ETV Bharat / bharat

ಭರತ್‌ಪುರ ವೈದ್ಯಕೀಯ ಕಾಲೇಜಿನ ಎಡವಟ್ಟು: ನೆಗೆಟಿವ್​ ಬಂದರೂ ಪಾಸಿಟಿವ್​ ವರದಿ - ಭರತ್‌ಪುರ ವೈದ್ಯಕೀಯ ಕಾಲೇಜಿನ ನಿರ್ಲಕ್ಷ್ಯ

ಇಬ್ಬರ ಕೋವಿಡ್​-19 ವರದಿ ನೆಗೆಟಿವ್​ ಎಂದು ಬಂದರೂ, ಪಾಸಿಟಿವ್​ ತೋರಿಸಿದೆ ಎಂದು ರಾಜಸ್ಥಾನದ ಪ್ರವಾಸೋದ್ಯಮ ಸಚಿವ ವಿಶ್ವೇಂದ್ರ ಸಿಂಗ್ ಆರೋಪಿಸಿದ್ದಾರೆ.

ಕೋವಿಡ್​-19 ವರದಿ
ಕೋವಿಡ್​-19 ವರದಿ
author img

By

Published : Jun 3, 2020, 5:01 PM IST

ಜೈಪುರ: ರಾಜಸ್ಥಾನದ ಪ್ರವಾಸೋದ್ಯಮ ಸಚಿವ ವಿಶ್ವೇಂದ್ರ ಸಿಂಗ್ ಅವರ ಗನ್​ಮ್ಯಾನ್​ ಮತ್ತು ರಾಜಸ್ಥಾನ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (ಆರ್‌ಟಿಡಿಸಿ) ನೌಕರರ ಕೋವಿಡ್​-19 ವರದಿ ನೆಗೆಟಿವ್​ ಎಂದು ಬಂದಿದ್ದರೂ, ಅದನ್ನು ಪಾಸಿಟಿವ್​ ಎಂದು ತೋರಿಸಲಾಗಿದೆ. ಈ ವರದಿಯಿಂದ ಮಂಗಳವಾರ ಭರತ್‌ಪುರದಲ್ಲಿ ಭೀತಿಯ ವಾತಾವರಣ ಉಂಟಾಗಿತ್ತು.

ಭರತ್‌ಪುರ ವೈದ್ಯಕೀಯ ಕಾಲೇಜಿನ ನಿರ್ಲಕ್ಷ್ಯದ ಬಗ್ಗೆ ಸಚಿವ ವಿಶ್ವೇಂದ್ರ ಸಿಂಗ್​​ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿಷಯವನ್ನು ಟ್ವೀಟ್​ನಲ್ಲಿ ಹಂಚಿಕೊಂಡಿದ್ದು, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್​​​ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಮತ್ತು ರಾಜ್ಯ ಆರೋಗ್ಯ ಸಚಿವ ರಘು ಶರ್ಮಾ ಅವರಿಗೆ ಟ್ಯಾಗ್ ಮಾಡಿದ್ದಾರೆ.

ಭರತ್‌ಪುರದಲ್ಲಿ ಕೊರೊನಾ ಪರೀಕ್ಷಾ ವರದಿಗಳನ್ನು ತೀವ್ರ ನಿರ್ಲಕ್ಷ್ಯದಿಂದ ನೀಡಲಾಗುತ್ತಿದೆ. ಎಸ್​ಎಮ್​ಎಸ್​ ಆಸ್ಪತ್ರೆಯಲ್ಲಿ ನೆಗೆಟಿವ್​ ಎಂದು ಬಂದ ವರದಿಗಳನ್ನು, ಭರತ್​ಪುರ ವೈದ್ಯಕೀಯ ಕಾಲೇಜಿನಲ್ಲಿ ಪರೀಕ್ಷಿಸಿದಾಗ ಪಾಸಿಟಿವ್​ ಎಂದು ಬರುತ್ತಿವೆ. ಇದರಿಂದ ಜಿಲ್ಲಾದ್ಯಂತ ಭೀತಿಯ ವಾತಾವರಣ ಸೃಷ್ಟಿಯಾಗುತ್ತಿದೆ ಎಂದು ಸಿಂಗ್ ಬರೆದಿದ್ದಾರೆ.

"ನನ್ನ ಭದ್ರತಾ ಸಿಬ್ಬಂದಿ ಮತ್ತು ಆರ್‌ಟಿಡಿಸಿ ಸಿಬ್ಬಂದಿಗೆ ಕೊರೊನಾ ಪಾಸಿಟಿವ್​ ಇದೆ ಎಂದು ವರದಿ ನೀಡಲಾಗಿತ್ತು. ಮತ್ತೊಮ್ಮೆ ಜೈಪುರದ ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ವರದಿಯಲ್ಲಿ ನೆಗೆಟಿವ್​ ಎಂದು ಬಂದಿದೆ. ನಾನು ಈ ವಿಷಯವನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ಈ ನಿರ್ಲಕ್ಷ್ಯವು ಬಹಿರಂಗವಾಯಿತು" ಎಂದು ಅವರು ತಮ್ಮ ಎರಡನೇ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಜೈಪುರ: ರಾಜಸ್ಥಾನದ ಪ್ರವಾಸೋದ್ಯಮ ಸಚಿವ ವಿಶ್ವೇಂದ್ರ ಸಿಂಗ್ ಅವರ ಗನ್​ಮ್ಯಾನ್​ ಮತ್ತು ರಾಜಸ್ಥಾನ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (ಆರ್‌ಟಿಡಿಸಿ) ನೌಕರರ ಕೋವಿಡ್​-19 ವರದಿ ನೆಗೆಟಿವ್​ ಎಂದು ಬಂದಿದ್ದರೂ, ಅದನ್ನು ಪಾಸಿಟಿವ್​ ಎಂದು ತೋರಿಸಲಾಗಿದೆ. ಈ ವರದಿಯಿಂದ ಮಂಗಳವಾರ ಭರತ್‌ಪುರದಲ್ಲಿ ಭೀತಿಯ ವಾತಾವರಣ ಉಂಟಾಗಿತ್ತು.

ಭರತ್‌ಪುರ ವೈದ್ಯಕೀಯ ಕಾಲೇಜಿನ ನಿರ್ಲಕ್ಷ್ಯದ ಬಗ್ಗೆ ಸಚಿವ ವಿಶ್ವೇಂದ್ರ ಸಿಂಗ್​​ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿಷಯವನ್ನು ಟ್ವೀಟ್​ನಲ್ಲಿ ಹಂಚಿಕೊಂಡಿದ್ದು, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್​​​ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಮತ್ತು ರಾಜ್ಯ ಆರೋಗ್ಯ ಸಚಿವ ರಘು ಶರ್ಮಾ ಅವರಿಗೆ ಟ್ಯಾಗ್ ಮಾಡಿದ್ದಾರೆ.

ಭರತ್‌ಪುರದಲ್ಲಿ ಕೊರೊನಾ ಪರೀಕ್ಷಾ ವರದಿಗಳನ್ನು ತೀವ್ರ ನಿರ್ಲಕ್ಷ್ಯದಿಂದ ನೀಡಲಾಗುತ್ತಿದೆ. ಎಸ್​ಎಮ್​ಎಸ್​ ಆಸ್ಪತ್ರೆಯಲ್ಲಿ ನೆಗೆಟಿವ್​ ಎಂದು ಬಂದ ವರದಿಗಳನ್ನು, ಭರತ್​ಪುರ ವೈದ್ಯಕೀಯ ಕಾಲೇಜಿನಲ್ಲಿ ಪರೀಕ್ಷಿಸಿದಾಗ ಪಾಸಿಟಿವ್​ ಎಂದು ಬರುತ್ತಿವೆ. ಇದರಿಂದ ಜಿಲ್ಲಾದ್ಯಂತ ಭೀತಿಯ ವಾತಾವರಣ ಸೃಷ್ಟಿಯಾಗುತ್ತಿದೆ ಎಂದು ಸಿಂಗ್ ಬರೆದಿದ್ದಾರೆ.

"ನನ್ನ ಭದ್ರತಾ ಸಿಬ್ಬಂದಿ ಮತ್ತು ಆರ್‌ಟಿಡಿಸಿ ಸಿಬ್ಬಂದಿಗೆ ಕೊರೊನಾ ಪಾಸಿಟಿವ್​ ಇದೆ ಎಂದು ವರದಿ ನೀಡಲಾಗಿತ್ತು. ಮತ್ತೊಮ್ಮೆ ಜೈಪುರದ ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ವರದಿಯಲ್ಲಿ ನೆಗೆಟಿವ್​ ಎಂದು ಬಂದಿದೆ. ನಾನು ಈ ವಿಷಯವನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ಈ ನಿರ್ಲಕ್ಷ್ಯವು ಬಹಿರಂಗವಾಯಿತು" ಎಂದು ಅವರು ತಮ್ಮ ಎರಡನೇ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.