ETV Bharat / bharat

ಎಲ್​ಜಿ ಪಾಲಿಮರ್​ನಿಂದ 50 ಕೋಟಿ ರೂ. ದಂಡ ಕಟ್ಟಿಸಿ: ಕೇಂದ್ರಕ್ಕೆ ನೋಟಿಸ್​ ಜಾರಿ!

author img

By

Published : May 8, 2020, 2:22 PM IST

ಎಲ್​ಜಿ ಪಾಲಿಮರ್​ ಕಂಪನಿಯಲ್ಲಿ ನಡೆದ ವಿಷಾನಿಲ ಸೋರಿಕೆ ಪ್ರಕರಣದ ವಿಚಾರವಾಗಿ ರಾಷ್ಟ್ರೀಯ ಹಸಿರು ಪ್ರಾಧಿಕಾರದಿಂದ ಇದೀಗ ನೋಟಿಸ್​ ಜಾರಿಯಾಗಿದೆ.

NGT issues notices to centre
NGT issues notices to centre

ನವದೆಹಲಿ: ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿನ ಎಲ್​​ಜಿ ಪಾಲಿಮರ್​​ ಕಂಪನಿಯಲ್ಲಿ ಉಂಟಾದ ವಿಷಾನಿಲ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ಪ್ರಾಧಿಕಾರ ನೋಟಿಸ್​ ಜಾರಿ ಮಾಡಿದೆ.

ಕೇಂದ್ರ ಸರ್ಕಾರ ಹಾಗೂ ಎಲ್​ಜಿ ಪಾಲಿಮರ್​ ಕಂಪನಿ, ರಾಷ್ಟ್ರೀಯ ವಾಯುಮಾಲಿನ್ಯ ನಿಯಂತ್ರಣ ಬೋರ್ಡ್​​​​​ಗಳಿಗೆ ನೋಟಿಸ್​ ಜಾರಿ ಮಾಡಿರುವ ರಾಷ್ಟ್ರೀಯ ಹಸಿರು ಪ್ರಾಧಿಕಾರ, 50 ಕೋಟಿ ರೂ ದಂಡ ತುಂಬಿಕೊಡುವಂತೆ ಹೇಳಿದೆ. ಗ್ಯಾಸ್​ ಲೀಕ್​ ಪ್ರಕರಣದ ತನಿಖೆಗಾಗಿ ಪ್ರಾಧಿಕಾರ ಐವರು ಸದಸ್ಯರನ್ನೊಳಗೊಂಡ ಸಮಿತಿ ರಚನೆ ಮಾಡಿದ್ದು, ಮೇ 18ರೊಳಗೆ ರಿಪೋರ್ಟ್​ ನೀಡುವಂತೆ ತಿಳಿಸಿದೆ. ಕೇಂದ್ರ ಸರ್ಕಾರಕ್ಕೆ ನೋಟಿಸ್​ ಜಾರಿ ಮಾಡಿರುವ ಹಸಿರು ಪ್ರಾಧಿಕಾರಿ ತಕ್ಷಣವೇ 50 ಕೋಟಿ ರೂ ದಂಡ ಕಟ್ಟಿಸುವಂತೆ ಎಲ್​ಜಿ ಪಾಲಿಮರ್​ ಕಂಪನಿಗೆ ಸೂಚನೆ ನೀಡುವಂತೆ ತಿಳಿಸಿದೆ.

ವಿಷಾನಿಲ ಸೋರಿಕೆಯಾಗಿರುವುದರಿಂದ ಅನೇಕ ಜೀವಗಳಿಗೆ ಹಾನಿಯಾಗಿದ್ದು, ಪರಿಸರ ಕೂಡ ನಾಶವಾಗಿದೆ. ಹೀಗಾಗಿ ಎಲ್​ಜಿ ಪಾಲಿಮರ್ ಕಂಪನಿ ತಕ್ಷಣವೇ​ 50 ಕೋಟಿ ರೂ. ಹಣ ಠೇವಣಿ ಇಡುವಂತೆ ಹೇಳಿದೆ.

ವೆಂಕಟಾಪೂರ್​ದಲ್ಲಿ ನಡೆದಿರುವ ವಿಷಾನಿಲ ಸೋರಿಕೆ ಪ್ರಕರಣದಿಂದ 12 ಮಂದಿ ಸಾವನ್ನಪ್ಪಿದ್ದು, 300 ಮಂದಿ ಆಸ್ಪತ್ರೆಗೆ ಸೇರಿಕೊಂಡಿದ್ದಾರೆ. ಇದರಲ್ಲಿ 25 ಜನರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ​ಮೃತರು, ಗಾಯಗೊಂಡಿರುವ ಕುಟುಂಬಗಳಿಗೆ ಆಂಧ್ರ ಮುಖ್ಯಮಂತ್ರಿ ಈಗಾಗಲೇ ಪರಿಹಾರ ಘೋಷಣೆ ಮಾಡಿದ್ದಾರೆ.

ನವದೆಹಲಿ: ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿನ ಎಲ್​​ಜಿ ಪಾಲಿಮರ್​​ ಕಂಪನಿಯಲ್ಲಿ ಉಂಟಾದ ವಿಷಾನಿಲ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ಪ್ರಾಧಿಕಾರ ನೋಟಿಸ್​ ಜಾರಿ ಮಾಡಿದೆ.

ಕೇಂದ್ರ ಸರ್ಕಾರ ಹಾಗೂ ಎಲ್​ಜಿ ಪಾಲಿಮರ್​ ಕಂಪನಿ, ರಾಷ್ಟ್ರೀಯ ವಾಯುಮಾಲಿನ್ಯ ನಿಯಂತ್ರಣ ಬೋರ್ಡ್​​​​​ಗಳಿಗೆ ನೋಟಿಸ್​ ಜಾರಿ ಮಾಡಿರುವ ರಾಷ್ಟ್ರೀಯ ಹಸಿರು ಪ್ರಾಧಿಕಾರ, 50 ಕೋಟಿ ರೂ ದಂಡ ತುಂಬಿಕೊಡುವಂತೆ ಹೇಳಿದೆ. ಗ್ಯಾಸ್​ ಲೀಕ್​ ಪ್ರಕರಣದ ತನಿಖೆಗಾಗಿ ಪ್ರಾಧಿಕಾರ ಐವರು ಸದಸ್ಯರನ್ನೊಳಗೊಂಡ ಸಮಿತಿ ರಚನೆ ಮಾಡಿದ್ದು, ಮೇ 18ರೊಳಗೆ ರಿಪೋರ್ಟ್​ ನೀಡುವಂತೆ ತಿಳಿಸಿದೆ. ಕೇಂದ್ರ ಸರ್ಕಾರಕ್ಕೆ ನೋಟಿಸ್​ ಜಾರಿ ಮಾಡಿರುವ ಹಸಿರು ಪ್ರಾಧಿಕಾರಿ ತಕ್ಷಣವೇ 50 ಕೋಟಿ ರೂ ದಂಡ ಕಟ್ಟಿಸುವಂತೆ ಎಲ್​ಜಿ ಪಾಲಿಮರ್​ ಕಂಪನಿಗೆ ಸೂಚನೆ ನೀಡುವಂತೆ ತಿಳಿಸಿದೆ.

ವಿಷಾನಿಲ ಸೋರಿಕೆಯಾಗಿರುವುದರಿಂದ ಅನೇಕ ಜೀವಗಳಿಗೆ ಹಾನಿಯಾಗಿದ್ದು, ಪರಿಸರ ಕೂಡ ನಾಶವಾಗಿದೆ. ಹೀಗಾಗಿ ಎಲ್​ಜಿ ಪಾಲಿಮರ್ ಕಂಪನಿ ತಕ್ಷಣವೇ​ 50 ಕೋಟಿ ರೂ. ಹಣ ಠೇವಣಿ ಇಡುವಂತೆ ಹೇಳಿದೆ.

ವೆಂಕಟಾಪೂರ್​ದಲ್ಲಿ ನಡೆದಿರುವ ವಿಷಾನಿಲ ಸೋರಿಕೆ ಪ್ರಕರಣದಿಂದ 12 ಮಂದಿ ಸಾವನ್ನಪ್ಪಿದ್ದು, 300 ಮಂದಿ ಆಸ್ಪತ್ರೆಗೆ ಸೇರಿಕೊಂಡಿದ್ದಾರೆ. ಇದರಲ್ಲಿ 25 ಜನರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ​ಮೃತರು, ಗಾಯಗೊಂಡಿರುವ ಕುಟುಂಬಗಳಿಗೆ ಆಂಧ್ರ ಮುಖ್ಯಮಂತ್ರಿ ಈಗಾಗಲೇ ಪರಿಹಾರ ಘೋಷಣೆ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.