ETV Bharat / bharat

ಲೋಕಸಭೆಯಲ್ಲಿ ಬಿಜೆಪಿ ಸಂಸದನ ಕವಿತೆಯ ಸದ್ದು... ಶಹಬ್ಬಾಸ್​ಗಿರಿ ನೀಡಿದ ವಿಪಕ್ಷಗಳು

ಬಿಜೆಪಿ ಸಂಸದ ಹಂಸರಾಜ್ ಹಂಸ ಇಂದು ಲೋಕಸಭೆಯಲ್ಲಿ ಜೀವನದ ಕುರಿತು ಕವಿತೆ ಓದುವುದರ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

author img

By

Published : Jul 3, 2019, 9:30 PM IST

Updated : Jul 3, 2019, 9:52 PM IST

ಲೋಕಸಭೆಯಲ್ಲಿಂದು ಹಂಸರಾಜ್ ಹಂಸರ ಕವಿತೆಯ ಸದ್ದು

ನವದೆಹಲಿ: ಬಿಜೆಪಿ ಸಂಸದ ಹಂಸರಾಜ್ ಹಂಸ ಲೋಕಸಭೆಯಲ್ಲಿ ಕವಿತೆ ಓದುವುದರ ಮೂಲಕ ವಿಪಕ್ಷಗಳ ಗಮನ ಸೆಳೆದಿದ್ದಾರೆ.

ಹಂಸರಾಜ್​ ಹಂಸ 2009ರಲ್ಲಿ ಲೂಧಿಯಾನದಿಂದ ಶಿರೋಮಣಿ ಅಕಾಲಿ ದಳದ ಮೂಲಕ ಚುನಾವಣೆಗೆ ಸ್ಪರ್ಧಿಸಿ ಸೋಲು ಕಂಡಿದ್ದರು. ಈ ಸಲದ ಲೋಕಸಭಾ ಚುನಾವಣೆಯಲ್ಲಿ ದೆಹಲಿ ವಾಯುವ್ಯ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದು ಗೆಲುವು ದಾಖಲು ಮಾಡಿದ್ದಾರೆ. ತಮ್ಮ ಕವಿತೆಯಲ್ಲಿ ಪ್ರಧಾನಿ ಮೋದಿ ಹಾಗೂ ಅಮಿತ್​ ಶಾ ಅವರನ್ನ ಹೊಗಳಿದ್ದು ವಿಶೇಷವಾಗಿತ್ತು.

ಪಾಕಿಸ್ತಾನದ ಖ್ಯಾತ ಕವಿ ರಾಜಿ ಅಖ್ತರ್​ ಅವರ ಪದ್ಯದ ಸಾಲುಗಳನ್ನ ಹೇಳುತ್ತಿದ್ದಂತೆ ಸದನದಲ್ಲಿ ಕುಳಿತುಕೊಂಡಿದ್ದ ರಾಹುಲ್​ ಗಾಂಧಿ, ಸೋನಿಯಾ ಗಾಂಧಿ ಸೇರಿದಂತೆ ಅನೇಕರು ಮೇಜು ಕುಟ್ಟಿ ಶಹಬ್ಬಾಸ್​ಗಿರಿ ನೀಡಿದರು.


ನವದೆಹಲಿ: ಬಿಜೆಪಿ ಸಂಸದ ಹಂಸರಾಜ್ ಹಂಸ ಲೋಕಸಭೆಯಲ್ಲಿ ಕವಿತೆ ಓದುವುದರ ಮೂಲಕ ವಿಪಕ್ಷಗಳ ಗಮನ ಸೆಳೆದಿದ್ದಾರೆ.

ಹಂಸರಾಜ್​ ಹಂಸ 2009ರಲ್ಲಿ ಲೂಧಿಯಾನದಿಂದ ಶಿರೋಮಣಿ ಅಕಾಲಿ ದಳದ ಮೂಲಕ ಚುನಾವಣೆಗೆ ಸ್ಪರ್ಧಿಸಿ ಸೋಲು ಕಂಡಿದ್ದರು. ಈ ಸಲದ ಲೋಕಸಭಾ ಚುನಾವಣೆಯಲ್ಲಿ ದೆಹಲಿ ವಾಯುವ್ಯ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದು ಗೆಲುವು ದಾಖಲು ಮಾಡಿದ್ದಾರೆ. ತಮ್ಮ ಕವಿತೆಯಲ್ಲಿ ಪ್ರಧಾನಿ ಮೋದಿ ಹಾಗೂ ಅಮಿತ್​ ಶಾ ಅವರನ್ನ ಹೊಗಳಿದ್ದು ವಿಶೇಷವಾಗಿತ್ತು.

ಪಾಕಿಸ್ತಾನದ ಖ್ಯಾತ ಕವಿ ರಾಜಿ ಅಖ್ತರ್​ ಅವರ ಪದ್ಯದ ಸಾಲುಗಳನ್ನ ಹೇಳುತ್ತಿದ್ದಂತೆ ಸದನದಲ್ಲಿ ಕುಳಿತುಕೊಂಡಿದ್ದ ರಾಹುಲ್​ ಗಾಂಧಿ, ಸೋನಿಯಾ ಗಾಂಧಿ ಸೇರಿದಂತೆ ಅನೇಕರು ಮೇಜು ಕುಟ್ಟಿ ಶಹಬ್ಬಾಸ್​ಗಿರಿ ನೀಡಿದರು.


Intro:Body:Conclusion:
Last Updated : Jul 3, 2019, 9:52 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.