ETV Bharat / bharat

ಖಿನ್ನತೆಗೊಳಗಾಗಿದ್ದಾರಂತೆ 'ನಿರ್ಭಯಾ' ಅಪರಾಧಿಗಳು... ತಿಹಾರ್​​​​​ ಜೈಲಿ​ನಲ್ಲಿ ಖಾಕಿ ಕಣ್ಗಾವಲು ಬಿಗಿ!

author img

By

Published : Dec 14, 2019, 8:10 AM IST

2012ರ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳು ಶೀಘ್ರದಲ್ಲೇ ಮರಣದಂಡನೆಗೆ ಒಳಗಾಗಲಿದ್ದು, ಅದೇ ಭೀತಿಯಿಂದ ಖಿನ್ನತೆಗೊಳಗಾಗಿದ್ದಾರಂತೆ. ಹೀಗಾಗಿ ಅಪರಾಧಿಗಳ ಮೇಲೆ ಖಾಕಿ ಕಣ್ಗಾವಲು ಹೆಚ್ಚಿಸಲಾಗಿದೆ. ಪ್ರಕರಣದ ಐವರು ಆರೋಪಿಗಳಲ್ಲಿ ಒಬ್ಬನಾದ ರಾಮ್​ ಸಿಂಗ್ 2013ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೀಗಾಗಿ ಉಳಿದ ನಾಲ್ವರು ಅಪರಾಧಿಗಳ ಮೇಲೆ ದೆಹಲಿಯ ತಿಹಾರ್​ ಜೈಲ್​ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

ತಿಹಾರ್​ ಜೈಲಿ​ನಲ್ಲಿ ಖಾಕಿ ಕಣ್ಗಾವಲು ಬಿಗಿ,Nirbhaya convicts are under depression
ತಿಹಾರ್​ ಜೈಲಿ​ನಲ್ಲಿ ಖಾಕಿ ಕಣ್ಗಾವಲು ಬಿಗಿ

ನವದೆಹಲಿ: ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ 2012ರ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳ ಮೇಲೆ ದೆಹಲಿಯ ತಿಹಾರ್​ ಜೈಲ್​ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

ಮೂಲಗಳ ಪ್ರಕಾರ ನಾಲ್ವರೂ ಅಪರಾಧಿಗಳನ್ನು ಶೀಘ್ರದಲ್ಲೇ ಗಲ್ಲಿಗೇರಿಸುತ್ತಿದ್ದು, ಅದೇ ಭೀತಿಯಿಂದ ಖಿನ್ನತೆಗೊಳಗಾಗಿದ್ದಾರೆ. ಹೀಗಾಗಿ ಯಾವುದೇ ಸಂದರ್ಭದಲ್ಲೂ ಅಪರಾಧಿಗಳು ಆತ್ಮಹತ್ಯೆ ಯತ್ನ ಮಾಡುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಪ್ರತಿ ಅಪರಾಧಿಯ ಮೇಲೂ ಕಣ್ಣಿಡಲಾಗಿದ್ದು, ಪೊಲೀಸ್​ ಭದ್ರತಾ ಸಿಬ್ಬಂದಿ ಸಂಖ್ಯೆ ಹೆಚ್ಚಿಸಲಾಗಿದೆ.

ಪ್ರಕರಣದ ನಾಲ್ವರು ಅಪರಾಧಿಗಳಾದ ಅಕ್ಷಯ್​, ಮುಕೇಶ್​, ಪವನ್​ ಗುಪ್ತಾ, ವಿನಯ್​ ಶರ್ಮಾ ಅದಾಗಲೇ ತಮ್ಮ ಆಹಾರ ಸೇವನೆ ಪ್ರಮಾಣವನ್ನೂ ಕಡಿಮೆ ಮಾಡಿದ್ದಾರೆ ಎಂದು ಜೈಲಾಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ಐವರು ಆರೋಪಿಗಳಲ್ಲಿ ಒಬ್ಬನಾದ ರಾಮ್​ ಸಿಂಗ್​ 2013ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆ ಬಳಿಕ ಜೈಲಿನಲ್ಲಿ ಇತರ ಅಪರಾಧಿಗಳ ಮೇಲೆ ಖಾಕಿ ಕಣ್ಗಾವಲು ಹೆಚ್ಚಿಸಲಾಗಿದೆ.

ನಿನ್ನೆ, ಅಂದರೆ ಶುಕ್ರವಾರವಷ್ಟೇ ಹಿರಿಯ ಅಧಿಕಾರಿಗಳು ಹಾಗೂ ತಿಹಾರ್ ಜೈಲು ಮಹಾನಿರ್ದೇಶಕ ಸಂದೀಪ್​ ಗೋಯಲ್​ ಜೈಲ್ ಸಂಖ್ಯೆ 3ಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇಲ್ಲಿಯೇ ನಿರ್ಭಯಾ ಅಪರಾಧಿಗಳು ಮರಣದಂಡನೆಗೆ ಒಳಗಾಗಲಿದ್ದಾರೆ. ಹೀಗಾಗಿ ಅಧಿಕಾರಿಗಳು ಇಲ್ಲಿನ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.

ಇದನ್ನೂ ಓದಿ: ನಿರ್ಭಯಾ ಅಪರಾಧಿಗಳ ಮರಣದಂಡನೆಯ 'ನೇರ ಪ್ರಸಾರ' ಕೋರಿ ಸುಪ್ರೀಂ​ಗೆ PIL

ಇನ್ನೊಂದು ಕಡೆ ಪ್ರಕರಣದ ಯಾವುದೇ ಮಾಹಿತಿಗಳು ಹೊರ ಹೋಗದಂತೆ ತಡೆಯಲು ಜೈಲು ಸಿಬ್ಬಂದಿಯ ಮೊಬೈಲ್​ ಫೋನ್​ಗಳನ್ನೂ ಕಣ್ಗಾವಲಿನಲ್ಲಿ ಇಡಲಾಗಿದೆ.

ದೇಶಾದ್ಯಂತ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದು, ನಿರ್ಭಯಾ ಆರೋಪಿಗಳ ಮೇಲೂ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನೊಂದೆಡೆ ಈ ಅಪರಾಧಿಗಳಿಗೆ ನೇಣು ಹಾಕುವ(hangman) ಕೆಲಸ ಮಾಡಲು ನಮಗೆ ಹಲವು ಅರ್ಜಿಗಳು ಬರುತ್ತಿವೆ ಎಂದು ಜೈಲಾಧಿಕಾರಿಗಳು ತಿಳಿಸಿದ್ದಾರೆ.

ನವದೆಹಲಿ: ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ 2012ರ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳ ಮೇಲೆ ದೆಹಲಿಯ ತಿಹಾರ್​ ಜೈಲ್​ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

ಮೂಲಗಳ ಪ್ರಕಾರ ನಾಲ್ವರೂ ಅಪರಾಧಿಗಳನ್ನು ಶೀಘ್ರದಲ್ಲೇ ಗಲ್ಲಿಗೇರಿಸುತ್ತಿದ್ದು, ಅದೇ ಭೀತಿಯಿಂದ ಖಿನ್ನತೆಗೊಳಗಾಗಿದ್ದಾರೆ. ಹೀಗಾಗಿ ಯಾವುದೇ ಸಂದರ್ಭದಲ್ಲೂ ಅಪರಾಧಿಗಳು ಆತ್ಮಹತ್ಯೆ ಯತ್ನ ಮಾಡುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಪ್ರತಿ ಅಪರಾಧಿಯ ಮೇಲೂ ಕಣ್ಣಿಡಲಾಗಿದ್ದು, ಪೊಲೀಸ್​ ಭದ್ರತಾ ಸಿಬ್ಬಂದಿ ಸಂಖ್ಯೆ ಹೆಚ್ಚಿಸಲಾಗಿದೆ.

ಪ್ರಕರಣದ ನಾಲ್ವರು ಅಪರಾಧಿಗಳಾದ ಅಕ್ಷಯ್​, ಮುಕೇಶ್​, ಪವನ್​ ಗುಪ್ತಾ, ವಿನಯ್​ ಶರ್ಮಾ ಅದಾಗಲೇ ತಮ್ಮ ಆಹಾರ ಸೇವನೆ ಪ್ರಮಾಣವನ್ನೂ ಕಡಿಮೆ ಮಾಡಿದ್ದಾರೆ ಎಂದು ಜೈಲಾಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ಐವರು ಆರೋಪಿಗಳಲ್ಲಿ ಒಬ್ಬನಾದ ರಾಮ್​ ಸಿಂಗ್​ 2013ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆ ಬಳಿಕ ಜೈಲಿನಲ್ಲಿ ಇತರ ಅಪರಾಧಿಗಳ ಮೇಲೆ ಖಾಕಿ ಕಣ್ಗಾವಲು ಹೆಚ್ಚಿಸಲಾಗಿದೆ.

ನಿನ್ನೆ, ಅಂದರೆ ಶುಕ್ರವಾರವಷ್ಟೇ ಹಿರಿಯ ಅಧಿಕಾರಿಗಳು ಹಾಗೂ ತಿಹಾರ್ ಜೈಲು ಮಹಾನಿರ್ದೇಶಕ ಸಂದೀಪ್​ ಗೋಯಲ್​ ಜೈಲ್ ಸಂಖ್ಯೆ 3ಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇಲ್ಲಿಯೇ ನಿರ್ಭಯಾ ಅಪರಾಧಿಗಳು ಮರಣದಂಡನೆಗೆ ಒಳಗಾಗಲಿದ್ದಾರೆ. ಹೀಗಾಗಿ ಅಧಿಕಾರಿಗಳು ಇಲ್ಲಿನ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.

ಇದನ್ನೂ ಓದಿ: ನಿರ್ಭಯಾ ಅಪರಾಧಿಗಳ ಮರಣದಂಡನೆಯ 'ನೇರ ಪ್ರಸಾರ' ಕೋರಿ ಸುಪ್ರೀಂ​ಗೆ PIL

ಇನ್ನೊಂದು ಕಡೆ ಪ್ರಕರಣದ ಯಾವುದೇ ಮಾಹಿತಿಗಳು ಹೊರ ಹೋಗದಂತೆ ತಡೆಯಲು ಜೈಲು ಸಿಬ್ಬಂದಿಯ ಮೊಬೈಲ್​ ಫೋನ್​ಗಳನ್ನೂ ಕಣ್ಗಾವಲಿನಲ್ಲಿ ಇಡಲಾಗಿದೆ.

ದೇಶಾದ್ಯಂತ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದು, ನಿರ್ಭಯಾ ಆರೋಪಿಗಳ ಮೇಲೂ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನೊಂದೆಡೆ ಈ ಅಪರಾಧಿಗಳಿಗೆ ನೇಣು ಹಾಕುವ(hangman) ಕೆಲಸ ಮಾಡಲು ನಮಗೆ ಹಲವು ಅರ್ಜಿಗಳು ಬರುತ್ತಿವೆ ಎಂದು ಜೈಲಾಧಿಕಾರಿಗಳು ತಿಳಿಸಿದ್ದಾರೆ.

Intro:Body:

Nirbhaya


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.