ETV Bharat / bharat

ಹಿಂದಿ ಬಾರದವರು ಹೊರಹೋಗಿ ಎಂದ ಅಧಿಕಾರಿ... ಕ್ರಮಕ್ಕೆ ಆಗ್ರಹಿಸಿ ಸಚಿವರಿಗೆ ಸಂಸದೆ ಕನಿಮೋಳಿ ಪತ್ರ

'ಹಿಂದಿಯೇತರ್ ರಾಜ್ಯಗಳಿಗೆ ಅಸೋಸಿಯೇಟ್ ಭಾಷೆಯಾಗಿ ಇಂಗ್ಲೀಷ್ ಅವಶ್ಯಕ ಮತ್ತು ಇದು ಅನಿರ್ದಿಷ್ಟಾವದಿವರೆಗೆ ಮುಂದುವರಿಯಲಿದೆ ಎಂದು 1959, ಆಗಸ್ಟ್ 7 ರಂದು ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಲೋಕಸಭೆಯಲ್ಲಿ ಭರವಸೆ ನೀಡಿದ್ದರು ಎಂಬುದನ್ನು ಸಂಸದೆ ಪತ್ರದಲ್ಲಿ ಪ್ರಸ್ತಾಪಿಸಿ ಮತ್ತೊಮ್ಮೆ ನೆನಪಿಸಿದ್ದಾರೆ.

author img

By

Published : Aug 23, 2020, 4:43 AM IST

ಕ್ರಮಕ್ಕೆ ಆಗ್ರಹಿಸಿ ಸಚಿವರಿಗೆ ಸಂಸದೆ ಕನಿಮೋಳಿ ಪತ್ರ
ಕ್ರಮಕ್ಕೆ ಆಗ್ರಹಿಸಿ ಸಚಿವರಿಗೆ ಸಂಸದೆ ಕನಿಮೋಳಿ ಪತ್ರ

ನವದೆಹಲಿ: ವರ್ಚುವಲ್ ತರಬೇತಿ ಕಾರ್ಯಾಗಾರದಲ್ಲಿ ಹಿಂದಿ ಹೇರಿಕೆಗೆ ಯತ್ನಿಸಿದ ಕುರಿತು ತಕ್ಷಣವೇ ತನಿಖೆಗೆ ಆದೇಶಿಸಬೇಕು ಮತ್ತು ಭಾಷೆಯ ಆಧಾರದ ಮೇಲೆ ಅವಮಾನ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಯುಷ್ ಇಲಾಖೆಯ ಸಚಿವ ಶ್ರೀಪಾದ್​ ನಾಯಕ್ ಅವರಿಗೆ ಡಿಎಂಕೆ ಸಂಸದೆ ಕನಿಮೋಳಿ ಕರುಣಾನಿಧಿ ಪತ್ರ ಬರೆದು ಆಗ್ರಹಿಸಿದ್ದಾರೆ.

ಆಯುಷ್ ಇಲಾಖೆ ನಡೆಸಿದ ವರ್ಚುವಲ್ ಮೀಟಿಂಗ್​ನಲ್ಲಿ ಸಂವಿಧಾನದ ಆಶಯಗಳನ್ನು ಉಲ್ಲಂಘಿಸಿ ಹಿಂದಿ ಹೇರಿಕೆ ಮಾಡಲಾಗಿದೆ. ಇಲಾಖೆಯ ಕಾರ್ಯದರ್ಶಿ ರಾಜೇಶ್ ಕೊಟೆಚಾ ಅವರು ಹಿಂದಿ ಭಾಷೆ ಬಾರದವರು ಮೀಟಿಂಗ್​ನಿಂದ ಹೊರ ಹೋಗುವಂತೆ ಹೇಳಿದ್ದಾರೆ. ಇದು ಸಂವಿಧಾನ ನಿಮಯಗಳ ಉಲ್ಲಂಘನೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಮತ್ತು ಇಲಾಖೆಯ ಎಲ್ಲ ಕಾರ್ಯಕ್ರಮಗಳಲ್ಲಿ ಇಂಗ್ಲೀಷ್ ಬಳಸಬೇಕೆಂದು ಆಗ್ರಹಿಸಿ ಸಂಸದೆ ಪತ್ರ ಬರೆದಿದ್ದಾರೆ.

ಇಂಗ್ಲೀಷ್ ಮತ್ತು ಹಿಂದಿ ಕೇಂದ್ರದ ಅಧಿಕೃತ ಭಾಷೆಗಳು. ಆದ್ರೆ ಸಂವಿಧಾನದ 8ನೇ ಅನುಚ್ಛೇದದಲ್ಲಿ 22 ಅಧಿಕೃತ ಭಾಷೆಗಳಿವೆ. 'ಹಿಂದಿಯೇತರ್ ರಾಜ್ಯಗಳಿಗೆ ಅಸೋಸಿಯೇಟ್ ಭಾಷೆಯಾಗಿ ಇಂಗ್ಲೀಷ್ ಅವಶ್ಯಕ ಮತ್ತು ಇದು ಅನಿರ್ದಿಷ್ಟಾವದಿವರೆಗೆ ಮುಂದುವರಿಯಲಿದೆ ಎಂದು 1959, ಆಗಸ್ಟ್ 7 ರಂದು ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಲೋಕಸಭೆಯಲ್ಲಿ ಭರವಸೆ ನೀಡಿದ್ದರು ಎಂಬುದನ್ನು ಸಂಸದೆ ಪತ್ರದಲ್ಲಿ ಪ್ರಸ್ತಾಪಿಸಿ ಮತ್ತೊಮ್ಮೆ ನೆನಪಿಸಿದ್ದಾರೆ.

ಇತ್ತೀಚೆಗಷ್ಟೇ ಸಂಸದೆ ಕನಿಮೋಳಿ ಅವರಿಗೆ ಹಿಂದಿ ಭಾಷೆ ಸಂಬಂಧ ಏರ್​ಪೋರ್ಟ್​ನಲ್ಲಿ ಅವಮಾನ ಆಗಿತ್ತು. ಆ ಬಳಿಕ ಸಂಸದೆ ಹಿಂದಿ ಹೇರಿಕೆಯನ್ನ ವಿರೋಧಿಸಿದ್ದರು. ಇದೀಗ ಮತ್ತೆ ಅಂತಹದೇ ಘಟನೆ ನಡೆದಿದೆ.

ನವದೆಹಲಿ: ವರ್ಚುವಲ್ ತರಬೇತಿ ಕಾರ್ಯಾಗಾರದಲ್ಲಿ ಹಿಂದಿ ಹೇರಿಕೆಗೆ ಯತ್ನಿಸಿದ ಕುರಿತು ತಕ್ಷಣವೇ ತನಿಖೆಗೆ ಆದೇಶಿಸಬೇಕು ಮತ್ತು ಭಾಷೆಯ ಆಧಾರದ ಮೇಲೆ ಅವಮಾನ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಯುಷ್ ಇಲಾಖೆಯ ಸಚಿವ ಶ್ರೀಪಾದ್​ ನಾಯಕ್ ಅವರಿಗೆ ಡಿಎಂಕೆ ಸಂಸದೆ ಕನಿಮೋಳಿ ಕರುಣಾನಿಧಿ ಪತ್ರ ಬರೆದು ಆಗ್ರಹಿಸಿದ್ದಾರೆ.

ಆಯುಷ್ ಇಲಾಖೆ ನಡೆಸಿದ ವರ್ಚುವಲ್ ಮೀಟಿಂಗ್​ನಲ್ಲಿ ಸಂವಿಧಾನದ ಆಶಯಗಳನ್ನು ಉಲ್ಲಂಘಿಸಿ ಹಿಂದಿ ಹೇರಿಕೆ ಮಾಡಲಾಗಿದೆ. ಇಲಾಖೆಯ ಕಾರ್ಯದರ್ಶಿ ರಾಜೇಶ್ ಕೊಟೆಚಾ ಅವರು ಹಿಂದಿ ಭಾಷೆ ಬಾರದವರು ಮೀಟಿಂಗ್​ನಿಂದ ಹೊರ ಹೋಗುವಂತೆ ಹೇಳಿದ್ದಾರೆ. ಇದು ಸಂವಿಧಾನ ನಿಮಯಗಳ ಉಲ್ಲಂಘನೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಮತ್ತು ಇಲಾಖೆಯ ಎಲ್ಲ ಕಾರ್ಯಕ್ರಮಗಳಲ್ಲಿ ಇಂಗ್ಲೀಷ್ ಬಳಸಬೇಕೆಂದು ಆಗ್ರಹಿಸಿ ಸಂಸದೆ ಪತ್ರ ಬರೆದಿದ್ದಾರೆ.

ಇಂಗ್ಲೀಷ್ ಮತ್ತು ಹಿಂದಿ ಕೇಂದ್ರದ ಅಧಿಕೃತ ಭಾಷೆಗಳು. ಆದ್ರೆ ಸಂವಿಧಾನದ 8ನೇ ಅನುಚ್ಛೇದದಲ್ಲಿ 22 ಅಧಿಕೃತ ಭಾಷೆಗಳಿವೆ. 'ಹಿಂದಿಯೇತರ್ ರಾಜ್ಯಗಳಿಗೆ ಅಸೋಸಿಯೇಟ್ ಭಾಷೆಯಾಗಿ ಇಂಗ್ಲೀಷ್ ಅವಶ್ಯಕ ಮತ್ತು ಇದು ಅನಿರ್ದಿಷ್ಟಾವದಿವರೆಗೆ ಮುಂದುವರಿಯಲಿದೆ ಎಂದು 1959, ಆಗಸ್ಟ್ 7 ರಂದು ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಲೋಕಸಭೆಯಲ್ಲಿ ಭರವಸೆ ನೀಡಿದ್ದರು ಎಂಬುದನ್ನು ಸಂಸದೆ ಪತ್ರದಲ್ಲಿ ಪ್ರಸ್ತಾಪಿಸಿ ಮತ್ತೊಮ್ಮೆ ನೆನಪಿಸಿದ್ದಾರೆ.

ಇತ್ತೀಚೆಗಷ್ಟೇ ಸಂಸದೆ ಕನಿಮೋಳಿ ಅವರಿಗೆ ಹಿಂದಿ ಭಾಷೆ ಸಂಬಂಧ ಏರ್​ಪೋರ್ಟ್​ನಲ್ಲಿ ಅವಮಾನ ಆಗಿತ್ತು. ಆ ಬಳಿಕ ಸಂಸದೆ ಹಿಂದಿ ಹೇರಿಕೆಯನ್ನ ವಿರೋಧಿಸಿದ್ದರು. ಇದೀಗ ಮತ್ತೆ ಅಂತಹದೇ ಘಟನೆ ನಡೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.