ETV Bharat / bharat

ತಬ್ಲಿಘಿ  ಜಮಾತ್ ಸಂಬಂಧಿತ ವರದಿ ಪ್ರಸಾರ ತಡೆಗೆ ಸುಪ್ರೀಂಕೋರ್ಟ್ ನಕಾರ​

author img

By

Published : Apr 13, 2020, 7:12 PM IST

ತಬ್ಲಿಘಿ ಜಮಾತ್​ ಸಮಾವೇಶ ಕುರಿತು ಸುಳ್ಳು ಸುದ್ದಿ ಹಾಗೂ ಕೋಮು ಪ್ರಚೋದನಕಾರಿ ವರದಿಗಳನ್ನು ಪ್ರಕಟಿಸದಂತೆ ಮಾಧ್ಯಮಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಜಮಿಯತ್​ ಉಲೇಮಾ-ಎ-ಹಿಂದ್​ ಸುಪ್ರೀಂಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಆದರೆ ತಕ್ಷಣಕ್ಕೆ ಮಾಧ್ಯಮಗಳ ವಿರುದ್ಧ ಆದೇಶ ನೀಡಲು ಸುಪ್ರೀಂಕೋರ್ಟ್​ ಸೋಮವಾರ ನಿರಾಕರಿಸಿದೆ.

SC refuses to caution media
SC refuses to caution media

ನವದೆಹಲಿ: ತಬ್ಲಿಘಿ ಜಮಾತ್​ ಸಮಾವೇಶದ ವರದಿಗಾರಿಕೆಗೆ ಸಂಬಂಧಿಸಿದಂತೆ ಮಾಧ್ಯಮಗಳ ವಿರುದ್ಧ ಆದೇಶ ನೀಡಲು ಸುಪ್ರೀಂಕೋರ್ಟ್​ ಸೋಮವಾರ ನಿರಾಕರಿಸಿದೆ. ಕೆಲ ಮುದ್ರಣ ಹಾಗೂ ಎಲೆಕ್ಟ್ರಾನಿಕ್​ ಮಾಧ್ಯಮಗಳಲ್ಲಿ ತಬ್ಲಿಘಿ ಜಮಾತ್​ ಸಮಾವೇಶ ಕುರಿತು ಸುಳ್ಳು ಸುದ್ದಿ ಹಾಗೂ ಕೋಮು ಪ್ರಚೋದನಕಾರಿ ವರದಿಗಳನ್ನು ಪ್ರಕಟಿಸಲಾಗುತ್ತಿದೆ ಎಂದು ಆರೋಪಿಸಿ, ಇಂಥ ವರದಿಗಳನ್ನು ಪ್ರಕಟಿಸದಂತೆ ಮಾಧ್ಯಮಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಜಮಿಯತ್​ ಉಲೇಮಾ-ಎ-ಹಿಂದ್​ ಸುಪ್ರೀಂ ಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.

ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್​.ಎ. ಬೊಬ್ಡೆ, ಮಾಧ್ಯಮಗಳ ಸ್ವಾತಂತ್ರ್ಯ ಹತ್ತಿಕ್ಕುವ ಕೆಲಸ ಮಾಡಲಾಗದು. ಮುಂದಿನ ವಾರ ಈ ಕುರಿತು ವಿಸ್ತೃತ ವಿಚಾರಣೆ ನಡೆಸಲಾಗುವುದು. ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳ ಪ್ರಸಾರ ತಡೆಗೆ ದೂರಗಾಮಿ ಪರಿಣಾಮ ಬೀರುವ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಹೇಳಿದರು.

"ದೆಹಲಿಯ ಮರ್ಕಜ್​ನಲ್ಲಿ ಭಾಗವಹಿಸಿದ್ದ ಹಾಗೂ ಕೋವಿಡ್​-19 ಸೋಂಕಿತರಾದವರ ಹೆಸರನ್ನು ಕೆಲ ಮಾಧ್ಯಮಗಳು ಪ್ರಕಟಿಸುತ್ತಿವೆ. ಇದು ಕಾನೂನಿಗೆ ವಿರುದ್ಧವಾಗಿದೆ." ಎಂದು ಜಮಿಯತ್​ ವಕೀಲರು ವಾದಿಸಿದರು.

ವರದಿಗಾರಿಕೆಯಿಂದ ಕೊಲ್ಲುವಿಕೆ ಅಥವಾ ಮಾನಹಾನಿಯಾಗುತ್ತಿದ್ದರೆ ಅದಕ್ಕೆ ಉತ್ತರ ಬೇರೆಡೆ ಇದೆ. ಆದರೆ ವರದಿಗಾರಿಕೆಯ ಬಗ್ಗೆ ನೀವು ಪ್ರಶ್ನಿಸುತ್ತಿದ್ದರೆ ಭಾರತೀಯ ಪ್ರೆಸ್​ ಕೌನ್ಸಿಲ್​ ಅನ್ನು ಈ ಪ್ರಕರಣದಲ್ಲಿ ನೀವು ಸೇರಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಬೊಬ್ಡೆ ತಿಳಿಸಿದರು.

ನವದೆಹಲಿ: ತಬ್ಲಿಘಿ ಜಮಾತ್​ ಸಮಾವೇಶದ ವರದಿಗಾರಿಕೆಗೆ ಸಂಬಂಧಿಸಿದಂತೆ ಮಾಧ್ಯಮಗಳ ವಿರುದ್ಧ ಆದೇಶ ನೀಡಲು ಸುಪ್ರೀಂಕೋರ್ಟ್​ ಸೋಮವಾರ ನಿರಾಕರಿಸಿದೆ. ಕೆಲ ಮುದ್ರಣ ಹಾಗೂ ಎಲೆಕ್ಟ್ರಾನಿಕ್​ ಮಾಧ್ಯಮಗಳಲ್ಲಿ ತಬ್ಲಿಘಿ ಜಮಾತ್​ ಸಮಾವೇಶ ಕುರಿತು ಸುಳ್ಳು ಸುದ್ದಿ ಹಾಗೂ ಕೋಮು ಪ್ರಚೋದನಕಾರಿ ವರದಿಗಳನ್ನು ಪ್ರಕಟಿಸಲಾಗುತ್ತಿದೆ ಎಂದು ಆರೋಪಿಸಿ, ಇಂಥ ವರದಿಗಳನ್ನು ಪ್ರಕಟಿಸದಂತೆ ಮಾಧ್ಯಮಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಜಮಿಯತ್​ ಉಲೇಮಾ-ಎ-ಹಿಂದ್​ ಸುಪ್ರೀಂ ಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.

ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್​.ಎ. ಬೊಬ್ಡೆ, ಮಾಧ್ಯಮಗಳ ಸ್ವಾತಂತ್ರ್ಯ ಹತ್ತಿಕ್ಕುವ ಕೆಲಸ ಮಾಡಲಾಗದು. ಮುಂದಿನ ವಾರ ಈ ಕುರಿತು ವಿಸ್ತೃತ ವಿಚಾರಣೆ ನಡೆಸಲಾಗುವುದು. ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳ ಪ್ರಸಾರ ತಡೆಗೆ ದೂರಗಾಮಿ ಪರಿಣಾಮ ಬೀರುವ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಹೇಳಿದರು.

"ದೆಹಲಿಯ ಮರ್ಕಜ್​ನಲ್ಲಿ ಭಾಗವಹಿಸಿದ್ದ ಹಾಗೂ ಕೋವಿಡ್​-19 ಸೋಂಕಿತರಾದವರ ಹೆಸರನ್ನು ಕೆಲ ಮಾಧ್ಯಮಗಳು ಪ್ರಕಟಿಸುತ್ತಿವೆ. ಇದು ಕಾನೂನಿಗೆ ವಿರುದ್ಧವಾಗಿದೆ." ಎಂದು ಜಮಿಯತ್​ ವಕೀಲರು ವಾದಿಸಿದರು.

ವರದಿಗಾರಿಕೆಯಿಂದ ಕೊಲ್ಲುವಿಕೆ ಅಥವಾ ಮಾನಹಾನಿಯಾಗುತ್ತಿದ್ದರೆ ಅದಕ್ಕೆ ಉತ್ತರ ಬೇರೆಡೆ ಇದೆ. ಆದರೆ ವರದಿಗಾರಿಕೆಯ ಬಗ್ಗೆ ನೀವು ಪ್ರಶ್ನಿಸುತ್ತಿದ್ದರೆ ಭಾರತೀಯ ಪ್ರೆಸ್​ ಕೌನ್ಸಿಲ್​ ಅನ್ನು ಈ ಪ್ರಕರಣದಲ್ಲಿ ನೀವು ಸೇರಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಬೊಬ್ಡೆ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.