ETV Bharat / bharat

ಮಂದಿರ ಕನಸು ನನಸು: ಮೋದಿ ಭೇಟಿಗಾಗಿ 700 ಕಿ.ಮೀ. ಕಾಲ್ನಡಿಗೆ ಆರಂಭಿಸಿದ ವ್ಯಕ್ತಿ

author img

By

Published : Aug 29, 2020, 2:58 PM IST

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕಾರ್ಯ ಈಗಾಗಲೇ ಆರಂಭಗೊಂಡಿದೆ. ಇದರ ಮಧ್ಯೆ ವ್ಯಕ್ತಿಯೊಬ್ಬರು 700 ಕಿ.ಮೀ ಕಾಲ್ನಡಿಗೆ ಮೂಲಕ ಸಾಗಿ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಲು ನಿರ್ಧರಿಸಿದ್ದಾರೆ.

Sanjay Sharma
Sanjay Sharma

ಗ್ವಾಲಿಯರ್​​: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಆಗಸ್ಟ್​​ 5ರಂದು ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೇರವೆೇರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತನ್ನ ಬಹುಕಾಲದ ಕನಸು ನನಸಾಗಿದೆ ಎಂದು ವ್ಯಕ್ತಿಯೊಬ್ಬರು ಸುಮಾರು 700 ಕಿಲೋ ಮೀಟರ್​​ ಕಾಲ್ನಡಿಗೆ ಮೂಲಕ ಮೋದಿ ಭೇಟಿಯಾಗಿ ಧನ್ಯವಾದ ಅರ್ಪಿಸಲು ತೀರ್ಮಾನಿಸಿದ್ದಾರೆ.

ಮಧ್ಯಪ್ರದೇಶದ ರಾಜಗಢದಲ್ಲಿರುವ ಸಂಜಯ್​​ ಶರ್ಮಾ ಈ ಸಂಕಲ್ಪ ಮಾಡಿದ ವ್ಯಕ್ತಿ.

ನಮೋ ಭೇಟಿಗಾಗಿ 700 ಕಿ.ಮೀ. ಕಾಲ್ನಡಿಗೆ ಆರಂಭಿಸಿದ ವ್ಯಕ್ತಿ

ಸಂಜಯ್​​ ಶರ್ಮಾ ಆಗಸ್ಟ್​ 19ರಂದು ತಮ್ಮ ಪ್ರಯಾಣ ಆರಂಭಿಸಿದ್ದಾರೆ. 9 ದಿನಗಳ ಕಾಲ್ನಡಿಗೆಯಲ್ಲಿ 350 ಕಿಲೋ ಮೀಟರ್​ ಕ್ರಮಿಸಿರುವ ಅವರು ಸದ್ಯ ಗ್ವಾಲಿಯಾರ್​ ತಲುಪಿದ್ದು ಅಲ್ಲಿ ಎರಡು ದಿನಗಳ ಕಾಲ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ.

ಇದಾದ ಬಳಿಕ ದೆಹಲಿ ತಲುಪಿ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಲಿದ್ದು ಜಮ್ಮುಕಾಶ್ಮೀರದಲ್ಲಿನ ಆರ್ಟಿಕಲ್​ 370 ರದ್ಧತಿ, ಸ್ವಚ್ಛ ಭಾರತ ಅಭಿಯಾನ, ಆತ್ಮನಿರ್ಭರ​ ಭಾರತ ಯೋಜನೆಗಳಿಗಾಗಿ ಪ್ರಧಾನಿಗೆ ಈ ವೇಳೆ ಅವರು ಅಭಿನಂದನೆ ಸಲ್ಲಿಸಲಿದ್ದಾರೆ.

ಗ್ವಾಲಿಯರ್​​: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಆಗಸ್ಟ್​​ 5ರಂದು ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೇರವೆೇರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತನ್ನ ಬಹುಕಾಲದ ಕನಸು ನನಸಾಗಿದೆ ಎಂದು ವ್ಯಕ್ತಿಯೊಬ್ಬರು ಸುಮಾರು 700 ಕಿಲೋ ಮೀಟರ್​​ ಕಾಲ್ನಡಿಗೆ ಮೂಲಕ ಮೋದಿ ಭೇಟಿಯಾಗಿ ಧನ್ಯವಾದ ಅರ್ಪಿಸಲು ತೀರ್ಮಾನಿಸಿದ್ದಾರೆ.

ಮಧ್ಯಪ್ರದೇಶದ ರಾಜಗಢದಲ್ಲಿರುವ ಸಂಜಯ್​​ ಶರ್ಮಾ ಈ ಸಂಕಲ್ಪ ಮಾಡಿದ ವ್ಯಕ್ತಿ.

ನಮೋ ಭೇಟಿಗಾಗಿ 700 ಕಿ.ಮೀ. ಕಾಲ್ನಡಿಗೆ ಆರಂಭಿಸಿದ ವ್ಯಕ್ತಿ

ಸಂಜಯ್​​ ಶರ್ಮಾ ಆಗಸ್ಟ್​ 19ರಂದು ತಮ್ಮ ಪ್ರಯಾಣ ಆರಂಭಿಸಿದ್ದಾರೆ. 9 ದಿನಗಳ ಕಾಲ್ನಡಿಗೆಯಲ್ಲಿ 350 ಕಿಲೋ ಮೀಟರ್​ ಕ್ರಮಿಸಿರುವ ಅವರು ಸದ್ಯ ಗ್ವಾಲಿಯಾರ್​ ತಲುಪಿದ್ದು ಅಲ್ಲಿ ಎರಡು ದಿನಗಳ ಕಾಲ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ.

ಇದಾದ ಬಳಿಕ ದೆಹಲಿ ತಲುಪಿ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಲಿದ್ದು ಜಮ್ಮುಕಾಶ್ಮೀರದಲ್ಲಿನ ಆರ್ಟಿಕಲ್​ 370 ರದ್ಧತಿ, ಸ್ವಚ್ಛ ಭಾರತ ಅಭಿಯಾನ, ಆತ್ಮನಿರ್ಭರ​ ಭಾರತ ಯೋಜನೆಗಳಿಗಾಗಿ ಪ್ರಧಾನಿಗೆ ಈ ವೇಳೆ ಅವರು ಅಭಿನಂದನೆ ಸಲ್ಲಿಸಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.