ETV Bharat / bharat

ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಓಲಿಯೊಂದಿಗೆ ರಾ ಮುಖ್ಯಸ್ಥರ ಮಾತುಕತೆ

author img

By

Published : Oct 22, 2020, 5:14 PM IST

ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್​ನ ಮುಖ್ಯಸ್ಥ ನೇಪಾಳದ ಪ್ರಧಾನಮಂತ್ರಿ ಕೆ.ಪಿ.ಶರ್ಮಾ ಓಲಿ ಅವರೊಂದಿಗೆ ಉಭಯ ರಾಷ್ಟ್ರಗಳ ಸಂಬಂಧ ಸುಧಾರಣೆ ಬಗ್ಗೆ ಸಭೆ ನಡೆಸಿದ್ದಾರೆ.

Nepal PM
ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಓಲಿ

ಕಠ್ಮಂಡು (ನೇಪಾಳ): ಭಾರತದ ಗುಪ್ತಚರ ಸಂಸ್ಥೆ ರಿಸರ್ಚ್ ಅಂಡ್​​ ಅನಾಲಿಸಿಸ್ ವಿಂಗ್ (RAW)ನ ಮುಖ್ಯಸ್ಥ ಶಮಂತ್ ಕುಮಾರ್ ಗೋಯೆಲ್ ಅಕ್ಟೋಬರ್ 14​​​ರ ಬುಧವಾರ ಸಂಜೆ ತಮ್ಮ ಜೊತೆ ಸಭೆ ನಡೆಸಿದ್ದಾರೆ ಎಂದು ನೇಪಾಳದ ಪ್ರಧಾನಮಂತ್ರಿ ಕೆ.ಪಿ.ಶರ್ಮಾ ಓಲಿ ಸ್ಪಷ್ಟನೆ ನೀಡಿದ್ದಾರೆ.

ಕೆಲವು ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿದ್ದರೂ, ನೇಪಾಳ ಪ್ರಧಾನಮಂತ್ರಿ ಕಚೇರಿ ಈ ವಿಚಾರವನ್ನು ತಳ್ಳಿ ಹಾಕಿದ್ದು, ರಾ ಸಂಸ್ಥೆ ಮುಖ್ಯಸ್ಥನೊಂದಿಗೆ ಸಭೆ ನಡೆಸಿರುವುದಾಗಿ ಒಪ್ಪಿಕೊಂಡಿದೆ. ಪ್ರಧಾನಿ ಕಚೇರಿ ಮಾತ್ರವಲ್ಲದೇ ಮಾಜಿ ಪ್ರಧಾನಿ ಪುಷ್ಪಕಮಲ್ ದಹಾಲ್ ಹಾಗೂ ಮಾಜಿ ಉಪ ಪ್ರಧಾನಿಯಾದ ಮಾಧವ್ ಕಮಾರ್ ನೇಪಾಳ್ ಕೂಡಾ ಈ ವಿಚಾರವನ್ನು ತಿರಸ್ಕರಿಸಿದ್ದರು.

ಬುಧವಾರ ರಾ ಮುಖ್ಯಸ್ಥ ಕಠ್ಮಂಡುವಿಗೆ ಭೇಟಿ ನೀಡಿದ್ದರು. ಈ ವಿಚಾರವನ್ನು ಗುಪ್ತವಾಗಿ ಇಡಲಾಗಿತ್ತು. ಈಗ ವಿಚಾರ ಬಹಿರಂಗವಾಗಿದ್ದು, ಎರಡೂ ದೇಶಗಳ ನಡುವಿನ ಪರಿಸ್ಥಿತಿಯನ್ನು ಸುಧಾರಿಸುವ ಸಲುವಾಗಿ ಚರ್ಚೆ ನಡೆಸಲಾಗಿದೆ ಎಂದು ಓಲಿ ಮಾಹಿತಿ ಬಹಿರಂಗಪಡಿಸಿದ್ದಾರೆ.

ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ್ ಈಗ ಅಧಿಕಾರದಲ್ಲಿದ್ದು, ಇದರಲ್ಲಿ ಎರಡು ಗುಂಪುಗಳಾಗಿದ್ದು, ಓಲಿ ಮತ್ತು ಪಕ್ಷದ ಹಿರಿಯ ನಾಯಕರ ಮಧ್ಯೆ ವೈಮನಸ್ಯವಿದೆ. ಇತ್ತೀಚಿನ ದಿನಗಳಲ್ಲಿ ಅದು ಹೆಚ್ಚಾಗಿದೆ.

ಈ ಹಿನ್ನೆಲೆಯಲ್ಲಿ ವಿವಾದ ತಾರಕಕ್ಕೆ ಏರುವ ಮುನ್ನವೇ ಪ್ರಧಾನಿ ಓಲಿ ಅವರ ಮಾಧ್ಯಮ ಸಲಗಹೆಗಾರ ಸೂರ್ಯ ಥಾಪಾ ಬಲುವಾಟರ್​ನಲ್ಲಿ ಭಾರತದ ರಾ ಮುಖ್ಯಸ್ಥ ಹಾಗೂ ಪ್ರಧಾನಿ ಕೆ.ಪಿ.ಓಲಿ ಶರ್ಮಾ ಸಭೆ ನಡೆಸಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಎರಡು ದಿನಗಳ ಭೇಟಿ ಬಳಿಕ ಗೋಯೆಲ್ ವಾಪಸ್​​ ಆಗಿದ್ದು, ಗುರುವಾರ ಬೆಳಗ್ಗೆ ತಮ್ಮ ನಿವಾಸಕ್ಕೆ ತೆರಳಿದ್ದಾರೆ. ಇನ್ನು ನವೆಂಬರ್ 3ಕ್ಕೆ ಭಾರತೀಯ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಾಣೆ ಮೂರು ದಿನಗಳ ನೇಪಾಳ ಭೇಟಿ ಮಾಡಲಿದ್ದಾರೆ.

ಕಠ್ಮಂಡು (ನೇಪಾಳ): ಭಾರತದ ಗುಪ್ತಚರ ಸಂಸ್ಥೆ ರಿಸರ್ಚ್ ಅಂಡ್​​ ಅನಾಲಿಸಿಸ್ ವಿಂಗ್ (RAW)ನ ಮುಖ್ಯಸ್ಥ ಶಮಂತ್ ಕುಮಾರ್ ಗೋಯೆಲ್ ಅಕ್ಟೋಬರ್ 14​​​ರ ಬುಧವಾರ ಸಂಜೆ ತಮ್ಮ ಜೊತೆ ಸಭೆ ನಡೆಸಿದ್ದಾರೆ ಎಂದು ನೇಪಾಳದ ಪ್ರಧಾನಮಂತ್ರಿ ಕೆ.ಪಿ.ಶರ್ಮಾ ಓಲಿ ಸ್ಪಷ್ಟನೆ ನೀಡಿದ್ದಾರೆ.

ಕೆಲವು ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿದ್ದರೂ, ನೇಪಾಳ ಪ್ರಧಾನಮಂತ್ರಿ ಕಚೇರಿ ಈ ವಿಚಾರವನ್ನು ತಳ್ಳಿ ಹಾಕಿದ್ದು, ರಾ ಸಂಸ್ಥೆ ಮುಖ್ಯಸ್ಥನೊಂದಿಗೆ ಸಭೆ ನಡೆಸಿರುವುದಾಗಿ ಒಪ್ಪಿಕೊಂಡಿದೆ. ಪ್ರಧಾನಿ ಕಚೇರಿ ಮಾತ್ರವಲ್ಲದೇ ಮಾಜಿ ಪ್ರಧಾನಿ ಪುಷ್ಪಕಮಲ್ ದಹಾಲ್ ಹಾಗೂ ಮಾಜಿ ಉಪ ಪ್ರಧಾನಿಯಾದ ಮಾಧವ್ ಕಮಾರ್ ನೇಪಾಳ್ ಕೂಡಾ ಈ ವಿಚಾರವನ್ನು ತಿರಸ್ಕರಿಸಿದ್ದರು.

ಬುಧವಾರ ರಾ ಮುಖ್ಯಸ್ಥ ಕಠ್ಮಂಡುವಿಗೆ ಭೇಟಿ ನೀಡಿದ್ದರು. ಈ ವಿಚಾರವನ್ನು ಗುಪ್ತವಾಗಿ ಇಡಲಾಗಿತ್ತು. ಈಗ ವಿಚಾರ ಬಹಿರಂಗವಾಗಿದ್ದು, ಎರಡೂ ದೇಶಗಳ ನಡುವಿನ ಪರಿಸ್ಥಿತಿಯನ್ನು ಸುಧಾರಿಸುವ ಸಲುವಾಗಿ ಚರ್ಚೆ ನಡೆಸಲಾಗಿದೆ ಎಂದು ಓಲಿ ಮಾಹಿತಿ ಬಹಿರಂಗಪಡಿಸಿದ್ದಾರೆ.

ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ್ ಈಗ ಅಧಿಕಾರದಲ್ಲಿದ್ದು, ಇದರಲ್ಲಿ ಎರಡು ಗುಂಪುಗಳಾಗಿದ್ದು, ಓಲಿ ಮತ್ತು ಪಕ್ಷದ ಹಿರಿಯ ನಾಯಕರ ಮಧ್ಯೆ ವೈಮನಸ್ಯವಿದೆ. ಇತ್ತೀಚಿನ ದಿನಗಳಲ್ಲಿ ಅದು ಹೆಚ್ಚಾಗಿದೆ.

ಈ ಹಿನ್ನೆಲೆಯಲ್ಲಿ ವಿವಾದ ತಾರಕಕ್ಕೆ ಏರುವ ಮುನ್ನವೇ ಪ್ರಧಾನಿ ಓಲಿ ಅವರ ಮಾಧ್ಯಮ ಸಲಗಹೆಗಾರ ಸೂರ್ಯ ಥಾಪಾ ಬಲುವಾಟರ್​ನಲ್ಲಿ ಭಾರತದ ರಾ ಮುಖ್ಯಸ್ಥ ಹಾಗೂ ಪ್ರಧಾನಿ ಕೆ.ಪಿ.ಓಲಿ ಶರ್ಮಾ ಸಭೆ ನಡೆಸಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಎರಡು ದಿನಗಳ ಭೇಟಿ ಬಳಿಕ ಗೋಯೆಲ್ ವಾಪಸ್​​ ಆಗಿದ್ದು, ಗುರುವಾರ ಬೆಳಗ್ಗೆ ತಮ್ಮ ನಿವಾಸಕ್ಕೆ ತೆರಳಿದ್ದಾರೆ. ಇನ್ನು ನವೆಂಬರ್ 3ಕ್ಕೆ ಭಾರತೀಯ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಾಣೆ ಮೂರು ದಿನಗಳ ನೇಪಾಳ ಭೇಟಿ ಮಾಡಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.