ETV Bharat / bharat

ಕೊರೊನಾ ನಿಯಂತ್ರಣ ಸಾಮರ್ಥ್ಯದ ಮೇಲೆ ಲಾಕ್‌ಡೌನ್ ಯಶಸ್ಸು ಗೊತ್ತಾಗಲಿದೆ: ಮನಮೋಹನ್ ಸಿಂಗ್

author img

By

Published : Apr 23, 2020, 3:02 PM IST

ಕೊರೊನಾ ವಿರುದ್ಧದ ಹೋರಾಟದ ಯಶಸ್ಸಿಗೆ ಕೇಂದ್ರ ಮತ್ತು ರಾಜ್ಯಗಳ ನಡುವಿನ ಪರಸ್ಪರ ಸಹಕಾರ ಮುಖ್ಯವಾಗಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.

manmohan singh
ಮನಮೋಹನ್ ಸಿಂಗ್

ನವದೆಹಲಿ: ಕೊರೊನಾ ಸೋಂಕಿನ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಭಾರತ ಎಷ್ಟು ಯಶ ಕಂಡಿದೆ ಎಂಬುದರ ಮೇಲೆ ಲಾಕ್​ಡೌನ್​ ಯಶಸ್ಸನ್ನು ನಿರ್ಣಯಿಸಬೇಕಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ವಿಡಿಯೋ ಕಾನ್ಫರೆನ್ಸ್​ ಮೂಲಕ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮನಮೋಹನ್ ಸಿಂಗ್ ಈ ಹೇಳಿಕೆ ನೀಡಿದ್ದಾರೆ.

  • CWC meeting.

    Dr. Manmohan Singh says,”Necessary to focus on a number of issues in this fight...

    Fight against Covid-19 would very much depend upon the availability of resources...”

    — Randeep Singh Surjewala (@rssurjewala) April 23, 2020 " class="align-text-top noRightClick twitterSection" data="

CWC meeting.

Dr. Manmohan Singh says,”Necessary to focus on a number of issues in this fight...

Fight against Covid-19 would very much depend upon the availability of resources...”

— Randeep Singh Surjewala (@rssurjewala) April 23, 2020 ">

ಈ ಹೋರಾಟದಲ್ಲಿ ಹಲವಾರು ವಿಷಯಗಳ ಬಗ್ಗೆ ಗಮನಹರಿಸುವುದು ಅವಶ್ಯಕವಾಗಿದೆ. ಸಂಪನ್ಮೂಲಗಳ ಲಭ್ಯತೆ ಮೇಲೆ ಕೊರೊನಾ ವಿರುದ್ಧದ ಹೋರಾಟವನ್ನ ಅವಲಂಭಿಸಿದೆ ಎಂದು ಮನಮೋಹನ್ ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಣದೀಪ್ ಸುರ್ಜೇವಾಲಾ ಟ್ವೀಟ್ ಮಾಡಿದ್ದಾರೆ.

ಅಂತಿಮವಾಗಿ ಕೋವಿಡ್-19 ಅನ್ನು ನಿಭಾಯಿಸುವ ನಮ್ಮ ಸಾಮರ್ಥ್ಯದ ಮೇಲೆ ಲಾಕ್‌ಡೌನ್ ಯಶಸ್ಸನ್ನು ನಿರ್ಣಯಿಸಬೇಕಾಗಿದೆ. ಕೊರೊನಾ ವಿರುದ್ಧದ ಹೋರಾಟದ ಯಶಸ್ಸಿಗೆ ಕೇಂದ್ರ ಮತ್ತು ರಾಜ್ಯಗಳ ನಡುವಿನ ಪರಸ್ಪರ ಸಹಕಾರ ಮುಖ್ಯವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ನವದೆಹಲಿ: ಕೊರೊನಾ ಸೋಂಕಿನ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಭಾರತ ಎಷ್ಟು ಯಶ ಕಂಡಿದೆ ಎಂಬುದರ ಮೇಲೆ ಲಾಕ್​ಡೌನ್​ ಯಶಸ್ಸನ್ನು ನಿರ್ಣಯಿಸಬೇಕಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ವಿಡಿಯೋ ಕಾನ್ಫರೆನ್ಸ್​ ಮೂಲಕ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮನಮೋಹನ್ ಸಿಂಗ್ ಈ ಹೇಳಿಕೆ ನೀಡಿದ್ದಾರೆ.

  • CWC meeting.

    Dr. Manmohan Singh says,”Necessary to focus on a number of issues in this fight...

    Fight against Covid-19 would very much depend upon the availability of resources...”

    — Randeep Singh Surjewala (@rssurjewala) April 23, 2020 " class="align-text-top noRightClick twitterSection" data=" ">

ಈ ಹೋರಾಟದಲ್ಲಿ ಹಲವಾರು ವಿಷಯಗಳ ಬಗ್ಗೆ ಗಮನಹರಿಸುವುದು ಅವಶ್ಯಕವಾಗಿದೆ. ಸಂಪನ್ಮೂಲಗಳ ಲಭ್ಯತೆ ಮೇಲೆ ಕೊರೊನಾ ವಿರುದ್ಧದ ಹೋರಾಟವನ್ನ ಅವಲಂಭಿಸಿದೆ ಎಂದು ಮನಮೋಹನ್ ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಣದೀಪ್ ಸುರ್ಜೇವಾಲಾ ಟ್ವೀಟ್ ಮಾಡಿದ್ದಾರೆ.

ಅಂತಿಮವಾಗಿ ಕೋವಿಡ್-19 ಅನ್ನು ನಿಭಾಯಿಸುವ ನಮ್ಮ ಸಾಮರ್ಥ್ಯದ ಮೇಲೆ ಲಾಕ್‌ಡೌನ್ ಯಶಸ್ಸನ್ನು ನಿರ್ಣಯಿಸಬೇಕಾಗಿದೆ. ಕೊರೊನಾ ವಿರುದ್ಧದ ಹೋರಾಟದ ಯಶಸ್ಸಿಗೆ ಕೇಂದ್ರ ಮತ್ತು ರಾಜ್ಯಗಳ ನಡುವಿನ ಪರಸ್ಪರ ಸಹಕಾರ ಮುಖ್ಯವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.