ETV Bharat / bharat

ತನ್ನ ಆಟ ಬಯಲಾಗುವ ಭಯ... ಹೆತ್ತ ಮಗನನ್ನೇ ಕೊಂದು ಗೋಣಿ ಚೀಲದಲ್ಲಿ ತುಂಬಿದ ತಾಯಿ!

author img

By

Published : Feb 22, 2020, 6:34 PM IST

ತನ್ನ ವಿವಾಹೇತರ ಸಂಬಂಧ ಮಗನಿಂದ ಗಂಡನಿಗೆ ತಿಳಿಯುವ ಭಯ ಆ ಮಹಿಳೆಗೆ ಕಾಡಿತ್ತು. ಹೀಗಾಗಿ ಆಕೆ ತನ್ನ ಹೆತ್ತ ಮಗನನ್ನೇ ಕೊಂದು ಗೋಣಿ ಚೀಲದಲ್ಲಿ ತುಂಬಿದ್ದಳು. ಈ ಘಟನೆ ಪಕ್ಕದ ರಾಜ್ಯ ತೆಲಂಗಾಣದಲ್ಲಿ ನಡೆದಿದೆ.

Mother kills 9 year old son, Mother kills 9 year old son in Nalgonda, nalgonda Mother kills 9 year old son news, 9 ವರ್ಷದ ಮಗನನ್ನು ಕೊಂದ ತಾಯಿ, ನಲ್ಗೊಂಡದಲ್ಲಿ 9 ವರ್ಷದ ಮಗನನ್ನು ಕೊಂದ ತಾಯಿ, ನಲ್ಗೊಂಡದಲ್ಲಿ 9 ವರ್ಷದ ಮಗನನ್ನು ಕೊಂದ ತಾಯಿ ಸುದ್ದಿ,
ಹೆತ್ತ ಮಗನನ್ನು ಕೊಂದು ಗೋಣಿ ಚೀಲದಲ್ಲಿ ತುಂಬಿದ ತಾಯಿ

ನಲ್ಗೊಂಡ: ತಾಯಿಯೊಬ್ಬಳು ಹೆತ್ತ ಮಗನ ಕತ್ತಿಗೆಯನ್ನು ಟವೆಲ್​ನಿಂದ​ ಬಿಗಿದು ಕೊಲೆ ಮಾಡಿದಲ್ಲದೆ, ಆ ಮಗುವಿನ ಶವವನ್ನು ಗೋಣಿ ಚೀಲದಲ್ಲಿ ತುಂಬಿ ಅಮಾನವೀಯವಾಗಿ ನಡೆದುಕೊಂಡಿರುವ ಘಟನೆ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ.

9 ವರ್ಷದ ಬಾಲಕ ನಾಗರಾಜು ತನ್ನ ತಾಯಿ ಜೊತೆ ವಾಸಿಸುತ್ತಿದ್ದ. ನಾಗರಾಜು ತಂದೆ ಬೋರ್​ವೆಲ್​ ಡ್ರಿಲ್ಲಿಂಗ್​ ಫರ್ಮ್​ನಲ್ಲಿ ಕೆಲಸ ಮಾಡುತ್ತಿದ್ದು, ಪ್ರತಿದಿನ ಕೆಲಸಕ್ಕೆ ತೆರಳುತ್ತಿದ್ದ. ಗಂಡ ಇಲ್ಲದ ಸಮಯವನ್ನು ಬಳಸಿಕೊಂಡ ಆಕೆ ಬೇರೆ ವ್ಯಕ್ತಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಳಂತೆ. ಈ ವಿಷಯ ಮಗ ನಾಗರಾಜುಗೆ ತಿಳಿದಿತ್ತಂತೆ.

ಇನ್ನು ವಿವಾಹೇತರ ಸಂಬಂಧದ ಬಗ್ಗೆ ಗಂಡನಿಗೆ ತಿಳಿಯುತ್ತೆಂಬ ಭಯ ಆಕೆಗೆ ಕಾಡಿದೆ. ನಿನ್ನೆ ಸಂಜೆ ಮಗನ ಕತ್ತಿಗೆಯನ್ನು ಟವೆಲ್​ನಿಂದ ಬಿಗಿದು ಕೊಲೆ ಮಾಡಿದ್ದಾಳೆ. ನಂತರ ಮಗನ ಶವವನ್ನು ಗೋಣಿ ಚೀಲದಲ್ಲಿ ತುಂಬಿದ್ದಾಳೆ ಎನ್ನಲಾಗಿದೆ.

ಇನ್ನು ಈ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿದಿದೆ. ಕೂಡಲೇ ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಬಾಲಕನ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇನ್ನು ಆರೋಪಿಯನ್ನು ಬಂಧಿಸಿದ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ. ಈ ಘಟನೆ ಕುರಿತು ನಲ್ಗೊಂಡ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ನಲ್ಗೊಂಡ: ತಾಯಿಯೊಬ್ಬಳು ಹೆತ್ತ ಮಗನ ಕತ್ತಿಗೆಯನ್ನು ಟವೆಲ್​ನಿಂದ​ ಬಿಗಿದು ಕೊಲೆ ಮಾಡಿದಲ್ಲದೆ, ಆ ಮಗುವಿನ ಶವವನ್ನು ಗೋಣಿ ಚೀಲದಲ್ಲಿ ತುಂಬಿ ಅಮಾನವೀಯವಾಗಿ ನಡೆದುಕೊಂಡಿರುವ ಘಟನೆ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ.

9 ವರ್ಷದ ಬಾಲಕ ನಾಗರಾಜು ತನ್ನ ತಾಯಿ ಜೊತೆ ವಾಸಿಸುತ್ತಿದ್ದ. ನಾಗರಾಜು ತಂದೆ ಬೋರ್​ವೆಲ್​ ಡ್ರಿಲ್ಲಿಂಗ್​ ಫರ್ಮ್​ನಲ್ಲಿ ಕೆಲಸ ಮಾಡುತ್ತಿದ್ದು, ಪ್ರತಿದಿನ ಕೆಲಸಕ್ಕೆ ತೆರಳುತ್ತಿದ್ದ. ಗಂಡ ಇಲ್ಲದ ಸಮಯವನ್ನು ಬಳಸಿಕೊಂಡ ಆಕೆ ಬೇರೆ ವ್ಯಕ್ತಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಳಂತೆ. ಈ ವಿಷಯ ಮಗ ನಾಗರಾಜುಗೆ ತಿಳಿದಿತ್ತಂತೆ.

ಇನ್ನು ವಿವಾಹೇತರ ಸಂಬಂಧದ ಬಗ್ಗೆ ಗಂಡನಿಗೆ ತಿಳಿಯುತ್ತೆಂಬ ಭಯ ಆಕೆಗೆ ಕಾಡಿದೆ. ನಿನ್ನೆ ಸಂಜೆ ಮಗನ ಕತ್ತಿಗೆಯನ್ನು ಟವೆಲ್​ನಿಂದ ಬಿಗಿದು ಕೊಲೆ ಮಾಡಿದ್ದಾಳೆ. ನಂತರ ಮಗನ ಶವವನ್ನು ಗೋಣಿ ಚೀಲದಲ್ಲಿ ತುಂಬಿದ್ದಾಳೆ ಎನ್ನಲಾಗಿದೆ.

ಇನ್ನು ಈ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿದಿದೆ. ಕೂಡಲೇ ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಬಾಲಕನ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇನ್ನು ಆರೋಪಿಯನ್ನು ಬಂಧಿಸಿದ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ. ಈ ಘಟನೆ ಕುರಿತು ನಲ್ಗೊಂಡ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.