ETV Bharat / bharat

ಅಕ್ರಮ ನುಸುಳುಕೋರರ ಬಗ್ಗೆ ಮಾಹಿತಿ ಕೊಟ್ರೆ 5 ಸಾವಿರ ಬಹುಮಾನ: ರಾಜ್ ಠಾಕ್ರೆ ಪಕ್ಷದಿಂದ ಪೋಸ್ಟರ್ - ಮಹಾರಾಷ್ಟ್ರ ನವನಿರ್ಮಾಣ್ ಸೇನಾ

ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಅಕ್ರಮ ನುಸುಳುಕೋರರ ಬಗ್ಗೆ ಮಾಹಿತಿ ನೀಡುವವರಿಗೆ 5 ಸಾವಿರ ರೂಪಾಯಿ ನೀಡುವುದಾಗಿ ಮಹಾರಾಷ್ಟ್ರ ನವನಿರ್ಮಾಣ ಸೇನಾ ಪಕ್ಷ ಬಹುಮಾನ ಘೋಷಿಸಿದೆ.

MNS Offering Cash Reward,ಮಹಾರಾಷ್ಟ್ರದಲ್ಲಿ ರಾಜ್ ಠಾಕ್ರೆ ಪಕ್ಷದಿಂದ ಪೋಸ್ಟರ್
ಮಹಾರಾಷ್ಟ್ರದಲ್ಲಿ ರಾಜ್ ಠಾಕ್ರೆ ಪಕ್ಷದಿಂದ ಪೋಸ್ಟರ್
author img

By

Published : Feb 28, 2020, 8:34 AM IST

ಔರಂಗಾಬಾದ್‌(ಮಹಾರಾಷ್ಟ್ರ): ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್ಎಸ್), ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಅಕ್ರಮ ನುಸುಳುಕೋರರ ಬಗ್ಗೆ ಮಾಹಿತಿ ನೀಡುವವರಿಗೆ 5 ಸಾವಿರ ರೂಪಾಯಿ ಬಹುಮಾನ ಪ್ರಕಟಿಸಿ ಪೋಸ್ಟರ್‌ ಅಂಟಿಸಿದೆ.

  • Maharashtra: Poster of Maharashtra Navnirman Sena (MNS) stating to reward with Rs 5,000 the informers who give accurate information about illegal Pakistani and Bangladeshi infiltrators, put up in Aurangabad. (27.02) pic.twitter.com/8WoGXfMq0E

    — ANI (@ANI) February 28, 2020 " class="align-text-top noRightClick twitterSection" data=" ">

ಮಹಾರಾಷ್ಟ್ರದ ಔರಂಗಾಬಾದ್​ನಲ್ಲಿ ಈ ರೀತಿಯ ಪೋಸ್ಟರ್​ಗಳು ಕಂಡುಬಂದಿವೆ. ಪೋಸ್ಟರ್​ನಲ್ಲಿ ರಾಜ್​ ಠಾಕ್ರೆ ಫೋಟೋ ಇದ್ದು, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಬಂದ ನುಸುಳುಕೋರರ ಬಗ್ಗೆ ಮಾಹಿತಿ ನೀಡಿದ ಯಾರಿಗಾದರೂ 5 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ಹೇಳಿಕೊಂಡಿದೆ.

ಫೆಬ್ರವರಿ 9 ರಂದು ಮುಂಬೈನ ಆಜಾದ್ ಮೈದಾನದಲ್ಲಿ ನಡೆದ ಬೃಹತ್ ರ‍್ಯಾಲಿ ಉದ್ದೇಶಿಸಿ ಮಾತನಾಡಿದ್ದ ಠಾಕ್ರೆ, ಸಿಎಎ ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿಯ ಅನುಷ್ಠಾನವನ್ನು ಸಮರ್ಥಿಸಿಕೊಂಡಿದ್ದರು. ಸಿಎಎ ಹಾಗೂ ಎನ್​ಆರ್​ಸಿ ವಿರೋಧಿಸಿ ದೇಶದೆಲ್ಲೆಡೆ ​ರ‍್ಯಾಲಿಗಳು ನಡೆಯುತ್ತಿವೆ. ಈ ರ‍್ಯಾಲಿಗಳಿಗೆ ನಾವು ಕೂಡಾ ರ‍್ಯಾಲಿ ನಡೆಸಿಯೇ ಉತ್ತರಿಸಿದ್ದೇವೆ. ಅಂತೆಯೇ ಕತ್ತಿಗೆ ಯಾವತ್ತೂ ಕತ್ತಿಯಿಂದಲೇ ಉತ್ತರಿಸಬೇಕು. ಕಲ್ಲಿಗೆ ಕಲ್ಲಿನಿಂದಲೇ ಉತ್ತರ ನೀಡಬೇಕು ಎಂದು ಸಿಎಎ ವಿರೋಧಿಗಳಿಗೆ ಠಾಕ್ರೆ ಖಡಕ್​ ಸೂಚನೆ ರವಾನಿಸಿದ್ದರು.

ಇದೇ ವೇಳೆ ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟಿಸುತ್ತಿರುವ ಮುಸ್ಲಿಮರ ಬಗ್ಗೆ ಮಾತನಾಡಿದ್ದ ಅವರು, ಮುಸ್ಲಿಮರು ಆಂದೋಲನ ನಡೆಸುತ್ತಿರುವ ಉದ್ದೇಶವೇ ನನಗೆ ಅರ್ಥವಾಗುತ್ತಿಲ್ಲ. ಈ ಕಾಯ್ದೆಯು ಇಲ್ಲಿ ಹುಟ್ಟಿರುವ ಮುಸ್ಲಿಂ ನಾಗರಿಕರಿಗೆ ಸಂಬಂಧಿಸಿಲ್ಲ ಎಂದಿದ್ದರು.

ಔರಂಗಾಬಾದ್‌(ಮಹಾರಾಷ್ಟ್ರ): ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್ಎಸ್), ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಅಕ್ರಮ ನುಸುಳುಕೋರರ ಬಗ್ಗೆ ಮಾಹಿತಿ ನೀಡುವವರಿಗೆ 5 ಸಾವಿರ ರೂಪಾಯಿ ಬಹುಮಾನ ಪ್ರಕಟಿಸಿ ಪೋಸ್ಟರ್‌ ಅಂಟಿಸಿದೆ.

  • Maharashtra: Poster of Maharashtra Navnirman Sena (MNS) stating to reward with Rs 5,000 the informers who give accurate information about illegal Pakistani and Bangladeshi infiltrators, put up in Aurangabad. (27.02) pic.twitter.com/8WoGXfMq0E

    — ANI (@ANI) February 28, 2020 " class="align-text-top noRightClick twitterSection" data=" ">

ಮಹಾರಾಷ್ಟ್ರದ ಔರಂಗಾಬಾದ್​ನಲ್ಲಿ ಈ ರೀತಿಯ ಪೋಸ್ಟರ್​ಗಳು ಕಂಡುಬಂದಿವೆ. ಪೋಸ್ಟರ್​ನಲ್ಲಿ ರಾಜ್​ ಠಾಕ್ರೆ ಫೋಟೋ ಇದ್ದು, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಬಂದ ನುಸುಳುಕೋರರ ಬಗ್ಗೆ ಮಾಹಿತಿ ನೀಡಿದ ಯಾರಿಗಾದರೂ 5 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ಹೇಳಿಕೊಂಡಿದೆ.

ಫೆಬ್ರವರಿ 9 ರಂದು ಮುಂಬೈನ ಆಜಾದ್ ಮೈದಾನದಲ್ಲಿ ನಡೆದ ಬೃಹತ್ ರ‍್ಯಾಲಿ ಉದ್ದೇಶಿಸಿ ಮಾತನಾಡಿದ್ದ ಠಾಕ್ರೆ, ಸಿಎಎ ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿಯ ಅನುಷ್ಠಾನವನ್ನು ಸಮರ್ಥಿಸಿಕೊಂಡಿದ್ದರು. ಸಿಎಎ ಹಾಗೂ ಎನ್​ಆರ್​ಸಿ ವಿರೋಧಿಸಿ ದೇಶದೆಲ್ಲೆಡೆ ​ರ‍್ಯಾಲಿಗಳು ನಡೆಯುತ್ತಿವೆ. ಈ ರ‍್ಯಾಲಿಗಳಿಗೆ ನಾವು ಕೂಡಾ ರ‍್ಯಾಲಿ ನಡೆಸಿಯೇ ಉತ್ತರಿಸಿದ್ದೇವೆ. ಅಂತೆಯೇ ಕತ್ತಿಗೆ ಯಾವತ್ತೂ ಕತ್ತಿಯಿಂದಲೇ ಉತ್ತರಿಸಬೇಕು. ಕಲ್ಲಿಗೆ ಕಲ್ಲಿನಿಂದಲೇ ಉತ್ತರ ನೀಡಬೇಕು ಎಂದು ಸಿಎಎ ವಿರೋಧಿಗಳಿಗೆ ಠಾಕ್ರೆ ಖಡಕ್​ ಸೂಚನೆ ರವಾನಿಸಿದ್ದರು.

ಇದೇ ವೇಳೆ ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟಿಸುತ್ತಿರುವ ಮುಸ್ಲಿಮರ ಬಗ್ಗೆ ಮಾತನಾಡಿದ್ದ ಅವರು, ಮುಸ್ಲಿಮರು ಆಂದೋಲನ ನಡೆಸುತ್ತಿರುವ ಉದ್ದೇಶವೇ ನನಗೆ ಅರ್ಥವಾಗುತ್ತಿಲ್ಲ. ಈ ಕಾಯ್ದೆಯು ಇಲ್ಲಿ ಹುಟ್ಟಿರುವ ಮುಸ್ಲಿಂ ನಾಗರಿಕರಿಗೆ ಸಂಬಂಧಿಸಿಲ್ಲ ಎಂದಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.