ETV Bharat / bharat

ದೇಶದಲ್ಲಿ ಕೊರೊನಾ ಸೋಂಕಿತರ ಚೇತರಿಕೆ ಪ್ರಮಾಣದಲ್ಲಿ ಏರಿಕೆ: ಕೇಂದ್ರ ಆರೋಗ್ಯ ಇಲಾಖೆ - ಕೇಂದ್ರ ಆರೋಗ್ಯ ಇಲಾಖೆ ಸುದ್ದಿಗೋಷ್ಠಿ

ಕೊರೊನಾ ವೈರಸ್​ ಹರಡಲು ಬಾವಲಿಗಳು ಕಾರಣ ಎಂದು ಹೇಳಲಾಗಿತ್ತು. ಆದ್ರೆ ಕೆಲ ಸಂಶೋಧಕರು ಹಾಗೂ ವಿಜ್ಞಾನಿಗಳು ಈ ಮಾತನ್ನು ಅಲ್ಲಗಳೆದಿದ್ದಾರೆ.

Recovery rate of COVID19 cases increased in the state
ಲಾವ್​ ಅಗರ್ವಾಲ್
author img

By

Published : Apr 30, 2020, 6:41 PM IST

ನವದೆಹಲಿ: ಕೊರೊನಾ ಸೋಂಕಿತರ ಚೇತರಿಕೆ ಪ್ರಮಾಣವು ಸದ್ಯ 25.19% ರಷ್ಟಿದ್ದು, 14 ದಿನಗಳ ಹಿಂದೆ ಇದು 13.06% ಆಗಿತ್ತು ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ​ ಅಗರ್ವಾಲ್ ತಿಳಿಸಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ದೇಶದಲ್ಲಿ ಕೊರೊನಾ ಸೋಂಕಿತರ ಸಾವಿನ ಪ್ರಮಾಣ 3.2%ದಷ್ಟಿದೆ. ಈವರೆಗೆ ಸೋಂಕಿನಿಂದ ಸಂಭವಿದ ಸಾವುಗಳಲ್ಲಿ 78% ರೋಗಿಗಳಲ್ಲಿ ಕೊಮೊರ್ಬಿಡಿಟೀಸ್ (ಇತರ ರೋಗಗಳೂ) ಕಂಡುಬಂದಿದೆ. 11 ದಿನಗಳಿಗೆ ಒಮ್ಮೆಯಂತೆ ದೇಶದಲ್ಲಿ ಕೊರೊನಾ ಪ್ರಕರಣ ದ್ವಿಗುಣಗೊಳ್ಳುತ್ತಿವೆ ಎಂದು ಅಗರ್ವಾಲ್​ ತಿಳಿಸಿದ್ದಾರೆ.

ಪರೀಕ್ಷೆ ಮತ್ತು ಚಿಕಿತ್ಸೆಯ ಪ್ರೋಟೋಕಾಲ್‌ಗೆ ಸಂಬಂಧಿಸಿದಂತೆ, ನಾವು ಆರ್‌ಟಿಪಿ-ಸಿಆರ್ ಪರೀಕ್ಷೆಯನ್ನು ಮಾತ್ರ ಬಳಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

ಇನ್ನು ಹೈದರಾಬಾದ್‌ಗೆ ಭೇಟಿ ನೀಡಿರುವ ಕೇಂದ್ರ ತಂಡವು, ತೆಲಂಗಾಣ ರಾಜ್ಯದಲ್ಲಿ ಪಿಪಿಇ ಹಾಗೂ ಪರೀಕ್ಷಾ ಕಿಟ್​ಗಳು ಸಮರ್ಪಕವಾಗಿದೆ ಎಂದು ಕಂಡುಹಿಡಿದಿದೆ ಎಂದು ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಪುಣ್ಯ ಸಲೀಲಾ ಶ್ರೀವಾಸ್ತವ ತಿಳಿಸಿದ್ದಾರೆ.

ಗೃಹ ಸಚಿವಾಲಯ ನಿಗದಿಪಡಿಸಿದ ಮಾರ್ಗಸೂಚಿ ಮತ್ತು ರಾಜ್ಯಗಳು ಅಭಿವೃದ್ಧಿಪಡಿಸಿದ ಪ್ರೋಟೋಕಾಲ್‌ಗಳ ಪ್ರಕಾರ, ಬೇರೆ ರಾಜ್ಯಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಜನರ ಅಂತರ್​ರಾಜ್ಯ ಸಂಚಾರಕ್ಕೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲು ಸರ್ಕಾರವು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶ ಹೊರಡಿಸಿದೆ ಎಂದು ಪುಣ್ಯ ಸಲೀಲಾ ತಿಳಿಸಿದ್ದಾರೆ.

ನವದೆಹಲಿ: ಕೊರೊನಾ ಸೋಂಕಿತರ ಚೇತರಿಕೆ ಪ್ರಮಾಣವು ಸದ್ಯ 25.19% ರಷ್ಟಿದ್ದು, 14 ದಿನಗಳ ಹಿಂದೆ ಇದು 13.06% ಆಗಿತ್ತು ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ​ ಅಗರ್ವಾಲ್ ತಿಳಿಸಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ದೇಶದಲ್ಲಿ ಕೊರೊನಾ ಸೋಂಕಿತರ ಸಾವಿನ ಪ್ರಮಾಣ 3.2%ದಷ್ಟಿದೆ. ಈವರೆಗೆ ಸೋಂಕಿನಿಂದ ಸಂಭವಿದ ಸಾವುಗಳಲ್ಲಿ 78% ರೋಗಿಗಳಲ್ಲಿ ಕೊಮೊರ್ಬಿಡಿಟೀಸ್ (ಇತರ ರೋಗಗಳೂ) ಕಂಡುಬಂದಿದೆ. 11 ದಿನಗಳಿಗೆ ಒಮ್ಮೆಯಂತೆ ದೇಶದಲ್ಲಿ ಕೊರೊನಾ ಪ್ರಕರಣ ದ್ವಿಗುಣಗೊಳ್ಳುತ್ತಿವೆ ಎಂದು ಅಗರ್ವಾಲ್​ ತಿಳಿಸಿದ್ದಾರೆ.

ಪರೀಕ್ಷೆ ಮತ್ತು ಚಿಕಿತ್ಸೆಯ ಪ್ರೋಟೋಕಾಲ್‌ಗೆ ಸಂಬಂಧಿಸಿದಂತೆ, ನಾವು ಆರ್‌ಟಿಪಿ-ಸಿಆರ್ ಪರೀಕ್ಷೆಯನ್ನು ಮಾತ್ರ ಬಳಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

ಇನ್ನು ಹೈದರಾಬಾದ್‌ಗೆ ಭೇಟಿ ನೀಡಿರುವ ಕೇಂದ್ರ ತಂಡವು, ತೆಲಂಗಾಣ ರಾಜ್ಯದಲ್ಲಿ ಪಿಪಿಇ ಹಾಗೂ ಪರೀಕ್ಷಾ ಕಿಟ್​ಗಳು ಸಮರ್ಪಕವಾಗಿದೆ ಎಂದು ಕಂಡುಹಿಡಿದಿದೆ ಎಂದು ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಪುಣ್ಯ ಸಲೀಲಾ ಶ್ರೀವಾಸ್ತವ ತಿಳಿಸಿದ್ದಾರೆ.

ಗೃಹ ಸಚಿವಾಲಯ ನಿಗದಿಪಡಿಸಿದ ಮಾರ್ಗಸೂಚಿ ಮತ್ತು ರಾಜ್ಯಗಳು ಅಭಿವೃದ್ಧಿಪಡಿಸಿದ ಪ್ರೋಟೋಕಾಲ್‌ಗಳ ಪ್ರಕಾರ, ಬೇರೆ ರಾಜ್ಯಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಜನರ ಅಂತರ್​ರಾಜ್ಯ ಸಂಚಾರಕ್ಕೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲು ಸರ್ಕಾರವು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶ ಹೊರಡಿಸಿದೆ ಎಂದು ಪುಣ್ಯ ಸಲೀಲಾ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.