ETV Bharat / bharat

ಕರ್ತಾಪುರದ ಮುತುವರ್ಜಿ ಹಿಂದೆ ಪಾಕ್​ ಕುತಂತ್ರ: ಉಗ್ರರನ್ನು ಛೂ ಬಿಡಲು ಪ್ಲಾನ್​! - undefined

ಬಿಕ್ಕಟ್ಟು ನಿರ್ವಹಣೆ ಸಂಸ್ಥೆಯ ಕಾರ್ಯನಿರ್ವಾಹಕ ಅಧ್ಯಕ್ಷ ಅಜಯ್ ಸಾಹ್ನಿ ಅವರು ಹೇಳುವಂತೆ, ಕರ್ತಾಪುರ ವಿಚಾರದಲ್ಲಿ ಪಾಕ್​ಗೆ ಸಿಖ್​ರಿಗೆ ಒಳಿತು ಮಾಡುವ ಮನಸ್ಸೇನೂ ಇಲ್ಲ. ಉಗ್ರರನ್ನು ಅಲ್ಲಲ್ಲಿ ನಿಯೋಜಿಸುವ ಕುತಂತ್ರದಿಂದಲೇ ಮುತುವರ್ಜಿ ವಹಿಸುತ್ತಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

Kartarpur Corridor
author img

By

Published : Jul 9, 2019, 7:52 AM IST

ನವದೆಹಲಿ: ಕರ್ತಾಪುರ ಕಾರಿಡಾರ್​ ವಿಚಾರವಾಗಿ ಪಾಕಿಸ್ತಾನ ಮುತುವರ್ಜಿ ವಹಿಸುತ್ತಿರುವುದರ ಹಿಂದೆ ಭಾರಿ ಕುತಂತ್ರ ಅಡಗಿದೆ ಎಂಬ ಆಘಾತಕಾರಿ ವಿಚಾರವನ್ನು ತಜ್ಞರು ಬಯಲು ಮಾಡಿದ್ದಾರೆ.

ಬಿಕ್ಕಟ್ಟು ನಿರ್ವಹಣೆ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಅಜಯ್ ಸಾಹ್ನಿ ಅವರು ಹೇಳುವಂತೆ, ಕರ್ತಾಪುರ ವಿಚಾರದಲ್ಲಿ ಸಿಖ್​ರಿಗೆ ಒಳಿತು ಮಾಡುವ ಮನಸ್ಸೇನೂ ಪಾಕ್​​ಗೆ ಇಲ್ಲ. ಉಗ್ರರನ್ನು ಅಲ್ಲಲ್ಲಿ ನಿಯೋಜಿಸುವ ಕುತಂತ್ರದಿಂದಲೇ ಮುತುವರ್ಜಿ ವಹಿಸುತ್ತಿದೆ. ಸಿಖ್​ರ ಪವಿತ್ರ ದೇಗುಲಕ್ಕೆ ಭೇಟಿ ನೀಡಿ, ಹಿಂದಿರುಗುವ ಮಂದಿ ಜತೆಗೆ ಉಗ್ರರನ್ನೂ ಕಳುಹಿಸುವ ತಂತ್ರಗಾರಿಕೆ ಪಾಕ್​ನದ್ದಾಗಿದೆ.

ಪಾಕಿಸ್ತಾನಕ್ಕೆ ಸಿಖ್​ರ ಬಗ್ಗೆ ಯಾವುದೇ ಕಾಳಜಿ ಇಲ್ಲ. ಹಾಗಿದ್ದಿದ್ದರೆ, ಅಲ್ಲಿ ಇಬ್ಬರು ಸಿಖ್​ರ ಕೊಲೆಯಾದಾಗ ಕ್ರಮ ಕೈಗೊಳ್ಳಬೇಕಿತ್ತು. ಉಗ್ರರ ನಿಯೋಜನೆಗಾಗಿ ಕರ್ತಾಪುರ ಕಾರಿಡಾರ್​ ಅನ್ನು ಪಾಕ್ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎಂದು ಸಾಹ್ನಿ ಆರೋಪಿಸಿದ್ದಾರೆ.

ಪಂಜಾಬ್ ಕಾಂಗ್ರೆಸ್​ ವಕ್ತಾರ ರಾಜ್ ಕುಮಾರ್​ ವರ್ಕಾ ಸಹ ಇದೇ ಮಾತುಗಳನ್ನಾಡಿದ್ದು, ಪಾಕ್​ ಕರ್ತಾಪುರ ಕಾರಿಡಾರ್​ ಮೂಲಕ ಅನುಕೂಲ ಪಡೆಯಲು ಮುಂದಾಗಿದೆ. ಇದೇ ರೀತಿ ಭಾರತ ವಿರೋಧಿ ಕೃತ್ಯಗಳನ್ನು ಎಸಗುತ್ತಿದ್ದರೆ ಸಹಿಸಲಾಗುವುದಿಲ್ಲ. ಈಗಾಗಲೇ ಪಂಜಾಬ್ ಸಿಎಂ, ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದು, ಇಂತಹ ಕೆಲಸಗಳನ್ನು ಮಾಡಿದರೆ ಸುಮ್ಮನೆ ಬಿಡುವುದಿಲ್ಲ ಎಂದಿದ್ದಾರೆ. ಸಿಖ್​ರ ಬಗ್ಗೆ ಕಾಳಜಿ ಇದ್ದರೆ, ಪಾಕಿಸ್ತಾನದಲ್ಲಿರುವ ಸಿಖ್​ ಸಮುದಾಯದವರ ರಕ್ಷಣೆಗೆ ಮುಂದಾಗಲಿ ಎಂದು ಹೇಳಿದ್ದಾರೆ.

ನವದೆಹಲಿ: ಕರ್ತಾಪುರ ಕಾರಿಡಾರ್​ ವಿಚಾರವಾಗಿ ಪಾಕಿಸ್ತಾನ ಮುತುವರ್ಜಿ ವಹಿಸುತ್ತಿರುವುದರ ಹಿಂದೆ ಭಾರಿ ಕುತಂತ್ರ ಅಡಗಿದೆ ಎಂಬ ಆಘಾತಕಾರಿ ವಿಚಾರವನ್ನು ತಜ್ಞರು ಬಯಲು ಮಾಡಿದ್ದಾರೆ.

ಬಿಕ್ಕಟ್ಟು ನಿರ್ವಹಣೆ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಅಜಯ್ ಸಾಹ್ನಿ ಅವರು ಹೇಳುವಂತೆ, ಕರ್ತಾಪುರ ವಿಚಾರದಲ್ಲಿ ಸಿಖ್​ರಿಗೆ ಒಳಿತು ಮಾಡುವ ಮನಸ್ಸೇನೂ ಪಾಕ್​​ಗೆ ಇಲ್ಲ. ಉಗ್ರರನ್ನು ಅಲ್ಲಲ್ಲಿ ನಿಯೋಜಿಸುವ ಕುತಂತ್ರದಿಂದಲೇ ಮುತುವರ್ಜಿ ವಹಿಸುತ್ತಿದೆ. ಸಿಖ್​ರ ಪವಿತ್ರ ದೇಗುಲಕ್ಕೆ ಭೇಟಿ ನೀಡಿ, ಹಿಂದಿರುಗುವ ಮಂದಿ ಜತೆಗೆ ಉಗ್ರರನ್ನೂ ಕಳುಹಿಸುವ ತಂತ್ರಗಾರಿಕೆ ಪಾಕ್​ನದ್ದಾಗಿದೆ.

ಪಾಕಿಸ್ತಾನಕ್ಕೆ ಸಿಖ್​ರ ಬಗ್ಗೆ ಯಾವುದೇ ಕಾಳಜಿ ಇಲ್ಲ. ಹಾಗಿದ್ದಿದ್ದರೆ, ಅಲ್ಲಿ ಇಬ್ಬರು ಸಿಖ್​ರ ಕೊಲೆಯಾದಾಗ ಕ್ರಮ ಕೈಗೊಳ್ಳಬೇಕಿತ್ತು. ಉಗ್ರರ ನಿಯೋಜನೆಗಾಗಿ ಕರ್ತಾಪುರ ಕಾರಿಡಾರ್​ ಅನ್ನು ಪಾಕ್ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎಂದು ಸಾಹ್ನಿ ಆರೋಪಿಸಿದ್ದಾರೆ.

ಪಂಜಾಬ್ ಕಾಂಗ್ರೆಸ್​ ವಕ್ತಾರ ರಾಜ್ ಕುಮಾರ್​ ವರ್ಕಾ ಸಹ ಇದೇ ಮಾತುಗಳನ್ನಾಡಿದ್ದು, ಪಾಕ್​ ಕರ್ತಾಪುರ ಕಾರಿಡಾರ್​ ಮೂಲಕ ಅನುಕೂಲ ಪಡೆಯಲು ಮುಂದಾಗಿದೆ. ಇದೇ ರೀತಿ ಭಾರತ ವಿರೋಧಿ ಕೃತ್ಯಗಳನ್ನು ಎಸಗುತ್ತಿದ್ದರೆ ಸಹಿಸಲಾಗುವುದಿಲ್ಲ. ಈಗಾಗಲೇ ಪಂಜಾಬ್ ಸಿಎಂ, ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದು, ಇಂತಹ ಕೆಲಸಗಳನ್ನು ಮಾಡಿದರೆ ಸುಮ್ಮನೆ ಬಿಡುವುದಿಲ್ಲ ಎಂದಿದ್ದಾರೆ. ಸಿಖ್​ರ ಬಗ್ಗೆ ಕಾಳಜಿ ಇದ್ದರೆ, ಪಾಕಿಸ್ತಾನದಲ್ಲಿರುವ ಸಿಖ್​ ಸಮುದಾಯದವರ ರಕ್ಷಣೆಗೆ ಮುಂದಾಗಲಿ ಎಂದು ಹೇಳಿದ್ದಾರೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.