ನವದೆಹಲಿ: ಭಾರಿ ಚರ್ಚೆ ಹುಟ್ಟುಹಾಕಿದ್ದ ತ್ರಿವಳಿ ತಲಾಖ್ ಸಂಬಂಧಿತ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಂಕಿತ ಹಾಕಿದ್ದು, ಇನ್ನು ತಲಾಖೆ ಹೇಳಿದವರು ಜೈಲು ಸೇರಿದು ನಿಶ್ಚಿತವಾಗಿದೆ.
![President Ram Nath Kovind](https://etvbharatimages.akamaized.net/etvbharat/prod-images/kovind_8uf9yl9_0108newsroom_1564641145_426.jpg)
ಲೋಕಸಭೆ, ಆ ಬಳಿಕ ರಾಜ್ಯಸಭೆಯಲ್ಲೂ ಅಂಗೀಕಾರಗೊಂಡ ಮುಸ್ಲಿಂ ಮಹಿಳೆಯರ (ವಿವಾಹ ಹಕ್ಕುಗಳ ರಕ್ಷಣೆ) ವಿಧೇಯಕ 2019ಕ್ಕೆ ರಾಷ್ಟ್ರಪತಿಗಳು ಮುದ್ರೆ ಒತ್ತಿದ್ದಾರೆ. ಇದರಿಂದ ತಲಾಖ್ ಹೇಳುವ ಮೂಲಕ ವಿವಾಹ ಸಂಬಂಧ ಮುರಿದುಕೊಳ್ಳುವುದು ಕಾನೂನು ರೀತಿಯ ಅಪರಾಧವಾಗಿದ್ದು, ಆ ವ್ಯಕ್ತಿಗೆ 3 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಬಹುದಾಗಿದೆ.