ETV Bharat / bharat

ಬಿಜೆಪಿಯೊಂದೇ ಬಹುಮತ ಗಳಿಸೋದು ಕಷ್ಟ ಕಷ್ಟ: ಮಿತ್ರಪಕ್ಷ ಶಿವಸೇನೆ ಅಪಸ್ವರ - undefined

ಬಿಜೆಪಿ ಈ ಬಾರಿ ಸ್ಪಷ್ಟ ಬಹುಮತ ಸಾಧಿಸುವುದು ಕಷ್ಟಸಾಧ್ಯ. ಸರ್ಕಾರ ರಚನೆ ವೇಳೆ ಮೈತ್ರಿ ಅನಿವಾರ್ಯವಾಗಬಹುದು ಎಂದು ಶಿವಸೇನೆಯ ನಾಯಕ ಸಂಜಯ್​ ರಾವತ್ ಹೇಳಿದ್ದಾರೆ.

ಸಂಜಯ್​ ರಾವತ್
author img

By

Published : May 7, 2019, 5:57 PM IST

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಯಾರು ಗೆಲ್ತಾರೆ ಎಂಬ ಲೆಕ್ಕಾಚಾರ ಕಾವೇರಿರುವ ಸಂದರ್ಭದಲ್ಲಿಯೇ ಬಿಜೆಪಿ ಮಿತ್ರಪಕ್ಷ ಶಿವಸೇನೆ ಸ್ಪಷ್ಟ ಬಹುಮತದ ವಿಚಾರವಾಗಿ ಅಪಸ್ವರವೆತ್ತಿದೆ.

ರಾಮ್​ ಮಾಧವ್​ರ ಹೇಳಿಕೆಯನ್ನು ಪುನರುಚ್ಛರಿಸಿರುವ ಶಿವಸೇನೆಯ ನಾಯಕ ಸಂಜಯ್​ ರಾವತ್​, ಬಿಜೆಪಿ ಸ್ಪಷ್ಟ ಬಹುಮತ ಗಳಿಸಿ ಗದ್ದುಗೆ ಏರುವುದು ಕಷ್ಟ ಎಂದಿದ್ದಾರೆ. ಕಳೆದ ಚುನಾವಣೆಯಂತೆ ಬಿಜೆಪಿ ಈ ಬಾರಿ ಸ್ಪಷ್ಟ ಬಹುಮತ ಸಾಧಿಸುವುದು ಕಷ್ಟಸಾಧ್ಯ. ಸರ್ಕಾರ ರಚನೆ ವೇಳೆ ಮೈತ್ರಿ ಅನಿವಾರ್ಯವಾಗಬಹುದು ಎಂದು ಹೇಳಿದ್ದಾರೆ.

ಈ ಬಾರಿ ಬಿಜೆಪಿ 280-282 ಸ್ಥಾನಗಳನ್ನು ಗೆಲ್ಲುವುದೂ ಕಷ್ಟವಿದೆ. ಆದರೆ ಮಿತ್ರ ಪಕ್ಷಗಳಿರುವ ಎನ್​ಡಿಎ ಕೂಟ ಬಹುಮತ ಗಳಿಸಬಹುದು ಎಂದು ರಾವತ್ ಹೇಳಿದ್ದಾರೆ.

ಈ ಮೊದಲು ಬಿಜೆಪಿ ಮುಖ್ಯ ಕಾರ್ಯದರ್ಶಿ ರಾಮ್ ಮಾಧವ್​, ಬಿಜೆಪಿ ಸರ್ಕಾರ ರಚಿಸಲು ಮಿತ್ರಪಕ್ಷಗಳ ಸಹಕಾರ ಅಗತ್ಯ. ಬಿಜೆಪಿಯೊಂದೇ 271 ಸ್ಥಾನಗಳಲ್ಲಿ ಗೆದ್ದರೂ ನಮಗೆ ತುಂಬಾ ಖುಷಿಯಾಗುತ್ತೆ ಎಂದು ಹೇಳಿದ್ದರು.

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಯಾರು ಗೆಲ್ತಾರೆ ಎಂಬ ಲೆಕ್ಕಾಚಾರ ಕಾವೇರಿರುವ ಸಂದರ್ಭದಲ್ಲಿಯೇ ಬಿಜೆಪಿ ಮಿತ್ರಪಕ್ಷ ಶಿವಸೇನೆ ಸ್ಪಷ್ಟ ಬಹುಮತದ ವಿಚಾರವಾಗಿ ಅಪಸ್ವರವೆತ್ತಿದೆ.

ರಾಮ್​ ಮಾಧವ್​ರ ಹೇಳಿಕೆಯನ್ನು ಪುನರುಚ್ಛರಿಸಿರುವ ಶಿವಸೇನೆಯ ನಾಯಕ ಸಂಜಯ್​ ರಾವತ್​, ಬಿಜೆಪಿ ಸ್ಪಷ್ಟ ಬಹುಮತ ಗಳಿಸಿ ಗದ್ದುಗೆ ಏರುವುದು ಕಷ್ಟ ಎಂದಿದ್ದಾರೆ. ಕಳೆದ ಚುನಾವಣೆಯಂತೆ ಬಿಜೆಪಿ ಈ ಬಾರಿ ಸ್ಪಷ್ಟ ಬಹುಮತ ಸಾಧಿಸುವುದು ಕಷ್ಟಸಾಧ್ಯ. ಸರ್ಕಾರ ರಚನೆ ವೇಳೆ ಮೈತ್ರಿ ಅನಿವಾರ್ಯವಾಗಬಹುದು ಎಂದು ಹೇಳಿದ್ದಾರೆ.

ಈ ಬಾರಿ ಬಿಜೆಪಿ 280-282 ಸ್ಥಾನಗಳನ್ನು ಗೆಲ್ಲುವುದೂ ಕಷ್ಟವಿದೆ. ಆದರೆ ಮಿತ್ರ ಪಕ್ಷಗಳಿರುವ ಎನ್​ಡಿಎ ಕೂಟ ಬಹುಮತ ಗಳಿಸಬಹುದು ಎಂದು ರಾವತ್ ಹೇಳಿದ್ದಾರೆ.

ಈ ಮೊದಲು ಬಿಜೆಪಿ ಮುಖ್ಯ ಕಾರ್ಯದರ್ಶಿ ರಾಮ್ ಮಾಧವ್​, ಬಿಜೆಪಿ ಸರ್ಕಾರ ರಚಿಸಲು ಮಿತ್ರಪಕ್ಷಗಳ ಸಹಕಾರ ಅಗತ್ಯ. ಬಿಜೆಪಿಯೊಂದೇ 271 ಸ್ಥಾನಗಳಲ್ಲಿ ಗೆದ್ದರೂ ನಮಗೆ ತುಂಬಾ ಖುಷಿಯಾಗುತ್ತೆ ಎಂದು ಹೇಳಿದ್ದರು.

Intro:Body:

 Sanjay Raut


Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.