ETV Bharat / bharat

ವಿಶೇಷ ನಿರ್ಧಾರ ಪ್ರಶ್ನಿಸಿದ ಅರ್ಜಿಗಳು ಪಂಚಸದಸ್ಯ ಪೀಠಕ್ಕೆ ವರ್ಗ... ಅಕ್ಟೋಬರ್​ನಲ್ಲಿ ವಿಚಾರಣೆ

ಮೋದಿ ಸರ್ಕಾರ 370ನೇ ವಿಧಿ ರದ್ದು ಮಾಡಿ ಮಹತ್ವದ ಆದೇಶ ಹೊರಡಿಸಿತ್ತು. ಇದೇ ವಿಚಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ನಲ್ಲಿ ಹತ್ತಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಅರ್ಜಿಗಳ ವಿಚಾರಣೆಯನ್ನು ಇಂದು ಸುಪ್ರೀಂಕೋರ್ಟ್​ ಕೈಗೆತ್ತಿಕೊಂಡಿದೆ.

author img

By

Published : Aug 28, 2019, 11:21 AM IST

Updated : Aug 28, 2019, 12:35 PM IST

ಸುಪ್ರೀಂ ಕೋರ್ಟ್

ನವದೆಹಲಿ: ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್​ ಇಂದು ನಡೆಸಿದ್ದು, ಸದ್ಯ ಪ್ರಕರಣವನ್ನು ಪಂಚ ಸದಸ್ಯ ಪೀಠಕ್ಕೆ ವರ್ಗಾಯಿಸಿದೆ.

370ನೇ ವಿಧಿ ರದ್ದತಿ ಪ್ರಶ್ನಿಸಿ ಹತ್ತಕ್ಕೂ ಅರ್ಜಿಗಳು ಸುಪ್ರೀಂನಲ್ಲಿ ಸಲ್ಲಿಕೆಯಾಗಿತ್ತು.ಈ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿ ಇದೀಗ ಪ್ರಕರಣದ ಗಂಭೀರತೆ ಅರಿತು ಪಂಚಸದಸ್ಯ ಪೀಠಕ್ಕೆ ವರ್ಗಾಯಿಸಿದೆ.

ಪಂಚಸದಸ್ಯ ಪೀಠ ಈ ಅರ್ಜಿಗಳನ್ನು ಅಕ್ಟೋಬರ್​ ತಿಂಗಳ ಮೊದಲ ವಾರದಲ್ಲಿ ವಿಚಾರಣೆ ನಡೆಸಲಿದೆ. ಇಂದಿನ ವಿಚಾರಣೆಯ ಬಳಿಕ ಕೇಂದ್ರ ಸರ್ಕಾರ ಹಾಗೂ ಜಮ್ಮು ಕಾಶ್ಮೀರ ಆಡಳಿತ ವರ್ಗಕ್ಕೆ ನೋಟಿಸ್ ರವಾನೆ ಮಾಡಿದೆ.

ಇಂದಿನ ಸುಪ್ರೀಂ ವಿಚಾರಣೆ ಬಗ್ಗೆ ಹಿರಿಯ ವಕೀಲ ಎಂ.ಎಲ್​.ಶರ್ಮ ಮಾತು

ಕಾಶ್ಮೀರ್ ಟೈಮ್ಸ್​ ಸಂಪಾದಕಿ ಅನುರಾಧ ಭಸಿನ್​​, ಕಣಿವೆ ರಾಜ್ಯದಲ್ಲಿ ಇಂಟರ್​ನೆಟ್, ಲ್ಯಾಂಡ್​ಲೈನ್​ ಸೇರಿದಂತೆ ಸಂವಹನ ಮಾಧ್ಯಮಗಳನ್ನು ಸಕ್ರಿಯಗೊಳಿಸುವಂತೆ ಕೋರ್ಟ್​ ಮುಂದೆ ಮನವಿ ಮಾಡಿದ್ದರು. ಇದೇ ವಿಚಾರಕ್ಕೆ ಕೋರ್ಟ್​ ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿದ್ದು, ಏಳು ದಿನದ ಒಳಗಾಗಿ ಸಂಪೂರ್ಣ ವರದಿಯನ್ನು ನೀಡುವಂತೆ ಕೇಂದ್ರಕ್ಕೆ ಸೂಚಿಸಿದೆ.

  • Supreme Court also issued a notice to the Centre on the plea by Kashmir Times Executive Editor, Anuradha Bhasin, seeking a direction for relaxing restrictions on the internet, landline, & other communication channels. SC sought a detailed response from the Centre within 7 days. https://t.co/QnWhasbDpf

    — ANI (@ANI) August 28, 2019 " class="align-text-top noRightClick twitterSection" data=" ">

ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ಪ್ರಶ್ನಿಸಿ ಅರ್ಜಿ ಸಲ್ಲಿಕೆ ಮಾಡಿದ ಮೊಹಮ್ಮದ್ ಅಲೀಂ ಸೈಯದ್​ ಎನ್ನುವವರು ಅನಂತ್​ನಾಗ್ ಜಿಲ್ಲೆಯಲ್ಲಿರುವ ತನ್ನ ಹೆತ್ತವರನ್ನು ಭೇಟಿಯಾಗಬೇಕೆಂದಿದ್ದಾರೆ, ಹೀಗಾಗಿ ಅವರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಜಮ್ಮು ಕಾಶ್ಮೀರ ಪೊಲೀಸರಿಗೆ ಸೂಚಿಸಿದ್ದಾರೆ.

  • Chief Justice of India (CJI), Ranjan Gogoi allows Mohammad Aleem Syed, one of the petitioners in the case, to travel to Anantnag to meet his parents. Court has directed the Jammu and Kashmir Government to provide police protection to him. https://t.co/Uh0qTNgWvH

    — ANI (@ANI) August 28, 2019 " class="align-text-top noRightClick twitterSection" data=" ">

ಸಿಪಿಐ(ಎಂ) ನಾಯಕ ಸೀತಾರಾಮ್​ ಯೆಚೂರಿ ಅವರಿಗೆ ಕಣಿವೆ ರಾಜ್ಯಕ್ಕೆ ತೆರಳಲು ಕೋರ್ಟ್​ ಅನುಮತಿ ನೀಡಿದೆ. ಮಾಜಿ ಶಾಸಕ ಯೂಸುಫ್​​ ತರಿಗಾಮಿ ಅವರ ಭೇಟಿಗೆ ಯೆಚೂರಿ ಕೋರ್ಟ್​ ಅನುಮತಿ ಕೇಳಿದ್ದರು. ನೀವು ಪಕ್ಷದ ಪ್ರಧಾನ ಕಾರ್ಯದರ್ಶಿ, ಪಕ್ಷದ ಕೆಲಸಕ್ಕೆ ಮಾತ್ರ ತೆರಳ ಬಹುದೇ ವಿನಃ ಬೇರೆ ಕಾರ್ಯ ಮಾಡುವಂತಿಲ್ಲ ಎಂದು ಇದೇ ವೇಳೆ, ಸುಪ್ರೀಂಕೋರ್ಟ್​ ಸೂಚನೆ ಸಹ ಕೊಟ್ಟಿತು.

  • Supreme Court allows CPI(M) leader Sitaram Yechury to visit J&K and meet his party leader and former MLA, Yousuf Tarigami. Chief Justice of India (CJI) Ranjan Gogoi said "We will permit you to go, you are the general secretary of a party. Don't go for anything else" https://t.co/Uh0qTNgWvH

    — ANI (@ANI) August 28, 2019 " class="align-text-top noRightClick twitterSection" data=" ">

ನವದೆಹಲಿ: ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್​ ಇಂದು ನಡೆಸಿದ್ದು, ಸದ್ಯ ಪ್ರಕರಣವನ್ನು ಪಂಚ ಸದಸ್ಯ ಪೀಠಕ್ಕೆ ವರ್ಗಾಯಿಸಿದೆ.

370ನೇ ವಿಧಿ ರದ್ದತಿ ಪ್ರಶ್ನಿಸಿ ಹತ್ತಕ್ಕೂ ಅರ್ಜಿಗಳು ಸುಪ್ರೀಂನಲ್ಲಿ ಸಲ್ಲಿಕೆಯಾಗಿತ್ತು.ಈ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿ ಇದೀಗ ಪ್ರಕರಣದ ಗಂಭೀರತೆ ಅರಿತು ಪಂಚಸದಸ್ಯ ಪೀಠಕ್ಕೆ ವರ್ಗಾಯಿಸಿದೆ.

ಪಂಚಸದಸ್ಯ ಪೀಠ ಈ ಅರ್ಜಿಗಳನ್ನು ಅಕ್ಟೋಬರ್​ ತಿಂಗಳ ಮೊದಲ ವಾರದಲ್ಲಿ ವಿಚಾರಣೆ ನಡೆಸಲಿದೆ. ಇಂದಿನ ವಿಚಾರಣೆಯ ಬಳಿಕ ಕೇಂದ್ರ ಸರ್ಕಾರ ಹಾಗೂ ಜಮ್ಮು ಕಾಶ್ಮೀರ ಆಡಳಿತ ವರ್ಗಕ್ಕೆ ನೋಟಿಸ್ ರವಾನೆ ಮಾಡಿದೆ.

ಇಂದಿನ ಸುಪ್ರೀಂ ವಿಚಾರಣೆ ಬಗ್ಗೆ ಹಿರಿಯ ವಕೀಲ ಎಂ.ಎಲ್​.ಶರ್ಮ ಮಾತು

ಕಾಶ್ಮೀರ್ ಟೈಮ್ಸ್​ ಸಂಪಾದಕಿ ಅನುರಾಧ ಭಸಿನ್​​, ಕಣಿವೆ ರಾಜ್ಯದಲ್ಲಿ ಇಂಟರ್​ನೆಟ್, ಲ್ಯಾಂಡ್​ಲೈನ್​ ಸೇರಿದಂತೆ ಸಂವಹನ ಮಾಧ್ಯಮಗಳನ್ನು ಸಕ್ರಿಯಗೊಳಿಸುವಂತೆ ಕೋರ್ಟ್​ ಮುಂದೆ ಮನವಿ ಮಾಡಿದ್ದರು. ಇದೇ ವಿಚಾರಕ್ಕೆ ಕೋರ್ಟ್​ ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿದ್ದು, ಏಳು ದಿನದ ಒಳಗಾಗಿ ಸಂಪೂರ್ಣ ವರದಿಯನ್ನು ನೀಡುವಂತೆ ಕೇಂದ್ರಕ್ಕೆ ಸೂಚಿಸಿದೆ.

  • Supreme Court also issued a notice to the Centre on the plea by Kashmir Times Executive Editor, Anuradha Bhasin, seeking a direction for relaxing restrictions on the internet, landline, & other communication channels. SC sought a detailed response from the Centre within 7 days. https://t.co/QnWhasbDpf

    — ANI (@ANI) August 28, 2019 " class="align-text-top noRightClick twitterSection" data=" ">

ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ಪ್ರಶ್ನಿಸಿ ಅರ್ಜಿ ಸಲ್ಲಿಕೆ ಮಾಡಿದ ಮೊಹಮ್ಮದ್ ಅಲೀಂ ಸೈಯದ್​ ಎನ್ನುವವರು ಅನಂತ್​ನಾಗ್ ಜಿಲ್ಲೆಯಲ್ಲಿರುವ ತನ್ನ ಹೆತ್ತವರನ್ನು ಭೇಟಿಯಾಗಬೇಕೆಂದಿದ್ದಾರೆ, ಹೀಗಾಗಿ ಅವರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಜಮ್ಮು ಕಾಶ್ಮೀರ ಪೊಲೀಸರಿಗೆ ಸೂಚಿಸಿದ್ದಾರೆ.

  • Chief Justice of India (CJI), Ranjan Gogoi allows Mohammad Aleem Syed, one of the petitioners in the case, to travel to Anantnag to meet his parents. Court has directed the Jammu and Kashmir Government to provide police protection to him. https://t.co/Uh0qTNgWvH

    — ANI (@ANI) August 28, 2019 " class="align-text-top noRightClick twitterSection" data=" ">

ಸಿಪಿಐ(ಎಂ) ನಾಯಕ ಸೀತಾರಾಮ್​ ಯೆಚೂರಿ ಅವರಿಗೆ ಕಣಿವೆ ರಾಜ್ಯಕ್ಕೆ ತೆರಳಲು ಕೋರ್ಟ್​ ಅನುಮತಿ ನೀಡಿದೆ. ಮಾಜಿ ಶಾಸಕ ಯೂಸುಫ್​​ ತರಿಗಾಮಿ ಅವರ ಭೇಟಿಗೆ ಯೆಚೂರಿ ಕೋರ್ಟ್​ ಅನುಮತಿ ಕೇಳಿದ್ದರು. ನೀವು ಪಕ್ಷದ ಪ್ರಧಾನ ಕಾರ್ಯದರ್ಶಿ, ಪಕ್ಷದ ಕೆಲಸಕ್ಕೆ ಮಾತ್ರ ತೆರಳ ಬಹುದೇ ವಿನಃ ಬೇರೆ ಕಾರ್ಯ ಮಾಡುವಂತಿಲ್ಲ ಎಂದು ಇದೇ ವೇಳೆ, ಸುಪ್ರೀಂಕೋರ್ಟ್​ ಸೂಚನೆ ಸಹ ಕೊಟ್ಟಿತು.

  • Supreme Court allows CPI(M) leader Sitaram Yechury to visit J&K and meet his party leader and former MLA, Yousuf Tarigami. Chief Justice of India (CJI) Ranjan Gogoi said "We will permit you to go, you are the general secretary of a party. Don't go for anything else" https://t.co/Uh0qTNgWvH

    — ANI (@ANI) August 28, 2019 " class="align-text-top noRightClick twitterSection" data=" ">
Intro:Body:

370 ವಿಧಿ ತೆರವು ಪ್ರಶ್ನಿಸಿ ಅರ್ಜಿ ಸಲ್ಲಿಕೆ... ವಿಚಾರಣೆ ಆರಂಭ, ಯೆಚೂರಿಗೆ ಮನವಿಗೆ ಕೋರ್ಟ್​ ಸಮ್ಮತಿ



ನವದೆಹಲಿ:  ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸುಪ್ರೀಂಕೋರ್ಟ್​ ಇಂದು ಕೈಗೆತ್ತಿಕೊಂಡಿದ್ದು, ಸದ್ಯ ವಿಚಾರಣೆ ಆರಂಭವಾಗಿದೆ.



ಮೋದಿ ಸರ್ಕಾರದ ಮಹತ್ವದ ನಡೆಯಲ್ಲಿ 370ನೇ ವಿಧಿಯನ್ನು ರದ್ದು ಮಾಡಿ ಮಹತ್ವದ ಆದೇಶ ಹೊರಡಿಸಿತ್ತು. ಇದೇ ವಿಚಾರವನ್ನು ಪ್ರಶ್ನಿಸಿ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್​ನಲ್ಲಿ ಹತ್ತಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದವು.



ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ಪ್ರಶ್ನಿಸಿ ಅರ್ಜಿ ಸಲ್ಲಿಕೆ ಮಾಡಿದ ಮೊಹಮ್ಮದ್ ಅಲೀಂ ಸೈಯದ್​ ಎನ್ನುವವರು ಅನಂತ್​ನಾಗ್ ಜಿಲ್ಲೆಯಲ್ಲಿರುವ ತನ್ನ ಹೆತ್ತವರನ್ನು ಭೇಟಿಯಾಗಬೇಕೆಂದಿದ್ದಾರೆ,. ಹೀಗಾಗಿ ಅವರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಜಮ್ಮು ಕಾಶ್ಮೀರ ಪೊಲೀಸರಿಗೆ ಸೂಚಿಸಿದ್ದಾರೆ.



ಸಿಪಿಐ(ಎಂ) ನಾಯಕ ಸೀತಾರಾಮ್​ ಯೆಚೂರಿಯವರಿಗೆ ಕಣಿವೆ ರಾಜ್ಯಕ್ಕೆ ತೆರಳಲು ಕೋರ್ಟ್​ ಅನುಮತಿ ನೀಡಿದೆ. ಮಾಜಿ ಶಾಸಕ ಯೂಸುಫ್​​ ತರಿಗಾಮಿಯವರನ್ನು ಭೇಟಿಗೆ ಯೆಚೂರಿ ಕೋರ್ಟ್​ ಅನುಮತಿ ಕೇಳಿದ್ದರು. ನೀವು ಪಕ್ಷದ ಪ್ರಧಾನ ಕಾರ್ಯದರ್ಶಿ, ಪಕ್ಷದ ಕೆಲಸಕ್ಕೆ ಮಾತ್ರ ತೆರಬಹುದೇ ವಿನಃ ಬೇರೆ ಕಾರ್ಯ ಮಾಡುವಂತಿಲ್ಲ ಎಂದು ಇದೇ ವೇಳೆ ಯೆಚೂರಿಗೆ ಕೋರ್ಟ್​ ತಿಳಿಸಿದೆ.


Conclusion:
Last Updated : Aug 28, 2019, 12:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.