ETV Bharat / bharat

ವಿಧಾನಸಭೆ, ಸಚಿವಾಲಯ ಕಟ್ಟಡ ನೆಲಸಮಗೊಳಿಸಬಾರದು ಎಂದು ಆಗ್ರಹಿಸಿ 'ಸಚಿವಾಲಯ ಚಲೋ' - undefined

ವಿಧಾನಸಭೆ ಮತ್ತು ಸಚಿವಾಲಯದ ಕಟ್ಟಡಗಳನ್ನು ನೆಲಸಮಗೊಳಿಸಲು ನಿರ್ಧರಿಸಿದ ಮುಖ್ಯಮಂತ್ರಿ ಕೆ.ಚಂದ್ರಶೇಖರ್​ ರಾವ್​ ಸರ್ಕಾರದ ವಿರುದ್ಧ ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನಡೆಸಿದ ಟಿಡಿಪಿ ಮುಖಂಡರು.
author img

By

Published : Jul 25, 2019, 9:53 PM IST

ಹೈದರಾಬಾದ್​: ವಿಧಾನಸಭೆ ಮತ್ತು ಸಚಿವಾಲಯದ ಕಟ್ಟಡಗಳನ್ನು ನೆಲಸಮಗೊಳಿಸಲು ನಿರ್ಧರಿಸಿರುವ ಮುಖ್ಯಮಂತ್ರಿ ಕೆ.ಚಂದ್ರಶೇಖರ್​ ರಾವ್​ ನೇತೃತ್ವದ ಸರ್ಕಾರದ ವಿರುದ್ಧ ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕರು 'ಸಚಿವಾಲಯ ಚಲೋ' ಪ್ರತಿಭಟನೆ ನಡೆಸಿದ್ದಾರೆ.

ಆಕ್ರೋಶಿತರು ಹೈದರಾಬಾದ್​ನಿಂದ ವಿಧಾನಸಭೆ ಮತ್ತು ಸಚಿವಾಲಯ ಕಟ್ಟಡಗಳವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಧೃಡವಾಗಿ ವಿರೋಧಿಸುತ್ತೇವೆ. ಕೂಡಲೇ ಇದನ್ನು ನಿರ್ಧಾರವನ್ನು ಹಿಂಪಡೆಯಬೇಕು ಎಂದು ಟಿಡಿಪಿ ಹಿರಿಯ ಮುಖಂಡ ರಾವುಲ ಚಂದ್ರಶೇಖರ್​ ರೆಡ್ಡಿ ಒತ್ತಾಯಿಸಿದ್ದಾರೆ.

ಜೂನ್​ 19ರಂದು ಕೆ.ಚಂದ್ರಶೇಖರ್​ ರಾವ್​​ ಅವರು ಈ ಕಟ್ಟಡಗಳನ್ನು ಕೆಡವಿ ಬಿಸನ್​ ಪೊಲೊ ಮೈದಾನದಲ್ಲಿ ನಿರ್ಮಿಸಲು ಮುಂದಾಗಿದ್ದರು. ಆದರೆ, ಅನುಮತಿ ದೊರೆಯದ ಕಾರಣ ಹಳೇ ಕಟ್ಟಡದಲ್ಲಿಯೇ ನಿರ್ಮಿಸಲು ಘೋಷಿಸಿದ್ದರು.

ರಾಜ್ಯಪಾಲ ಇಎಸ್​ಎಲ್​ ನರಸಿಂಹನ್​ ಅವರನ್ನು ಭೇಟಿಯಾಗಿರುವ ಪಕ್ಷದ ನಾಯಕರು ಈ ಕುರಿತು ಚರ್ಚಿಸಿದ್ದಾರೆ ಎಂದು ಹೇಳಿದರು. ದರಣಿ ಚೌಕ್​ನಲ್ಲಿ ಪ್ರತಿಭಟನೆ ನಡೆಸಲು ಅವಕಾಶ ಕೊಟ್ಟಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೆ.ಚಂದ್ರಶೇಖರ್​ ರಾವ್ ಅವರು ನೂತನ ಕಟ್ಟಡ ನಿರ್ಮಾಣಕ್ಕೆ ಸುಮಾರು ₹ 400 ಕೋಟಿ ಅಂದಾಜಿಸಿದ್ದಾರೆ. ಅಷ್ಟೇ ಅಲ್ಲದೆ, ವಿಧಾನಸಭೆಯ ಕಾಂಪೌಂಡ್​ ನಿರ್ಮಾಣಕ್ಕೆ ಅಂದಾಜು ₹ 100 ಕೋಟಿ ಎಂದು ತಿಳಿಸಿದ್ದಾರೆ. ಜೂನ್​ 27ರಂದು ಅದಕ್ಕೆ ಅಡಿಪಾಯವನ್ನೂ ಹಾಕಿದ್ದಾರೆ. ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ತೆಲಂಗಾಣ ಜನಸಮಿತಿ, ಅಖಿಲ ಪಕ್ಷ ತೀವ್ರವಾಗಿ ವಿರೋಧ ವ್ಯಕ್ತಪಡಿಸುತ್ತಿವೆ.

ಹೈದರಾಬಾದ್​: ವಿಧಾನಸಭೆ ಮತ್ತು ಸಚಿವಾಲಯದ ಕಟ್ಟಡಗಳನ್ನು ನೆಲಸಮಗೊಳಿಸಲು ನಿರ್ಧರಿಸಿರುವ ಮುಖ್ಯಮಂತ್ರಿ ಕೆ.ಚಂದ್ರಶೇಖರ್​ ರಾವ್​ ನೇತೃತ್ವದ ಸರ್ಕಾರದ ವಿರುದ್ಧ ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕರು 'ಸಚಿವಾಲಯ ಚಲೋ' ಪ್ರತಿಭಟನೆ ನಡೆಸಿದ್ದಾರೆ.

ಆಕ್ರೋಶಿತರು ಹೈದರಾಬಾದ್​ನಿಂದ ವಿಧಾನಸಭೆ ಮತ್ತು ಸಚಿವಾಲಯ ಕಟ್ಟಡಗಳವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಧೃಡವಾಗಿ ವಿರೋಧಿಸುತ್ತೇವೆ. ಕೂಡಲೇ ಇದನ್ನು ನಿರ್ಧಾರವನ್ನು ಹಿಂಪಡೆಯಬೇಕು ಎಂದು ಟಿಡಿಪಿ ಹಿರಿಯ ಮುಖಂಡ ರಾವುಲ ಚಂದ್ರಶೇಖರ್​ ರೆಡ್ಡಿ ಒತ್ತಾಯಿಸಿದ್ದಾರೆ.

ಜೂನ್​ 19ರಂದು ಕೆ.ಚಂದ್ರಶೇಖರ್​ ರಾವ್​​ ಅವರು ಈ ಕಟ್ಟಡಗಳನ್ನು ಕೆಡವಿ ಬಿಸನ್​ ಪೊಲೊ ಮೈದಾನದಲ್ಲಿ ನಿರ್ಮಿಸಲು ಮುಂದಾಗಿದ್ದರು. ಆದರೆ, ಅನುಮತಿ ದೊರೆಯದ ಕಾರಣ ಹಳೇ ಕಟ್ಟಡದಲ್ಲಿಯೇ ನಿರ್ಮಿಸಲು ಘೋಷಿಸಿದ್ದರು.

ರಾಜ್ಯಪಾಲ ಇಎಸ್​ಎಲ್​ ನರಸಿಂಹನ್​ ಅವರನ್ನು ಭೇಟಿಯಾಗಿರುವ ಪಕ್ಷದ ನಾಯಕರು ಈ ಕುರಿತು ಚರ್ಚಿಸಿದ್ದಾರೆ ಎಂದು ಹೇಳಿದರು. ದರಣಿ ಚೌಕ್​ನಲ್ಲಿ ಪ್ರತಿಭಟನೆ ನಡೆಸಲು ಅವಕಾಶ ಕೊಟ್ಟಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೆ.ಚಂದ್ರಶೇಖರ್​ ರಾವ್ ಅವರು ನೂತನ ಕಟ್ಟಡ ನಿರ್ಮಾಣಕ್ಕೆ ಸುಮಾರು ₹ 400 ಕೋಟಿ ಅಂದಾಜಿಸಿದ್ದಾರೆ. ಅಷ್ಟೇ ಅಲ್ಲದೆ, ವಿಧಾನಸಭೆಯ ಕಾಂಪೌಂಡ್​ ನಿರ್ಮಾಣಕ್ಕೆ ಅಂದಾಜು ₹ 100 ಕೋಟಿ ಎಂದು ತಿಳಿಸಿದ್ದಾರೆ. ಜೂನ್​ 27ರಂದು ಅದಕ್ಕೆ ಅಡಿಪಾಯವನ್ನೂ ಹಾಕಿದ್ದಾರೆ. ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ತೆಲಂಗಾಣ ಜನಸಮಿತಿ, ಅಖಿಲ ಪಕ್ಷ ತೀವ್ರವಾಗಿ ವಿರೋಧ ವ್ಯಕ್ತಪಡಿಸುತ್ತಿವೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.