ETV Bharat / bharat

ಭಾರತದ ಇತಿಹಾಸದಲ್ಲಿ ಸುವರ್ಣಯುಗ ಆರಂಭ: ನರೇಂದ್ರ ಮೋದಿ - ಪ್ರಧಾನಿ ನರೇಂದ್ರ ಮೋದಿ ಮಾತು

ವಿವಾದಿತ ರಾಮಜನ್ಮಭೂಮಿ ಪ್ರಕರಣದ ತೀರ್ಪು ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ
author img

By

Published : Nov 9, 2019, 6:50 PM IST

ನವದೆಹಲಿ: ಸುಪ್ರೀಂಕೋರ್ಟ್​ ನೀಡಿರುವ ಐತಿಹಾಸಿಕ ತೀರ್ಪು ನಮ್ಮ ಮುಂದಿನ ಪೀಳಿಗೆಗಳ ಮೇಲೆ ಪ್ರಭಾವ ಬೀರಲಿದೆ. ನಾವೆಲ್ಲರೂ ಭವಿಷ್ಯದ ಭಾರತಕ್ಕಾಗಿ ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ಪ್ರಧಾನಿ ಮೋದಿ ಕರೆ ನೀಡಿದರು

ಭವಿಷ್ಯದ ಭಾರತಕ್ಕಾಗಿ ದೇಶದ ನಾಗರಿಕರು ಒಟ್ಟಾಗಿ ಅಭಿವೃದ್ಧಿ ಕೆಲಸ ಮಾಡಬೇಕು. ಭಾರತೀಯ ಪ್ರಜಾಪ್ರಭುತ್ವ ಎಷ್ಟೊಂದು ಪ್ರಬಲವಾಗಿದೆ ಅನ್ನೋದು ಇವತ್ತಿನ ತೀರ್ಪಿನಿಂದ ಗೊತ್ತಾಗಿದ್ದು, ದೇಶದ ಇತಿಹಾಸದಲ್ಲಿ ಇಂದಿನಿಂದ ಸುವರ್ಣಯುಗ ಆರಂಭವಾಗಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.
ನವೆಂಬರ್​ 9ರಂದು ಜರ್ಮನಿಯ ಬರ್ಲಿನ್ ಗೋಡೆಯನ್ನು ಕೆಡವಲಾಗಿತ್ತು. ಅದೇ ದಿನ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕಾಗಿ ಸುಪ್ರೀಂಕೋರ್ಟ್​ ಮಹತ್ವದ ಆದೇಶ ನೀಡಿದೆ. ದೇಶದ 125 ಕೋಟಿ ಜನರು ಈ ತೀರ್ಪಿಗೆ ಸಾಕ್ಷಿಯಾಗಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ್ರು.

ಪ್ರಧಾನಿ ನರೇಂದ್ರ ಮೋದಿ ಭಾಷಣ

ನವೆಂಬರ್​ 9ರ ಈ ದಿನ ದೇಶದ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದುಕೊಳ್ಳಲಿದ್ದು ಎಲ್ಲ ಧರ್ಮ, ಜಾತಿಯವರು ಸುಪ್ರೀಂ ತೀರ್ಪು ಸ್ವಾಗತಿಸಿದ್ದಾರೆ.

ಅಯೋಧ್ಯೆ ವಿವಾದದ ಬಗ್ಗೆ ಸುರ್ಪೀಂಕೋರ್ಟ್‌ ಕೊಟ್ಟಿರುವ ತೀರ್ಪನ್ನು ದೇಶದ ಎಲ್ಲ ಸಮುದಾಯಗಳು ಸರ್ವಾನುಮತದಿಂದ ಸ್ವಾಗತಿಸಿವೆ. ಋಣಾತ್ಮಕ ಅಂಶಗಳಿಗೆ ಇಲ್ಲಿ ಯಾವುದೇ ರೀತಿಯ ಆಸ್ಪದವಿಲ್ಲ. ರಾಷ್ಟ್ರದ ಐಕ್ಯತೆ ಮತ್ತು ಶಾಂತಿಗಾಗಿ ನಾವು ಆದ್ಯತೆ ನೀಡಬೇಕು ಎಂದು ಪ್ರಧಾನಿ ತಿಳಿಸಿದರು.

ನವದೆಹಲಿ: ಸುಪ್ರೀಂಕೋರ್ಟ್​ ನೀಡಿರುವ ಐತಿಹಾಸಿಕ ತೀರ್ಪು ನಮ್ಮ ಮುಂದಿನ ಪೀಳಿಗೆಗಳ ಮೇಲೆ ಪ್ರಭಾವ ಬೀರಲಿದೆ. ನಾವೆಲ್ಲರೂ ಭವಿಷ್ಯದ ಭಾರತಕ್ಕಾಗಿ ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ಪ್ರಧಾನಿ ಮೋದಿ ಕರೆ ನೀಡಿದರು

ಭವಿಷ್ಯದ ಭಾರತಕ್ಕಾಗಿ ದೇಶದ ನಾಗರಿಕರು ಒಟ್ಟಾಗಿ ಅಭಿವೃದ್ಧಿ ಕೆಲಸ ಮಾಡಬೇಕು. ಭಾರತೀಯ ಪ್ರಜಾಪ್ರಭುತ್ವ ಎಷ್ಟೊಂದು ಪ್ರಬಲವಾಗಿದೆ ಅನ್ನೋದು ಇವತ್ತಿನ ತೀರ್ಪಿನಿಂದ ಗೊತ್ತಾಗಿದ್ದು, ದೇಶದ ಇತಿಹಾಸದಲ್ಲಿ ಇಂದಿನಿಂದ ಸುವರ್ಣಯುಗ ಆರಂಭವಾಗಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.
ನವೆಂಬರ್​ 9ರಂದು ಜರ್ಮನಿಯ ಬರ್ಲಿನ್ ಗೋಡೆಯನ್ನು ಕೆಡವಲಾಗಿತ್ತು. ಅದೇ ದಿನ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕಾಗಿ ಸುಪ್ರೀಂಕೋರ್ಟ್​ ಮಹತ್ವದ ಆದೇಶ ನೀಡಿದೆ. ದೇಶದ 125 ಕೋಟಿ ಜನರು ಈ ತೀರ್ಪಿಗೆ ಸಾಕ್ಷಿಯಾಗಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ್ರು.

ಪ್ರಧಾನಿ ನರೇಂದ್ರ ಮೋದಿ ಭಾಷಣ

ನವೆಂಬರ್​ 9ರ ಈ ದಿನ ದೇಶದ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದುಕೊಳ್ಳಲಿದ್ದು ಎಲ್ಲ ಧರ್ಮ, ಜಾತಿಯವರು ಸುಪ್ರೀಂ ತೀರ್ಪು ಸ್ವಾಗತಿಸಿದ್ದಾರೆ.

ಅಯೋಧ್ಯೆ ವಿವಾದದ ಬಗ್ಗೆ ಸುರ್ಪೀಂಕೋರ್ಟ್‌ ಕೊಟ್ಟಿರುವ ತೀರ್ಪನ್ನು ದೇಶದ ಎಲ್ಲ ಸಮುದಾಯಗಳು ಸರ್ವಾನುಮತದಿಂದ ಸ್ವಾಗತಿಸಿವೆ. ಋಣಾತ್ಮಕ ಅಂಶಗಳಿಗೆ ಇಲ್ಲಿ ಯಾವುದೇ ರೀತಿಯ ಆಸ್ಪದವಿಲ್ಲ. ರಾಷ್ಟ್ರದ ಐಕ್ಯತೆ ಮತ್ತು ಶಾಂತಿಗಾಗಿ ನಾವು ಆದ್ಯತೆ ನೀಡಬೇಕು ಎಂದು ಪ್ರಧಾನಿ ತಿಳಿಸಿದರು.

Intro:Body:

ನವದೆಹಲಿ: ವಿವಾದಿತ ಅಯೋಧ್ಯೆ ಭೂ ಪ್ರಕರಣದ ತೀರ್ಪು ಇಂದು ಸುಪ್ರೀಂಕೋರ್ಟ್​​ನಿಂದ ಹೊರಬಿದ್ದಿದ್ದು, ಇದೇ ವಿಷಯವಾಗಿ ಪ್ರಧಾನಿ ನರೇಂಧ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದರು. 



ಸುಪ್ರೀಂಕೋರ್ಟ್​ ನೀಡಿರುವ ಈ ಐತಿಹಾಸಿಕ ತೀರ್ಪು ಮುಂದಿನ ಪೀಳಿಗೆಗಳ ಮೇಲೆ ಪ್ರಭಾವ ಬೀರಲಿದೆ ಎಂದು ತಿಳಿಸಿರುವ ಅವರು, ನಾವೆಲ್ಲರೂ ಭವಿಷ್ಯದ ಭಾರತಕ್ಕಾಗಿ ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ಕರೆ ನೀಡಿದರು. ನವೆಂಬರ್​ 9ರಂದು ಬರ್ಲಿನ್ ಗೋಡೆಯನ್ನ ಕೆಡವಲಾಗಿತ್ತು. ಅದೇ ಮಂದಿರ ನಿರ್ಮಾಣಕ್ಕಾಗಿ ಸುಪ್ರೀಂಕೋರ್ಟ್​ ಆದೇಶ ನೀಡಿದೆ. ದೇಶದ 125 ಕೋಟಿ ಜನರು ಈ ತೀರ್ಪಿಗೆ ಸಾಕ್ಷಿಯಾಗಿದೆ. 



ನವೆಂಬರ್​ 9 ದೇಶದ ಐತಿಹಾದಲ್ಲಿ ಅಚ್ಚಳಿಯದೇ ಉಳಿದುಕೊಳ್ಳಲಿದ್ದು, ಎಲ್ಲ ಧರ್ಮ, ಜಾತಿಯವರು ಇದನ್ನ ಸ್ವಾಗತಿಸಿದ್ದಾರೆ. ಪರಸ್ಪರ ಸಹಕಾರದ ಮೂಲಕ ಸುಭದ್ರ ಭಾರತದ ಭವಿಷ್ಯ ನಿರ್ಧಾರ ಮಾಡಬಹುದಾಗಿದ್ದು. ಭವಿಷ್ಯದ ಭಾರತಕ್ಕಾಗಿ ಒಟ್ಟಾಗಿ ಅಭಿವೃದ್ಧಿ ಕೆಲಸ ಮಾಡಬೇಕಿದೆ ಎಂದರು. ಭಾರತೀಯ ಪ್ರಜಾಪ್ರಭುತ್ವ ಎಷ್ಟೊಂದು ಪ್ರಬಲವಾಗಿದೆ ಎಂಬುದು ಈ ತೀರ್ಪಿನಿಂದ ಗೊತ್ತಾಗಿದ್ದು, ಭಾರತದ ಇತಿಹಾಸದಲ್ಲಿ ಇಂದಿನಿಂದ ಸುವರ್ಣ ಯುಗ ಆರಂಭವಾಗಿದೆ. 



ಸುಪ್ರೀಂಕೋರ್ಟ್​ನಿಂದ ಅಯೋಧ್ಯೆ ತೀರ್ಪಿನ ಬಗ್ಗೆ ಸರ್ವಾನುಮತದ ತೀರ್ಪನ್ನು ಎಲ್ಲ ಸಮುದಾಯಗಳು ಸ್ವಾಗತಿಸಿವೆ. ಋಣಾತ್ಮಕ ಅಂಶಗಳಿಗೆ ಇಲ್ಲಿ ಯಾವುದೇ ರೀತಿಯ ಆಸ್ಪಂದವಿಲ್ಲ. ಐಕ್ಯತೆ ಮತ್ತು ಶಾಂತಿಗಾಗಿ ಈ ತೀರ್ಪು ಮಹತ್ವ ಪಡೆದುಕೊಂಡಿದೆ ಎಂದು ತಿಳಿಸಿದರು. 


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.