ETV Bharat / bharat

ವಿಚಾರಣೆಗೆ ಹಾಜರಾಗಲು 1,400 ಕಿ.ಮೀ ಸೈಕಲ್ ಪ್ರಯಾಣ: ಆರೋಪಿಗೆ ಹೂಮಾಲೆ ಹಾಕಿ ಪೊಲೀಸರ ಸ್ವಾಗತ - accused traveld Bihar to Madhya Pradesh by cycles

ವಿಚಾರಣೆಗೆ ಹಾಜರಾಗಲು ಆರೋಪಿಯೊಬ್ಬ ಬಿಹಾರದ ಸೀತಾಮರ್ಹಿಯಿಂದ ಮಧ್ಯಪ್ರದೇಶದ ಉಜ್ಜಿಯಿನಿಗೆ 1,400 ಕಿ.ಮೀ ಸೈಕಲ್ ಪ್ರಯಾಣ ಮಾಡಿ ಗಮನ ಸೆಳೆದಿದ್ದಾನೆ.

Man praised for cycling 1400 km to get warrant
ವಿಚಾರಣೆಗೆ ಹಾಜರಾಗಲು ಸೈಕಲ್ ಪ್ರಯಾಣ ಮಾಡಿದ ಆರೋಪ
author img

By

Published : Oct 11, 2020, 4:50 PM IST

ಉಜ್ಜಯಿನಿ (ಮಧ್ಯಪ್ರದೇಶ) : ಆರು ವರ್ಷದ ಹಿಂದಿನ ಪ್ರಕರಣದ ವಿಚಾರಣೆಗೆ ಹಾಜರಾಗಲು ಬಿಹಾರ ಮೂಲದ ಆರೋಪಿಯೊಬ್ಬ ಮಧ್ಯಪ್ರದೇಶದ ಉಜ್ಜಯಿನಿಯ ನಜ್ಜಿರಿ ಪೊಲೀಸ್ ಠಾಣೆಗೆ 1,400 ಕಿಮೀ ಸೈಕಲ್ ಮೂಲಕ ಪ್ರಯಾಣಿಸಿ ಗಮನ ಸೆಳೆದಿದ್ದಾನೆ. ಈತನ ಪ್ರಯಾಣದ ಕಥೆ ಕೇಳಿ ಪೊಲೀಸರೇ ಬೆರಗಾಗಿದ್ದಾರೆ.

ಮುಕೇಶ್​ ಲೋಹರ್​ ಎಂಬಾತ ಸೈಕಲ್ ಮೂಲಕ ಪ್ರಯಾಣಿಸಿ ಉಜ್ಜಯಿನಿ ತಲುಪಿದ ಆರೋಪಿಯಾಗಿದ್ದಾನೆ. ಕಾನೂನಿನ ಮೇಲೆ ಈತ ಇಟ್ಟಿರುವ ಗೌರವವನ್ನು ನೋಡಿ, ಠಾಣೆಗೆ ತಲುಪುತ್ತಿದ್ದಂತೆ ಪೊಲೀಸರು ಹೂಮಾಲೆ ಹಾಕಿ ಸ್ವಾಗತಿಸಿದ್ದಾರೆ.

ಮೂಲತಃ ಉಜ್ಜಯಿನಿ ನಿವಾಸಿಯಾಗಿರುವ ಮುಖೇಶ್ ಕುಮಾರ್, ವಿವಾಹವಾದ ಬಳಿಕ ಬಿಹಾರದಲ್ಲಿ ನೆಲೆಸಿದ್ದಾನೆ. ಆರು ವರ್ಷಗಳ ಹಿಂದೆ ಉಜ್ಜಯಿನಿಯ ನಜ್ಜಿರಿ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಹಲ್ಲೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಆರೋಪಿ ಮುಖೇಶ್​ ಕುಮಾರ್​ಗೆ ವಾರೆಂಟ್​ ನೀಡಿದ್ದರು. ಬಿಹಾರದಿಂದ ಉಜ್ಜಯಿನಿಗೆ ತಲುಪಲು ಸರಿಯಾದ ವ್ಯವಸ್ಥೆ ಇಲ್ಲದ ಹಿನ್ನೆಲೆ, ಮುಖೇಶ್​ ತನ್ನ ಸೈಕಲ್​​ನಲ್ಲೇ 1,400 ಕಿ.ಮೀ ಕ್ರಮಿಸಿದ ಉಜ್ಜಯಿನಿ ತಲುಪಿದ್ದಾನೆ.

ಬಿಹಾರದ ಸೀತಾಮರ್ಹಿಯಿಂದ ಪ್ರಯಾಣ ಪ್ರಾರಂಭಿಸಿದ ಮುಖೇಶ್​ ಕುಮಾರ್​, ಹತ್ತು ದಿನಗಳ ಕಾಲ ಸೈಕಲ್​ ತುಳಿದು ಉಜ್ಜಯಿನಿಯ ನಜ್ಜಿರಿ ಪೊಲೀಸ್​​ ಠಾಣೆ ತಲುಪಿದ್ದಾನೆ. ಬೇರೆ ವಾಹನದಲ್ಲಿ ಪ್ರಯಾಣಿಸಲು ಮುಖೇಶ್​ ಆರ್ಥಿಕವಾಗಿ ಸಬಲನಾಗಿರಲಿಲ್ಲ. ಆದರೆ, ಕಾನೂನು ಪಾಲಿಸಬೇಕಾಗಿತ್ತು. ಹೀಗಾಗಿ, ಸೈಕಲ್ ಪ್ರಯಾಣ ಮಾಡಿದ್ದಾನೆ.

ಉಜ್ಜಯಿನಿ (ಮಧ್ಯಪ್ರದೇಶ) : ಆರು ವರ್ಷದ ಹಿಂದಿನ ಪ್ರಕರಣದ ವಿಚಾರಣೆಗೆ ಹಾಜರಾಗಲು ಬಿಹಾರ ಮೂಲದ ಆರೋಪಿಯೊಬ್ಬ ಮಧ್ಯಪ್ರದೇಶದ ಉಜ್ಜಯಿನಿಯ ನಜ್ಜಿರಿ ಪೊಲೀಸ್ ಠಾಣೆಗೆ 1,400 ಕಿಮೀ ಸೈಕಲ್ ಮೂಲಕ ಪ್ರಯಾಣಿಸಿ ಗಮನ ಸೆಳೆದಿದ್ದಾನೆ. ಈತನ ಪ್ರಯಾಣದ ಕಥೆ ಕೇಳಿ ಪೊಲೀಸರೇ ಬೆರಗಾಗಿದ್ದಾರೆ.

ಮುಕೇಶ್​ ಲೋಹರ್​ ಎಂಬಾತ ಸೈಕಲ್ ಮೂಲಕ ಪ್ರಯಾಣಿಸಿ ಉಜ್ಜಯಿನಿ ತಲುಪಿದ ಆರೋಪಿಯಾಗಿದ್ದಾನೆ. ಕಾನೂನಿನ ಮೇಲೆ ಈತ ಇಟ್ಟಿರುವ ಗೌರವವನ್ನು ನೋಡಿ, ಠಾಣೆಗೆ ತಲುಪುತ್ತಿದ್ದಂತೆ ಪೊಲೀಸರು ಹೂಮಾಲೆ ಹಾಕಿ ಸ್ವಾಗತಿಸಿದ್ದಾರೆ.

ಮೂಲತಃ ಉಜ್ಜಯಿನಿ ನಿವಾಸಿಯಾಗಿರುವ ಮುಖೇಶ್ ಕುಮಾರ್, ವಿವಾಹವಾದ ಬಳಿಕ ಬಿಹಾರದಲ್ಲಿ ನೆಲೆಸಿದ್ದಾನೆ. ಆರು ವರ್ಷಗಳ ಹಿಂದೆ ಉಜ್ಜಯಿನಿಯ ನಜ್ಜಿರಿ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಹಲ್ಲೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಆರೋಪಿ ಮುಖೇಶ್​ ಕುಮಾರ್​ಗೆ ವಾರೆಂಟ್​ ನೀಡಿದ್ದರು. ಬಿಹಾರದಿಂದ ಉಜ್ಜಯಿನಿಗೆ ತಲುಪಲು ಸರಿಯಾದ ವ್ಯವಸ್ಥೆ ಇಲ್ಲದ ಹಿನ್ನೆಲೆ, ಮುಖೇಶ್​ ತನ್ನ ಸೈಕಲ್​​ನಲ್ಲೇ 1,400 ಕಿ.ಮೀ ಕ್ರಮಿಸಿದ ಉಜ್ಜಯಿನಿ ತಲುಪಿದ್ದಾನೆ.

ಬಿಹಾರದ ಸೀತಾಮರ್ಹಿಯಿಂದ ಪ್ರಯಾಣ ಪ್ರಾರಂಭಿಸಿದ ಮುಖೇಶ್​ ಕುಮಾರ್​, ಹತ್ತು ದಿನಗಳ ಕಾಲ ಸೈಕಲ್​ ತುಳಿದು ಉಜ್ಜಯಿನಿಯ ನಜ್ಜಿರಿ ಪೊಲೀಸ್​​ ಠಾಣೆ ತಲುಪಿದ್ದಾನೆ. ಬೇರೆ ವಾಹನದಲ್ಲಿ ಪ್ರಯಾಣಿಸಲು ಮುಖೇಶ್​ ಆರ್ಥಿಕವಾಗಿ ಸಬಲನಾಗಿರಲಿಲ್ಲ. ಆದರೆ, ಕಾನೂನು ಪಾಲಿಸಬೇಕಾಗಿತ್ತು. ಹೀಗಾಗಿ, ಸೈಕಲ್ ಪ್ರಯಾಣ ಮಾಡಿದ್ದಾನೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.