ETV Bharat / bharat

ತಮಿಳುನಾಡಿನಲ್ಲಿ ಜಲಕ್ಷಾಮ... ಸಿಎಂ ಬಳಸ್ತಾರೆ ಜಸ್ಟ್‌ 2 ಬಕೆಟ್‌ - undefined

ತಮಿಳಿಗರು ನೀರಿಲ್ಲದೆ ಒದ್ದಾಡುತ್ತಿದ್ದರೂ ಸಚಿವರ ಮನೆಗಳಿಗೆ ದಿನಕ್ಕೆ 2 ಟ್ಯಾಂಕರ್​ ನೀರು ಪೂರೈಕೆಯಾಗ್ತಿದೆ ಎಂಬುದನ್ನು ಸಿಎಂ ಎಡಪ್ಪಾಡಿ ಕೆ. ಪಳನಿಸ್ವಾಮಿ ಅಲ್ಲಗಳೆದರು. ತಮಗೂ ಎಲ್ಲರಂತೆ ನೀರು ಪೂರೈಕೆಯಾಗ್ತಿದೆ ಎಂದರು.

Palaniswami
author img

By

Published : Jun 22, 2019, 11:42 AM IST

Updated : Jun 22, 2019, 12:07 PM IST

ಚೆನ್ನೈ: ತಮಿಳುನಾಡಿನಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಸಿಎಂ ಕೂಡ ದಿನಕ್ಕೆ ಎರಡೇ ಬಕೆಟ್​ ನೀರು ಬಳಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ತಮಿಳಿಗರು ನೀರಿಲ್ಲದೆ ಒದ್ದಾಡುತ್ತಿದ್ದರೂ ಸಚಿವರ ಮನೆಗಳಿಗೆ ದಿನಕ್ಕೆ 2 ಟ್ಯಾಂಕರ್​ ನೀರು ಪೂರೈಕೆಯಾಗ್ತಿದೆ ಎಂಬುದನ್ನು ಸಿಎಂ ಎಡಪ್ಪಾಡಿ ಕೆ. ಪಳನಿಸ್ವಾಮಿ ಅಲ್ಲಗಳೆದರು. ತಮಗೂ ಎಲ್ಲರಂತೆ ನೀರು ಪೂರೈಕೆಯಾಗ್ತಿದೆ ಎಂದರು.

ಕಳೆದ ಎರಡು ತಿಂಗಳಿನಿಂದ ನಮ್ಮ ಮನೆಯಲ್ಲಿ 2 ಟ್ಯಾಂಕರ್​ ನೀರು ಪೂರೈಕೆಯಾಗಿದೆ. ಕುಡಿಯಲು ನಾಲ್ಕು ಲೀಟರ್ ಹಾಗೂ ದಿನಕ್ಕೆ 2 ಬಕೆಟ್​ ನೀರು ಮಾತ್ರ ಬಳಸುತ್ತಿದ್ದೇನೆ. ಜನರು ಸಹ ನೀರನ್ನು ಮಿತವಾಗಿ ಬಳಸಬೇಕು ಎಂದು ಸಲಹೆ ನೀಡಿದರು.

ಶಾಲೆ, ಹಾಸ್ಟೆಲ್​ಗಳಿಗೆ ಸಾಕಾಗುವಷ್ಟು ನೀರು ಪೂರೈಕೆಯಾಗ್ತಿದೆ ಎಂದರು. ಅಲ್ಲದೆ, ನೀರು ಪೂರೈಕೆ ಮಾಡುವ ಲಾರಿಗಳ ಸಂಖ್ಯೆ ಕಡಿಮೆಯಿದ್ದು, ಕೂಡಲೆ ಲಾರಿ ಮಾಲೀಕರೊಂದಿಗೆ ಮಾತುಕತೆ ನಡೆಸುತ್ತೇನೆ. ಕೆಲ ಟ್ಯಾಂಕರ್​ಗಳು ಹೆಚ್ಚು ಹಣ ಪಡೆಯುತ್ತಿದ್ದು, ನಿರ್ದಿಷ್ಟ ಹಣ ವಿಧಿಸಲಾಗುತ್ತೆ ಎಂದರು.

ಕೆಲವರು ಆನ್​ಲೈನ್ ಮೂಲಕ 10 ಟ್ಯಾಂಕರ್​ ನೀರನ್ನು ಬುಕ್ ಮಾಡುತ್ತಿದ್ದು, ಇದು ಸ್ವಾರ್ಥವಾಗಿದೆ. ನಮ್ಮ ಮೊದಲ ಆದ್ಯತೆ ಬಡವರು. ಅವರಿಗೂ ಸಮರ್ಪಕವಾಗಿ ನೀರು ಸಿಗುವಂತೆ ಮಾಡುತ್ತಿದ್ದೇವೆ ಎಂದು ಸಿಎಂ ಹೇಳಿದರು.

ಚೆನ್ನೈ: ತಮಿಳುನಾಡಿನಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಸಿಎಂ ಕೂಡ ದಿನಕ್ಕೆ ಎರಡೇ ಬಕೆಟ್​ ನೀರು ಬಳಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ತಮಿಳಿಗರು ನೀರಿಲ್ಲದೆ ಒದ್ದಾಡುತ್ತಿದ್ದರೂ ಸಚಿವರ ಮನೆಗಳಿಗೆ ದಿನಕ್ಕೆ 2 ಟ್ಯಾಂಕರ್​ ನೀರು ಪೂರೈಕೆಯಾಗ್ತಿದೆ ಎಂಬುದನ್ನು ಸಿಎಂ ಎಡಪ್ಪಾಡಿ ಕೆ. ಪಳನಿಸ್ವಾಮಿ ಅಲ್ಲಗಳೆದರು. ತಮಗೂ ಎಲ್ಲರಂತೆ ನೀರು ಪೂರೈಕೆಯಾಗ್ತಿದೆ ಎಂದರು.

ಕಳೆದ ಎರಡು ತಿಂಗಳಿನಿಂದ ನಮ್ಮ ಮನೆಯಲ್ಲಿ 2 ಟ್ಯಾಂಕರ್​ ನೀರು ಪೂರೈಕೆಯಾಗಿದೆ. ಕುಡಿಯಲು ನಾಲ್ಕು ಲೀಟರ್ ಹಾಗೂ ದಿನಕ್ಕೆ 2 ಬಕೆಟ್​ ನೀರು ಮಾತ್ರ ಬಳಸುತ್ತಿದ್ದೇನೆ. ಜನರು ಸಹ ನೀರನ್ನು ಮಿತವಾಗಿ ಬಳಸಬೇಕು ಎಂದು ಸಲಹೆ ನೀಡಿದರು.

ಶಾಲೆ, ಹಾಸ್ಟೆಲ್​ಗಳಿಗೆ ಸಾಕಾಗುವಷ್ಟು ನೀರು ಪೂರೈಕೆಯಾಗ್ತಿದೆ ಎಂದರು. ಅಲ್ಲದೆ, ನೀರು ಪೂರೈಕೆ ಮಾಡುವ ಲಾರಿಗಳ ಸಂಖ್ಯೆ ಕಡಿಮೆಯಿದ್ದು, ಕೂಡಲೆ ಲಾರಿ ಮಾಲೀಕರೊಂದಿಗೆ ಮಾತುಕತೆ ನಡೆಸುತ್ತೇನೆ. ಕೆಲ ಟ್ಯಾಂಕರ್​ಗಳು ಹೆಚ್ಚು ಹಣ ಪಡೆಯುತ್ತಿದ್ದು, ನಿರ್ದಿಷ್ಟ ಹಣ ವಿಧಿಸಲಾಗುತ್ತೆ ಎಂದರು.

ಕೆಲವರು ಆನ್​ಲೈನ್ ಮೂಲಕ 10 ಟ್ಯಾಂಕರ್​ ನೀರನ್ನು ಬುಕ್ ಮಾಡುತ್ತಿದ್ದು, ಇದು ಸ್ವಾರ್ಥವಾಗಿದೆ. ನಮ್ಮ ಮೊದಲ ಆದ್ಯತೆ ಬಡವರು. ಅವರಿಗೂ ಸಮರ್ಪಕವಾಗಿ ನೀರು ಸಿಗುವಂತೆ ಮಾಡುತ್ತಿದ್ದೇವೆ ಎಂದು ಸಿಎಂ ಹೇಳಿದರು.

Intro:Body:Conclusion:
Last Updated : Jun 22, 2019, 12:07 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.