ETV Bharat / bharat

ಇಂದು ಸಂಜೆ 5 ಗಂಟೆಗೆ ಪ್ರತಿಪಕ್ಷ ನಾಯಕರಿಂದ ರಾಷ್ಟ್ರಪತಿ ಭೇಟಿ

ಕೃಷಿ ಮಸೂದೆ ಮತ್ತು ಸಂಸತ್​ ಸದಸ್ಯರ ಅಮಾನತಿನ ಬಗ್ಗೆ ಚರ್ಚಿಸಲು ಪ್ರತಿಪಕ್ಷ ನಾಯಕರು ಇಂದು ರಾಷ್ಟ್ರಪತಿಯನ್ನು ಭೇಟಿಯಾಗಲಿದ್ದಾರೆ.

author img

By

Published : Sep 23, 2020, 1:10 PM IST

Opposition parties to meet President kovind
ರಾಷ್ಟ್ರಪತಿ

ನವದೆಹಲಿ: ವಿವಾದಕ್ಕೆ ಸೃಷ್ಟಿಸಿರುವ ಕೃಷಿ ಮಸೂದೆ ಮತ್ತು ಸಂಸತ್​ ಸದಸ್ಯರ ಅಮಾನತಿನ ಬಗ್ಗೆ ಚರ್ಚಿಸಲು ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರನ್ನು ಭೇಟಿಯಾಗಲು ಪ್ರತಿಪಕ್ಷಗಳ ನಾಯಕರಿಗೆ ಇಂದು ಸಂಜೆ 5 ಗಂಟೆಗೆ ಸಮಯ ನಿಗದಿಯಾಗಿದೆ.

ಕೋವಿಡ್​ ನಿಮಯಾವಳಿಗಳ ಪ್ರಕಾರ, ಕೇವಲ ಐದು ಜನರಿಗೆ ಮಾತ್ರ ರಾಷ್ಟ್ರಪತಿಗಳನ್ನು ಭೇಟಿಯಾಗಲು ಅವಕಾಶ ದೊರೆತಿದೆ. ರಾಷ್ಟ್ರಪತಿ ಭೇಟಿಗೆ ಅವಕಾಶ ನೀಡುವಂತೆ ಈ ಹಿಂದೆ ಪ್ರತಿಪಕ್ಷಗಳು ಕೋರಿದ್ದವು.

ಈ ನಡುವೆ ಮುಂದಿನ ಹೋರಾಟದ ಬಗ್ಗೆ ಚರ್ಚಿಸಲು ಗುಲಾಂ ನಬಿ ಆಜಾದ್​ ನಿವಾಸದಲ್ಲಿ ವಿವಿಧ ಪಕ್ಷಗಳ ನಾಯಕರು ಸಭೆ ನಡೆಸಿದರು. ಮೇಲ್ಮನೆಯಲ್ಲಿ ಗುಲಾಂ ನಬಿ ಆಜಾದ್​ ಭಾಷಣ ಮಾಡಿದ ಬಳಿಕ ಮಂಗಳವಾರದಿಂದ ಪ್ರತಿಪಕ್ಷ ನಾಯಕರು ಕಲಾಪ ಬಹಿಷ್ಕರಿಸಿ ಸಂಸತ್​ ಬಳಿಯ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.

ಕೃಷಿ ಮಸೂದೆ ಮತ್ತು ಎಂಟು ಸಂಸತ್ ಸದಸ್ಯರ ಅಮಾನತನ್ನು ವಿರೋಧಿಸಿ ಕಾಂಗ್ರೆಸ್​ ಮತ್ತು ಇತರ ಪ್ರತಿಪಕ್ಷಗಳು ಕೆಳಮನೆಯ ಕಲಾಪವನ್ನೂ ಬಹಿಷ್ಕರಿಸಿವೆ. ಕಲಾಪ ಬಹಿಷ್ಕರಿಸಿ ಪ್ರತಿಭಟನೆಯಲ್ಲಿ ತೊಡಗಿರುವ ಸದಸ್ಯರು, ಸಭಾಧ್ಯಕ್ಷರ ಆದೇಶವನ್ನು ಪಾಲಿಸುತ್ತಿಲ್ಲ ಎಂದು ಬಿಜೆಪಿ ಆರೋಪಿಸಿದೆ.

ನವದೆಹಲಿ: ವಿವಾದಕ್ಕೆ ಸೃಷ್ಟಿಸಿರುವ ಕೃಷಿ ಮಸೂದೆ ಮತ್ತು ಸಂಸತ್​ ಸದಸ್ಯರ ಅಮಾನತಿನ ಬಗ್ಗೆ ಚರ್ಚಿಸಲು ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರನ್ನು ಭೇಟಿಯಾಗಲು ಪ್ರತಿಪಕ್ಷಗಳ ನಾಯಕರಿಗೆ ಇಂದು ಸಂಜೆ 5 ಗಂಟೆಗೆ ಸಮಯ ನಿಗದಿಯಾಗಿದೆ.

ಕೋವಿಡ್​ ನಿಮಯಾವಳಿಗಳ ಪ್ರಕಾರ, ಕೇವಲ ಐದು ಜನರಿಗೆ ಮಾತ್ರ ರಾಷ್ಟ್ರಪತಿಗಳನ್ನು ಭೇಟಿಯಾಗಲು ಅವಕಾಶ ದೊರೆತಿದೆ. ರಾಷ್ಟ್ರಪತಿ ಭೇಟಿಗೆ ಅವಕಾಶ ನೀಡುವಂತೆ ಈ ಹಿಂದೆ ಪ್ರತಿಪಕ್ಷಗಳು ಕೋರಿದ್ದವು.

ಈ ನಡುವೆ ಮುಂದಿನ ಹೋರಾಟದ ಬಗ್ಗೆ ಚರ್ಚಿಸಲು ಗುಲಾಂ ನಬಿ ಆಜಾದ್​ ನಿವಾಸದಲ್ಲಿ ವಿವಿಧ ಪಕ್ಷಗಳ ನಾಯಕರು ಸಭೆ ನಡೆಸಿದರು. ಮೇಲ್ಮನೆಯಲ್ಲಿ ಗುಲಾಂ ನಬಿ ಆಜಾದ್​ ಭಾಷಣ ಮಾಡಿದ ಬಳಿಕ ಮಂಗಳವಾರದಿಂದ ಪ್ರತಿಪಕ್ಷ ನಾಯಕರು ಕಲಾಪ ಬಹಿಷ್ಕರಿಸಿ ಸಂಸತ್​ ಬಳಿಯ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.

ಕೃಷಿ ಮಸೂದೆ ಮತ್ತು ಎಂಟು ಸಂಸತ್ ಸದಸ್ಯರ ಅಮಾನತನ್ನು ವಿರೋಧಿಸಿ ಕಾಂಗ್ರೆಸ್​ ಮತ್ತು ಇತರ ಪ್ರತಿಪಕ್ಷಗಳು ಕೆಳಮನೆಯ ಕಲಾಪವನ್ನೂ ಬಹಿಷ್ಕರಿಸಿವೆ. ಕಲಾಪ ಬಹಿಷ್ಕರಿಸಿ ಪ್ರತಿಭಟನೆಯಲ್ಲಿ ತೊಡಗಿರುವ ಸದಸ್ಯರು, ಸಭಾಧ್ಯಕ್ಷರ ಆದೇಶವನ್ನು ಪಾಲಿಸುತ್ತಿಲ್ಲ ಎಂದು ಬಿಜೆಪಿ ಆರೋಪಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.