಳಿ ಪಾರಾಗಲು ಪ್ರಯತ್ನಿಸಿತು. ಆದರೆ, ಹಾಗೆ ಒಳನುಸುಳಿದವರು ಪಾಕಿಸ್ತಾನದ ಸೈನಿಕರೇ ಆಗಿದ್ದರು, ಇದನ್ನು ಒಪ್ಪಲು ಪಾಕಿಸ್ತಾನ ಮಾತ್ರ ತಯಾರಿರಲಿಲ್ಲ. ಅಂದಿನ ಪಾಕ್‌ ಸೇನಾ ಮುಖ್ಯಸ್ಥ ಜನರಲ್‌ ಪರ್ವೇಜ್ ಮುಷರಫ್ ಹಾಗೂ ಲೆಫ್ಟಿನೆಂಟ್ ಜನರಲ್ ಮೊಹಮ್ಮದ್ ಅಜೀಜ್ ಖಾನ್​ನೊಂದಿಗೆ ಕಾರ್ಗಿಲ್‌ ವಿಷಯಕ್ಕೆ ಸಂಬಂಧಿಸಿದಂತೆ ನಡೆಸಿದ ದೂರವಾಣಿ ಸಂಭಾಷಣೆಯನ್ನು ಸಂಗ್ರಹಿಸಿದ ಭಾರತ, ಪಾಕ್​ ಕುತಂತ್ರ ಹೊರ ಜಗತ್ತಿಗೆ ಗೊತ್ತಾಗುವಂತೆ ಮಾಡಿತು. ಆಗಲೇ ಭಾರತ ಕೂಡ ತನ್ನ ಸೇನಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿತು.

:

ಹೈದರಾಬಾದ್ : ಉಭಯ ದೇಶಗಳ ನಡುವೆ ಶಾಂತಿ ಸಂದೇಶ ಸಾರಲು ಭಾರತದ ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ 1999ರ ಫೆಬ್ರವರಿಯಲ್ಲಿ ಪಾಕಿಸ್ತಾನದ ಲಾಹೋರ್‌ಗೆ ಬಸ್​ನಲ್ಲಿ ತೆರಳಿದ್ದರು. ಆದರೆ ಅದೇ ವೇಳೆ ಪಾಕಿಸ್ತಾನ ಸೇನೆ ಕಾರ್ಗಿಲ್‌ನಲ್ಲಿ ನುಸುಳುವ ಯೋಜನೆಯನ್ನು ಸಿದ್ಧಪಡಿಸಿಟ್ಟುಕೊಂಡಿತ್ತು. ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಪರ್ವೇಜ್ ಮುಷರಫ್ ಮತ್ತು ಲೆಫ್ಟಿನೆಂಟ್ ಜನರಲ್ ಮೊಹಮ್ಮದ್ ಅಜೀಜ್ ಖಾನ್ ನಡುವಿನ ಒಂದು ದೂರವಾಣಿ ಸಂಭಾಷಣೆಯು, ಪಾಕಿಸ್ತಾನದ ಕುತಂತ್ರ ಮತ್ತು ಸುಳ್ಳು ಹೇಳಿಕೆಗಳನ್ನು ಬಹಿರಂಗ ಪಡಿಸಿತು. ಇದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್​ನ ಕರಾಳ ಮುಖ ಬಯಲಾಯಿತು.

ದೂರವಾಣಿಯ ಸಂಭಾಷಣೆ ಬಿಚ್ಚಿಟ್ಟ ಸತ್ಯ :

ಚೀನಾ ಪ್ರವಾಸದಲ್ಲಿದ್ದ ಆಗಿನ ಪಾಕ್ ಸೇನಾ ಮುಖ್ಯಸ್ಥ ಜನರಲ್ ಪರ್ವೇಜ್ ಮುಷರಫ್ ಮತ್ತು ರಾವಲ್ಪಿಂಡಿಯಲ್ಲಿದ್ದ ಲೆಫ್ಟಿನೆಂಟ್ ಜನರಲ್ ಮೊಹಮ್ಮದ್ ಅಜೀಜ್ ಖಾನ್ ಮೊದಲ ಸಂಭಾಷಣೆ 26 ಮೇ 1999 ರಂದು ನಡೆದಿದೆ. ಇವರಿಬ್ಬರ ನಡುವಿನ ಎರಡನೇ ಸಂಭಾಷಣೆ 29 ಮೇ 1999 ರಂದು ನಡೆದಿದೆ.

ಸಂಭಾಷಣೆಯ ಪ್ರತಿಲೇಖನವನ್ನು ಪಾಕಿಸ್ತಾನದ ಉದ್ದೇಶಗಳ ಬಗ್ಗೆ ಜಗತ್ತಿಗೆ ತಿಳಿಸಲು ಜೂನ್ 11 ರಂದು ಭಾರತ ಸರ್ಕಾರ ಬಿಡುಗಡೆ ಮಾಡಿತು. ಇವುಗಳನ್ನು ಬಹಿರಂಗಪಡಿಸುವ ಸುಮಾರು ಒಂದು ವಾರದ ಮೊದಲು, ಟೇಪ್‌ಗಳ ಪ್ರತಿಗಳನ್ನು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್‌ಗೆ ರಾಜತಾಂತ್ರಿಕ ಬ್ಯಾಕ್ ಚಾನೆಲ್ ಮೂಲಕ ಹಸ್ತಾಂತರಿಸಲಾಗಿದೆ ಎಂದು ವರದಿಯಾಗಿದೆ.

ಕಾರ್ಗಿಲ್ ವಲಯದಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿ, ಪಾಕ್ ವಿದೇಶಾಂಗ ಸಚಿವ ಸರ್ತಾಜ್ ಅಜೀಜ್ ಭಾರತ ಭೇಟಿ, ಮುಷರಫ್ ಅವರ ಅವಲೋಕನಗಳು ಮತ್ತು ನಿರ್ದೇಶನಗಳು, ಹಿರಿಯ ಮಿಲಿಟರಿ ಕಮಾಂಡರ್​ಗಳು ಮತ್ತು ಮುಜಾಹಿದ್ದೀನ್ ಪಾತ್ರದ ಬಗ್ಗೆ ಸಂಭಾಷಣೆ ನಡೆಸಿರುವುದು ಎಂದು ಟೇಪ್‌ಗಳ ಮೂಲಕ ಬಹಿರಂಗವಾಗಿದೆ.

ಇವರಿಬ್ಬರ ನಡುವಿನ ಸಂಭಾಷಣೆಯ ಟೇಪ್​ಗಳು, ಪಾಕಿಸ್ತಾನ ಸೈನ್ಯದ ಕಾರ್ಯತಂತ್ರ, ಕಾರ್ಗಿಲ್ ಹಿಮಪರ್ವತಗಳನ್ನ ಆಕ್ರಮಿಸುವ ಕಾರ್ಯದಲ್ಲಿರುವ ಶತ್ರು ಬೆಟಾಲಿಯನ್​ಗಳ ಸಂಚಾರ ಮತ್ತು ಯುದ್ಧ ಸನ್ನದ್ಧತೆಯ ಬಗ್ಗೆ ಮಹತ್ವದ ಒಳನೋಟವನ್ನು ಒದಗಿಸಿದವು.

ಬಂಡುಕೋರರು ಮತ್ತು ತನ್ನ ಯೋಧರನ್ನು ಕಾರ್ಗಿಲ್‌ನ ಲೈನ್‌ ಆಫ್‌ ಕಂಟ್ರೋಲ್​ನಲ್ಲಿ ಒಳನುಗ್ಗಿಸಿದ ಪಾಕ್​ ಸೇನೆ ಮೊದಲಿಗೆ ಇದು ಬಂಡುಕೋರರ ಕೃತ್ಯ ಎಂದು ಹೇಳಿ ಪಾರಾಗಲು ಪ್ರಯತ್ನಿಸಿತು. ಆದರೆ, ಹಾಗೆ ಒಳನುಸುಳಿದವರು ಪಾಕಿಸ್ತಾನದ ಸೈನಿಕರೇ ಆಗಿದ್ದರು, ಇದನ್ನು ಒಪ್ಪಲು ಪಾಕಿಸ್ತಾನ ಮಾತ್ರ ತಯಾರಿರಲಿಲ್ಲ. ಅಂದಿನ ಪಾಕ್‌ ಸೇನಾ ಮುಖ್ಯಸ್ಥ ಜನರಲ್‌ ಪರ್ವೇಜ್ ಮುಷರಫ್ ಹಾಗೂ ಲೆಫ್ಟಿನೆಂಟ್ ಜನರಲ್ ಮೊಹಮ್ಮದ್ ಅಜೀಜ್ ಖಾನ್​ನೊಂದಿಗೆ ಕಾರ್ಗಿಲ್‌ ವಿಷಯಕ್ಕೆ ಸಂಬಂಧಿಸಿದಂತೆ ನಡೆಸಿದ ದೂರವಾಣಿ ಸಂಭಾಷಣೆಯನ್ನು ಸಂಗ್ರಹಿಸಿದ ಭಾರತ, ಪಾಕ್​ ಕುತಂತ್ರ ಹೊರ ಜಗತ್ತಿಗೆ ಗೊತ್ತಾಗುವಂತೆ ಮಾಡಿತು. ಆಗಲೇ ಭಾರತ ಕೂಡ ತನ್ನ ಸೇನಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿತು.

:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.