ETV Bharat / bharat

ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿಯ ನರಳಾಟ: ಪತ್ನಿ ಸ್ಥಿತಿ ಕಂಡು ಕಣ್ಣೀರಿಡುತ್ತಿರುವ ಪತಿ!

ವೈದ್ಯಕೀಯ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ರೋಗಿಯೊಬ್ಬರು ಜೀವನ ಪೂರ್ತಿ ಸಂಕಷ್ಟ ಎದುರಿಸುವ ಘಟನೆ ಒಡಿಶಾದ ಭುವನೇಶ್ವರ್​​​ದಲ್ಲಿ ಕಂಡು ಬಂದಿದೆ.

author img

By

Published : Jul 27, 2020, 9:28 AM IST

medical negligence in Odisha, woman’s abdomen, hospital in Bhubaneswar, AIIMS Hospital in Bhubaneswar, ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿಯ ನರಳಾಟ, ಭುವನೇಶ್ವರದಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿಯ ನರಳಾಟ, ಭುವನೇಶ್ವರ ಸುದ್ದಿ,
ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿಯ ನರಳಾಟ

ಭುವನೇಶ್ವರ: ಖಾಸಗಿ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ರೋಗಿಯೊಬ್ಬರು ಜೀವನಪೂರ್ತಿ ಸಂಕಷ್ಟ ಪಡುವಂತಾಗಿರುವ ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ.

ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿಯ ನರಳಾಟ

ಹೊಟ್ಟೆ ನೋವಿನ ಕಾರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಈ ವೇಳೆ ವೈದ್ಯರು ಹೊಟ್ಟೆಯೊಳಗೆ ನವಿರು ಜಾಲರಿಯಂತಹ ವಸ್ತುವನ್ನ ಬಿಟ್ಟು ಹೊಲಿಗೆ ಹಾಕಿದ್ದಾರೆ. ಇದರಿಂದ ಅವರ ಜೀವನವೇ ಈಗ ಹಾಳಾಗಿ ಹೋಗಿದೆ ಎಂದು ಮಹಿಳೆ ಕುಟುಂಬದವರು ಆರೋಪಿಸಿದ್ದಾರೆ.

ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮಹಿಳೆ ಹೆಸರು ಪುಷ್ಪಾಂಜಲಿ. ಆಪರೇಷನ್​ ಆದ ಬಳಿಕ ಮತ್ತೆ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಅವರ ಪತಿ ಆನಂದ್​ ಅದೇ ಆಸ್ಪತ್ರೆಗೆ ಪತ್ನಿಯನ್ನ ದಾಖಲಿಸಿದ್ದರು. ಆದರೆ, ಸಂಬಂಧಪಟ್ಟ ವೈದ್ಯರು ಅಲ್ಟ್ರಾಸೌಂಡ್ ಡಯಾಗ್ನೋಸ್ಟಿಕ್ ಪರೀಕ್ಷೆ ನಡೆಸಲು ನಿರಾಕರಿಸಿದ್ದಾರಂತೆ. ಇದರಿಂದ ಬೇರೆ ಆಸ್ಪತ್ರೆಗೆ ಮಹಿಳೆ ದಾಖಲಿಸಿದಾಗ ಹೊಟ್ಟೆಯಲ್ಲಿ ಜಾಲರಿಯಂತಹ ವಸ್ತುಗಳನ್ನ ಬಿಟ್ಟು ಹೊಲಿಗೆ ಹಾಕಿರುವುದು ಗೊತ್ತಾಗಿದೆ.

ಇದೀಗ ಮಹಿಳೆಯನ್ನ ದೆಹಲಿಯ ಏಮ್ಸ್​​ಗೆ ದಾಖಲಿಸಲಾಗಿದೆ. ಈಗಾಗಲೇ ಅವರು 2 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಈ ಸಂಬಂಧ ಮಾತನಾಡಿರುವ ಪತಿ ಆನಂದ್​, ಮುಂದಿನ ಚಿಕಿತ್ಸೆಗೆ ಹೇಗೆ ಹಣ ಹೊಂದಿಸಲಿ ಎಂದು ಗೋಳಾಡುತ್ತಿದ್ದಾರೆ. ಇದೇ ವೇಳೆ ಖಾಸಗಿ ಆಸ್ಪತ್ರೆಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭುವನೇಶ್ವರ: ಖಾಸಗಿ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ರೋಗಿಯೊಬ್ಬರು ಜೀವನಪೂರ್ತಿ ಸಂಕಷ್ಟ ಪಡುವಂತಾಗಿರುವ ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ.

ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿಯ ನರಳಾಟ

ಹೊಟ್ಟೆ ನೋವಿನ ಕಾರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಈ ವೇಳೆ ವೈದ್ಯರು ಹೊಟ್ಟೆಯೊಳಗೆ ನವಿರು ಜಾಲರಿಯಂತಹ ವಸ್ತುವನ್ನ ಬಿಟ್ಟು ಹೊಲಿಗೆ ಹಾಕಿದ್ದಾರೆ. ಇದರಿಂದ ಅವರ ಜೀವನವೇ ಈಗ ಹಾಳಾಗಿ ಹೋಗಿದೆ ಎಂದು ಮಹಿಳೆ ಕುಟುಂಬದವರು ಆರೋಪಿಸಿದ್ದಾರೆ.

ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮಹಿಳೆ ಹೆಸರು ಪುಷ್ಪಾಂಜಲಿ. ಆಪರೇಷನ್​ ಆದ ಬಳಿಕ ಮತ್ತೆ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಅವರ ಪತಿ ಆನಂದ್​ ಅದೇ ಆಸ್ಪತ್ರೆಗೆ ಪತ್ನಿಯನ್ನ ದಾಖಲಿಸಿದ್ದರು. ಆದರೆ, ಸಂಬಂಧಪಟ್ಟ ವೈದ್ಯರು ಅಲ್ಟ್ರಾಸೌಂಡ್ ಡಯಾಗ್ನೋಸ್ಟಿಕ್ ಪರೀಕ್ಷೆ ನಡೆಸಲು ನಿರಾಕರಿಸಿದ್ದಾರಂತೆ. ಇದರಿಂದ ಬೇರೆ ಆಸ್ಪತ್ರೆಗೆ ಮಹಿಳೆ ದಾಖಲಿಸಿದಾಗ ಹೊಟ್ಟೆಯಲ್ಲಿ ಜಾಲರಿಯಂತಹ ವಸ್ತುಗಳನ್ನ ಬಿಟ್ಟು ಹೊಲಿಗೆ ಹಾಕಿರುವುದು ಗೊತ್ತಾಗಿದೆ.

ಇದೀಗ ಮಹಿಳೆಯನ್ನ ದೆಹಲಿಯ ಏಮ್ಸ್​​ಗೆ ದಾಖಲಿಸಲಾಗಿದೆ. ಈಗಾಗಲೇ ಅವರು 2 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಈ ಸಂಬಂಧ ಮಾತನಾಡಿರುವ ಪತಿ ಆನಂದ್​, ಮುಂದಿನ ಚಿಕಿತ್ಸೆಗೆ ಹೇಗೆ ಹಣ ಹೊಂದಿಸಲಿ ಎಂದು ಗೋಳಾಡುತ್ತಿದ್ದಾರೆ. ಇದೇ ವೇಳೆ ಖಾಸಗಿ ಆಸ್ಪತ್ರೆಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.