ಕೋಲ್ಕತ್ತಾ: 'ಜೈ ಶ್ರೀ ರಾಮ್' ಘೋಷಣೆಯ ಮೂಲಕ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಬಿಜೆಪಿ ಟಾಂಗ್ ನೀಡುತ್ತಲೇ ಇದೆ. ಇದೀಗ ಮಮತಾ ಸಂಬಂಧಿ, 'ಜೈ ಮಾಕಾಳಿ' ಘೋಷಣೆಯಿಂದ 'ಜೈ ಶ್ರೀರಾಮ್' ಘೋಷಣೆಯ ಟಿಆರ್ಪಿ ಕಡಿಮೆಯಾಗುತ್ತೆ ಎಂದು ಹೇಳಿಕೆ ನೀಡಿದ್ದಾರೆ.
ದೀದಿ ಸಂಬಂಧಿ, ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಕಾರ್ಯಕ್ರಮವೊಂದರಲ್ಲಿ, ಜೈ ಶ್ರೀರಾಮ್ ಘೋಷಣೆಯಂತೆಯೇ ಜೈ ಮಾಕಾಳಿ ಘೋಷಣೆ ಹೆಚ್ಚಿಸಲು ದಿಲೀಪ್ ಘೋಷ್ ಹೇಳಿದ್ದಾರೆಂದು ಜನರು ನನಗೆ ಹೇಳಿದರು. ನಾನವರಿಗೆ ಹೇಳಿದೆ, ಮಮತಾ ಬ್ಯಾನರ್ಜಿ ಅಲ್ಲಿಯೇ ಇರುವುದರಿಂದ, ರಾಮನ ಟಿಆರ್ಪಿ ಕಡಿಮೆಯಾಗಿ, ಮಾ ಕಾಳಿಯ ಟಿಆರ್ಪಿ ಹೆಚ್ಚುತ್ತದೆ ಎಂದಿದ್ದಾರೆ.
ನಾನು ಪ್ರಾರ್ಥಿಸುವಾಗ ಮಾತ್ರ ಜೈ ಶ್ರೀ ರಾಮ್ ಎನ್ನುತ್ತೇನೆ. ರಾಜಕೀಯದಲ್ಲಿ ಜೈ ಹಿಂದ್ ಎಂದೇ ಬಳಸುತ್ತೇನೆ. ಆದರೆ ಪ್ರಧಾನಿ ಮೋದಿ, ನಿರುದ್ಯೋಗ, ರೈತರ ಸಾವಿನ ಸಂಖ್ಯೆ ಏರಿದ ಸಮಯದಲ್ಲೂ ಜೈ ಶ್ರೀ ರಾಮ್ ಎಂದೇ ಪ್ರತಿಕ್ರಿಯೆ ನೀಡ್ತಾರೆ ಎಂದು ಟೀಕಿಸಿದ್ದಾರೆ.
ಸಿಪಿಐ-ಎಂಗಳಂತೆಯೇ ಬಿಜೆಪಿ ಹಿಂಸೆಯ ರಾಜಕಾರಣ ಮಾಡುತ್ತಿದೆ. ಬಂಗಾಳದ ಜನರ ಮೂಲಕ ಜೈ ಶ್ರೀರಾಮ್ ಎಂಬ ಪೋಸ್ಟ್ ಕಾರ್ಡ್ಗಳನ್ನು ಕಳುಹಿಸಲು ಯತ್ನಿಸುತ್ತಿದೆ. ಆದರೆ ಜನರು ಜೈ ಹೇ, ಜೈ ಬಂಗಾಳ ಹಾಗೂ ಜೈ ಹಿಂದ್ ಎಂದು ಜೋರಾಗಿ ಕೂಗುವ ಮೂಲಕ ನಿಮಗೆ ಸರಿಯಾದ ಪ್ರತಿಕ್ರಿಯೆ ಕೊಡ್ತಾರೆ ಎಂದರು.