ನವದೆಹಲಿ: ಟೀಂ ಇಂಡಿಯಾ ಮಾಜಿ ಕ್ರಿಕೆಟರ್,ಬಿಜೆಪಿ ಸಂಸದ ಗೌತಮ್ ಗಂಭೀರ್ ಕೊರೊನಾ ವಿರುದ್ಧದ ಹೋರಾಟದಲ್ಲಿ ಈಗಾಗಲೇ ಕೈಜೋಡಿಸಿದ್ದು, ಸಂಸದೀಯ ಕ್ಷೇತ್ರದ ನಿಧಿಯಲ್ಲಿ 1 ಕೋಟಿ ರೂ ಹಾಗೂ ತಮ್ಮ ಎರಡು ವರ್ಷದ ಸಂಬಳ ನೀಡಿದ್ದಾರೆ.
ಕೋವಿಡ್-19: ಪಿಎಂ CARES ನಿಧಿಗೆ ಎರಡು ವರ್ಷದ ಸಂಬಳ ನೀಡಲು ಮುಂದಾದ ಗಂಭೀರ್
ಇದರ ಮಧ್ಯೆ ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಬಿಜೆಪಿ ಸಂಸದ ಗೌತಮ್ ಗಂಭೀರ್, ದೆಹಲಿ ಸರ್ಕಾರಕ್ಕೆ 50 ಲಕ್ಷ ರೂ ಹೆಚ್ಚುವರಿ ದೇಣಿಗೆ ನೀಡಿದ್ದಾರೆ. ದೆಹಲಿ ಸರ್ಕಾರ ವೈದ್ಯಕೀಯ ಉಪಕರಣ ಖರೀದಿ ಹಾಗೂ ಕೋವಿಡ್-19 ಸೋಂಕಿತರಿಗೆ ಈ ಹಣ ಬಳಕೆ ಮಾಡಿಕೊಳ್ಳಬಹುದು ಎಂದು ಗಂಭೀರ್ ಪತ್ರ ಕೂಡ ಬರೆದಿದ್ದಾರೆ.

ಕಳೆದ ಎರಡು ವಾರಗಳ ಹಿಂದೆ 50 ಲಕ್ಷ ರೂ ದೆಹಲಿ ಸರ್ಕಾರಕ್ಕೆ ನೀಡಿದ್ದ ಗಂಭೀರ್, ಇದೀಗ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ಮತ್ತೆ 50 ಲಕ್ಷ ರೂ ನೀಡಿದ್ದಾರೆ. ತಮ್ಮ ಕ್ಷೇತ್ರದಲ್ಲಿನ ಬಡ ಜನರಿಗೆ ಸಹಾಯ ಮಾಡುತ್ತಿರುವ ಗೌತಮ್ ಗಂಭೀರ್, ಆಹಾರದ ಪ್ಯಾಕೆಟ್ ಸೇರಿದಂತೆ ಅಗತ್ಯ ವಸ್ತು ಪೂರೈಕೆ ಮಾಡುತ್ತಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಟ್ವೀಟ್ ಮಾಡಿದ್ದ ಗಂಭೀರ್, ತಮ್ಮಗಾಗಿ ದೇಶ ಏನು ಮಾಡಬಹುದು ಎಂದು ಜನ ಕೇಳುತ್ತಾರೆ.ದೇಶಕ್ಕಾಗಿ ನೀವು ಏನು ಮಾಡಬಹುದು ಎಂದು ನಿಜವಾದ ಪ್ರಶ್ನೆಯಾಗಿದೆ. ಕೊರೋನಾ ಸೋಂಕು ನಿವಾರಣೆ ನಿಟ್ಟಿನಲ್ಲಿ ತಮ್ಮ ಎರಡು ವರ್ಷದ ವೇತನವನ್ನು ಪಿಎಂ ಕೇರ್ಸ್ ನಿಧಿಗೆ ನೀಡುವುದಾಗಿ ಅವರು ಟ್ವೀಟ್ ಮಾಡಿದ್ದರು.