ETV Bharat / bharat

ಶಾರದಾ ಚಿಟ್​ಫಂಡ್​ ಹಗರಣ: ಸಿಬಿಐ ವರದಿ ಅತ್ಯಂತ ಮಹತ್ವದ್ದು ಎಂದ ಸುಪ್ರೀಂ

ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ, ಕೋಲ್ಕತ್ತಾ ಪೊಲೀಸ್​ ಕಮೀಷನರ್​​​ ರಾಜೀವ್ ಕುಮಾರ್​​ರನ್ನು ವಿಚಾರಣೆ ನಡೆಸುತ್ತಿದ್ದು ಈ ವಿಚಾರಣೆಯ ಸಂಪೂರ್ಣ ವಿವರವನ್ನು ಇಂದು ಸಿಬಿಐ ಸುಪ್ರೀಂ ಕೋರ್ಟ್​ಗೆ ಸಲ್ಲಿಕೆ ಮಾಡಿದೆ.

author img

By

Published : Mar 26, 2019, 7:51 PM IST

ಸರ್ವೋಚ್ಛ ನ್ಯಾಯಾಲಯ

ನವದೆಹಲಿ: ಶಾರದಾ ಚಿಟ್​ ಫಂಡ್​ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಹೊಸದಾಗಿ ಸಲ್ಲಿಕೆ ಮಾಡಿರುವ ವರದಿ ಅತ್ಯಂತ ಮಹತ್ವದ್ದಾಗಿದೆ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ.

ಸದ್ಯ ಈ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ, ಕೋಲ್ಕತ್ತಾ ಪೊಲೀಸ್​ ಕಮೀಷನರ್​​​ ರಾಜೀವ್ ಕುಮಾರ್​​ರನ್ನು ವಿಚಾರಣೆ ನಡೆಸುತ್ತಿದ್ದು ಈ ವಿಚಾರಣೆಯ ಸಂಪೂರ್ಣ ವಿವರವನ್ನು ಇಂದು ಸಿಬಿಐ ಸುಪ್ರೀಂ ಕೋರ್ಟ್​ಗೆ ಸಲ್ಲಿಕೆ ಮಾಡಿದೆ.

ಸುಪ್ರೀಂನ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯ್​, ಸಲ್ಲಿಕೆಯಾಗಿರುವ ವರದಿಯ ಕುರಿತು ಮಾತನಾಡಿದ್ದು ಇದು ಅತ್ಯಂತ ಮಹತ್ವದ ವಿಚಾರಗಳನ್ನು ಹೊಂದಿದೆ ಎಂದಿದ್ದಾರೆ.

ಇಂದು ಸಲ್ಲಿಕೆಯಾಗಿರುವ ವರದಿಗೆ ಪ್ರತಿಕ್ರಿಯೆ ನೀಡಲು ರಾಜೀವ್​ ಕುಮಾರ್​ಗೆ ಸುಪ್ರೀಂ ಕೋರ್ಟ್​ ಹತ್ತು ದಿನಗಳ ಗಡುವು ನೀಡಿದೆ. ಕುಮಾರ್ ತಮ್ಮ ಪ್ರತಿಕ್ರಿಯೆಯನ್ನು ಮುಚ್ಚಿದ ಲಕೋಟೆಯಲ್ಲಿ ನೀಡಬೇಕು ಎಂದು ಸೂಚಿಸಿದೆ.

ರಾಜೀವ್ ಕುಮಾರ್ ಪ್ರತಿಕ್ರಿಯೆಯ ಬಳಿಕ ಎರಡೂ ಬಣಗಳ ವಾದ-ವಿವಾದವನ್ನು ಆಲಿಸಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.

ನವದೆಹಲಿ: ಶಾರದಾ ಚಿಟ್​ ಫಂಡ್​ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಹೊಸದಾಗಿ ಸಲ್ಲಿಕೆ ಮಾಡಿರುವ ವರದಿ ಅತ್ಯಂತ ಮಹತ್ವದ್ದಾಗಿದೆ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ.

ಸದ್ಯ ಈ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ, ಕೋಲ್ಕತ್ತಾ ಪೊಲೀಸ್​ ಕಮೀಷನರ್​​​ ರಾಜೀವ್ ಕುಮಾರ್​​ರನ್ನು ವಿಚಾರಣೆ ನಡೆಸುತ್ತಿದ್ದು ಈ ವಿಚಾರಣೆಯ ಸಂಪೂರ್ಣ ವಿವರವನ್ನು ಇಂದು ಸಿಬಿಐ ಸುಪ್ರೀಂ ಕೋರ್ಟ್​ಗೆ ಸಲ್ಲಿಕೆ ಮಾಡಿದೆ.

ಸುಪ್ರೀಂನ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯ್​, ಸಲ್ಲಿಕೆಯಾಗಿರುವ ವರದಿಯ ಕುರಿತು ಮಾತನಾಡಿದ್ದು ಇದು ಅತ್ಯಂತ ಮಹತ್ವದ ವಿಚಾರಗಳನ್ನು ಹೊಂದಿದೆ ಎಂದಿದ್ದಾರೆ.

ಇಂದು ಸಲ್ಲಿಕೆಯಾಗಿರುವ ವರದಿಗೆ ಪ್ರತಿಕ್ರಿಯೆ ನೀಡಲು ರಾಜೀವ್​ ಕುಮಾರ್​ಗೆ ಸುಪ್ರೀಂ ಕೋರ್ಟ್​ ಹತ್ತು ದಿನಗಳ ಗಡುವು ನೀಡಿದೆ. ಕುಮಾರ್ ತಮ್ಮ ಪ್ರತಿಕ್ರಿಯೆಯನ್ನು ಮುಚ್ಚಿದ ಲಕೋಟೆಯಲ್ಲಿ ನೀಡಬೇಕು ಎಂದು ಸೂಚಿಸಿದೆ.

ರಾಜೀವ್ ಕುಮಾರ್ ಪ್ರತಿಕ್ರಿಯೆಯ ಬಳಿಕ ಎರಡೂ ಬಣಗಳ ವಾದ-ವಿವಾದವನ್ನು ಆಲಿಸಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.

Intro:Body:

ಶಾರದಾ ಚಿಟ್​ಫಂಡ್​ ಹಗರಣ: ಸಿಬಿಐ ವರದಿ ಅತ್ಯಂತ ಮಹತ್ವದ್ದು ಎಂದ ಸುಪ್ರೀಂ



ನವದೆಹಲಿ: ಶಾರದಾ ಚಿಟ್​ ಫಂಡ್​ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಹೊಸದಾಗಿ ಸಲ್ಲಿಕೆ ಮಾಡಿರುವ ವರದಿ ಅತ್ಯಂತ ಮಹತ್ವದ್ದಾಗಿ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ.



ಸದ್ಯ ಈ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ, ಕೋಲ್ಕತ್ತಾ ಪೊಲೀಸ್​ ಕಮೀಷನರ್​​​ ರಾಜೀವ್ ಕುಮಾರ್​​ರನ್ನು ವಿಚಾರಣೆ ನಡೆಸುತ್ತಿದ್ದು ಈ ವಿಚಾರಣೆಯ ಸಂಪೂರ್ಣ ವಿವರವನ್ನು ಇಂದು ಸಿಬಿಐ ಸುಪ್ರೀಂ ಕೋರ್ಟ್​ಗೆ ಸಲ್ಲಿಕೆ ಮಾಡಿದೆ.



ಸುಪ್ರೀಂನ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯ್​, ಸಲ್ಲಿಕೆಯಾಗಿರುವ ವರದಿಯ ಕುರಿತು ಮಾತನಾಡಿದ್ದು ಇದು ಅತ್ಯಂತ ಮಹತ್ವದ ವಿಚಾರಗಳನ್ನು ಹೊಂದಿದೆ ಎಂದಿದ್ದಾರೆ.



ಇಂದು ಸಲ್ಲಿಕೆಯಾಗಿರುವ ವರದಿಗೆ ಪ್ರತಿಕ್ರಿಯೆ ನೀಡಲು ರಾಜೀವ್​ ಕುಮಾರ್​ಗೆ ಸುಪ್ರೀಂ ಕೋರ್ಟ್​ ಹತ್ತು ದಿನಗಳ ಗಡುವು ನೀಡಿದೆ. ಕುಮಾರ್ ತಮ್ಮ ಪ್ರತಿಕ್ರಿಯೆಯನ್ನು ಮುಚ್ಚಿದ ಲಕೋಟೆಯಲ್ಲಿ ನೀಡಬೇಕು ಎಂದು ಸೂಚಿಸಿದೆ.



ರಾಜೀವ್ ಕುಮಾರ್ ಪ್ರತಿಕ್ರಿಯೆಯ ಬಳಿಕ ಎರಡೂ ಬಣಗಳ ವಾದ-ವಿವಾದವನ್ನು ಆಲಿಸಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.




Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.