ETV Bharat / bharat

ಕಚೇರಿ ಆಯ್ತು ಈಗ ನಾಯ್ಡು ಮನೆ ಮೇಲೆ ಜಗನ್ ಕಣ್ಣು: ಅಕ್ರಮವಾಗಿದ್ರೆ ನೆಲಸಮ ಗ್ಯಾರಂಟಿ! - undefined

ವೈಎಸ್​ಆರ್ ಕಾಂಗ್ರೆಸ್​ನ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸದಸ್ಯ ವಿಜಯ್ ಸಾಯಿ ರೆಡ್ಡಿ ಹೇಳಿರುವಂತೆ, ನಾಯ್ಡು ಈಗ ವಾಸಿಸುತ್ತಿರುವ ಮನೆ ಅಕ್ರಮವಾಗಿದೆ. ಹಾಗಾಗಿ ಅವರು ಕೂಡಲೇ ಮನೆ ಖಾಲಿ ಮಾಡಬೇಕೆಂದು ಹೇಳಿದ್ದಾರೆ.

ಸಿಎಂ ಜಗನ್ ಮೋಹನ್ ರೆಡ್ಡಿ
author img

By

Published : Jun 27, 2019, 10:23 PM IST

ಅಮರಾವತಿ: ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ಪ್ರಜಾ ವೇದಿಕೆ ಕಟ್ಟಡವನ್ನು ನೆಲಸಮಗೊಳಿಸುವ ಆದೇಶದ ನಂತರ, ನಾಯ್ಡು ನಿವಾಸದತ್ತ ಸಿಎಂ ಜಗನ್ ಮೋಹನ್ ರೆಡ್ಡಿ ಕಣ್ಣು ನೆಟ್ಟಿದ್ದಾರೆ ಎನ್ನಲಾಗ್ತಿದೆ.

ವೈಎಸ್​ಆರ್ ಕಾಂಗ್ರೆಸ್​ನ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸದಸ್ಯ ವಿಜಯ್ ಸಾಯಿ ರೆಡ್ಡಿ ಹೇಳಿರುವಂತೆ, ನಾಯ್ಡು ಈಗ ವಾಸಿಸುತ್ತಿರುವ ಮನೆ ಅಕ್ರಮವಾಗಿದೆ. ಹಾಗಾಗಿ ಅವರು ಕೂಡಲೇ ಮನೆ ಖಾಲಿ ಮಾಡಬೇಕೆಂದು ಹೇಳಿದ್ದಾರೆ.

  • చంద్రబాబు ఐదేళ్లుగా నివాసం ఉంటున్న అక్రమ నిర్మాణం లింగంనేని ఎస్టేట్ నుంచి తక్షణం ఖాళీ చేయాలి. అది రాజశేఖర్ రెడ్డి గారి హయాంలోనే కట్టారుగా అనే ముర్ఖపు లాజిక్కులతో తప్పించుకోలేరు. నదీ గర్భంలో నిర్మించిన భవనమని తేలాక కూల్చివేయడం తప్ప వేరే పరిష్కారమేముండదు.

    — Vijayasai Reddy V (@VSReddy_MP) June 27, 2019 " class="align-text-top noRightClick twitterSection" data=" ">

ನಾಯ್ಡು ವಾಸಿಸುತ್ತಿರುವ ಈ ಕಟ್ಟಡವೂ ಅಕ್ರಮವಾಗಿ ನದಿ ಪಾತ್ರದಲ್ಲಿ ಕಟ್ಟಿದ್ದಾಗಿದ್ದರೆ, ನೆಲಸಮ ಮಾಡುವುದನ್ನು ಬಿಟ್ಟು ಬೇರೆ ಮಾರ್ಗವಿಲ್ಲ ಎಂದು ಟ್ವೀಟ್​ ಮೂಲಕ ಎಚ್ಚರಿಕೆಯನ್ನೂ ನೀಡಿದ್ದಾರೆ. ನದಿ ಪಾತ್ರದಲ್ಲಿ ಅಕ್ರಮವಾಗಿ ಕಟ್ಟಿದ ಕಟ್ಟಡಗಳನ್ನು ಉರುಳಿಸುವುದಾಗಿ ಈ ಮೊದಲು ಸಿಎಂ ಜಗನ್ ಮೋಹನ್ ರೆಡ್ಡಿ ಸಹ ಹೇಳಿದ್ದರು.

ನದಿ ಸಂರಕ್ಷಣೆ ಕಾಯ್ದೆ 1884ಕ್ಕೆ ವಿರುದ್ಧವಾಗಿ ನದಿ ಪಾತ್ರದಲ್ಲಿ ಕಟ್ಟಲಾಗಿದ್ದ ನಾಯ್ಡುರ ಪ್ರಜಾವೇದಿಕೆಯನ್ನು ನೆಲಸಮ ಮಾಡುವಂತೆ ಜಗನ್ ಆದೇಶ ನೀಡಿದ್ರು. ಇದೇ ಕಟ್ಟಡದ ಬಳಿ ನಾಯ್ಡು ಅವರ ಅತಿಥಿ ಗೃಹವಿದೆ. ಇದನ್ನು ಸಹ ಅಕ್ರಮವಾಗಿ ಕಟ್ಟಲಾಗಿದೆ ಎನ್ನಲಾಗ್ತಿದ್ದು, ಜಗನ್ ಸಂಪುಟ ಸಚಿವ ಬೋಟ್ಸಾ ಸತ್ಯಾನಾರಾಯಣ ಸಹ ನೆಲಸಮಗೊಳಿಸುವ ಬಗ್ಗೆ ಮೊದಲು ಹೇಳಿಕೆ ನೀಡಿದ್ದರು.

ಜಗನ್​ರ ಈ ನಿರ್ಧಾರಗಳನ್ನು ಟಿಡಿಪಿ ಪಕ್ಷದ ನಾಯಕರು ಖಂಡಿಸಿದ್ದಾರೆ.

ಅಮರಾವತಿ: ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ಪ್ರಜಾ ವೇದಿಕೆ ಕಟ್ಟಡವನ್ನು ನೆಲಸಮಗೊಳಿಸುವ ಆದೇಶದ ನಂತರ, ನಾಯ್ಡು ನಿವಾಸದತ್ತ ಸಿಎಂ ಜಗನ್ ಮೋಹನ್ ರೆಡ್ಡಿ ಕಣ್ಣು ನೆಟ್ಟಿದ್ದಾರೆ ಎನ್ನಲಾಗ್ತಿದೆ.

ವೈಎಸ್​ಆರ್ ಕಾಂಗ್ರೆಸ್​ನ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸದಸ್ಯ ವಿಜಯ್ ಸಾಯಿ ರೆಡ್ಡಿ ಹೇಳಿರುವಂತೆ, ನಾಯ್ಡು ಈಗ ವಾಸಿಸುತ್ತಿರುವ ಮನೆ ಅಕ್ರಮವಾಗಿದೆ. ಹಾಗಾಗಿ ಅವರು ಕೂಡಲೇ ಮನೆ ಖಾಲಿ ಮಾಡಬೇಕೆಂದು ಹೇಳಿದ್ದಾರೆ.

  • చంద్రబాబు ఐదేళ్లుగా నివాసం ఉంటున్న అక్రమ నిర్మాణం లింగంనేని ఎస్టేట్ నుంచి తక్షణం ఖాళీ చేయాలి. అది రాజశేఖర్ రెడ్డి గారి హయాంలోనే కట్టారుగా అనే ముర్ఖపు లాజిక్కులతో తప్పించుకోలేరు. నదీ గర్భంలో నిర్మించిన భవనమని తేలాక కూల్చివేయడం తప్ప వేరే పరిష్కారమేముండదు.

    — Vijayasai Reddy V (@VSReddy_MP) June 27, 2019 " class="align-text-top noRightClick twitterSection" data=" ">

ನಾಯ್ಡು ವಾಸಿಸುತ್ತಿರುವ ಈ ಕಟ್ಟಡವೂ ಅಕ್ರಮವಾಗಿ ನದಿ ಪಾತ್ರದಲ್ಲಿ ಕಟ್ಟಿದ್ದಾಗಿದ್ದರೆ, ನೆಲಸಮ ಮಾಡುವುದನ್ನು ಬಿಟ್ಟು ಬೇರೆ ಮಾರ್ಗವಿಲ್ಲ ಎಂದು ಟ್ವೀಟ್​ ಮೂಲಕ ಎಚ್ಚರಿಕೆಯನ್ನೂ ನೀಡಿದ್ದಾರೆ. ನದಿ ಪಾತ್ರದಲ್ಲಿ ಅಕ್ರಮವಾಗಿ ಕಟ್ಟಿದ ಕಟ್ಟಡಗಳನ್ನು ಉರುಳಿಸುವುದಾಗಿ ಈ ಮೊದಲು ಸಿಎಂ ಜಗನ್ ಮೋಹನ್ ರೆಡ್ಡಿ ಸಹ ಹೇಳಿದ್ದರು.

ನದಿ ಸಂರಕ್ಷಣೆ ಕಾಯ್ದೆ 1884ಕ್ಕೆ ವಿರುದ್ಧವಾಗಿ ನದಿ ಪಾತ್ರದಲ್ಲಿ ಕಟ್ಟಲಾಗಿದ್ದ ನಾಯ್ಡುರ ಪ್ರಜಾವೇದಿಕೆಯನ್ನು ನೆಲಸಮ ಮಾಡುವಂತೆ ಜಗನ್ ಆದೇಶ ನೀಡಿದ್ರು. ಇದೇ ಕಟ್ಟಡದ ಬಳಿ ನಾಯ್ಡು ಅವರ ಅತಿಥಿ ಗೃಹವಿದೆ. ಇದನ್ನು ಸಹ ಅಕ್ರಮವಾಗಿ ಕಟ್ಟಲಾಗಿದೆ ಎನ್ನಲಾಗ್ತಿದ್ದು, ಜಗನ್ ಸಂಪುಟ ಸಚಿವ ಬೋಟ್ಸಾ ಸತ್ಯಾನಾರಾಯಣ ಸಹ ನೆಲಸಮಗೊಳಿಸುವ ಬಗ್ಗೆ ಮೊದಲು ಹೇಳಿಕೆ ನೀಡಿದ್ದರು.

ಜಗನ್​ರ ಈ ನಿರ್ಧಾರಗಳನ್ನು ಟಿಡಿಪಿ ಪಕ್ಷದ ನಾಯಕರು ಖಂಡಿಸಿದ್ದಾರೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.