ETV Bharat / bharat

ಕೊರೊನಾ ಇದೆ ಎಂದು ಹೆಂಡ್ತಿಗೆ ಹೇಳಿ ಮನೆ ಬಿಟ್ಟ, ಗರ್ಲ್​​ಫ್ರೆಂಡ್ ಜತೆ ಸಿಕ್ಕಿಬಿದ್ದ ಭೂಪ!

author img

By

Published : Sep 19, 2020, 3:48 AM IST

ಪ್ರಕರಣ ದಾಖಲು ಮಾಡಿಕೊಂಡು ಶೋಧ ಕಾರ್ಯ ಆರಂಭಿಸಿದ್ದ ಪೊಲೀಸರಿಗೆ ಆರಂಭದಲ್ಲಿ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆತನ ಮೊಬೈಲ್​ ಫೋನ್​ ಟ್ರ್ಯಾಕ್​ ಮಾಡುವ ಕೆಲಸ ಸಹ ಮಾಡಿದ್ದರು.

Navi Mumbai man
Navi Mumbai man

ನವಿ ಮುಂಬೈ: ತನಗೆ ಕೊರೊನಾ ಬಂದಿದ್ದು, ಆತ್ಮಹತ್ಯೆ ಮಾಡಿಕೊಳ್ಳುವೆ ಎಂದುಹೆಂಡ್ತಿ ಮುಂದೆ ಹೇಳಿ ಮನೆಬಿಟ್ಟಿದ್ದ ವ್ಯಕ್ತಿಯೋರ್ವ ಗರ್ಲ್​​ಫ್ರೆಂಡ್​ ಜತೆ ಸಿಕ್ಕಿಬಿದ್ದಿರುವ ವಿಚಿತ್ರ ಘಟನೆ ನಡೆದಿದ್ದು, ಪ್ರಕರಣ ಬೇಧಿಸುವಲ್ಲಿ ಮುಂಬೈ ಪೊಲೀಸರು ಯಶಸ್ವಿಯಾಗಿದ್ದಾರೆ.

ಮದುವೆಯಾಗಿದ್ದ ವ್ಯಕ್ತಿ ಮಹಾರಾಷ್ಟ್ರದ ನವಿ ಮುಂಬೈನಲ್ಲಿ ಹೆಂಡತಿ ಜತೆ ವಾಸವಾಗಿದ್ದನು. ಜುಲೈ 24ರಂದು ಹೆಂಡತಿಗೆ ಕರೆ ಮಾಡಿರುವ ಆತ ತನಗೆ ಕೊರೊನಾ ಪಾಸಿಟಿವ್​ ಬಂದಿದ್ದು, ಸಾಯುವುದಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿ ಫೋನ್ ಕಟ್​ ಮಾಡಿದ್ದಾನೆ.

ಇದಾದ ಬಳಿಕ ಫೋನ್​ ಸ್ವೀಚ್​ ಆಫ್​ ಆಗಿದೆ. ಮರುದಿನವೇ ಆತನ ಬೈಕ್​ ಕೀ, ಬೈಕ್​, ಹೆಲ್ಮೆಟ್​ ಹಾಗೂ ಬ್ಯಾಗ್​​​ ಲಭ್ಯವಾಗಿವೆ.

ಇದಕ್ಕೆ ಸಂಬಂಧಿಸಿದಂತೆ ಹೆಂಡತಿ ಪೊಲೀಸ್ ಠಾಣೆಯಲ್ಲಿ ತನ್ನ ಸಹೋದರನ ಸಹಾಯದಿಂದ ನಾಪತ್ತೆ ಪ್ರಕರಣ ದಾಖಲು ಮಾಡಿದ್ದಾರೆ ಎಂದು ಪೊಲೀಸ್ ಸಹಾಯಕ ಆಯುಕ್ತ ವಿನಾಯಕ ವಾಸ್ತ್​ ಹೇಳಿದ್ದಾರೆ.

ಪ್ರಕರಣ ದಾಖಲು ಮಾಡಿಕೊಂಡು ಶೋಧ ಕಾರ್ಯ ಆರಂಭಿಸಿದ್ದ ಪೊಲೀಸರಿಗೆ ಆರಂಭದಲ್ಲಿ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆತನ ಮೊಬೈಲ್​ ಫೋನ್​ ಟ್ರ್ಯಾಕ್​ ಮಾಡುವ ಕೆಲಸ ಸಹ ಮಾಡಿದ್ದರು. ಆದರೆ ಅದು ಸ್ವಿಚ್​ ಆಫ್​ ಆಗಿದ್ದರಿಂದ ಯಾವುದೇ ರೀತಿಯ ಮಾಹಿತಿ ಲಭ್ಯವಾಗಿಲ್ಲ. ಕಳೆದ ಒಂದು ವಾರದ ಹಿಂದೆ ಮೊಬೈಲ್​ ಫೋನ್ ಮತ್ತೊಮ್ಮೆ​​ ಟ್ರ್ಯಾಕ್​ ಮಾಡಿದಾಗ ಮಧ್ಯಪ್ರದೇಶದ ಇಂದೋರ್​​ನಲ್ಲಿರುವುದು ಲೊಕೇಷನ್​ ಪತ್ತೆಯಾಗಿದೆ.

ಅಲ್ಲಿಗೆ ಹೋದಾಗ ಆತ ವಿವಾಹವಾಗಿರುವ ಮಾಹಿತಿ ಲಭ್ಯವಾಗಿದೆ. ಜತೆಗೆ ತನ್ನ ಗುರುತು ಬದಲಾವಣೆ ಮಾಡಿಕೊಂಡಿದ್ದಾಗಿ ತಿಳಿದು ಬಂದಿದೆ. ಸೆಪ್ಟೆಂಬರ್​ 15ರಂದು ಲವರ್​ ಜತೆ ಅತನನ್ನ ಮುಂಬೈಗೆ ಕರೆ ತರಲಾಗಿದೆ.

ನವಿ ಮುಂಬೈ: ತನಗೆ ಕೊರೊನಾ ಬಂದಿದ್ದು, ಆತ್ಮಹತ್ಯೆ ಮಾಡಿಕೊಳ್ಳುವೆ ಎಂದುಹೆಂಡ್ತಿ ಮುಂದೆ ಹೇಳಿ ಮನೆಬಿಟ್ಟಿದ್ದ ವ್ಯಕ್ತಿಯೋರ್ವ ಗರ್ಲ್​​ಫ್ರೆಂಡ್​ ಜತೆ ಸಿಕ್ಕಿಬಿದ್ದಿರುವ ವಿಚಿತ್ರ ಘಟನೆ ನಡೆದಿದ್ದು, ಪ್ರಕರಣ ಬೇಧಿಸುವಲ್ಲಿ ಮುಂಬೈ ಪೊಲೀಸರು ಯಶಸ್ವಿಯಾಗಿದ್ದಾರೆ.

ಮದುವೆಯಾಗಿದ್ದ ವ್ಯಕ್ತಿ ಮಹಾರಾಷ್ಟ್ರದ ನವಿ ಮುಂಬೈನಲ್ಲಿ ಹೆಂಡತಿ ಜತೆ ವಾಸವಾಗಿದ್ದನು. ಜುಲೈ 24ರಂದು ಹೆಂಡತಿಗೆ ಕರೆ ಮಾಡಿರುವ ಆತ ತನಗೆ ಕೊರೊನಾ ಪಾಸಿಟಿವ್​ ಬಂದಿದ್ದು, ಸಾಯುವುದಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿ ಫೋನ್ ಕಟ್​ ಮಾಡಿದ್ದಾನೆ.

ಇದಾದ ಬಳಿಕ ಫೋನ್​ ಸ್ವೀಚ್​ ಆಫ್​ ಆಗಿದೆ. ಮರುದಿನವೇ ಆತನ ಬೈಕ್​ ಕೀ, ಬೈಕ್​, ಹೆಲ್ಮೆಟ್​ ಹಾಗೂ ಬ್ಯಾಗ್​​​ ಲಭ್ಯವಾಗಿವೆ.

ಇದಕ್ಕೆ ಸಂಬಂಧಿಸಿದಂತೆ ಹೆಂಡತಿ ಪೊಲೀಸ್ ಠಾಣೆಯಲ್ಲಿ ತನ್ನ ಸಹೋದರನ ಸಹಾಯದಿಂದ ನಾಪತ್ತೆ ಪ್ರಕರಣ ದಾಖಲು ಮಾಡಿದ್ದಾರೆ ಎಂದು ಪೊಲೀಸ್ ಸಹಾಯಕ ಆಯುಕ್ತ ವಿನಾಯಕ ವಾಸ್ತ್​ ಹೇಳಿದ್ದಾರೆ.

ಪ್ರಕರಣ ದಾಖಲು ಮಾಡಿಕೊಂಡು ಶೋಧ ಕಾರ್ಯ ಆರಂಭಿಸಿದ್ದ ಪೊಲೀಸರಿಗೆ ಆರಂಭದಲ್ಲಿ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆತನ ಮೊಬೈಲ್​ ಫೋನ್​ ಟ್ರ್ಯಾಕ್​ ಮಾಡುವ ಕೆಲಸ ಸಹ ಮಾಡಿದ್ದರು. ಆದರೆ ಅದು ಸ್ವಿಚ್​ ಆಫ್​ ಆಗಿದ್ದರಿಂದ ಯಾವುದೇ ರೀತಿಯ ಮಾಹಿತಿ ಲಭ್ಯವಾಗಿಲ್ಲ. ಕಳೆದ ಒಂದು ವಾರದ ಹಿಂದೆ ಮೊಬೈಲ್​ ಫೋನ್ ಮತ್ತೊಮ್ಮೆ​​ ಟ್ರ್ಯಾಕ್​ ಮಾಡಿದಾಗ ಮಧ್ಯಪ್ರದೇಶದ ಇಂದೋರ್​​ನಲ್ಲಿರುವುದು ಲೊಕೇಷನ್​ ಪತ್ತೆಯಾಗಿದೆ.

ಅಲ್ಲಿಗೆ ಹೋದಾಗ ಆತ ವಿವಾಹವಾಗಿರುವ ಮಾಹಿತಿ ಲಭ್ಯವಾಗಿದೆ. ಜತೆಗೆ ತನ್ನ ಗುರುತು ಬದಲಾವಣೆ ಮಾಡಿಕೊಂಡಿದ್ದಾಗಿ ತಿಳಿದು ಬಂದಿದೆ. ಸೆಪ್ಟೆಂಬರ್​ 15ರಂದು ಲವರ್​ ಜತೆ ಅತನನ್ನ ಮುಂಬೈಗೆ ಕರೆ ತರಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.