ಲಖನೌ( ಉತ್ತರ ಪ್ರದೇಶ): ಕಾಸ್ಗಂಜ್ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರ ವೇಷದಲ್ಲಿ ಬಂದ ಕೆಲವರು, ಆಸ್ಪತ್ರೆಯ ಐಸಿಯುನಲ್ಲಿ ದಾಖಲಾಗಿದ್ದ ರೋಗಿಯೊಬ್ಬನಿಗೆ ವಿಷಕಾರಿ ಚುಚ್ಚುಮದ್ದನ್ನು ಚುಚ್ಚಿ ಕೊಲ್ಲಲು ಪ್ರಯತ್ನಿಸಿದ ವಿದ್ಯಮಾನ ಜರುಗಿದೆ.
![murder attempt by poisonous injection](https://etvbharatimages.akamaized.net/etvbharat/prod-images/up-kas-01-attempt-to-murder-visual-byte-victim-accused-up10018_22072020030144_2207f_1595367104_759.jpg)
ಆದರೆ, ವೈದ್ಯಕೀಯ ಸಿಬ್ಬಂದಿಯ ಎಚ್ಚರಿಕೆಯಿಂದ ಇಬ್ಬರು ಸಿಕ್ಕಿಬಿದ್ದಿದ್ದು, ಉಳಿದವರು ತಪ್ಪಿಸಿಕೊಂಡದ್ದಾರೆ. ಬಂಧಿತ ಇಬ್ಬರ ಜೇಬಿನಿಂದ ಪೊಲೀಸರು ವಿಷಕಾರಿ ಚುಚ್ಚುಮದ್ದನ್ನು ವಶಪಡಿಸಿಕೊಂಡಿದ್ದಾರೆ. ಐದು ಜನರ ವಿರುದ್ಧ ಈಗ ಪ್ರಕರಣ ದಾಖಲಿಸಲಾಗಿದೆ.
![murder attempt by poisonous injection](https://etvbharatimages.akamaized.net/etvbharat/prod-images/up-kas-01-attempt-to-murder-visual-byte-victim-accused-up10018_22072020030144_2207f_1595367104_343.jpg)
ಬಂಧಿತರನ್ನು ಪ್ರಮೋದ್ ಮತ್ತು ಶಂತನು ಚೌಧರಿ ಎಂದು ಗುರುತಿಸಲಾಗಿದೆ. ಹರಿಯಮ್ ಚೌಧರಿ ಮತ್ತು ಅರುಣ್ ಕುಮಾರ್ ಅಲಿಯಾಸ್ ರವಿ ಸೇರಿದಂತೆ ಇನ್ನೊಬ್ಬ ವ್ಯಕ್ತಿ ಪರಾರಿಯಾಗಿದ್ದಾರೆ.