ETV Bharat / bharat

ಪಾಲ್ಘರ್, ಬುಲಂದ್‌ಶಹರ್ ಘಟನೆಗಳ ಹೋಲಿಕೆ ಸರಿಯಲ್ಲ: ಬಿಜೆಪಿ - ಬಿಜೆಪಿ ರಾಷ್ಟ್ರೀಯ ವಕ್ತಾರ ವಿಜಯ್ ಸೋಂಕರ್ ಶಾಸ್ತ್ರಿ

ಬುಲಂದ್‌ಶಹರ್ ಮತ್ತು ಪಾಲ್ಘರ್​ನಲ್ಲಿ ನಡೆದ ಹತ್ಯೆಗಳನ್ನುಹೋಲಿಸಬಾರದು. ಎರಡೂ ಪ್ರಕರಣಗಳು ವಿಭಿನ್ನವಾಗಿವೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ವಿಜಯ್ ಶಂಕರ್​ ಶಾಸ್ತ್ರಿ ಹೇಳಿದ್ದಾರೆ.

lynching
lynching
author img

By

Published : Apr 29, 2020, 8:27 AM IST

ನವದೆಹಲಿ: ಪಾಲ್ಘರ್ ಮತ್ತು ಬುಲಂದ್‌ಶಹರ್ ಹತ್ಯೆಗಳು ಸಂಪೂರ್ಣವಾಗಿ ಭಿನ್ನವಾಗಿರುವುದರಿಂದ ಅವುಗಳ ನಡುವಿನ ಹೋಲಿಕೆ ದುರದೃಷ್ಟಕರ ಎಂದು ಬಿಜೆಪಿ ಹೇಳಿದೆ.

ಈ ಕುರತು ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ವಿಜಯ್ ಶಂಕರ್ ಶಾಸ್ತ್ರಿ, "ಇದು ದುರದೃಷ್ಟಕರ, ಆ ಘಟನೆ ಸಂಭವಿಸಬಾರದಿತ್ತು" ಎಂದು ಹೇಳಿದ್ದಾರೆ.

ಬುಲಂದ್‌ಶಹರ್‌ನಲ್ಲಿ, ಕಳ್ಳತನವನ್ನು ದೇವಾಲಯದ ಅರ್ಚಕರು ವಿರೋಧಿಸಿದಾಗ ಅವರ ವಿರುದ್ಧ ಸೇಡು ತೀರಿಸಕೊಳ್ಳಲು ಪೂಜಾರಿಗಳ ಹತ್ಯೆ ಮಾಡಲಾಗಿದೆ. ಅಲ್ಲದೇ, ಇಲ್ಲಿ ಜನರು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ ಪಾಲ್ಘರ್​ನಲ್ಲಿ ಸಾಧುಗಳನ್ನು ಕೊಲ್ಲಲು ಪೊಲೀಸರೇ ಒಪ್ಪಿಗೆ ನೀಡಿದ್ದರು ಎಂದು ಶಾಸ್ತ್ರಿ ಹೇಳಿದ್ದಾರೆ.

ಇವೆರಡನ್ನೂ ಹೋಲಿಸಬಾರದು. ಮಹಾರಾಷ್ಟ್ರ ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ಏಕೆ ಹಸ್ತಾಂತರಿಸುತ್ತಿಲ್ಲ ಎಂದು ವಿಜಯ್ ಶಂಕರ್​ ಶಾಸ್ತ್ರಿ ಪ್ರಶ್ನಿಸಿದರು.

ಮಹಾರಾಷ್ಟ್ರದಲ್ಲಿ ಪಿತೂರಿ ನಡೆಸಿ, ಯೋಜಿತವಾಗಿ ಕೊಲೆ ಮಾಡಲಾಗಿದೆ. ಆದರೆ ಬುಲಂದ್‌ಶಹರ್‌ನಲ್ಲಿ ನಡೆದ ಹತ್ಯೆಯನ್ನು ರಾಜಕೀಯಗೊಳಿಸಬಾರದು ಎಂದರು.

ನವದೆಹಲಿ: ಪಾಲ್ಘರ್ ಮತ್ತು ಬುಲಂದ್‌ಶಹರ್ ಹತ್ಯೆಗಳು ಸಂಪೂರ್ಣವಾಗಿ ಭಿನ್ನವಾಗಿರುವುದರಿಂದ ಅವುಗಳ ನಡುವಿನ ಹೋಲಿಕೆ ದುರದೃಷ್ಟಕರ ಎಂದು ಬಿಜೆಪಿ ಹೇಳಿದೆ.

ಈ ಕುರತು ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ವಿಜಯ್ ಶಂಕರ್ ಶಾಸ್ತ್ರಿ, "ಇದು ದುರದೃಷ್ಟಕರ, ಆ ಘಟನೆ ಸಂಭವಿಸಬಾರದಿತ್ತು" ಎಂದು ಹೇಳಿದ್ದಾರೆ.

ಬುಲಂದ್‌ಶಹರ್‌ನಲ್ಲಿ, ಕಳ್ಳತನವನ್ನು ದೇವಾಲಯದ ಅರ್ಚಕರು ವಿರೋಧಿಸಿದಾಗ ಅವರ ವಿರುದ್ಧ ಸೇಡು ತೀರಿಸಕೊಳ್ಳಲು ಪೂಜಾರಿಗಳ ಹತ್ಯೆ ಮಾಡಲಾಗಿದೆ. ಅಲ್ಲದೇ, ಇಲ್ಲಿ ಜನರು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ ಪಾಲ್ಘರ್​ನಲ್ಲಿ ಸಾಧುಗಳನ್ನು ಕೊಲ್ಲಲು ಪೊಲೀಸರೇ ಒಪ್ಪಿಗೆ ನೀಡಿದ್ದರು ಎಂದು ಶಾಸ್ತ್ರಿ ಹೇಳಿದ್ದಾರೆ.

ಇವೆರಡನ್ನೂ ಹೋಲಿಸಬಾರದು. ಮಹಾರಾಷ್ಟ್ರ ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ಏಕೆ ಹಸ್ತಾಂತರಿಸುತ್ತಿಲ್ಲ ಎಂದು ವಿಜಯ್ ಶಂಕರ್​ ಶಾಸ್ತ್ರಿ ಪ್ರಶ್ನಿಸಿದರು.

ಮಹಾರಾಷ್ಟ್ರದಲ್ಲಿ ಪಿತೂರಿ ನಡೆಸಿ, ಯೋಜಿತವಾಗಿ ಕೊಲೆ ಮಾಡಲಾಗಿದೆ. ಆದರೆ ಬುಲಂದ್‌ಶಹರ್‌ನಲ್ಲಿ ನಡೆದ ಹತ್ಯೆಯನ್ನು ರಾಜಕೀಯಗೊಳಿಸಬಾರದು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.