ETV Bharat / bharat

ಬಾಲಕೋಟ್​ ದಾಳಿಯಲ್ಲೂ ಪರಿಕ್ಕರ್ ಪಾತ್ರ ಮಹತ್ವದ್ದಾಗಿತ್ತು... ಅಚ್ಚರಿ ಮೂಡಿಸಿದ ರಾಜನಾಥ್​ ಸಿಂಗ್​ ಹೇಳಿಕೆ

ವಾಯುದಾಳಿಯಲ್ಲೂ ಮನೋಹರ್ ಪರಿಕ್ಕರ್ ಪ್ರಮುಖ ಪಾತ್ರ ವಹಿಸಿದ್ದರು ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

author img

By

Published : Mar 28, 2019, 8:58 PM IST

ರಾಜನಾಥ್​ ಸಿಂಗ್

ಪಣಜಿ: ದಿವಂಗತ ಮನೋಹರ್ ಪರಿಕ್ಕರ್ ಇತ್ತೀಚೆಗೆ ಭಾರತದ ವಾಯುಸೇನೆ ನಡೆಸಿದ ವಾಯುದಾಳಿಯ ಯೋಜನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎನ್ನುವ ಕುತೂಹಲಕಾರಿ ಮಾಹಿತಿಯನ್ನು ಗೃಹ ಸಚಿವ ರಾಜನಾಥ್​ ಸಿಂಗ್ ಹೇಳಿದ್ದಾರೆ.

ಉರಿ ದಾಳಿಯ ಬಳಿಕ ಪ್ರಧಾನಿ ಮೋದಿ ನನ್ನನ್ನೂ ಸೇರಿ ಮೂವರಿಗೆ ಕರೆ ಮಾಡಿದ್ದರು. ಈ ವೇಳೆ ಪರಿಕ್ಕರ್ ಮುಖದಲ್ಲಿ ಆಕ್ರೋಶ ಎದ್ದು ಕಾಣಿಸುತ್ತಿತ್ತು. ನಂತರ ನಡೆದ ಸರ್ಜಿಕಲ್ ಸ್ಟ್ರೈಕ್​ನ ರೂಪುರೇಷೆ ಹಾಗೂ ಸರ್ಜಿಕಲ್​ ಸ್ಟ್ರೈಕ್​​ ನಡೆದ ಆ ರಾತ್ರಿಯಿಡೀ ಎಲ್ಲವನ್ನೂ ಗಮನಿಸುತ್ತಿದ್ದರು ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

  • #WATCH Rajnath Singh in Panaji: After Uri, PM had called 2-3 of us. Anger was visible on Parrikar ji's face, he played an important role in that air strike & observed the operation all night. You may not know this, but he also played a crucial role in 2 air strikes. #Goa pic.twitter.com/RZUOcZhdHm

    — ANI (@ANI) March 28, 2019 " class="align-text-top noRightClick twitterSection" data=" ">

ಪುಲ್ವಾಮಾ ದಾಳಿ ಬಳಿಕ ಭಾರತದ ವಾಯುಸೇನೆ ವಾಯುದಾಳಿ ಮೂಲಕ ಪ್ರತೀಕಾರ ತೀರಿಸಿಕೊಂಡಿತ್ತು. ಈ ವಾಯುದಾಳಿಯಲ್ಲೂ ಮನೋಹರ್ ಪರಿಕ್ಕರ್ ಪ್ರಮುಖ ಪಾತ್ರ ವಹಿಸಿದ್ದರು ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಇಂದು ಪಣಜಿಯಲ್ಲಿ ಮನೋಹರ್ ಪರಿಕ್ಕರ್ ಸಂತಾಪ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್ ಭಾಗವಹಿಸಿದ್ದರು.

ಪಣಜಿ: ದಿವಂಗತ ಮನೋಹರ್ ಪರಿಕ್ಕರ್ ಇತ್ತೀಚೆಗೆ ಭಾರತದ ವಾಯುಸೇನೆ ನಡೆಸಿದ ವಾಯುದಾಳಿಯ ಯೋಜನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎನ್ನುವ ಕುತೂಹಲಕಾರಿ ಮಾಹಿತಿಯನ್ನು ಗೃಹ ಸಚಿವ ರಾಜನಾಥ್​ ಸಿಂಗ್ ಹೇಳಿದ್ದಾರೆ.

ಉರಿ ದಾಳಿಯ ಬಳಿಕ ಪ್ರಧಾನಿ ಮೋದಿ ನನ್ನನ್ನೂ ಸೇರಿ ಮೂವರಿಗೆ ಕರೆ ಮಾಡಿದ್ದರು. ಈ ವೇಳೆ ಪರಿಕ್ಕರ್ ಮುಖದಲ್ಲಿ ಆಕ್ರೋಶ ಎದ್ದು ಕಾಣಿಸುತ್ತಿತ್ತು. ನಂತರ ನಡೆದ ಸರ್ಜಿಕಲ್ ಸ್ಟ್ರೈಕ್​ನ ರೂಪುರೇಷೆ ಹಾಗೂ ಸರ್ಜಿಕಲ್​ ಸ್ಟ್ರೈಕ್​​ ನಡೆದ ಆ ರಾತ್ರಿಯಿಡೀ ಎಲ್ಲವನ್ನೂ ಗಮನಿಸುತ್ತಿದ್ದರು ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

  • #WATCH Rajnath Singh in Panaji: After Uri, PM had called 2-3 of us. Anger was visible on Parrikar ji's face, he played an important role in that air strike & observed the operation all night. You may not know this, but he also played a crucial role in 2 air strikes. #Goa pic.twitter.com/RZUOcZhdHm

    — ANI (@ANI) March 28, 2019 " class="align-text-top noRightClick twitterSection" data=" ">

ಪುಲ್ವಾಮಾ ದಾಳಿ ಬಳಿಕ ಭಾರತದ ವಾಯುಸೇನೆ ವಾಯುದಾಳಿ ಮೂಲಕ ಪ್ರತೀಕಾರ ತೀರಿಸಿಕೊಂಡಿತ್ತು. ಈ ವಾಯುದಾಳಿಯಲ್ಲೂ ಮನೋಹರ್ ಪರಿಕ್ಕರ್ ಪ್ರಮುಖ ಪಾತ್ರ ವಹಿಸಿದ್ದರು ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಇಂದು ಪಣಜಿಯಲ್ಲಿ ಮನೋಹರ್ ಪರಿಕ್ಕರ್ ಸಂತಾಪ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್ ಭಾಗವಹಿಸಿದ್ದರು.

Intro:Body:

ವಾಯುದಾಳಿಯಲ್ಲೂ ಪರಿಕ್ಕರ್ ಪಾತ್ರ ಮಹತ್ವದ್ದಾಗಿತ್ತು... ಅಚ್ಚರಿಯ ಮಾಹಿತಿ ಹೇಳಿದ ರಾಜನಾಥ್​ ಸಿಂಗ್​



ಪಣಜಿ: ದಿವಂಗತ ಮನೋಹರ್ ಪರಿಕ್ಕರ್ ಇತ್ತೀಚೆಗೆ ಭಾರತದ ವಾಯುಸೇನೆ ನಡೆಸಿದ ವಾಯುದಾಳಿಯ ಯೋಜನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎನ್ನುವ ಕುತೂಹಲಕಾರಿ ಮಾಹಿತಿಯನ್ನು ಗೃಹ ಸಚಿವ ರಾಜನಾಥ್​ ಸಿಂಗ್ ಹೇಳಿದ್ದಾರೆ.



ಉರಿ ದಾಳಿಯ ಬಳಿಕ ಪ್ರಧಾನಿ ಮೋದಿ ನನ್ನನ್ನೂ ಸೇರಿ ಮೂವರಿಗೆ ಕರೆ ಮಾಡಿದ್ದರು. ಈ ವೇಳೆ ಪರಿಕ್ಕರ್ ಮುಖದಲ್ಲಿ ಆಕ್ರೋಶ ಎದ್ದು ಕಾಣಿಸುತ್ತಿತ್ತು. ನಂತರ ನಡೆದ ಸರ್ಜಿಕಲ್ ಸ್ಟ್ರೈಕ್​ನ ರೂಪುರೇಷೆ ಹಾಗೂ ಸರ್ಜಿಕಲ್​ ಸ್ಟ್ರೈಕ್​​ ನಡೆದ  ಆ ರಾತ್ರಿಯಿಡೀ ಎಲ್ಲವನ್ನೂ ಗಮನಿಸುತ್ತಿದ್ದರು ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.



ಪುಲ್ವಾಮಾ ದಾಳಿ ಬಳಿಕ ಭಾರತದ ವಾಯುಸೇನೆ ವಾಯುದಾಳಿ ಮೂಲಕ ಪ್ರತೀಕಾರ ತೀರಿಸಿಕೊಂಡಿತ್ತು. ಈ ವಾಯುದಾಳಿಯಲ್ಲೂ ಮನೋಹರ್ ಪರಿಕ್ಕರ್ ಪ್ರಮುಖ ಪಾತ್ರ ವಹಿಸಿದ್ದರು ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.



ಇಂದು ಪಣಜಿಯಲ್ಲಿ ಮನೋಹರ್ ಪರಿಕ್ಕರ್ ಸಂತಾಪ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್ ಭಾಗವಹಿಸಿದ್ದರು.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.