ETV Bharat / bharat

ಬಾಟಲಿಗೆ ಪೆಟ್ರೋಲ್‌ ಹಾಕಲಿಲ್ಲ ಎಂಬ ಕೋಪದಲ್ಲಿ ಹಾವು ಬಿಟ್ಟು ಹೋದ ವ್ಯಕ್ತಿ: ವಿಡಿಯೋ

author img

By

Published : Jul 15, 2020, 4:29 PM IST

ಪೆಟ್ರೋಲ್ ಶಾಪ್​ನಲ್ಲಿ ತಾನು ತಂದಿದ್ದ ಬಾಟಲಿಗೆ ಪೆಟ್ರೋಲ್​​ ತುಂಬಲಿಲ್ಲ ಎಂಬ ಕಾರಣಕ್ಕೆ ಸಿಟ್ಟಾದ ವ್ಯಕ್ತಿ ವಿಚಿತ್ರವಾಗಿ ನಡೆದುಕೊಂಡಿರುವ ಘಟನೆ ನಡೆದಿದೆ.

Maharashtra Man
Maharashtra Man

ಮುಂಬೈ: ಬಾಟಲಿಗೆ ಪೆಟ್ರೋಲ್​ ಹಾಕಲಿಲ್ಲ ಎಂಬ ಆಕ್ರೋಶದಲ್ಲಿ ವ್ಯಕ್ತಿಯೊಬ್ಬ ಪೆಟ್ರೋಲ್​ ಬಂಕ್‌ನಲ್ಲಿ ಹಾವು ಬಿಟ್ಟು, ಅಲ್ಲಿಂದ ಪರಾರಿಯಾಗಿರುವ ಘಟನೆ ನಡೆದಿದೆ.

ಪೆಟ್ರೋಲ್ ಬಂಕ್‌ ಕಚೇರಿಯೊಳಗೆ​ ಹಾವು ಬಿಟ್ಟು ಹೋದ ವ್ಯಕ್ತಿ!

ಮಹಾರಾಷ್ಟ್ರದ ಬುಲ್ದಾನ್​ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಇದರ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಪೆಟ್ರೋಲ್​ ಪಂಪ್​ಗೆ ಬಂದಿರುವ ವ್ಯಕ್ತಿ ಬಾಟಲಿಗೆ ಪೆಟ್ರೋಲ್​ ತುಂಬುವಂತೆ ಒತ್ತಾಯಿಸಿದ್ದಾನೆ. ಆದರೆ ನಿಯಮದ ಪ್ರಕಾರ ಬಾಟಲಿಗೆ ಬಂಕ್ ಸಿಬ್ಬಂದಿ ತೈಲ ತುಂಬಿಸಿಕೊಡುವಂತಿಲ್ಲ. ಹೀಗಾಗಿ ಸಹಜವಾಗಿಯೇ ಸಿಬ್ಬಂದಿ ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ವ್ಯಕ್ತಿ ಚೀಲದಲ್ಲಿ ಹಾವು ಹಿಡಿದುಕೊಂಡು ಬಂದಿದ್ದು, ಅದನ್ನು ಪೆಟ್ರೋಲ್ ಬಂಕ್‌​ನಲ್ಲಿದ್ದ ಕಚೇರಿಯೊಳಗೆ ಬಿಟ್ಟು ಹೋಗಿದ್ದಾನೆ.

ಮುಂಬೈ: ಬಾಟಲಿಗೆ ಪೆಟ್ರೋಲ್​ ಹಾಕಲಿಲ್ಲ ಎಂಬ ಆಕ್ರೋಶದಲ್ಲಿ ವ್ಯಕ್ತಿಯೊಬ್ಬ ಪೆಟ್ರೋಲ್​ ಬಂಕ್‌ನಲ್ಲಿ ಹಾವು ಬಿಟ್ಟು, ಅಲ್ಲಿಂದ ಪರಾರಿಯಾಗಿರುವ ಘಟನೆ ನಡೆದಿದೆ.

ಪೆಟ್ರೋಲ್ ಬಂಕ್‌ ಕಚೇರಿಯೊಳಗೆ​ ಹಾವು ಬಿಟ್ಟು ಹೋದ ವ್ಯಕ್ತಿ!

ಮಹಾರಾಷ್ಟ್ರದ ಬುಲ್ದಾನ್​ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಇದರ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಪೆಟ್ರೋಲ್​ ಪಂಪ್​ಗೆ ಬಂದಿರುವ ವ್ಯಕ್ತಿ ಬಾಟಲಿಗೆ ಪೆಟ್ರೋಲ್​ ತುಂಬುವಂತೆ ಒತ್ತಾಯಿಸಿದ್ದಾನೆ. ಆದರೆ ನಿಯಮದ ಪ್ರಕಾರ ಬಾಟಲಿಗೆ ಬಂಕ್ ಸಿಬ್ಬಂದಿ ತೈಲ ತುಂಬಿಸಿಕೊಡುವಂತಿಲ್ಲ. ಹೀಗಾಗಿ ಸಹಜವಾಗಿಯೇ ಸಿಬ್ಬಂದಿ ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ವ್ಯಕ್ತಿ ಚೀಲದಲ್ಲಿ ಹಾವು ಹಿಡಿದುಕೊಂಡು ಬಂದಿದ್ದು, ಅದನ್ನು ಪೆಟ್ರೋಲ್ ಬಂಕ್‌​ನಲ್ಲಿದ್ದ ಕಚೇರಿಯೊಳಗೆ ಬಿಟ್ಟು ಹೋಗಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.